ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಉಳಿವಿಗೆ ಜೀವನ ಮುಡುಪಿಟ್ಟ ಭೀಮವ್ವಗೆ ಪದ್ಮಶ್ರೀ ಗೌರವ; ಮಹಾನ್ ಚೇತನಕ್ಕೆ ಅಭಿನಂದನೆಗಳ ಮಹಾಪೂರ
ಕನ್ನಡ ಸುದ್ದಿ  /  ಕರ್ನಾಟಕ  /  ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಉಳಿವಿಗೆ ಜೀವನ ಮುಡುಪಿಟ್ಟ ಭೀಮವ್ವಗೆ ಪದ್ಮಶ್ರೀ ಗೌರವ; ಮಹಾನ್ ಚೇತನಕ್ಕೆ ಅಭಿನಂದನೆಗಳ ಮಹಾಪೂರ

ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಉಳಿವಿಗೆ ಜೀವನ ಮುಡುಪಿಟ್ಟ ಭೀಮವ್ವಗೆ ಪದ್ಮಶ್ರೀ ಗೌರವ; ಮಹಾನ್ ಚೇತನಕ್ಕೆ ಅಭಿನಂದನೆಗಳ ಮಹಾಪೂರ

ತೊಗಲು ಬೊಂಬೆಯಾಟ ಕಲಾಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ 96 ವರ್ಷದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ ಇವರಿಗೆ ಈ ಬಾರಿ ಪದ್ಮಶ್ರೀ ಪಶಸ್ತಿ ದೊರೆತಿದೆ. ಇವರ ಅಪರೂಪದ ಸಾಧನೆಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಬಹುಪರಾಕ್ ಹೇಳುತ್ತಿದ್ದಾರೆ.

ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಉಳಿವಿಗೆ ಜೀವನ ಮುಡುಪಿಟ್ಟ ಭೀಮವ್ವಗೆ ಪದ್ಮಶ್ರೀ ಗೌರವ; ಮಹಾನ್ ಚೇತನಕ್ಕೆ ಅಭಿನಂದನೆಗಳ ಮಹಾಪೂರ
ಗ್ರಾಮೀಣ ಕಲೆ ತೊಗಲು ಗೊಂಬೆಯಾಟದ ಉಳಿವಿಗೆ ಜೀವನ ಮುಡುಪಿಟ್ಟ ಭೀಮವ್ವಗೆ ಪದ್ಮಶ್ರೀ ಗೌರವ; ಮಹಾನ್ ಚೇತನಕ್ಕೆ ಅಭಿನಂದನೆಗಳ ಮಹಾಪೂರ (PC: X)

ಕರ್ನಾಟಕದ ಜನಪದ ಕಲಾಕ್ಷೇತ್ರದ ಭಾಗವಾಗಿರುವ ತೊಗಲು ಗೊಂಬೆಯಾಟದಲ್ಲಿ ಸುಮಾರು 70 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತ ಇವರಿಗೆ ಈ ಬಾರಿ ಪದ್ಮಶ್ರೀ ಪಶಸ್ತಿ ದೊರೆತಿದೆ. ಕೊಪ್ಪಳ ಜಿಲ್ಲೆಯ ಮೋರನಾಳ ಗ್ರಾಮದವರ ಇವರು ಕೇಂದ್ರ ಸರ್ಕಾರ ಕೊಡ ಮಾಡುವ ದೇಶದ ಮೂರನೇ ಅತ್ಯುನ್ನತ್ತ ಪ್ರಶಸ್ತಿಯಾದ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. 96 ವರ್ಷದ ಇವರು ತಮ್ಮ 14ನೇ ವಯಸ್ಸಿನಲ್ಲೇ ಈ ಕಲಾಪ್ರಕಾರದಲ್ಲಿ ತೊಡಗಿಸಿಕೊಂಡಿದ್ದರು. ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶ, ವಿದೇಶಗಳಲ್ಲೂ ತೊಗಲು ಗೊಂಬೆಯಾಟ ಪ್ರದರ್ಶನದ ಮೂಲಕ ಖ್ಯಾತಿ ಪಡೆದಿದ್ದಾರೆ. 2025ರ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಬಾರಿ ಪದ್ಮ ಶ್ರೀ ಪ್ರಶಸ್ತಿಗೆ ಭೀಮವ್ವ ಇವರನ್ನು ಆಯ್ಕೆ ಮಾಡಿದೆ.

ಭೀಮವ್ವ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರೆತಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿನಂಧನೆ ಸಲ್ಲಿಸುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯೊಬ್ಬರು ಮಾಡಿರುವ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.

