ಮೈಸೂರು ದಸರಾದಲ್ಲಿ ಸಂಚಾರ ಕಿರಿಕಿರಿ, ಪ್ರಮುಖ ರಸ್ತೆಯಲ್ಲೇ ಅವ್ಯವಸ್ಥೆ, ವ್ಯಾಪಾರಸ್ಥರ ಆಕ್ರೋಶ: ಬದಲಾವಣೆ ಗಮನಿಸಿ
ಮೈಸೂರಿನಲ್ಲಿ ದಸರಾ ದಟ್ಟಣೆ ಹೆಚ್ಚಿ ಸಂಚಾರ ಅಡಚಣೆಗಳೂ ಪ್ರಮುಖ ಭಾಗದಲ್ಲಿ ಆಗುತ್ತಿವೆ. ಸಂಚಾರ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಅಲ್ಲಲ್ಲಿ ಅವ್ಯವಸ್ಥೆಯೂ ಆಗಿದೆ.

ಮೈಸೂರು: ಮೈಸೂರು ದಸರಾ ಚಟುವಟಿಕೆಗಳು ಶುರುವಾಗಿ ಎರಡು ದಿನ ಕಳೆಯುವುದರೊಳಗೆ ಭಾರೀ ಪ್ರವಾಸಿಗರು ಆಗಮನದಿಂದ ಎಲ್ಲೆಡೆ ಸಂಚಾರ ದಟ್ಟಣೆ ಶುರುವಾಗಿದೆ. ಅದರಲ್ಲೂ ಮೈಸೂರಿನ ಮುಖ್ಯ ವಹಿವಾಟು ಪ್ರದೇಶ( ಸಿಬಿಡಿ)ವಾದ ಅರಮನೆ ಸುತ್ತಮುತ್ತಲಿನ ಪ್ರದೇಶ, ದೇವರಾಜ ಅರಸ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಮಿತಿ ಮೀರಿದೆ. ದೇವರಾಜ ಅರಸ್ ರಸ್ತೆಯಲ್ಲಿ ಸಂಪೂರ್ಣ ವಾಹನಗಳನ್ನು ಬಂದ್ ಮಾಡುವ ಜತೆಗೆ ವ್ಯಾಪಾರಸ್ಥರ ವಾಹನ ನಿಲುಗಡೆಯನ್ನು ಸ್ಥಗಿತಗೊಳಿಸಿರುವುದರಿಂದ ಪ್ರಮುಖ ವಹಿವಾಟು ರಸ್ತೆಯಲ್ಲಿ ಅವ್ಯವಸ್ಥೆ ಇನ್ನಷ್ಟು ಹೆಚ್ಚಾಗಿದ್ದು, ವ್ಯಾಪಾರವನ್ನೇ ಬಂದ್ ಮಾಡಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈಸೂರು ನಗರ ಸಂಚಾರ ಪೊಲೀಸರ ಅವೈಜ್ಞಾನಿಕ, ಮುಂದಾಲೋಚನೆಯಿಲ್ಲದೇ ಸಂಚಾರ ನಿರ್ವಹಣೆಯಿಂದ ಪ್ರವಾಸಿಗರು ಮಾತ್ರವಲ್ಲ ಸ್ಥಳೀಯರೂ ಗೊಂದಲಕ್ಕೆ ಒಳಗಾಗಿರುವ ಆರೋಪಗಳು ಕೇಳಿ ಬಂದಿವೆ.
