Karnataka News Live December 25, 2024 : ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ; ಯಾರು ಏನು ಹೇಳಿದ್ರು, ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 25 Dec 202403:42 PM IST
Siddaramaiah Arogya Marga: ಮೈಸೂರು ನಗರದ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ನಾಮಕರಣ ಪ್ರಸ್ತಾವನೆ ಈಗ ಪರ ವಿರೋಧ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಯಾರು ಏನು ಹೇಳಿದ್ರು ಮತ್ತು ಪ್ರಿನ್ಸೆಸ್ ರಸ್ತೆ ಹೆಸರು ಹೇಗೆ ಬಂತು ಎಂಬ ವಿವರ ಇಲ್ಲಿದೆ.
Wed, 25 Dec 202401:15 PM IST
Nandini Idli-Dosa Batter: ಬೆಂಗಳೂರಿಗರೇ ನಾಳೆ ಬ್ರೇಕ್ಫಾಸ್ಟ್ ಏನು ಎಂಬ ಚಿಂತೆಯೇ, ಹಾಗಾದರೆ ಇನ್ನು ಚಿಂತೆ ಬಿಡಿ ಎನ್ನುತ್ತಿದೆ ಕೆಎಂಎಫ್. ಹೌದು, ಕೆಎಂಎಫ್ ನಂದಿನಿ ಇಡ್ಲಿ, ದೋಸೆ ಹಿಟ್ಟು ಮಾರುಕಟ್ಟೆಗೆ ಬಂತು ನೋಡಿ. ಅದರ ದರ ವಿವರ ಹೀಗಿದೆ.
Wed, 25 Dec 202412:01 PM IST
Munirathna Egg Attack: ಬೆಂಗಳೂರು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಗುರುವಾರ ಬೆಳಗ್ಗೆ ಈ ದಾಳಿ ನಡೆದಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ, ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಗಮನಸೆಳೆದ 5 ಅಂಶಗಳ ವಿವರ ಇಲ್ಲಿದೆ.
Wed, 25 Dec 202411:11 AM IST
Fate of Karnataka Guarantee Schemes: ಕರ್ನಾಟಕದಲ್ಲಿ ಒಂದೂವರೆ ವರ್ಷದ ಹಿಂದೆ ಘೋಷಣೆಯಾದಂತೆಯೇ ಜಾರಿಗೊಂಡು ಜನರ ಉಪಯೋಗಕ್ಕೂ ಬರುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳು 2025ರಲ್ಲೂ ಮುಂದುವರೆಯುತ್ತವಾ, ನಿಯಮದಲ್ಲಿ ಬದಲಾಗಿ ಅಗತ್ಯ ಇರುವವರಿಗೆ ಸೌಲಭ್ಯ ಒದಗಿಸಲಾಗುತ್ತದೆಯೇ ಎನ್ನುವ ಚರ್ಚೆಗಳು ನಡೆದಿವೆ.
Wed, 25 Dec 202410:36 AM IST
Shiggaon Accident: ಶಿಗ್ಗಾಂವಿ ತಾಲೂಕು ತಿಮ್ಮಾಪುರದ ಬೆಳ್ಳಿಗಟ್ಟಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡಿವೈಡರ್ ಹಾರಿ ಟಾಟಾ ಆಲ್ಟ್ರೋಜ್ ಮೇಲೆ ಮಹೀಂದ್ರಾ ಎಕ್ಸ್ಯುವಿ 700 ಬಿದ್ದ ಕಾರಣ ಮಗು ಸೇರಿ 4 ಜನರ ದುರ್ಮರಣಕ್ಕೀಡಾದ ಕಳವಳಕಾರಿ ದುರಂತ ಸಂಭವಿಸಿದೆ.
