ಮಂಗಳೂರು ಲಿಟ್ ಫೆಸ್ಟ್ 2025: ಜನವರಿ 11ರಿಂದ 2 ದಿನದ ಉತ್ಸವಕ್ಕೆ ಸಾಹಿತಿ ಭೈರಪ್ಪ ಚಾಲನೆ, ನೋಂದಣಿಗೆ ಅವಕಾಶ
ಕನ್ನಡ ಸುದ್ದಿ  /  ಕರ್ನಾಟಕ  /  ಮಂಗಳೂರು ಲಿಟ್ ಫೆಸ್ಟ್ 2025: ಜನವರಿ 11ರಿಂದ 2 ದಿನದ ಉತ್ಸವಕ್ಕೆ ಸಾಹಿತಿ ಭೈರಪ್ಪ ಚಾಲನೆ, ನೋಂದಣಿಗೆ ಅವಕಾಶ

ಮಂಗಳೂರು ಲಿಟ್ ಫೆಸ್ಟ್ 2025: ಜನವರಿ 11ರಿಂದ 2 ದಿನದ ಉತ್ಸವಕ್ಕೆ ಸಾಹಿತಿ ಭೈರಪ್ಪ ಚಾಲನೆ, ನೋಂದಣಿಗೆ ಅವಕಾಶ

ಮಂಗಳೂರಿನಲ್ಲಿ ಜನವರಿ 11ರಿಂದ ಎರಡು ದಿನಗಳ ಕಾಲ ಮಂಗಳೂರು ಲಿಟ್‌ ಫೆಸ್ಟ್‌ ನಡೆಯಲಿದ್ದು, ಹಿರಿಯ ಸಾಹಿತಿ ಡಾ.ಎಸ್.ಎಲ್‌.ಭೈರಪ್ಪ ಉದ್ಘಾಟಿಸುವರು. ಎರಡು ದಿನದ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.ವರದಿ: ಹರೀಶ ಮಾಂಬಾಡಿ.ಮಂಗಳೂರು

ಮಂಗಳೂರು ಲಿಟ್‌ ಫೆಸ್ಟ್‌ 2025ಕ್ಕೆ ಸಿದ್ದತೆಗಳು ನಡೆದಿವೆ.
ಮಂಗಳೂರು ಲಿಟ್‌ ಫೆಸ್ಟ್‌ 2025ಕ್ಕೆ ಸಿದ್ದತೆಗಳು ನಡೆದಿವೆ.

ಮಂಗಳೂರು: ಸಾಹಿತ್ಯವನ್ನು ಯುವಜನರಿಗೆ ತಲುಪಿಸುವ ಉದ್ದೇಶವಿಟ್ಟುಕೊಂಡು, ಮಂಗಳೂರು ಲಿಟ್ ಫೆಸ್ಟ್ ನ ಏಳನೇ ಆವೃತ್ತಿ ಜನವರಿ 11 ಮತ್ತು 12ಕ್ಕೆ ಮಂಗಳೂರಿನಲ್ಲಿ ನಡೆಯಲಿದೆ.ಕಾರ್ಯಕ್ರಮಗಳು ಎರಡು ಸಭಾಂಗಣದಲ್ಲಿ ಸಮಾನ ಹೊತ್ತಿನಲ್ಲಿ ನಡೆಯುತ್ತದೆ. ಮೊದಲನೇ ಸಭಾಂಗಣದಲ್ಲಿ ಜನವರಿ 11ರಂದು ಬೆಳಗ್ಗೆ 9.30ಕ್ಕೆ ಉದಯರಾಗದೊಂದಿಗೆ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಶ್ರೀಜಿತ್ ಸರಳಾಯ ಕಾರ್ಯಕ್ರಮ ನೀಡಲಿದ್ದಾರೆ. ಬೆಳಗ್ಗೆ 10ಕ್ಕೆ ಲೇಖಕ ಡಾ. ಎಸ್.ಎಲ್.ಭೈರಪ್ಪ ಕಾರ್ಯಕ್ರಮವನ್ನು ಗಣ್ಯರ ಸಮ್ಮುಖ ಉದ್ಘಾಟಿಸುವರು. ಈ ಕುರಿತು ಆಯೋಜಕರ ವೆಬ್ ಸೈಟ್ mlrlitfest.org/ ನಲ್ಲಿ ಮಾಹಿತಿ ಇದ್ದು, ಭಾಗವಹಿಸುವವರು ಆನ್ ಲೈನ್ ನೋಂದಣಿ ಮಾಡಲು ಅಲ್ಲಿ ಅವಕಾಶವಿದೆ.