ದಸರಾ ಬಂದರೆ ಮೈಸೂರಿಗೆ ಪ್ರವಾಸಿಗರು ಆಗಮಿಸುವುದು ಮೊದಲಿನಿಂದಲೂ ನಡೆದಿದೆ. ಇದು ದಿನ ಕಳೆದಂತೆ ಹೆಚ್ಚುತ್ತಾ ಹೋಗುತ್ತದೆ. ಅದರಲ್ಲೂ ದಸರಾ ದೀಪಾಲಂಕಾರ, ವೈವಿಧ್ಯಮಯ ಕಾರ್ಯಕ್ರಮಗಳ ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಈ ಕಾರಣದಿಂದಲೇ ದಸರಾ ವೇಳೆ ಅರಮನೆ ಸುತ್ತಮುತ್ತಲಿನ ರಸ್ತೆ ಏಕ ಮುಖ ಸಂಚಾರ ಮಾಡಿ ವಾಹನ ನಿಲುಗಡೆಗೆ ನಿಗದಿತ ಸ್ಥಳ ರೂಪಿಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ವಾಹನಗಳ ಸಂಖ್ಯೆಯಲ್ಲಿ ಏರಿಕೆಯಾಗಿರುವುದು, ಕಾರುಗಳ ಪ್ರಮಾಣವೂ ಹೆಚ್ಚಿ ಸಂಚಾರ ದಟ್ಟಣೆ ಅಧಿಕವಾಗುತ್ತಿದೆ. ಪಾರ್ಕಿಂಗ್ ಸ್ಥಳ ಮಾತ್ರ ಅಷ್ಟೇ ಇದೆ. ಇದು ಸಮಸ್ಯೆ ತಂದೊಡ್ಡಿದೆ.
ಈ ಬಾರಿ ದೇವರಾಜ ಅರಸ್ ರಸ್ತೆಯಲ್ಲೂ ಕೆಲವರು ವಾಹನ ನಿಲ್ಲಿಸುತ್ತಿದ್ದರು. ಅದನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ವಾಹನಗಳು ಬಾರದಂತೆ ತಡೆಯಲಾಗಿದೆ. ಜತೆಗೆ ಸ್ಥಳೀಯರ ವಾಹನ ನಿಲುಗಡೆಗೆ ಅವಕಾಶವಿಲ್ಲ. ಇದೇ ರಸ್ತೆಗೆ ಹೊಂದಿಕೊಂಡ ಸಣ್ಣ ರಸ್ತೆಗಳಲ್ಲೂ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿಲ್ಲ. ಇದರಿಂದ ಪಕ್ಕದ ರಸ್ತೆಗಳಲ್ಲಿ ಇನ್ನಷ್ಟು ವಾಹನ ದಟ್ಟಣೆ ಹೆಚ್ಚಲು ಕಾರಣವಾಗಿದೆ. ಸ್ಥಳೀಯರೇ ಇದರ ವಿರುದ್ದ ಆಕ್ರೋಶ ಹೊರ ಹಾಕಿ ಪ್ರತಿಭಟನೆಗೆ ಇಳಿದಿದ್ದಾರೆ.
ಎಲ್ಲೆಲ್ಲಿ ಬದಲಾವಣೆ
- ಏಕಮುಖ ವಾಹನ ಸಂಚಾರ ವ್ಯವಸ್ಥೆ: ಅ.3ರಿಂದ 12ರವರೆಗೆ ಪ್ರತಿದಿನ ಮಧ್ಯಾಹ್ನ 4ರಿಂದ ರಾತ್ರಿ 12ರವರೆಗೆ ಅರಮನೆ ಸುತ್ತಲಿನ ರಸ್ತೆಗಳಲ್ಲಿ ಜೆ.ಎಸ್.ಎಸ್. ವೃತ್ತ-ಕುಸ್ತಿ ಅಖಾಡ ಜಂಕ್ಷನ್-ಬಿ.ಎನ್.ರಸ್ತೆ-ಹಾರ್ಡಿಂಗ್ ವೃತ್ತ-ಹಳೆ ಪ್ರತಿಮೆ ವೃತ್ತ-ಎ.ವಿ.ರಸ್ತೆ-ಕೆ.ಆರ್.ವೃತ್ತ-ನ್ಯೂ ಎಸ್.ಆರ್.ರಸ್ತೆ-ಪಾಠಶಾಲಾ ವೃತ್ತ-ಚಾಮರಾಜ ಜೋಡಿ ರಸ್ತೆ-ಜೆ.ಎಸ್.ಎಸ್. ವೃತ್ತ ಈ ರಸ್ತೆಗಳಲ್ಲಿ ಅರಮನೆಯನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ ವಿರುದ್ಧ ದಿಕ್ಕಿನಲ್ಲಿ (ಆ್ಯಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸುವಂತೆ ಈ ರಸ್ತೆಗಳಲ್ಲಿ ಗಡಿಯಾದ ಮುಳ್ಳು ಸುತ್ತುವ ದಿಕ್ಕಿನಲ್ಲಿ (ಕ್ಲಾಕ್ ವೈಸ್) ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. (ಪಾಠಶಾಲಾ ವೃತ್ತದಿಂದ ಪೂರ್ವಕ್ಕೆ ಜೆಎಸ್ಎಸ್ ವೃತ್ತದ ವರೆಗಿನ ರಸ್ತೆ ಹೊರತುಪಡಿಸಿ).
