ರೇಣುಕಾಸ್ವಾಮಿ ಕೊಲೆ ಪ್ರಕರಣ; ದರ್ಶನ್ ಮಧ್ಯಂತರ ಜಾಮೀನು ಮುಂದುವರಿಕೆ; ಡಿ.11ರ ಬುಧವಾರ ದರ್ಶನ್ ಬೆನ್ನುನೋವಿಗೆ ಸರ್ಜರಿ
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್ ಜಾಮೀನು ಮುಂದುವರಿಯಲಿದೆ. ಇನ್ನುಎರಡು ದಿನದಲ್ಲಿ ಅವರ ಬೆನ್ನು ನೋವಿಗೆ ಚಿಕಿತ್ಸೆ ದೊರೆಯಲಿದೆ.ವರದಿ: ಎಚ್.ಮಾರುತಿ, ಬೆಂಗಳೂರು
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾದ ದರ್ಶನ್ಗಂಡಾಂತರದಿಂದ ಪಾರಾಗಿದ್ದಾರೆ. ರೆಗ್ಯುಲರ್ ಜಾಮೀನು ಸಿಗುವವರೆಗೆ ಮಧ್ಯಂತರ ಜಾಮೀನು ಮುಂದುವರಿಯಲಿದೆ. ಡಿ.11, ಬುಧವಾರ ದರ್ಶನ್ ಗೆ ಬೆನ್ನುನೋವಿಗೆ ಸರ್ಜರಿ ನಡೆಯಲಿದೆ. ಹೈಕೋರ್ಟ್ ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ದರ್ಶನ್, ಪವಿತ್ರಾಗೌಡ ಮತ್ತಿತರ ಆರೋಪಿಗಳ ರೆಗ್ಯುಲರ್ ಜಾಮೀನು ಅರ್ಜಿ ವಿಚಾರಣೆ ಇಂದಿಗೆ ಪೂರ್ಣಗೊಂಡಿತು. ಜಾಮೀನು ಆದೇಶ ಕಾಯ್ದಿರಿಸಿದ ನ್ಯಾಯಮೂರ್ತಿಗಳು, ರೆಗ್ಯುಲರ್ ಜಾಮೀನು ಅರ್ಜಿ ಕುರಿತ ಆದೇಶ ಪ್ರಕಟವಾಗುವವರೆಗೆ ಮಧ್ಯಂತರ ಜಾಮೀನು ಆದೇಶಮುಂದುವರೆಯಲಿದೆ ಎಂದು ಪ್ರಕಟಿಸಿದರು.
ವಿಸ್ತೃತ ವಿಚಾರಣೆ
ದರ್ಶನ್ ಜಾಮೀನು ಅರ್ಜಿ ವಿಚಾರಣೆ ಆರಂಭವಗುತ್ತಿದ್ದಂತೆ ಎಸ್ ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ ದರ್ಶನ್ ಸೇರಿದಂತೆ ಎಲ್ಲ ಆರೋಪಿಗಳ ರೆಗ್ಯುಲರ್ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು. ರೇಣುಕಾಸ್ವಾಮಿ ಅಪಹರಿಸಿ ಚಿನ್ನಾಭರಣ ದೋಚಿದ್ದಾರೆ. ರೇಣುಕಾಸ್ವಾಮಿ ಆಭರಣಗಳು ಆರೋಪಿಯೊಬ್ಬನ ಮನೆಯಲ್ಲಿ ಸಿಕ್ಕಿವೆ ಎಂದರು.
ಪುನೀತ್ ಮೊಬೈಲ್ ನಲ್ಲಿದ್ದ ಪೋಟೋಗಳ ಬಗ್ಗೆ ಪ್ರಸ್ತಾಪಿಸಿದ ಎಸ್ ಪಿಪಿ, ದರ್ಶನ್ ತಂಡದ ಆರೋಪಿ ಧನರಾಜ್ ರೇಣುಕಾಸ್ವಾಮಿಯನ್ನು ವಿದ್ಯುತ್ ಶಾಕ್ ಕೊಟ್ಟು ಹತ್ಯೆ ಮಾಡಿದ್ದಾನೆ. ಶೆಡ್ ನಲ್ಲೇ ಹತ್ಯೆ ಮಾಡಲಾಗಿದೆ ಎಂದರು. ಇವರೆಲ್ಲರೂ ಶೆಡ್ ನಲ್ಲಿದ್ದರು ಎನ್ನುವುದಕ್ಕೆ ಟೈಮ್ ಟವರ್ ಲೋಕೇಷನ್ ಸಾಕ್ಷಿಯಿದೆ. ಎ9 ಧನರಾಜ್, ಎ5 ನಂದೀಶ್, ಎ3 ಪವನ್ ಸೇರಿ ಮೂರೂ ಮಂದಿ ರೇಣುಕಾಸ್ವಾಮಿಯನ್ನು ಕಟ್ಟಿಗೆಯಿಂದ ಹೊಡೆದಿದ್ದಾರೆ. ಶೆಡ್ ಗೆ ಕಪ್ಪು ಕಾರಿನಲ್ಲಿ ದರ್ಶನ್ ಆಗಮಿಸಿದ್ದರು ಎಂದು ಪುನೀತ್ ಹೇಳಿಕೆ ನೀಡಿದ್ದಾನೆ. ಆತನ ಪ್ರಕಾರ ದರ್ಶನ್, ರೇಣುಕಾಸ್ವಾಮಿ ಎದೆಗೆ ಒದ್ದಿದ್ದಾರೆ.