ಕಾರ್ಯಕ್ರಮಗಳ ವಿವರ

10.45ಕ್ಕೆ Energy for Survival – Security and Climate ಎಂಬ ವಿಷಯದ ಕುರಿತು ಆಂಗ್ಲ ಭಾಷೆಯಲ್ಲಿ ಸಂವಾದ ಇದ್ದು, ಹರ್ದೀಪ್ ಸಿಂಗ್ ಪುರಿ ವಿಚಾರ ಮಂಡಿಸುವರು. ಡಾ. ನಂದಕಿಶೋರ್ ಎಂ.ಎಸ್. ಅವರು ನಿರ್ವಹಣೆ ಮಾಡುವರು. 11.45ಕ್ಕೆ ವಿಕ್ರಮ್ ಸೂದ್ ಅವರು Art and Craft of Building and Dismantling narratives ಕುರಿತು ವಿಚಾರ ಮಂಡಿಸಲಿದ್ದು, ಪ್ರಶಾಂತ್ ವೈದ್ಯರಾಜ್ ಸಂವಾದ ನಡೆಸುವರು. ಮಧ್ಯಾಹ್ನ 2ಕ್ಕೆ ಸಂಸ್ಕೃತಯಾನಂ ಎಂಬ ಕಾರ್ಯಕ್ರಮದಲ್ಲಿ ಸಮಸ್ಠಿ ಗುಬ್ಬಿ, ಡಾ.ಎಚ್.ಆರ್.ವಿಶ್ವಾಸ್, ಡಾ.ಶಂಕರ ರಾಜಾರಾಮನ್ ವಿಚಾರ ಮಂಡಿಸಲಿದ್ದು, ಡಾ. ಶಾಂತಲಾ ವಿಶ್ವಾಸ್ ಸಂವಹನಕಾರರಾಗಿರುತ್ತಾರೆ. 3 ಗಂಟೆಗೆ ಎಕನಾಮಿಕ್ ಚಾಲೆಂಜ್, ಯುನಿವರ್ಸಲ್ ವೆಲ್ಫೇರ್ ವಿಷಯದ ಕುರಿತು ಸಂಜೀವ ಸಾನ್ಯಾಲ್ ವಿಚಾರ ಮಂಡಿಸಲಿದ್ದು, ಬಂಗಾರಡ್ಕ ವಿಶ್ವೇಶ್ವರ ಭಟ್ ಸಂವಹನಕಾರರಾಗಿ ಭಾಗವಹಿಸುವರು. ಸಂಜೆ 4 ಗಂಟೆಗೆ ಗ್ರ್ಯಾಜುವೇಟಿಂಗ್ ದಿ ಎಜುಕೇಶನಲ್ ಪಾಲಿಸಿ ಕುರಿತು ಡಾ. ಸಂತಿಶ್ರೀ ಧುಲಿಪುಡಿ ಪಂಡಿತ್, ಡಾ. ವಿನಯ್ ಸಹಸ್ರಬುದ್ಧೆ ಮಾತನಾಡಲಿದ್ದು, ಡಾ. ವಿನಯಚಂದ್ರ ಭನ್ವತೆ ಸಂವಹನಕಾರರಾಗಿರುವರು. ಸಂಜೆ 5ಕ್ಕೆ ಡೆಮಾಕ್ರೆಸಿ ಆಂಡ್ ಡೆಮಾಕ್ರೆಟಿಕ್ ಗವರ್ನೆನ್ಸ್ ಕುರಿತು ಕೆ.ಅಣ್ಣಾಮಲೈ ವಿಚಾರ ಮಂಡಿಸಲಿದ್ದು, ಜಯದೀಪ್ ಶೆಣೈ ಸಂವಹನಕಾರರಾಗಿರುವರು.

ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ ಎರಡನೇ ಸಭಾಂಗಣದಲ್ಲಿ ಜನವರು 11ರಂದು ಬೆಳಗ್ಗೆ 10.45ಕ್ಕೆ ಕನ್ನಡ ಸಾಹಿತ್ಯ ವಿಮರ್ಶೆ ಒಂದು ಅಕಾಡೆಮಿಕ್ ಚರ್ಚೆ ವಿಷಯದಲ್ಲಿ ಜಿ.ಎಸ್.ಅಮೂರ ಶತಮಾನದ ನೆನಪು ಕುರಿತು ಡಾ. ಜಿ.ಬಿ.ಹರೀಶ, ಡಾ.ಎನ್.ಎಸ್.ಗುಂಡೂರ, ಡಾ.ಶ್ಯಾಮಸುಂದರ ಬಿದರಕುಂದಿ ವಿಚಾರ ಮಂಡಿಸಲಿದ್ದು, ಡಾ.ಕಾಖಂಡಕಿ ಎಚ್.ವಿ. ಸಂವಹನಕಾರರಾಗಿ ಭಾಗವಹಿಸುವರು. 11.45ಕ್ಕೆ ಪತ್ರಿಕೋದ್ಯಮ ಮತ್ತು ಸಾಹಿತ್ಯ, ಒಂದು ಹರಟೆ ಎಂಬ ವಿಷಯದಲ್ಲಿ ಜೋಗಿ ಮತ್ತು ರವಿ ಹೆಗಡೆ ಮಾತನಾಡುವರು. 2.15ಕ್ಕೆ ಹಳ್ಳಿಯನ್ನು ಕಟ್ಟುವ ಕಷ್ಟ ಸುಖ ಕುರಿತು ಶಿವಾನಂದ ಕಳವೆ, ಡಾ. ಪ್ರಕಾಶ ಭಟ್ ಮಾತನಾಡಲಿದ್ದು, ಅರ್ಚನ ಆರ್ಯ ಸಂವಹನಕಾರರಾಗಿ ಭಾಗವಹಿಸುವರು. 3.15ಕ್ಕೆ ಸಿನಿಮೀಯ, ಸಿನಿಕೀಯ ಪುಸ್ತಕ ಬಿಡುಗಡೆ ಮತ್ತು ಚರ್ಚೆ ಇರಲಿದ್ದು, ಅರುಣ್ ಭಾರಧ್ವಾಜ್ ಮತ್ತು ಪ್ರಕಾಶ್ ಬೆಳವಾಡಿ ಭಾಗವಹಿಸುವರು. ಶೈಲೇಶ್ ಕುಲಕರ್ಣಿ ಸಂವಹನ ನಡೆಸುವರು. 4.15ಕ್ಕೆ ಸೈಟ್ ಆಂಡ್ ಇನ್ಸೈಟ್ ಕುರಿತು ಡಾ. ಮಲ್ಲಪ್ಪ ಭಂಡಿ, ಡಿ.ಐಶ್ವರ್ಯ ಮಾತನಾಡಲಿದ್ದು, ಪ್ರಥ್ವಿ ಕಾರಿಂಜೆ ಸಂವಹನ ಮಾಡುವರು. 5.15ಕ್ಕೆ ಗುರುದತ್ ಶತಮಾನೋತ್ಸವ ಸ್ಮರಣೆ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆ, ಸಂವಾದ – ಥ್ಯಾಂಕ್ಯೂ ಗುರುದತ್ ಎಂಬ ವಿಷಯದಲ್ಲಿ ಲತಾ ಜಗತಿಯಾನಿ, ಪ್ರಕಾಶ್ ಬೆಳವಾಡಿ ಮಾತನಾಡಲಿದ್ದು, ಕಾರ್ತಿಕೇಯ ಗೋಸ್ವಾಮಿ ಸಂವಹನ ನಡೆಸಲಿದ್ದಾರೆ.

