ಕನ್ನಡ ಸುದ್ದಿ  /  Karnataka  /  Nia Raid: Hindu Janajagriti Samiti Demands Ban On Popular Front Of India Pfi

NIA Raid: PFI ನಿಷೇಧಕ್ಕೆ ಹಿಂದೂ ಜನಜಾಗೃತಿ ಸಮಿತಿ ಆಗ್ರಹ; ವಿವಿಧ ಕೇಸ್‌ ವಿವರ ಗೃಹ ಸಚಿವರ ಮುಂದಿಟ್ಟ ಸಮಿತಿ

Demand for Popular Front of India Ban: ದೇಶ ವಿರೋಧಿ ಮತ್ತು ಉಗ್ರ ಕೃತ್ಯಗಳಲ್ಲಿ ಭಾಗಿಯಾಗಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ವನ್ನು ನಿಷೇಧಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ಗುರುವಾರ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರನ್ನು ಆಗ್ರಹಿಸಿದೆ.

ಪಿಎಫ್‌ಐ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ನೇತೃತ್ವದ ನಿಯೋಗ.
ಪಿಎಫ್‌ಐ ನಿಷೇಧಕ್ಕೆ ಆಗ್ರಹಿಸಿ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಮನವಿ ಸಲ್ಲಿಸಿದ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ನೇತೃತ್ವದ ನಿಯೋಗ. (HJS)

ಬೆಂಗಳೂರು: ಉಗ್ರಚಟುವಟಿಕೆಗೆ ಸಂಬಂಧಿಸಿ ದೇಶಾದ್ಯಂತ ಇಂದು ಪಿಎಫ್‌ಐ ಮತ್ತು ಎಸ್‌ಡಿಪಿಐ ಕಚೇರಿ ಮತ್ತು ನಾಯಕರ ನಿವಾಸಗಳ ಮೇಲೆ ನ್ಯಾಷನಲ್‌ ಇನ್‌ವೆಸ್ಟಿಗೇಶನ್‌ ಏಜೆನ್ಸಿ (NIA Raid) ದಾಳಿ ನಡೆಸಿದೆ. ಈ ದಾಳಿಯ ವೇಳೆ ಅನೇಕ ಕಡೆಗಳಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಗೋಬ್ಯಾಕ್‌ ಎನ್‌ಐಎ ಘೋಷಣೆ ಕೂಗಿದ್ದು ಗಮನಸೆಳೆದಿದೆ.

ಈ ವಿದ್ಯಮಾನದ ಬೆನ್ನಿಗೆ, ಹಿಂದೂ ಜನಜಾಗೃತಿ ಸಮಿತಿಯ ನಿಯೋಗ ಇಂದು ರಾಜ್ಯ ಗೃಹಸಚಿವ ಅರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ಪಿಎಫ್‌ಐ ಅನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ನೇತೃತ್ವದ ನಿಯೋಗದಲ್ಲಿ ಕಣ್ಣನ್, ಗೋಪಿ ಕೆ, ವಕೀಲ ತ್ಯಾಗರಾಜ ಕೂಡ ಇದ್ದರು.

ಮನವಿ ಪತ್ರದಲ್ಲಿರುವ ಪ್ರಕಾರ, ಕೇರಳದಲ್ಲಿ 2006 ರಲ್ಲಿ ಸ್ಥಾಪನೆಯಾದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ (PFI) ಹೆಸರಿನ ಸಂಘಟನೆಯ ಜಾಲವು ಈಗ ಕರ್ನಾಟಕ ಸೇರಿ ದೇಶದಾದ್ಯಂತ ಹರಡಿದೆ. ಈ ಸಂಘಟನೆಯು ಅತ್ಯಂತ ಕ್ರೂರವಾಗಿದ್ದು, ಅನೇಕ ದೇಶದ್ರೋಹ ಮತ್ತು ಸಮಾಜದ್ರೋಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಕರ್ನಾಟಕ ರಾಜ್ಯದಲ್ಲಿ ಪ್ರವೀಣ ನೆಟ್ಟಾರು, ಹರ್ಷ, ರುದ್ರೇಶ್, ಶರತ್ ಮಡಿವಾಳ ಸೇರಿ 15 ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಹತ್ಯಾ ಪ್ರಕರಣದ ಆರೋಪ ಪಟ್ಟಿಯಲ್ಲಿ ಪಿಎಫ್‌ಐ ಭಾಗಿಯಾಗಿದೆ. ಇಡೀ ರಾಜ್ಯದಲ್ಲಿ ಹತ್ಯೆ, ದಂಗೆ, ಕೋಮು ಪ್ರಚೋಧನೆ, ದ್ವೇಷದ ಪ್ರಚಾರ, ಭಯೋತ್ಪಧನಾ ತರಬೇತಿ ಕೇಂದ್ರ ನಡೆಸುವುದು ಮುಂತಾದ ಚಟುವಟಿಕೆಗಳನ್ನು ನಡೆಸುವ ಮೂಲಕ ರಾಜ್ಯದ ಕಾನೂನು ವ್ಯವಸ್ಥೆಗೆ ಅತ್ಯಂತ ಅಪಾಯಕಾರಿಯಾಗಿದೆ. ಈ ದೃಷ್ಟಿಕೋನದಿಂದ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವನ್ನು ನಿಷೇಧ ಮಾಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಬಲವಾಗಿ ಆಗ್ರಹಿಸಿದೆ.

