Karnataka News Live December 6, 2024 : ಮಂಡ್ಯ ಸಾಹಿತ್ಯ ಸಮ್ಮೇಳನದ ಊಟದ ಮೆನು ನೋಡಿದ್ರೆ ಬಾಯಲ್ಲಿ ನೀರೂರುತ್ತೆ; ಕಾಯಿ ಹೋಳಿಗೆ, ತುಪ್ಪದನ್ನ ಸೇರಿದಂತೆ ಮೃಷ್ಣಾನ್ನ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 06 Dec 202404:13 PM IST
- Mandya kannada sahitya sammelana food menu: ಸಾಹಿತ್ಯ ಸಮ್ಮೇಳನದಲ್ಲಿ ಚರ್ಚೆ, ಗೋಷ್ಠಿ ಭರಾಟೆಗಳ ಜೊತೆಗೆ ಊಟದ ಭರಾಟೆ ಕೂಡ ಜೋರಾಗಿದೆ. ಬಾಯಿ ಚಪ್ಪರಿಸುವಂತಹ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಶುಚಿ, ರುಚಿಯಿಂದ ಕೂಡಿದ ಬಗೆಬಗೆಯ ಭೋಜನವನ್ನು ಸಾಹಿತ್ಯ ಪ್ರೇಮಿಗಳಿಗೆ ಉಣಬಡಿಸಲು ಭರ್ಜರಿ ಊಟದ ಮೆನು ಸಿದ್ಧಪಡಿಸಲಾಗಿದೆ.
Fri, 06 Dec 202402:56 PM IST
- power cut in Bangalore: ಡಿಸೆಂಬರ್ 7ರಂದು ಶನಿವಾರ ಬೆಂಗಳೂರಿನ ವಿವಿಧ ಕಡೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಹಲಸೂರು, ಇಂದಿರನಗರ, ಕೆಆರ್ ರಸ್ತೆ, ಭುವನೇಶ್ವರಿ ನಗರ, ಹೊಯ್ಸಳನಗರ, ಮುನೇಶ್ವರನಗರ ಮುಂತಾದ ಕಡೆಗಳಲ್ಲಿ ಪವರ್ ಕಟ್ ಇರಲಿದೆ. ವಿಶೇಷವಾಗಿ ಇಂದಿರಾನಗರ , ಹಲಸೂರು ಸುತ್ತಮುತ್ತ ವಿದ್ಯುತ್ ಕಡಿತವಾಗಲಿದೆ.
Fri, 06 Dec 202402:13 PM IST
- Karnataka News: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶ ನೀಡಲು ಬೆಂಗಳೂರಿನಲ್ಲಿ ಇಂದು ನಡೆದ ಸಚಿವ ಸಂಪುಟ ಅನುಮೋದನೆ ನೀಡಿದೆ. ಬೆಂಗಳೂರು ರಸ್ತೆಗಳ ಅಭಿವೃದ್ಧಿ 694 ಕೋಟಿ ರೂ. ಅನುದಾನ, ವಿಶ್ವಬ್ಯಾಂಕ್ ನೆರವಿನಿಂದ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ಅನುಮೋದನೆ ನೀಡಿದೆ. (ವರದಿ: ಎಚ್. ಮಾರುತಿ)
Fri, 06 Dec 202410:18 AM IST
Alvas Virasat 2024: ಆಳ್ವಾಸ್ ವಿರಾಸತ್ 2024: ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವಕ್ಕೆ ಮೂರು ದಶಕಗಳ ಮೆರುಗು, ಡಿ.10 ರಿಂದ 15ರವರೆಗೆ ವೈವಿಧ್ಯಮಯ ಕಾರ್ಯಕ್ರಮಗಳ, ಕೃಷಿ, ಆಹಾರ ಮೇಳಗಳ ವಿವರವಾದ ವೇಳಾಪಟ್ಟಿ ಇಲ್ಲಿದೆ.