Wed, 25 Dec 202410:09 AM IST
Maha Kumbh Mela 2025: ಉತ್ತರ ಪ್ರದೇಶದಲ್ಲಿ ನಡೆಯಲಿರುವ ಮಹಾ ಕುಂಭಮೇಳದ ಸಿದ್ಧತೆ ಭರದಿಂದ ಸಾಗಿದೆ. ದೇಶ ವಿದೇಶಗಳಿಂದ ಭಕ್ತಜನ ಆಗಮಿಸುವ ಕಾರಣ, ಭಾರತೀಯ ರೈಲ್ವೆ ಕೂಡ ಸಂಚಾರ ಸೇವೆ ಒದಗಿಸುತ್ತಿದೆ. ಬೆಂಗಳೂರು, ಹುಬ್ಬಳ್ಳಿ ಮತ್ತು ಪ್ರಯಾಗ್ರಾಜ್ ನಡುವೆ ವಿಶೇಷ ಏಕಮುಖ ರೈಲು ಸಂಚಾರ ಪ್ರಕಟಿಸಿದ್ದು, ವೇಳಾಪಟ್ಟಿ ವಿವರ ಹೀಗಿದೆ.
Wed, 25 Dec 202408:59 AM IST
Dharwad Crime: ಧಾರವಾಡ ನಗರದ ಮುತ್ತೂಟ್ ಫೈನಾನ್ಸ್ಗೆ ಅದರ ಶಾಖಾ ಮ್ಯಾನೇಜರ್ ಸೇರಿ ನಾಲ್ವರು ವಂಚನೆ ಎಸಗಿದ್ದು, ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ. ಈ ದೂರು ಆಧರಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತ್ಯೇಕ ಮೂರು ಪ್ರಕರಣಗಳ ಸುದ್ದಿಯೂ ಇದರಲ್ಲಿದೆ.
Wed, 25 Dec 202406:54 AM IST
- Bangalore News: ಬೆಂಗಳೂರಿನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುವ ಸವಾರರ ಮೇಲೆ ಸಂಚಾರ ಪೊಲೀಸರು ವಿಶೇಷ ಅಭಿಯಾನ ನಡೆಸಿ ದಂಡ ವಸೂಲಿ ಮಾಡುತ್ತಿದ್ದಾರೆ.
Wed, 25 Dec 202404:28 AM IST
- ಮಂಡ್ಯದಲ್ಲಿ ಈಗಷ್ಟೇ ಮುಕ್ತಾಯವಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ವಿಶಾಲ ಕನ್ನಡ ಭವನ ನಿರ್ಮಿಸುವ ಯೋಜನೆಯನ್ನು ಸಾಹಿತ್ಯ ಸಮ್ಮೇಳನ ಸಮಿತಿ ಪ್ರಕಟಿಸಿದೆ.
Wed, 25 Dec 202402:38 AM IST
- Indian Railways: ತುಮಕೂರು ಜಿಲ್ಲೆಯ ನಿಟ್ಟೂರು ಹಾಗೂ ಸಂಪಿಗೆ ರೋಡ್ ನಿಲ್ದಾಣಗಳ ನಡುವಿನ ಕಾಮಗಾರಿ ಹಿನ್ನೆಲೆಯಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಆಗಲಿದೆ.
Wed, 25 Dec 202401:50 AM IST
- Karnataka Weather: ಕರ್ನಾಟಕದ ಬೆಂಗಳೂರು ನಗರ,ಕೋಲಾರ, ಕಲಬುರಗಿ, ರಾಯಚೂರು ಸಹಿತ ಹತ್ತು ಜಿಲ್ಲೆಗಳಲ್ಲಿ ಕೆಲ ಭಾಗದಲ್ಲಿ ಬುಧವಾರ ಹಗುರ ಮಳೆಯಾಗುವ ಮುನ್ಸೂಚನೆಯಿದೆ.
Wed, 25 Dec 202412:25 AM IST
Merry Chirstmas: ಗುಬ್ಬಿ ಪಟ್ಟಣದ ಶತಮಾನ ಹಳೆಯ ವಿಲಿಯಂ ಅರ್ಥರ್ ಸ್ಮಾರಕ ಚರ್ಚ್ನಲ್ಲಿ ಈಗ ಕ್ರಿಸ್ಮಸ್ ಹಬ್ಬದ ಸಡಗರ. ಗುಬ್ಬಿಯಲ್ಲಿರುವ ಈ ಐತಿಹಾಸಿಕ ಚರ್ಚ್ ಈಗ ಕ್ರಿಸ್ಮಸ್ ಹಬ್ಬದ ಆಚರಣೆಗಾಗಿ ವಿಶೇಷ ಅಲಂಕಾರಗಳೊಂದಿಗೆ ಸಜ್ಜಾಗಿದೆ. (ವರದಿ: ಈಶ್ವರ್, ತುಮಕೂರು)