ಪಿಎಫ್ಐ ನಿಷೇಧ ಆಗ್ರಹಕ್ಕೆ ಮುಂದಿಟ್ಟಿರುವ ಸಮರ್ಥನೆಗಳೇನು?

̆1. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ಈ ಸಂಘಟನೆಯ ಅಧ್ಯಕ್ಷ ಅಬ್ದುಲ್ ರೆಹಮಾನ್ ಭಾರತದಲ್ಲಿ ನಿಷೇಧಿಸಲ್ಪಟ್ಟ 'SIMI' ಅಂದರೆ ‘ಸ್ಟೂಡೆಂಟ್ಸ್ ಇಸ್ಲಾಮಿಕ ಮೂವ್ಹಮೆಂಟ ಆಫ್ ಇಂಡಿಯಾ ಈ ಭಯೋತ್ಪಾದಕ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದ. ಅಬ್ದುಲ್‌ಹಮೀದ್ ಕೇರಳ ರಾಜ್ಯ ‘ಸಿಮಿ’ ಭಯೋತ್ಪಾದಕ ಸಂಘಟನೆಯ ರಾಜ್ಯ ಕಾರ್ಯದರ್ಶಿಯಾಗಿದ್ದ.

2. ಕೇರಳ ಪೊಲೀಸರು 2013ರ ಏಪ್ರಿಲ್‌ನಲ್ಲಿ ಕಣ್ಣೂರಿನ ನಾರತ್‌ ತರಬೇತಿ ಶಿಬಿರದ ಮೇಲೆ ಮುತ್ತಿಗೆ ಹಾಕಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ 21 ಕಾರ್ಯಕರ್ತರನ್ನು ಬಂಧಿಸಿದ್ದರು. ನಾಡ ಬಾಂಬ್‌ಗಳು, ಕತ್ತಿಗಳು, ಬಾಂಬ್‌ಗಳನ್ನು ತಯಾರಿಸುವಂತಹ ಕಚ್ಚಾ ವಸ್ತುಗಳು ಮತ್ತು ‘ಪಿಎಫ್‌ಐ,’ ನ ಪತ್ರಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ 21 ಕಾರ್ಯಕರ್ತರ ಮೇಲೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (UAPA) ಅಡಿಯಲ್ಲಿ ದೇಶವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸುವ ಅಪರಾಧಗಳನ್ನು ನಮೂದಿಸಲಾಗಿದೆ. ಅದಲ್ಲದೇ ಕಳೆದ ತಿಂಗಳು ಬಿಹಾರದ ಪಿಎಪ್‌ಐ ಕಾರ್ಯಾಲಯದ ಮೇಲೆ ಪೋಲಿಸರು ದಾಳಿ ಮಾಡಿದಾಗ ಭಾರತವನ್ನು 2047 ರ ಒಳಗೆ ಭಾರತವನ್ನು ಇಸ್ಲಾಮಿಕರಣ ಮಾಡುವ ಷಡ್ಯಂತ್ರ್ಯದ ಬರಹಗಳು ಸಹ ದೊರೆತಿದೆ.

3. ಬೆಂಗಳೂರು ಕೆಜಿ, ಡಿಜೆ ಹಳ್ಳಿಯ, ಹುಬ್ಬಳ್ಳಿ, ಮಂಗಳೂರು, ಶಿವಮೊಗ್ಗ ದಂಗೆ ಪ್ರಕರಣದಲ್ಲಿ ‘ಪಿಎಫ್‌ಐ’ ಸಂಘಟನೆಯ ಕೈವಾಡವಿರುವುದನ್ನು ರಾಷ್ಟ್ರೀಯ ತನಿಖಾ ದಳ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.

