ಕನ್ನಡ ಸುದ್ದಿ / ಕರ್ನಾಟಕ /
LIVE UPDATES
Karnataka News Live December 13, 2024 : Bangalore News: ಬೆಂಗಳೂರು ಬಿಎಂಟಿಸಿಯಲ್ಲಿ ಈಗಲೂ ಓಡುತ್ತಿವೆ ಶೇ. 25 ಡಕೋಟಾ ಬಸ್ಗಳು, ಸಿಎಜಿ ವರದಿಯಲ್ಲಿ ಬಹಿರಂಗ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 13 Dec 202404:00 PM IST
ಕರ್ನಾಟಕ News Live: Bangalore News: ಬೆಂಗಳೂರು ಬಿಎಂಟಿಸಿಯಲ್ಲಿ ಈಗಲೂ ಓಡುತ್ತಿವೆ ಶೇ. 25 ಡಕೋಟಾ ಬಸ್ಗಳು, ಸಿಎಜಿ ವರದಿಯಲ್ಲಿ ಬಹಿರಂಗ
- ಬೆಂಗಳೂರು ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಜನರಿಗೆ ನಿತ್ಯ ಸೇವೆ ನೀಡುವ ಬಿಎಂಟಿಸಿ ಈಗಲೂ ಡಕೋಟಾ ಬಸ್ಗಳನ್ನು ಓಡಿಸುತ್ತಿದೆ ಎನ್ನುವುದನ್ನು ಸಿಎಜಿ ವರದಿ ಉಲ್ಲೇಖಿಸಿದೆ.
Fri, 13 Dec 202403:23 PM IST
ಕರ್ನಾಟಕ News Live: ಮಂಡ್ಯ ಸಾಹಿತ್ಯ ಸಮ್ಮೇಳನದ ಸಾಂಸ್ಕೃತಿಕ ಕಾರ್ಯಕ್ರಮಗಳು ವೈವಿಧ್ಯಮಯ, 201 ಕಲಾ ತಂಡ ಭಾಗಿ, ಪೊಲೀಸ್ ಬ್ಯಾಂಡ್ ವಿಶೇಷ ಆಕರ್ಷಣೆ
- ಮಂಡ್ಯದಲ್ಲಿ ಡಿಸೆಂಬರ್ 20ರಿಂದ ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಬಾರಿ ವಿಶೇಷವಾಗಿ ಆಕರ್ಷಿಸಲಿವೆ.
Fri, 13 Dec 202402:30 PM IST
ಕರ್ನಾಟಕ News Live: ಸೋಡಿಯಂ ಬಳಸಿ ಸ್ಫೋಟ ಪ್ರಕರಣ; ತುಮಕೂರಿನ ಜನಕಲೋಟಿಗೆ ಡ್ರೋಣ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ ಪೊಲೀಸರು
- ಸೋಡಿಯಂ ಬಳಸಿ ಸ್ಫೋಟ ಪ್ರಕರಣ ತನಿಖೆಯನ್ನು ಮುಂದುವರಿಸಿರುವ ಪೊಲೀಸರು, ತುಮಕೂರಿನ ಜನಕಲೋಟಿಗೆ ಡ್ರೋಣ್ ಪ್ರತಾಪ್ ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ. ಈ ಪ್ರಕರಣದಲ್ಲಿ ಮತ್ತಿಬ್ಬರಿಗೆ ಸಂಕಷ್ಟ ಶುರುವಾಗಿದೆ.
Fri, 13 Dec 202412:41 PM IST
ಕರ್ನಾಟಕ News Live: New Year Goa Trip: ಹೊಸವರ್ಷಕ್ಕೆ ಗೋವಾಕ್ಕೆ ಟ್ರಿಪ್ ಹೋಗ್ತಿದ್ದೀರಾ? ಈ ಸ್ಥಳಗಳನ್ನು ಮಿಸ್ ಮಾಡಬೇಡಿ
- New Year Goa Trip: ಹೊಸ ವರ್ಷದ ವೇಳೆ ಗೋವಾಕ್ಕೆ ಪ್ರವಾಸ ಕೈಗೊಳ್ಳುವ ಯೋಜನೆಯಿದೆ. ಹಾಗಿದ್ದರೆ ಗೋವಾದ ರಾಜ್ಯದಲ್ಲಿನ ಬೀಚ್ಗಳು, ಚರ್ಚ್, ದೇಗುಲ, ನೈಸರ್ಗಿಕ ತಾಣ ತಪ್ಪಿಸಿಕೊಳ್ಳಬೇಡಿ.
Fri, 13 Dec 202410:31 AM IST
ಕರ್ನಾಟಕ News Live: ಹುಬ್ಬಳ್ಳಿಯಲ್ಲಿ ಸಂಸ್ಕೃತಿ ಭಾರತಿಯಿಂದ ಡಿಸೆಂಬರ್ 15 ರಂದು ಬೃಹತ್ ಗೀತಾ ಜಾತ್ರೆ; 1008 ಕಂಠಗಳಿಂದ ಭಗವದ್ಗೀತೆ ಪಠಣ
- ಉತ್ತರ ಕರ್ನಾಟಕದ ಕೇಂದ್ರ ನಗರಿಯಾದ ಹುಬ್ಬಳ್ಳಿಯಲ್ಲಿ ಡಿಸೆಂಬರ್ 15 ರಂದು ಭಗವದ್ಗೀತೆ ಪಠಣೆಯ ಬೃಹತ್ ಗೀತಾ ಜಾತ್ರೆ ಆಯೋಜನೆಗೊಂಡಿದೆ.