‘ಪದ್ಮ ಪ್ರಶಸ್ತಿ 2025. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಕಲಾ ಕ್ಷೇತ್ರದಲ್ಲಿ ಭೀಮವ್ವ ದೊಡ್ಡಬಾಳಪ್ಪ ಶಿಲೆಕ್ಯಾತರ ನೀಡಿದ ಕೊಡುಗೆಗಳಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು‘ ಎಂದು ಡಿಡಿ ಚಂದನ ನ್ಯೂಸ್ ಎಕ್ಸ್ ಪುಟದಲ್ಲಿ ಬರೆದುಕೊಂಡು ಭೀಮವ್ವ ಪ್ರಶಸ್ತಿ ಸ್ವೀಕರಿಸುತ್ತಿರುವ ವಿಡಿಯೊವನ್ನು ಹಂಚಿಕೊಂಡಿದೆ.

‘ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಶ್ರಿಮತಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಇಂದು ಭೀಮವ್ವ ಬಿ. ಶಿಳ್ಳೆಕ್ಯಾತರ ಅವರಿಗೆ ಪದ್ಮಶ್ರೀ ಪ್ರಶಸ್ತಿ ವಿತರಣೆ ಮಾಡಿ ಗೌರವ ಸಲ್ಲಿಸಿದ್ದಾರೆ. ತೊಗಲು ಬೊಂಬೆಯಾಟ ಕಲೆಯಲ್ಲಿ ಅಪ್ರತಿಮ ಸಾಧನೆ ಮಾಡಿರುವ 96 ವರ್ಷದ ಕಲಾವಿದೆ ಶ್ರೀಮತಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರ ಸಾಧನೆ ಅಪರೂಪವಾದುದು. ತಳಮಟ್ಟದ ಹಾಗೂ ನೈಜ ಸಾಧಕರಿಗೂ ದೇಶದ ಗೌರವಾನ್ವಿತ ಪ್ರಶಸ್ತಿಗಳು ಅರಸಿ ಬರುತ್ತಿರುವುದು ಹೆಮ್ಮೆಯ ಸಂಗತಿ‘ ಎಂದು ಸಚಿವ ವಿ. ಸೋಮಣ್ಣ ತಮ್ಮ ಅಧಿಕೃತ ಎಕ್ಸ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್‌ ಜೋಶಿ ಅವರ ನವದೆಹಲಿ ಗೃಹಕಚೇರಿಯಲ್ಲಿ ರಾಜ್ಯದ ಸಾಧಕರು, ಪದ್ಮಶ್ರೀ ಪುರಸ್ಕೃತರಾದ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರನ್ನು ಅಭಿನಂದಿಸಲಾಯಿತು.

ನಮ್ಮ ಜಿಲ್ಲೆಯ ಹೆಮ್ಮೆ. ಶ್ರೀಮತಿ ಭೀಮವ್ವ ಶಿಳ್ಳಿಕ್ಯಾತರ್, ಪದ್ಮಶ್ರೀ ಪ್ರಶಸ್ತಿ ಎಂದು ಬರೆದುಕೊಂಡು ಡಾ. ಬಸವರಾಜ ಎಸ್ ಕ್ಯಾವಟರ್ ಬರೆದುಕೊಂಡು ವಿಡಿಯೊ ಹಂಚಿಕೊಂಡಿದ್ದಾರೆ.

’ಬೊಂಬೆಯಾಟವಯ್ಯ, ಇದು ಬೊಂಬೆಯಾಟವಯ್ಯ, ನೀ ಸೂತ್ರಧಾರಿ, ನಾ ಪಾತ್ರಧಾರಿ ದಡವ ಸೇರಿಸಯ್ಯ’ ಇಂದು ಗೊಂಬೆಯಾಟದಿಂದಲೇ ಜಗತ್ತಿನಾದ್ಯಾಂತ ಖ್ಯಾತಿ ಪಡೆದು ಪದ್ಮಶ್ರೀ ಪ್ರಶಸ್ತಿ ಪಡೆದ ಗೊಂಬೆಯಾಟ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೆಕ್ಯಾತರ ಅವರೊಂದಿಗೆ ಕಳೆದ ಅಭೂತಪೂರ್ವ ಕ್ಷಣಗಳು‘ ಎಂದು ಬರೆದುಕೊಂಡು ಭೀಮವ್ವ ಪ್ರಶಸ್ತಿ ಪಡೆದ ವಿಡಿಯೊ ಹಂಚಿಕೊಂಡು ಬರೆದುಕೊಂಡಿದ್ದಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.