Karnataka News Live December 7, 2024 : ಬೆಂಗಳೂರು ಚೆನ್ನೈ ಪಯಣ ಇನ್ನು 4 ಗಂಟೆ, ಕ್ಷಿಪ್ರ ಸಂಚಾರಕ್ಕೆ ಮುನ್ನುಡಿ ಬರೆಯಲಿದೆ ಭಾರತೀಯ ರೈಲ್ವೆಯ ವಂದೇ ಭಾರತ್
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 07 Dec 202412:36 PM IST
Train Route: ಔದ್ಯಮಿಕ ಮಹತ್ವ ಹೊಂದಿರುವ ಬೆಂಗಳೂರು ಮತ್ತು ಚೆನ್ನೈ ನಗರಗಳನ್ನು ಸಂಪರ್ಕಿಸುವ ರೈಲು ಪ್ರಯಾಣದ ಅವಧಿ ಇನ್ನು ಕೇವಲ 4 ಗಂಟೆ ಮಾತ್ರ. ಹೌದು ಈ ರೀತಿ ಕ್ಷಿಪ್ರ ಸಂಚಾರಕ್ಕೆ ಭಾರತೀಯ ರೈಲ್ವೆಯ ವಂದೇ ಭಾರತ್ ಮುನ್ನುಡಿ ಬರೆಯಲಿದೆ. ಇದರ ವಿವರ ಇಲ್ಲಿದೆ.
Sat, 07 Dec 202412:00 PM IST
Cancer Treatment; ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಟಿಶ್ಯೂ ಎಂಜಿನಿಯರಿಂಗ್ ಪ್ರಮುಖ ಪಾತ್ರವಹಿಸತೊಡಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಹೊಸತನದ ಸ್ಪರ್ಶ ಸಿಕ್ಕಿದ್ದು, ಏನಿದು ಸೈಟಾಟ್ರೋನ್ ಥೆರಪಿ, ಇಲ್ಲಿದೆ ವಿವರ.
Sat, 07 Dec 202411:03 AM IST
Kendriya Vidyalaya: ಕರ್ನಾಟಕದಲ್ಲಿ 3 ಕೇಂದ್ರೀಯ ವಿದ್ಯಾಲಯ, 1 ನವೋದಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ (ಡಿಸೆಂಬರ್ 6) ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರೀಯ ವಿದ್ಯಾಲಯ ಎಂದರೇನು, ಪ್ರವೇಶ ಪಡೆಯುವುದು ಹೇಗೆ, ಸರ್ಕಾರಿ ಶಾಲೆಗಳಿಗಿಂತ ಅವು ಹೇಗೆ ಭಿನ್ನ, ಪಾಲಕರು ತಿಳಿಯಬೇಕಾದ 10 ಅಂಶಗಳ ವಿವರ ಇಲ್ಲಿದೆ.
Sat, 07 Dec 202409:24 AM IST
Train Route: ವಿಜಯಪುರ-ಯಾದಗಿರಿಗೆ ಆಲಮಟ್ಟಿ ಮಾರ್ಗವಾಗಿ ರೈಲು ಸಂಪರ್ಕ ಬೇಕು ಎಂಬ ಬೇಡಿಕೆ ಮತ್ತೊಮ್ಮೆ ಬಲವಾದ ಆಗ್ರಹ ಕೇಳಿಬಂದಿದೆ. ಮತ್ತೆ ಚಿಗುರೊಡೆದ ಬಹುಕಾಲದ ಬೇಡಿಕೆಯ ಹಿನ್ನೆಲೆ ಮತ್ತು ಸದ್ಯದ ಚಿತ್ರಣ ಇಲ್ಲಿದೆ.
Sat, 07 Dec 202406:33 AM IST
Drug Free Karnataka: ಮಾದಕ ದ್ರವ್ಯ ಚಟುವಟಿಕೆ ಮಟ್ಟ ಹಾಕುವುದಕ್ಕಾಗಿ ಕರ್ನಾಟಕ ಪೊಲೀಸ್ ಇಲಾಖೆ ಮುಂದಾಗಿದೆ. ಮಾದಕ ದ್ರವ್ಯ ಚಟುವಟಿಕೆ ಮಾಹಿತಿ ನೀಡಿಕೆ ಸುಲಭ. ನಶೆ ಮುಕ್ತ ಕರ್ನಾಟಕ ಆ್ಯಪ್ ಡೌನ್ಲೋಡ್ ಮಾಡಿ, ಮಾಹಿತಿ ಇದ್ದರೆ ಅಲ್ಲಿ ಹಂಚಿಕೊಳ್ಳಿ.
