Karnataka News Live December 29, 2024 : India Post: ಸದ್ದಿಲ್ಲದೇ ಬುಕ್ ಪ್ಯಾಕೆಟ್ ಸೇವೆ ನಿಲ್ಲಿಸಿದ ಭಾರತೀಯ ಅಂಚೆ, ಸಂಕಷ್ಟಕ್ಕೆ ಒಳಗಾದ್ರು ಪ್ರಕಾಶಕರು
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 29 Dec 202403:50 PM IST
India Post Book Packet: ಭಾರತೀಯ ಅಂಚೆ ಇಲಾಖೆಯ ಬುಕ್ ಪ್ಯಾಕೆಟ್ ಸೇವೆ ಸದ್ದಿಲ್ಲದೇ ಸ್ಥಗಿತವಾಗಿದೆ. ಈ ಸೇವೆ ಕಡಿಮೆ ವೆಚ್ಚದಲ್ಲಿ ಪುಸ್ತಕ ಕಳುಹಿಸುವ ನಿಟ್ಟಿನಲ್ಲಿ ಪ್ರಕಾಶಕರಿಗೆ ವರದಾನವಾಗಿತ್ತು. ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಪ್ರಕಾಶಕರಿಗೆ ಸಂಕಷ್ಟಕ್ಕೆ ಶುರುವಾಗಿದೆ. ಅದರ ವಿವರ ಇಲ್ಲಿದೆ.
Sun, 29 Dec 202412:02 PM IST
Mahamastakabhisheka 2025: ಹುಬ್ಬಳ್ಳಿ ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ಜನವರಿ 15 ರಿಂದ 26ರ ತನಕ ಮಹಾಮಸ್ತಕಾಭಿಷೇಕ ಮತ್ತು ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ. ಅದರಲ್ಲಿ ಪ್ರತಿಯೊಬ್ಬರೂ ಶ್ರದ್ಧೆಯಿಂದ ಸೇವಾಕಾರ್ಯ ಮಾಡಬೇಕು ಡಾ ವೀರೇಂದ್ರ ಹೆಗ್ಗಡೆ ಮನವಿ ಮಾಡಿದರು.
Sun, 29 Dec 202411:17 AM IST
New Year 2025 Bengaluru: ಹೊಸ ವರ್ಷಾಚರಣೆಗೆ ಸಿದ್ಧತೆ ಭಾರಿ ಜೋರಾಗಿದ್ದು, ಮದ್ಯಪ್ರಿಯರು ಈಗಾಗಲೇ ಮದ್ಯ ದಾಸ್ತಾನು ಮಾಡಿಕೊಳ್ಳಲಾರಂಭಿಸಿದ್ದಾರೆ. ನಿನ್ನೆ (ಡಿಸೆಂಬರ್ 28) ಒಂದೇ ದಿನ ಕರ್ನಾಟಕದಲ್ಲಿ ಒಂದೇ ದಿನ 409 ಕೋಟಿ ರೂಪಾಯಿ ಮದ್ಯ ಮಾರಾಟದ ದಾಖಲೆ ನಿರ್ಮಾಣವಾಗಿದೆ. ವಿವರ ಈ ವರದಿಯಲ್ಲಿದೆ.
Sun, 29 Dec 202409:24 AM IST
Bengaluru Market Update: ಬೆಂಗಳೂರು ಮಾರುಕಟ್ಟೆಗೆ ಈರುಳ್ಳಿ ಆವಕ ಹೆಚ್ಚಳವಾಗಿದ್ದು, ಸಗಟು ದರ ಇಳಿಕೆಯಾಗತೊಡಗಿದೆ. ಚಿಲ್ಲರೆ ಮಾರಾಟದರವೂ ಇಳಿಕೆಯ ಹಾದಿಯಲ್ಲಿದೆ. ಇದೇ ರೀತಿ, ಬೆಳ್ಳುಳ್ಳಿ, ಆಲೂಗಡ್ಡೆ ದರವೂ ಕುಸಿತವಾಗತೊಡಗಿದೆ.