- ನ್ಯೂ ಎಸ್.ಆರ್.ರಸ್ತೆ, ಕೆ.ಆರ್.ವೃತ್ತದಿಂದ ಆಯುರ್ವೇದಿಕ್ ವೃತ್ತ- ಪೂರ್ವಕ್ಕೆ ಇರ್ವಿನ್ ರಸ್ತೆ-ನೆಹರು ವೃತ್ತ-ಅಶೋಕ ರಸ್ತೆ-ಮಹಾವೀರ ವೃತ್ತ-ಹಳೆ ಪ್ರತಿಮೆ ವೃತ್ತ ಈ ರಸ್ತೆಗಳ ಮದ್ಯ ಇರುವ ಪ್ರದೇಶವನ್ನು ಮದ್ಯಬಿಂದುವನ್ನಾಗಿ ಪರಿಗಣಿಸಿ ಗಡಿಯಾರದ ಮುಳ್ಳು ಸುತ್ತುವ ದಿಕ್ಕಿಗೆ (ಕ್ಲಾಕ್ ವೈಸ್) ವಾಹನಗಳು ಸಂಚರಿಸುವಂತೆ ಹಾಗೂ ಈ ರಸ್ತೆಗಳಲ್ಲಿ ಗಡಿಾಂರದ ಮುಳ್ಳು ಸುತ್ತುವ ವಿರುದ್ಧ ದಿಕ್ಕಿನಲ್ಲಿ (ಆ್ಯಂಟಿ ಕ್ಲಾಕ್ ವೈಸ್) ವಾಹನಗಳು ಸಂಚರಿಸದಂತೆ ನಿರ್ಬಂಧಿಸಲಾಗಿದೆ.
- ನೆಹರು ವೃತ್ತದಿಂದ ಬಿ.ಎನ್. ರಸ್ತೆ ಜಂಕ್ಷನ್ವರೆಗೆ ಪಶ್ಚಿಮದಿಂದ ಪೂರ್ವಕ್ಕೆ ಏಕಮುಖ ವಾಹನ ಸಂಚಾರಕ್ಕೆ ಅನುವು ವಾಡಿ ಪೂರ್ವದಿಂದ ಪಶ್ಚಿಮಕ್ಕೆ ಎಲ್ಲಾ ವಾದರಿುಂ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಬನುಮಯ್ಯ ರಸ್ತೆಯಲ್ಲಿ ಚಾಮರಾಜ ಜೋಡಿ ರಸ್ತೆ ಜಂಕ್ಷನ್ನಿಂದ ಬನುಮಯ್ಯ ಚೌಕದವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ವಾಡಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ತ್ಯಾಗರಾಜ ರಸ್ತೆಯಲ್ಲಿ ಎನ್.ಮಾಧವರಾವ್ ವೃತ್ತದಿಂದ ಚಾಮರಾಜ ಜೋಡಿ ರಸ್ತೆ ಜಂಕ್ಷನ್ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ವಾಡಿ ಈ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಕೆಆರ್ಬಿ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ಹುಣಸೂರು ರಸ್ತೆ ಆರ್ಚ್ ಗೇಟ್ ಜಂಕ್ಷನ್ವರೆಗೆ ದಕ್ಷಿಣದಿಂದ ಉತ್ತರಕ್ಕೆ ವಾಹನಗಳ ಏಕಮುಖ ಸಂಚಾರಕ್ಕೆ ಅನುವು ವಾಡಿ ಈ ಭಾಗದಲ್ಲಿ ಉತ್ತರದಿಂದ ದಕ್ಷಿಣಕ್ಕೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