ಮೊದಲ ದಿನ ಹರಟೆಕಟ್ಟೆಯಲ್ಲಿ ವಂದನಾ ರೈ ಕಾರ್ಕಳ ಚಿಲಿಪಿಲಿ ಕಾರ್ಯಕ್ರಮವನ್ನು 10.30ಕ್ಕೆ ನಡೆಸಿಕೊಡಲಿದ್ದರೆ, 2 ಗಂಟೆಗೆ ಶಶಿರಾಜ್ ಕಾವೂರು ಸಂವಹನಕಾರರಾಗಿ ಡಾ. ತುಕಾರಾಮ ಪೂಜಾರಿ ಅವರು ತುಳು ಸಾಹಿತ್ಯ, ಆಳ, ಅಗಲ, ಆವಿಷ್ಕಾರ ಕುರಿತು ಮಾತನಾಡುವರು. 3 ಗಂಟೆಗೆ ರೋಲ್ ಆಂಡ್ ಗೋಲ್ ಆಫ್ ಇಂಡಿಯನ್ ಡಯಾಸ್ಪೊರ ಕುರಿತು ವೀಣಾ ರಾವ್ ಮಾತನಾಡಲಿದ್ದು, ಬಿ.ಅರ್ಚನಾ ಬಾಳಿಗ ಸಂವಹನ ನಡೆಸುವರು. 4 ಗಂಟೆಗೆ ಜಾನಪದ ಗೊಂದಲಿಗರ ಪದಗಳು, ಹಾಡು ಮತ್ತು ಕಥೆ ಕುರಿತು ವಿಠಲ ಗೋಂದಳೆ ಮಾತನಾಡುವರು. 5 ಗಂಟೆಗೆ ಗೋಪಾಲಕೃಷ್ಣ ಕುಂಠಿನಿ, ಸ್ಮಿತಾ ರಾಘವೇಂದ್ರ ಮತ್ತು ಸಚಿನ್ ತೀರ್ಥಹಳ್ಳಿ ಕಥಾ ಓದು ಇರಲಿದ್ದು, ವಿಷ್ಣುಧರನ್ ನಿರ್ವಹಿಸುವರು.

ಎರಡನೇ ದಿನದ ಕಾರ್ಯಕ್ರಮ

ಒಂದನೇ ಸಭಾಂಗಣದಲ್ಲಿ ಎರಡನೇ ದಿನ ಮೇಧಾ ಉಡುಪ ಉದಯರಾಗ (9.30ಕ್ಕೆ) ಡಾ. ಆರ್. ಬಾಲಸುಬ್ರಹ್ಮಣ್ಯಂ ಅವರಿಗೆ ಪ್ರಶಸ್ತಿ ಪ್ರದಾನ (10 ಗಂಟೆಗೆ), ಮಾಗಧ ಲೋಕಾರ್ಪಣ ಮತ್ತು ಅವಲೋಕನದಲ್ಲಿ ಸಹನಾ ವಿಜಯಕುಮಾರ ಭಾಗವಹಿಸುವರು. ಡಾ. ಅಜಕ್ಕಳ ಗಿರೀಶ್ ಭಟ್ ಸಂವಹನಕಾರರಾಗಿರುವರು. 12.15ಕ್ಕೆ ಐಕಾನ್ಸ್ ಫಾರ್ ಟುಡೇ ಡೂಸ್ ಆಂಡ್ ಡೋಂಟ್ಸ್, ಟಿಪ್ಪು ಸುಲ್ತಾನ್ – ದಿ ಸಾಗಾ ಆಫ್ ಮೈಸೂರ್ ಇಂಟರ್ಜೆನಮ್ 1760-1799 ಪುಸ್ತಕ ಲೋಕಾರ್ಪಣೆ, ಸಂವಾದವಿದ್ದು , ಡಾ. ವಿಕ್ರಮ್ ಸಂಪತ್ , ಪ್ರಕಾಶ್ ಬೆಳವಾಡಿ ಸಂವಾದ ನಡೆಸುವರು, ಹರ್ಷ ಶಂಕರ ಭಟ್ ಸಂವಹನಕಾರರು. ಮಧ್ಯಾಹ್ನ 2 ಗಂಟೆಗೆ ಸಿನಿಮಾ ತಾಂತ್ರಿಕತೆ ಕುರಿತು ಗೋಪಾಲಕೃಷ್ಣ ಪೈ, ಗಿರೀಶ್ ಕಾಸರವಳ್ಳಿ ಮಾತನಾಡಲಿದ್ದು, ಅರುಣ್ ಭಾರಧ್ವಾಜ್ ಸಂವಹನಕಾರರಾಗಿದ್ದಾರೆ. ಮಧ್ಯಾಹ್ನ 3ಕ್ಕೆ ಫ್ರೊಮ್ ಇಂಡಿವಿಜುವಲ್ ಟು ಇನ್ ಡಿವಿಸಿಬಲ್ ಎಂಬ ವಿಷಯದಲ್ಲಿ ಸ್ವಾಮಿ ಮಹಾಮೇಧಾನಂದ, ಸತ್ಯೇಶ್ ಬೆಳ್ಳೂರು ಮಾತನಾಡಲಿದ್ದು, ಡಾ. ಶಂಕರ್ ರಾಜಾರಾಮ್ ಸಂವಹನ ನಡೆಸಲಿದ್ದಾರೆ. 4 ಗಂಟೆಗೆ ಭಾರತೀಯ ಭಾಷೆಗಳಿಗೆ ದೇಶಿಯತೆ ಕೊಡುಗೆಗಳು ಕುರಿತು ಡಾ. ಜಿ.ಬಿ.ಹರೀಶ, ವಿ.ನಾಗರಾಜ್, ಡಾ.ಎಚ್.ಆರ್.ವಿಶ್ವಾಸ್ ಮಾತನಾಡಲಿದ್ದಾರೆ, ಕ್ಷಮಾ ನರಗುಂದ ಸಂವಹನ ನಡೆಸುವರು. ಸಮಾರೋಪದಲ್ಲಿ ಶತಾವಧಾನಿ ಡಾ.ಆರ್. ಗಣೇಶ್ ಮತ್ತು ಡಾ. ಅಜಕ್ಕಳ ಗಿರೀಶ ಭಟ್ ಭಾಗವಹಿಸುವರು.