Sat, 07 Dec 202405:44 AM IST
Bengaluru Twin Tunnel Project: ಸಂಚಾರದಟ್ಟಣೆ ಕಡಿಮೆ ಮಾಡುವ ಉದ್ದೇಶದ ಬೆಂಗಳೂರು ಅವಳಿ ಸುರಂಗ ಯೋಜನೆಗೆ ಹೊಸ ವೇಗ ಸಿಕ್ಕಿದೆ. ಬಿಬಿಎಂಪಿಯು ಬ್ರಾಂಡ್ ಬೆಂಗಳೂರು ಉಪಕ್ರಮದಲ್ಲಿ ಕೈಗೆತ್ತಿಕೊಂಡ ಈ ಭೂಗತ ರಸ್ತೆ ಎಂಟ್ರಿ - ಎಕ್ಸಿಟ್ ಪಾಯಿಂಟ್ ಸೇರಿ ನೀವು ತಿಳಿಯಬೇಕಾದ 10 ಅಂಶಗಳ ವಿವರ ಇಲ್ಲಿದೆ.
Sat, 07 Dec 202404:09 AM IST
ತೆಲುಗು ಸೂಪರ್ಸ್ಟಾರ್ ಅಲ್ಲು ಅರ್ಜುನ್ ನಟನೆಯ ಪುಷ್ಪ 2 ಸಿನಿಮಾ ಕ್ರೇಜ್ಗೆ ಇಬ್ಬರು ಅಲ್ಲು ಅರ್ಜುನ್ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಒಬ್ಬ ಯುವ ಅಭಿಮಾನಿ ರೈಲು ಡಿಕ್ಕಿಯಾಗಿ ಮೃತಪಟ್ಟರೆ, ಹೈದರಾಬಾದ್ನಲ್ಲಿ ಕಾಲ್ತುಳಿತಕ್ಕೆ ಒಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
Sat, 07 Dec 202403:11 AM IST
- ಎಲ್ಲವೂ ಅಂದುಕೊಂಡಂತೆ ನಡೆದರೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪುದು ಮತ್ತಷ್ಟು ಸುಲಭವಾಗಲಿದೆ. ಡಿಸೆಂಬರ್ 6ರ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೆಟ್ರೋ 3ಎ ಹಂತಕ್ಕೆ ಒಪ್ಪಿಗೆ ನೀಡಲಾಗಿದೆ.
Sat, 07 Dec 202402:59 AM IST
Bengaluru Crime: ಮಾದಕ ವಸ್ತುಗಳನ್ನು ಮಾರುತ್ತಿದ್ದ ಕೇರಳ ಮೂಲಕದ ಡ್ರಗ್ ಪೆಡ್ಲರ್ಗಳು, ಹಣದ ವಿಚಾರಕ್ಕೆ ಬಿಹಾರ ಮೂಲದ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿಗಳು, ದ್ವಿಚಕ್ರ ವಾಹನ, ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡುತ್ತಿದ್ದವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
Sat, 07 Dec 202402:18 AM IST
- ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಪಡೆದಿರುವ ಮಧ್ಯಂತರ ಜಾಮೀನು ವಜಾ ಮಾಡಬೇಕೆಂದು ವಿಶೇಷ ಪಬ್ಲಿಷ್ ಪ್ರಾಸಿಕ್ಯೂರ್ ಆಗ್ರಹಿಸಿದೆ. ಬಿಪಿ ನೆಪದಲ್ಲಿ ಕಾಲಹರಣದ ಮೂಲಕ ಹೈಕೋರ್ಟ್ ಸಹಾನುಭೂತಿಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಎಸ್ ಪಿಪಿ ಪ್ರಸನ್ನ ಅವರು ವಾದ ಮಂಡಿಸಿದ್ದಾರೆ. ಜಾಮೀನು ಅರ್ಜಿ ಡಿಸೆಂಬರ್ 9ರ ಸೋಮವಾರಕ್ಕೆ ಮುಂದೂಡಲಾಗಿದೆ.
Sat, 07 Dec 202401:34 AM IST
- ಕರ್ನಾಟಕದಲ್ಲಿ ಸೈಕ್ಲೋನ್ ಫೆಂಗಲ್ ಸಂಪೂರ್ಣವಾಗಿ ದುರ್ಬಲಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆಗಳು ಇಲ್ಲ. ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಚಳಿಯೊಂದಿಗೆ ಮಂಜಿನ ವಾತಾವರಣ ಮುಂದುವರಿದಿದೆ. ಡಿಸೆಂಬರ್ 7ರ ಶನಿವಾರ ಕರ್ನಾಟಕದ ಹವಾಮಾನದ ವರದಿ ಇಲ್ಲಿದೆ.