4. 2012 ರಲ್ಲಿ, ಕೇರಳ ಸರಕಾರವು ‘ಪಾಪ್ಯು

ಲರ್ ಫ್ರಂಟ್ ಆಫ್ ಇಂಡಿಯಾ’ ಕುರಿತು ಕೇರಳ ಉಚ್ಚ ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಅದರಲ್ಲಿ ಈ ಸಂಘಟನೆಯು ದೇಶದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ ಹಾಗೂ ಇದು ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವಮೆಂಟ ಆಫ್ ಇಂಡಿಯಾ ಅಂದರೆ ‘ಸಿಮಿ’ಯನ್ನು ಪುನರುಜ್ಜೀವನಗೊಳಿಸಿದಂತಿದೆ ಎಂದು ಹೇಳಿತ್ತು . ಕೇಂದ್ರ ಸರಕಾರ ಸಿಮಿಯನ್ನು ಭಯೋತ್ಪಾದಕ ಸಂಘಟನೆ ಎಂದು ಹೇಳಿ ಅದನ್ನು ನಿಷೇಧಿಸಿದೆ. ಈ ಸಂಘಟನೆಯು ವಿವಿಧ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತು ಸಿಪಿಐ ಸಂಘಟನೆಯ 27 ಜನರನ್ನು ಹತ್ಯೆಗೈಯ್ದ, 8 ಜನರನ್ನು ಕೊಲ್ಲಲು ಪ್ರಯತ್ನಿಸಿದ ಮತ್ತು ಧಾರ್ಮಿಕ ಹಿಂಸಾಚಾರದ ಘಟನೆಗಳಲ್ಲಿ 106 ಪ್ರಕರಣಗಳು ದಾಖಲಾಗಿದೆ, ಜೊತೆಗೆ ಈ ಸಂಘಟನೆಯು ಅಪಹರಣ, ಗಲಭೆಗಳನ್ನು ಪ್ರಚೋದಿಸುವುದು ಇತ್ಯಾದಿ. ದೇಶದ್ರೋಹಿ ಕೃತ್ಯಗಳಲ್ಲಿ ಕೂಡ ಭಾಗಿಯಾಗಿದೆ.

5. ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಸದಸ್ಯರು ಫೇಸ್‌ಬುಕ್‌ನಲ್ಲಿ ‘ಐಸಿಸ್ ನ ಸಮರ್ಥಕರು’ ಎಂದು ಬಹಿರಂಗಗೊಂಡಿದೆ ಮತ್ತು ಅವರು ‘ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ’, ‘ಹಿಜ್ಬುಲ್ ಮುಜಾಹಿದ್ದೀನ್’, ‘ಲಷ್ಕರ್-ಎ-ತೊಯ್ಬಾ’ ಮತ್ತು ‘ಅಲ್-ಕಾಯದಾ’ ಜೊತೆ ಸಹ ಸಂಬಂಧ ಹೊಂದಿದ್ದರು ಎಂಬುದು ಬಹಿರಂಗವಾಗಿದೆ.

6) ಪೌರತ್ವ ಸುಧಾರಣಾ ಕಾಯ್ದೆ (CAA) ವಿರುದ್ಧ ಉತ್ತರ ಪ್ರದೇಶದಲ್ಲಿ ಗಲಭೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಪ್ರಕರಣದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ೧೦೮ ಕಾರ್ಯಕರ್ತರು ಬಂಧನಕ್ಕೊಳಗಾಗಿದ್ದರು. ಅದಕ್ಕಾಗಿಯೇ ಉತ್ತರ ಪ್ರದೇಶ ಸರಕಾರವು ಈ ಸಂಘಟನೆಯನ್ನು ನಿಷೇಧಿಸುವ ಪ್ರಕ್ರಿಯೆ ಆರಂಭಿಸಿದೆ. ಈ ಎಲ್ಲ ವಿಷಯಗಳ ಗಾಂಭೀರ್ಯವನ್ನು ಸ್ಪಷ್ಟಪಡಿಸುತ್ತಾ ಇದರ ಹಿನ್ನೆಲೆಯಲ್ಲಿ -

a) ಪಿಎಫ್‌ಐ ಮತ್ತು ಅದರ ಎಲ್ಲ ಅಂಗ ಸಂಸ್ಥೆಗಳ ಮೇಲೆ ತಕ್ಷಣವೇ ನಿಷೇಧ ಹೇರಬೇಕು.

b) ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಎಲ್ಲಾ ಪದಾಧಿಕಾರಿಗಳ ಮೇಲೆ ದೇಶದ್ರೋಹ ಮತ್ತು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣದಿಂದಾಗಿ, ಅಪರಾಧವನ್ನು ನಮೂದಿಸಿ ಅವರನ್ನು ಬಂಧಿಸಬೇಕು.

c) ಪಿಎಫ್‌ಐ ನ ಎಲ್ಲ ಕಚೇರಿಗಳಿಗೆ ಬೀಗ ಹಾಕುವ ಮೂಲಕ ಅವರ ಎಲ್ಲಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಬೇಕು.

d) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಕೂಲಂಕುಷವಾಗಿ ವಿಚಾರಣೆ ಮಾಡುವ ಮೂಲಕ, ಅವರು ಯಾವ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಅವರು ವಿದೇಶಗಳಿಂದ ಪಡೆದ ಮೊತ್ತ, ಅವರ ಮುಂದಿನ ಷಡ್ಯಂತ್ರಗಳನ್ನು ಕಂಡುಹಿಡಿದು ಪಿಎಫ್‌ಐ ನಿಷೇಧ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು.

IPL_Entry_Point