Sagar Parikrama: ಮಾರ್ಚ್ 18ರಿಂದ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ನಾಲ್ಕನೇ ಹಂತದ ಸಾಗರ ಪರಿಕ್ರಮ ಆರಂಭ
ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ನಾಲ್ಕನೇ ಹಂತದ ಸಾಗರ ಪರಿಕ್ರಮ ನಾಳೆ ಆರಂಭಗೊಳ್ಳಲಿದೆ.
ಮಂಗಳೂರು: ನಾಳೆಯಿಂದ ನಾಲ್ಕನೇ ಹಂತದ ಸಾಗರ ಪರಿಕ್ರಮವು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಆರಂಭವಾಗಲಿದೆ. "ಸಿಂಧಿ ಮತ್ತು ವಿವಿಧ ಯೋಜನೆಗಳ ಮೂಲಕ ಆರ್ಥಿಕ ಪ್ರಗತಿಗೆ ಅನುಕೂಲʼ ಮಾಡಿಕೊಡುವ ನಾಲ್ಕನೇ ಹಂತದ ಕಾರ್ಯಕ್ರಮಕ್ಕೆ ನಾಳೆ ಚಾಲನೆ ದೊರಕಲಿದೆ.
ಸಾಗರ್ ಪರಿಕ್ರಮ ಕಾರ್ಯಕ್ರಮದ ಹಂತ-IV ಮಾರ್ಚ್ 18-19 ರವರೆಗೆ ನಡೆಯಲಿದೆ. ಇದು ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿದೆ ಎಂದು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ಮಾಹಿತಿ ನೀಡಿದೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರಶೋತ್ತಮ್ ರೂಪಾಲಾ ಮತ್ತು ಸಂಬಂಧಪಟ್ಟ ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ, ಕೆಸಿಸಿ ಮತ್ತು ರಾಜ್ಯ ಯೋಜನೆಗೆ ಸಂಬಂಧಿಸಿದ ಪ್ರಮಾಣಪತ್ರಗಳು / ಮಂಜೂರಾತಿಗಳನ್ನು ಮೀನುಗಾರರಿಗೆ, ವಿಶೇಷವಾಗಿ ಕರಾವಳಿ ಮೀನುಗಾರರು, ಯುವ ಮತ್ಸ್ಯ ಉದ್ಯಮಿಗಳಿಗೆ ನೀಡಲಾಗುತ್ತದೆ. ಪಿಎಂಎಂಎಸ್ವೈ ಯೋಜನೆ, ರಾಜ್ಯ ಯೋಜನೆಗಳು, ಇ- ಶ್ರಮ, ಎಫ್ಐಡಿಎಫ್, ಕೆಸಿಸಿ ಇತ್ಯಾದಿ ಯೋಜನೆಗಳ ವ್ಯಾಪಕ ಪ್ರಚಾರಕ್ಕೂ ಪ್ರಯತ್ನಿಸಲಾಗುತ್ತದೆ. ಈ ಸಂದರ್ಭದಲ್ಲಿ ಕನ್ನಡದಲ್ಲಿ ಸಾಗರ್ ಪರಿಕ್ರಮದ ಹಾಡನ್ನು ಸಹ ಬಿಡುಗಡೆ ಮಾಡಲಾಗುತ್ತದೆ.
ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಮೀನುಗಾರಿಕೆ ಇಲಾಖೆ, ಗುಜರಾತ್, ಭಾರತೀಯ ಕರಾವಳಿ ಕಾವಲು ಪಡೆ, ಭಾರತೀಯ ಮೀನುಗಾರಿಕೆ ಸಮೀಕ್ಷೆ, ಗುಜರಾತ್ ಕಡಲ ಮಂಡಳಿ ಮತ್ತು ಮೀನುಗಾರರ ಪ್ರತಿನಿಧಿಗಳೊಂದಿಗೆ ಆಯೋಜಿಸಲಾಗಿದೆ. ಇದು ಕರಾವಳಿ ಮೀನುಗಾರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.
75 ನೇ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಸಾಗರ್ ಪರಿಕ್ರಮವು ಎಲ್ಲಾ ಮೀನುಗಾರರು, ಮತ್ಸ್ಯ ಕೃಷಿಕರು ಮತ್ತು ಸಂಬಂಧಿತ ಪಾಲುದಾರರೊಂದಿಗೆ ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರು, ನಾವಿಕರು ಮತ್ತು ಮೀನುಗಾರರಿಗೆ ವಂದನೆ ಸಲ್ಲಿಸುವ ಮೂಲಕ ಕರಾವಳಿ ಬೆಲ್ಟ್ನಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.
ಮೀನುಗಾರರು ಮತ್ತು ಇತರ ಮಧ್ಯಸ್ಥಗಾರರ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಭಾರತ ಸರ್ಕಾರವು PMMSY ಯಂತಹ ವಿವಿಧ ಮೀನುಗಾರಿಕೆ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಅವರ ಆರ್ಥಿಕ ಉನ್ನತಿಗೆ ಪ್ರಯತ್ನಿಸುತ್ತಿದೆ.
ಕರ್ನಾಟಕವು 5.74 ಲಕ್ಷ ಹೆಕ್ಟೇರ್ ಸಿಹಿನೀರಿನ ಮೂಲಗಳನ್ನು ಹೊಂದಿದೆ. ಇದರಲ್ಲಿ ದಕ್ಷಿಣ ಕನ್ನಡದ ಕೊಡುಗೆಯೇ ಶೇಕಡ 40ರಷ್ಟಿದೆ. ನಂತರ ಉತ್ತರ ಕನ್ನಡ (31%) ಮತ್ತು ಉಡುಪಿ (29%) ಇಂತಹ ಸಿಹಿನೀರಿನ ಮೂಲಗಳನ್ನು ಹೊಂದಿವೆ. ಮಂಗಳೂರು ಮತ್ತು ಮಲ್ಪೆ ಮೀನುಗಾರಿಕೆ ಬಂದರುಗಳು ಕ್ರಮವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಗತಿಗೆ ಪ್ರಮುಖ ಕೊಡುಗೆ ನೀಡುತ್ತವೆ. ರಾಜ್ಯದಲ್ಲಿ 9.84 ಲಕ್ಷ ಮೀನುಗಾರರು ಮತ್ತು 729 ಮೀನುಗಾರರ ಸಹಕಾರ ಸಂಘಗಳಿವೆ.
2021-22 ಹಣಕಾಸು ವರ್ಷದಲ್ಲಿ ಕರ್ನಾಟಕದ ಮೀನು ಉತ್ಪಾದನೆಯು ಭಾರತದ ಒಟ್ಟು ಮೀನು ಉತ್ಪಾದನೆಯಲ್ಲಿ ಶೇಕಡ 6.6ರಷ್ಟು ಕೊಡುಗೆ ನೀಡಿದೆ. ದೇಶದ ಒಟ್ಟು ಮೀನು ಉತ್ಪಾದನೆಯಲ್ಲಿ ಕರ್ನಾಟಕವು 3 ನೇ ಸ್ಥಾನದಲ್ಲಿದೆ. ದೇಶವು 8,118 ಕಿಮೀ ಕರಾವಳಿಯನ್ನು ಹೊಂದಿದೆ. ಇದು ಒಂಬತ್ತು ಕಡಲ ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದೆ. ಇದು 2.8 ಮಿಲಿಯನ್ ಕರಾವಳಿ ಮೀನುಗಾರರಿಗೆ ಮತ್ತು ಅವರ ಕುಟುಂಬಕ್ಕೆ ಜೀವನೋಪಾಯದ ಮೂಲವಾಗಿದೆ.