Fri, 06 Dec 202409:47 AM IST
Oral Cancer: ಅಡಕೆ ಕ್ಯಾನ್ಸರ್ ಕಾರಕ ಎಂಬ ಐಎಆರ್ಸಿ ಅಧ್ಯಯನ ವರದಿ ಬಗ್ಗೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿದೆ. ಹಳೆಯ ವೈಜ್ಞಾನಿಕ ವರದಿಗಳಿಗೆ ವ್ಯತಿರಿಕ್ತವಾದ ವರದಿ ಇದು. ಅಡಕೆ ಹಾನಿಕಾರಕವಲ್ಲ, ತಾಂಬೂಲ ಜಗಿದರೆ ಏನೂ ಆಗಲ್ಲ ಎಂದು 5 ವೈಜ್ಞಾನಿಕ ಅಧ್ಯಯನ ವರದಿಗಳು ಹೇಳಿವೆ. ಅವುಗಳ ವಿವರ ಇಲ್ಲಿದೆ. (ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು)
Fri, 06 Dec 202408:24 AM IST
Cauvery Water Connection: ಮನೆ ಮನೆಗೆ ಕಾವೇರಿ ನೀರು ಸಂಪರ್ಕ ಅಭಿಯಾನ ಶುರುವಾಗಿದೆ. ಕಾವೇರಿ ನೀರು ಸರಬರಾಜು 5ನೇ ಹಂತ ಜಾರಿಗೆ ಬಂದರೂ, ಸಂರ್ಪಕ ಗುರಿ ಸಾಧನೆಯಾಗಿಲ್ಲ. ಹೀಗಾಗಿ ಬೆಂಗಳೂರ ಜಲ ಮಂಡಳಿಯಿಂದ ಅಭಿಯಾನ ಶುರುವಾಗಿದೆ.
Fri, 06 Dec 202406:39 AM IST
ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಇದರ ಅಂಗವಾಗಿ ಶುಕ್ರವಾರ ಪಂಚಮಿ ರಥೋತ್ಸವ, ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿದೆ. ಈ ದಿನ ದೇವಾಲಯದಲ್ಲಿ ಆಶ್ಲೇಷ ಬಲಿ ಹಾಗೂ ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ.
Fri, 06 Dec 202404:39 AM IST
BESCOM Tariff: ವಿದ್ಯುತ್ ದರ ಏರಿಕೆ ಸುಳಿವು ಸಿಕ್ಕಿದೆ. ಮುಂದಿನ 3 ವರ್ಷವೂ ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಕೆಇಆರ್ಸಿ ಒಪ್ಪಿದರೆ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ. ಪ್ರಸ್ತಾವನೆಗೆ ಸಂಬಂಧಿಸಿ 5 ಮುಖ್ಯ ಅಂಶಗಳು ಇಲ್ಲಿವೆ.
Fri, 06 Dec 202403:47 AM IST
- ಪಿವಿಸಿ ಆಧಾರ್ ಕಾರ್ಡ್ಗಳು ಸುಲಭವಾಗಿ ಹಾಳಾಗುವುದಿಲ್ಲ. ಇದು ಕ್ಯೂಆರ್ ಕೋಡ್, ಮೈಕ್ರೋ-ಟೆಕ್ಸ್ಟ್, ಹೊಲೊಗ್ರಾಮ್ ಹಾಗೂ ಗೋಸ್ಟ್ ಇಮೇಜ್ ಸೆಕ್ಯುರಿಟಿಯನ್ನು ಒಳಗೊಂಡಿರುತ್ತದೆ. ಪಿವಿಸಿ ಆಧಾರ್ ಕಾರ್ಡ್ ಅನ್ನು ಮನೆಯಲ್ಲೇ ಕುಳಿತು ಆನ್ಲೈನ್ನಲ್ಲಿ ಮಾಡಬಹುದು. ಅದು ಹೇಗೆ ಎಂಬುದನ್ನು ವಿವರವಾಗಿ ತಿಳಿದುಕೊಳ್ಳೋಣ. (ವರದಿ: ವಿನಯ್ ಭಟ್)
Fri, 06 Dec 202402:19 AM IST
- ಕರ್ನಾಟಕ ಹಾಲು ಮಹಾಮಂಡಳಿ-ಕೆಎಂಎಫ್ ನಲ್ಲಿ ಎಲ್ಲವೂ ಸರಿಯಿಲ್ಲ, ಮುಸುಕಿನ ಗುದ್ದಾಟ ನಡೆಯುತ್ತಿದೆ ಎಂಬ ಅನುಮಾನಗಳ ನಡುವೆ ವ್ಯವಸ್ಥಾಪಕ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿದೆ. ನಂದಿನಿ ದೋಸೆ, ಇಡ್ಲಿ ಹಿಟ್ಟಿನ ಪ್ರಸ್ತಾವನೆಗೆ ತಡೆ ನೀಡಿದ್ದು ಯಾಕೆ ಎಂಬುದರ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.
Fri, 06 Dec 202401:42 AM IST
- ಕರ್ನಾಟಕದಲ್ಲಿ ಫೆಂಗಲ್ ಚಂಡಮಾರುತ ದುರ್ಬಲಗೊಂಡಿದ್ದರೂ ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಡಿಸೆಂಬರ್ 6ರ ಶುಕ್ರವಾರ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಇಂದಿನ ಹವಾಮಾನದ ವರದಿ ಇಲ್ಲಿದೆ.