ನೋಡೋ ಇವಳೇ ನನ್ನ ಹೆಂಡತಿ ಎಂದು ಹೇಳಿ ಹಲ್ಲೆ ನಡೆಸಿದ್ದಾರೆ. ಪವಿತ್ರಾಗೌಡ ಅವರೂಚಪ್ಪಲಿಯಿಂದ ಹೊಡೆದಿದ್ದಾರೆ. ಬಳಿಕ ದರ್ಶನ್ ಗೂ ಚಪ್ಪಲಿ ನೀಡಿ ಅದೇ ಚಪ್ಪಲಿಯಿಂದ ಹೊಡೆಸಿದ್ದಾರೆ. ದರ್ಶನ್ ರೇಣುಕಾಸ್ವಾಮಿ ಪ್ಯಾಂಟ್ ಬಿಚ್ಚಿಸಿ ಮರ್ಮಾಂಗಕ್ಕೆ ಒದ್ದಿದ್ದಾರೆ ಎಂದು ಪುನೀತ್ ಹೇಳಿರುವುದನ್ನು ನ್ಯಾಯಾಲಯದ ಗಮನಕ್ಕೆ ತಂದರು.
ಆರೋಪಿಗಳಿಗೆ ದರ್ಶನ್ ನೀಡಿದ ಹಣದ ಬಗ್ಗೆ ಪ್ರಸ್ತಾಪಿಸಿದ ಎಸ್ ಪಿಪಿ, ಆರೋಪಿಗಳ ಪ್ರಕಾರ ದರ್ಶನ್ ತಲಾ ರೂ. 5 ಲಕ್ಷ ಹಣ ನೀಡಿದ್ರು. ಹಣ ನೀಡಿದ್ದಾರೆ ಎಂದು ಎ14 ಪ್ರದೋಶ್ ಕೂಡ ಹೇಳಿಕೆ ನೀಡಿದ್ದಾನೆ. ದರ್ಶನ್ ಮನೆಯಲ್ಲೂ ಹಣ ರಿಕವರಿ ಮಾಡಲಾಗಿದೆ.
ಆರೋಪಿಗಳ ಮನೆಯಲ್ಲಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದು ದರ್ಶನ್ ವಿರುದ್ದ ಮತ್ತೊಂದು ಪ್ರಮುಖ ಸಾಕ್ಷ್ಯವಾಗಿದೆ. ಹತ್ಯೆ ಬಳಿಕ ಪೊಲೀಸರ ಮುಂದೆ ಶರಣಾಗಲು ನಾಲ್ವರಿಗೆ ಡೀಲ್ ನೀಡಲಾಗಿದ್ದನ್ನೂ ಎಸ್ ಪಿಪಿ ಪ್ರಸ್ತಾಪಿಸಿದರು.
ನಾಡಿದ್ದು, ದರ್ಶನ್ ಬೆನ್ನುನೋವಿಗೆ ಸರ್ಜರಿ
ಎಸ್ ಪಿಪಿ ವಾದದ ನಂತರ ಮಾತನಾಡಿದ ದರ್ಶನ್ ಪರ ವಕೀಲ ಸಿ.ವಿ. ನಾಗೇಶ್ ಅವರು ದರ್ಶನ್ ಗೆ ನಾಡಿದ್ದು ಬೆನ್ನುನೋವಿಗೆ ಸರ್ಜರಿ ನಡೆಯಲಿದೆ. ಸರ್ಜರಿಗೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ದರ್ಶನ್ ಗೆ ಸ್ಟಿರಾಯ್ಡ್ ಇಂಜೆಕ್ಷನ್ ನೀಡಲಾಗುತ್ತಿದೆ.
ಈಗ ಫಿಸಿಯೋಥೆರಪಿ, ವ್ಯಾಯಾಮ ಮಾಡಿಸಲಾಗುತ್ತಿದೆ. ಡಿ.11ರಂದು ಸರ್ಜರಿ ಮಾಡುವುದಾಗಿ ಕೋರ್ಟ್ ಗೆ ಮಾಹಿತಿ ನೀಡುವುದಾಗಿ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ಮಾಹಿತಿ ನೀಡಿದರು.
ಡಿ.11ಕ್ಕೆ ದರ್ಶನ್ ಗೆ ಸರ್ಜರಿ ಮಾಡಲು ತೀರ್ಮಾನವಾಗಿದ್ದು, ಅವರು ಜಾಮೀನು ಷರತ್ತು ಉಲ್ಲಂಘಿಸಿಲ್ಲ. ಎಂದೂ ತಿಳಿಸಿದರು. ರೇಣುಕಾಸ್ವಾಮಿ ದೇಹದ ಮೇಲೆ 39 ಗಾಯಗಳಾಗಿದ್ದವು ಎಂದು ಹೇಳುತ್ತಾರೆ. ಆದರೆ ರಕ್ತ ಸೋರುವಂಥ ಗಾಯವಾಗಿದ್ದು ಒಂದೇ ಒಂದು. ಕೊಲೆ ನಡೆದ ಬಹಳ ದಿನಗಳ ಬಳಿಕ FSLಗೆ ಬಟ್ಟೆಗಳನ್ನು ಕಳುಹಿಸಲಾಗಿದೆ. ಅಷ್ಟು ತಡವಾಗಿ DNA ಮಾದರಿ ಸಿಗಲು ಹೇಗೆ ಸಾಧ್ಯ? ಪ್ರಾಸಿಕ್ಯೂಷನ್ ಸುಳ್ಳು ಹೇಳುತ್ತಿದೆ ಎಂದು ನಾಗೇಶ್ ವಾದಸಿದರು.