ವಾಹನಗಳ ನಿಲುಗಡೆ ನಿಷೇಧ
ಪ್ರತಿ ದಿನ ಮಧ್ಯಾಹ್ನ 4ರಿಂದ ರಾತ್ರಿ 12ರವರೆಗೆ ಈ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
- ಎಸ್.ಆರ್.ರಸ್ತೆಯಲ್ಲಿ ಕೆ.ಆರ್.ವೃತ್ತದಿಂದ ಬಸವೇಶ್ವರ ವೃತ್ತದವರೆಗೆ
- ಪುರಂದರ ರಸ್ತೆಯಲ್ಲಿ ನಗರಪಾಲಿಕೆ ವೃತ್ತದಿಂದ ಬಿ.ಎನ್. ರಸ್ತೆ ಜಂಕ್ಷನ್ ವರೆಗೆ
- ಬಿ.ಎನ್.ರಸ್ತೆಯಲ್ಲಿ ಜೆ.ಎಸ್.ಎಸ್. ವೃತ್ತದಿಂದ ಹಾರ್ಡಿಂಜ್ ವೃತ್ತದವರೆಗೆ
- ಎ.ವಿ.ರಸ್ತೆಯಲ್ಲಿ ಹಾರ್ಡಿಂಜ್ ವೃತ್ತದಿಂದ ಕೆ.ಆರ್. ವೃತ್ತದವರೆಗೆ
- ಅಶೋಕ ರಸ್ತೆಯಲ್ಲಿ ನೆಹರು ವೃತ್ತದಿಂದ ಮಹಾವೀರ ವೃತ್ತದವರೆಗೆ
- ಅಶೋಕ ರಸ್ತೆಯಲ್ಲಿ ಮಹಾವೀರ ವೃತ್ತದಿಂದ ಜುಂಚಾಮರಾಜ ವೃತ್ತದವರೆಗೆ ಹಾಗೂ ಬಲರಾಮ ದ್ವಾರದ ಮುಂಭಾಗ ಇರುವ ಖಾಲಿ ಸ್ಥಳ ಸೇರಿದಂತೆ
- ಫೌಂಟೇನ್ ವೃತ್ತದಿಂದ ಮಿಲೇನಿಯಂ ವೃತ್ತದವರೆಗೆ
- ವಸ್ತು ಪ್ರರ್ದಶನದ ಮುಂಭಾಗದ ಟ್ಯಾಂಕ್ ಬಂಡ್ ರಸ್ತೆುಂಲ್ಲಿ ಬಿಎನ್ ರಸ್ತೆ ಜಂಕ್ಷನ್ನಿಂದ ಶಾಲಿವಾಹನ (ಮೃಗಾಲಯದ ರಸ್ತೆ) ರಸ್ತೆ ಜಂಕ್ಷನ್ವರೆಗೆ.
- ಇಟ್ಟಿಗೆಗೂಡಿನ ಹೊಸ ಬೀದಿ ಐದನೇ ತಿರುವು ರಸ್ತೆಯಲ್ಲಿ ಶಾಲಿವಾಹನ (ಮೃಗಾಲುಂದ ರಸ್ತೆ) ರಸ್ತೆ ಜಂಕ್ಷನ್ನಿಂದ ವಸ್ತು ಪ್ರರ್ದಶನದ ಪೂರ್ವ ದ್ವಾರದವರೆಗೆ.
- ಮಾನಸ ರಸ್ತೆಯಲ್ಲಿ ವಾಣಿಲಾಸ ರಸ್ತೆ ಜಂಕ್ಷನ್ನಿಂದ ಲೋಕರಂಜನ್ರಸ್ತೆ ಜಂಕ್ಷನ್ ವರೆಗೆ
- ಮಲೈಮಹದೇಶ್ವರ ರಸ್ತೆಯಲ್ಲಿ ಬಿ.ಎನ್.ರಸ್ತೆ ಜಂಕ್ಷನ್ನಿಂದ (ಛತ್ರಿಮರ) ಪೂರ್ವಕ್ಕೆ ಚನ್ನಯ್ಯ ವೃತ್ತದವರೆಗೆ
- ಸರ್ಕಾರಿ ಭವನದ ರಸ್ತೆಯಲ್ಲಿ, ಸರ್ಕಾರಿ ಭವನದ ದಕ್ಷಿಣ ದ್ವಾರದ ಜಂಕ್ಷನ್ನಿಂದ ದಕ್ಷಿಣಕ್ಕೆ ಹಾರ್ಡಿಂಜ್ ವೃತ್ತದವರೆಗೆ.