Sun, 29 Dec 202408:33 AM IST
Onion Request: ಮನೆಗೆ ದಿನಸಿ ತಂದುಕೊಟ್ಟ ಡೆಲಿವರಿ ಏಜೆಂಟ್ ಟಿಪ್ಸ್ ಕೇಳಿದರೆ, ಅಥವಾ ಕುಡಿಯಲು ನೀರು ಕೇಳಿದರೆ ಏನೂ ಅನಿಸದು. ಆದರೆ, ಒಂದೇ ಒಂದು ಈರುಳ್ಳಿ ಕೊಡಿ ಎಂದರೆ ಹೇಗೆ? ಹೌದು, ಬೆಂಗಳೂರು ಡೆಲಿವರಿ ಏಜೆಂಟ್ನ ವಿಲಕ್ಷಣ ಬೇಡಿಕೆ ಮಾಟ ಮಂತ್ರದ ಚರ್ಚೆಗೆ ಗ್ರಾಸವಾಯಿತು ನೋಡಿ.
Sun, 29 Dec 202407:23 AM IST
Bharat Nivesh essay competition: ದೇಶಾದ್ಯಂತ ಇರುವ 8ರಿಂದ 12ನೇ ತರಗತಿ ವಿದ್ಯಾರ್ಥಿಗಳು ಭಾರತ್ ನಿವೇಶ್ನ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಈ ಪ್ರಬಂಧ ಸ್ಪರ್ಧೆಯಲ್ಲಿ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಗುತ್ತದೆ.
Sun, 29 Dec 202406:35 AM IST
KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳು ನಷ್ಟದಲ್ಲಿದ್ದು, ಐದು ವರ್ಷಗಳಿಂದ ಪ್ರಯಾಣ ದರ ಪರಿಷ್ಕರಣೆ ಬಾಕಿ ಇರುವ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕೆಎಸ್ಆರ್ಟಿಸಿ ಪ್ರಯಾಣ ದರ ಶೇ 15 ಏರಿಕೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದ ಉನ್ನತ ಸಮಿತಿ ಶಿಫಾರಸು ಮಾಡಿದೆ. 6 ಅಂಶಗಳ ವಿವರ ಇಲ್ಲಿದೆ.
Sun, 29 Dec 202402:54 AM IST
- ಬೆಂಗಳೂರು ನಗರವನ್ನು ಸ್ವಚ್ಛವಾಗಿಡಲು ಬಿಬಿಎಂಪಿ ಮಾಡುತ್ತಿರುವ ಪ್ರಯತ್ನ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಹೀಗಾಗಿ ಸೂರ್ಯ ನಾರಾಯಣ್ ಹೆಸರಿನ 83 ವರ್ಷ ವಯಸ್ಸಿನ ಹಿರಿಯ ನಾಗರಿಕರೊಬ್ಬರು, ತಾವೇ ಖುದ್ದು ತಮ್ಮ ಮನೆಯ ಬೀದಿಯನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
Sun, 29 Dec 202402:35 AM IST
- ಮಾಜಿ ಸಂಸದ ಡಿಕೆ ಸುರೇಶ್ ಅವರ ತಂಗಿ ಎಂದು ಹೇಳಿ ಬರೋಬ್ಬರಿ 14.6 ಕೆಜಿ ಚಿನ್ನಾಭರಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿಯನ್ನು ಚಂದ್ರಾ ಲೇ ಔಟ್ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ರೌಡಿಶೀಟರ್ ಕುಣಿಗಲ್ ಸೂರಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
Sun, 29 Dec 202401:26 AM IST
- ಡಿಸೆಂಬರ್ 29 ರ ಭಾನುವಾರ ಸೇರಿದಂತೆ ಮುಂದಿನ 5 ದಿನಗಳ ವರಿಗೆ ಕರ್ನಾಟಕದಲ್ಲಿ ಯಾವುದೇ ರೀತಿಯ ಮಳೆಯಾಗುವ ಮುನ್ಸೂಚನೆ ಇಲ್ಲ. ಒಣ ಹವೆ ಮುಂದುವರಿಯಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತನ್ನ ದೈನಂದಿನ ವರದಿಯಲ್ಲಿ ತಿಳಿಸಿದೆ.