Fri, 13 Dec 202409:19 AM IST
ಕರ್ನಾಟಕ News Live: Breaking News: ದರ್ಶನ್, ಪವಿತ್ರಾಗೌಡ ಸೇರಿ ಎಲ್ಲ ಆರೋಪಿಗಳಿಗೂ ಕರ್ನಾಟಕ ಹೈಕೋರ್ಟ್ನಿಂದ ಜಾಮೀನು
- ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಸಹಿತ ಇತರೆ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
Fri, 13 Dec 202402:03 AM IST
ಕರ್ನಾಟಕ News Live: ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆ, ನಕಲಿ ಅಂಕಪಟ್ಟಿ ನೀಡಿ ಪಿಎಸ್ಐ ಹುದ್ದೆ ಗಳಿಸಿದ ಕಾನ್ಸ್ಟೇಬಲ್ ವಿರುದ್ಧ ದೂರು; ಬೆಂಗಳೂರಲ್ಲಿ ಘಟನೆ
- ನಕಲಿ ಅಂಕಪಟ್ಟಿ ನೀಡಿ ಪಿಎಸ್ಐ ಹುದ್ದೆ ಗಳಿಸಿದ ಕಾನ್ಸ್ಟೇಬಲ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕೊಂದು ಮಹಿಳೆಯರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಯಲಹಂಕದಲ್ಲಿ ನಡೆದಿದೆ. ಈ ಎರಡೂ ಅಪರಾಧ ಸುದ್ದಿಗಳ ವಿವರ ಇಲ್ಲಿದೆ. (ವರದಿ: ಮಾರುತಿ ಎಚ್.)
Fri, 13 Dec 202401:27 AM IST
ಕರ್ನಾಟಕ News Live: ಕರ್ನಾಟಕ ಹವಾಮಾನ: ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಭಾರಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ತಾಪಮಾನ ಕುಸಿತ; ಡಿಸೆಂಬರ್ 13ರ ವರದಿ
- ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಇಂದು (ಡಿಸೆಂಬರ್ 13) ಕೂಡ ಮಳೆಯ ಪ್ರಭಾವ ಜೋರಿರಲಿದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ ಹವಾಮಾನ ಇಲಾಖೆ. ಇದರೊಂದಿಗೆ ಬೆಂಗಳೂರು ಸೇರಿದಂತೆ ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ತಾಪಮಾನ ಕುಸಿದಿದೆ.
Fri, 13 Dec 202401:00 AM IST
ಕರ್ನಾಟಕ News Live: ಸೈಬರ್ ವಂಚನೆ ಪ್ರಕರಣ, ಪ್ರಾಂಶುಪಾಲೆಯಿಂದ 24 ಲಕ್ಷ ಸುಲಿಗೆ; ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆ ಕೊಂದು ಯುವಕ ಆತ್ಮಹತ್ಯೆ
- ಬೆಂಗಳೂರಿನಲ್ಲಿ ಮತ್ತೊಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರಾಂಶುಪಾಲೆಯಿಂದ 24 ಲಕ್ಷ ಸುಲಿಗೆ ಮಾಡಿದ ಸೈಬರ್ ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಪ್ರೀತಿ ನಿರಾಕರಿಸಿದ್ದಕ್ಕೆ ಮಹಿಳೆಯನ್ನು ಕೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. (ವರದಿ-ಎಚ್.ಮಾರುತಿ)
Fri, 13 Dec 202412:30 AM IST
ಕರ್ನಾಟಕ News Live: ಬಂಧನ ಭೀತಿಗೆ ಹೆದರಿ ಅತುಲ್ ಸುಭಾಷ್ ಪತ್ನಿ ಪರಾರಿ, ಅತ್ತೆ, ಬಾಮೈದ ಅರೆಸ್ಟ್; ಹೆಚ್ಚಾಯ್ತು ಟೆಕಿ ಪರ ಬೆಂಬಲ
- Atul Subhash Suicide Case: ಬಂಧನ ಭೀತಿಗೆ ಹೆದರಿ ಆತ್ಮಹತ್ಯೆಗೆ ಶರಣಾದ ಟೆಕ್ಕಿ ಅತುಲ್ ಸುಭಾಷ್ ಪತ್ನಿ ನಿಖಿತಾ ಸಿಂಘಾನಿಯಾ ಪರಾರಿಯಾಗಿದ್ದಾರೆ. ಆದರೆ ಅತುಲ್ ಅವರ ಅತ್ತೆ ಮತ್ತು ಬಾಮೈದನನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ #BengaluruSuicideCase ಎಂದು ಟ್ರೆಂಡ್ ಆಗುತ್ತಿದ್ದು, ಅತುಲ್ ಪರ ಹೆಚ್ಚಿದ ಬೆಂಬಲ ಹೆಚ್ಚಾಗಿದೆ. (ವರದಿ-ಎಚ್.ಮಾರುತಿ)