- ಅ.12ರಂದು ಬೆಳಿಗ್ಗೆ 6ರಿಂದ ರಾತ್ರಿ 12 ಗಂಟೆುಂವರೆಗೆ ದಸರಾ ಮೆರವಣಿಗೆುುಂ ಸಾಗುವ ವಾರ್ಗದಲ್ಲಿ ಬಲರಾಮ ದ್ವಾರ ಎ.ವಿ.ರಸ್ತೆ, ಕೆ.ಆರ್. ವೃತ್ತ, ಸಯಾಜಿರಾವ್ ರಸ್ತೆ, ಬಂಬೂಬಜಾರ್, ಹೈವೇ ಹೋಟೆಲ್ ವೃತ್ತ ನೆಲ್ಸನ್ ಮಂಡೇಲಾ ರಸ್ತೆ ಬನ್ನಿಮಂಟಪದ ಮುಖ್ಯದ್ವಾರ ಮಿಲೇನಿಯಂ ವೃತ್ತದವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆಯನ್ನು ನಿರ್ಬಂಧಿಸಲಾಗಿದೆ.
ವಾಹನಗಳ ಸಂಚಾರ ನಿರ್ಬಂಧಿಸಿರುವ ರಸ್ತೆಗಳು:
- ಅ.3ರಿಂದ 12ರವರೆಗೆ ಮಧ್ಯಾಹ್ನ 4ರಿಂದ ರಾತ್ರಿ 12 ಗಂಟೆವರೆಗೆ ಕೆಆರ್ಬಿ ರಸ್ತೆಯಲ್ಲಿ ಕೌಟಿಲ್ಯ ವೃತ್ತದಿಂದ ಏಕಲವ್ಯ ವೃತ್ತದವರೆಗೆ ಎಲ್ಲ ಮಾದರಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಅ.12ರಂದು ದಸರಾ ಮೆರವಣಿಗೆ ಸಾಗುವ ಮಾರ್ಗದಲ್ಲಿ ಬಲರಾಮ ದ್ವಾರ ಎ.ವಿ.ರಸ್ತೆ, ಕೆ.ಆರ್.ವೃತ್ತ, ಸಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತದವರೆಗೆ.
- ಆಯುರ್ವೇದಿಕ್ ವೃತ್ತದಿಂದ ಹೈವೆ ಹೊಟೇಲ್ ವೃತ್ತದವರೆಗೆ.
- ನೆಲ್ಸನ್ ಮಂಡೇಲ ರಸ್ತೆಯಲ್ಲಿ ಹೈವೆ ಹೊಟೇಲ್ ವೃತ್ತದಿಂದ ಬನ್ನಿಮಂಟಪದ ಮುಖ್ಯದ್ವಾರದವರೆಗೆ.
- ಬನ್ನಿ ಮಂಟಪ ಪಂಜಿನ ಕವಾಯತು ಮೈದಾನದ ಉತ್ತರ ಭಾಗದ ರಸ್ತೆಯಲ್ಲಿ ಬೆಂಗಳೂರು-ಮೈಸೂರು ರಸ್ತೆ ಜಂಕ್ಷನ್ನಿಂದ ಹನುಮಂತನಗರ ರಸ್ತೆ ಜಂಕ್ಷನ್ವರೆಗೆ.
- ಭಾರಿ ಮತ್ತು ಲಘು ಸರಕು ಸಾಗಣಿಕೆ ವಾಹನಗಳು ರಿಂಗ್ ರಸ್ತೆ ಜಂಕ್ಷನ್ಗಳಿಂದ ನಗರ ಪ್ರವೇಶಿಸದಂತೆ ಹಾಗೂ ರಿಂಗ್ ರಸ್ತೆ ಮೂಲಕವೇ ಆಗಮಿಸಿ ಹೊರ ಹೋಗುವಂತೆ ಸಂಚಾರದ ಮೇಲೆ ನಿರ್ಬಂಧ ವಿಧಿಸಿದೆ.