ಹರಟೆಕಟ್ಟೆಯಲ್ಲಿ 11 ಗಂಟೆಗೆ ಡಾ. ಎಸ್.ಎಲ್.ಭೈರಪ್ಪ ಜೊತೆ ಸಂವಾದ, ಮಧ್ಯಾಹ್ನ 2.15ಕ್ಕೆ ರಸಪ್ರಶ್ನೆ ಕಾರ್ಯಕ್ರಮದ ಅಂತಿಮ ಘಟ್ಟ ನಡೆಯುವುದು.

ಎರಡನೇ ಸಭಾಂಗಣದಲ್ಲಿ 10.15ಕ್ಕೆ ಹಿಮಾಲಯನ್ ಜಿಯೋಪಾಲಿಟಿಕ್ಸ್ ಕುರಿತು ಡಾ. ಕ್ಲೈಡೆ ಅರ್ಜಪಿ, ದಿಲೀಪ್ ಸಿನ್ಹ, ಜಾಂಗ್ಜುಪ್ ಜೋಡೆನ್ ಮಾತನಾಡುವರು, ಬಿಪೀಂದ್ರ ಸಂವಹನ ನಡೆಸುವರು. 11.15ಕ್ಕೆ ನಾಗ್ರೋತ ಅಂಡರ್ ಸೀಝ್ ಕುರಿತು ಭಾವ್ನಾ ಅರೋರ, ಮೇಘಾ ಗಿರೀಶ್, ಶಿವ್ ಅರೂರ್ ಮಾತನಾಡುವರು. ಸುರಾಭಿ ಹೊಡಿಕೆರೆ ಸಂವಹನ ನಡೆಸುವರು. 12.15ಕ್ಕೆ ವುಮನ್, ಜೆಂಡರ್ ಮತ್ತು ಸೊಸೈಟಿ ಕುರಿತು ಡಾ. ವರದ ಸಂಭುಸ್, ಕ್ಷಮಾ ನರಗುಂದ ಮಾತನಾಡುವರು. ಡಾ. ಸುಷ್ಮಾ ಶೆಟ್ಟಿ ಸಂವಹನ ನಡೆಸುವರು. ಅಂಬೇಡ್ಕರ್ ಮತ್ತು ಸಂವಿಧಾನ ಸತ್ಯ ಮತ್ತು ಮಿಥ್ಯ ಕುರಿತು ವಿಕಾಸ್ ಕುಮಾರ್ ಪಿ. ಎಸ್, ಮಹೇಶ್ ಮಾತನಾಡುವರು 3 ಗಂಟೆಗೆ ಯುವ ಕವಿಗೋಷ್ಠಿಯಲ್ಲಿ ಸತೀಶ ಹೆಗಡೆ ಶಿರಸಿ, ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು, ಸ್ಮಿತಾ ಅಮೃತರಾಜ್ ಭಾಗವಹಿಸುವರು. ಗುರುಪ್ರಸಾದ್ ಟಿ.ಎನ್. ನಡೆಸಿಕೊಡುವರು.

(ವರದಿ: ಹರೀಶ ಮಾಂಬಾಡಿ.ಮಂಗಳೂರು)

Whats_app_banner