
Karnataka News Live February 1, 2025 : ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್, 6 ಮಂದಿ ಬಂಧನ; ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿಗಳು
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 01 Feb 202503:11 PM IST
Bengaluru Crime: ಮದುವೆಗೆ ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮಾಡಿದ ನಾಲ್ವರು ಮಹಿಳೆಯರು ಸೇರಿ 6 ಮಂದಿಯನ್ನು ಬಂಧನ ಮಾಡಲಾಗಿದೆ. 2 ಲಕ್ಷ ಲಂಚ ಪಡೆಯುತ್ತಿದ್ದಾಗ ಇಬ್ಬರು ಗ್ರಾಮ ಲೆಕ್ಕಾಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದಿದ್ದಾರೆ.
Sat, 01 Feb 202501:46 PM IST
- Indian Railways: ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಶನಿವಾರ ಮಂಡಿಸಿದ ಬಜೆಟ್ನಲ್ಲಿ ಕರ್ನಾಟಕಕ್ಕೆ ಹಿಂದಿನ ವರ್ಷದಂತೆಯೇ 7564 ಕೋಟಿ ರೂ.ಅನುದಾನ ಹಂಚಿಕೆಯಾಗಿದೆ.
Sat, 01 Feb 202512:31 PM IST
- ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ 2025 ವಿರುದ್ಧ ಕರ್ನಾಟಕದ ಸಚಿವರಾದ ಗೃಹ ಸಚಿವ ಜಿ ಪರಮೇಶ್ವರ, ಲಕ್ಷ್ಮಿ ಹೆಬ್ಬಾಳ್ಕರ್, ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ, ಎಂಬಿ ಪಾಟೀಲ್ ಕಿಡಿಕಾರಿದ್ದಾರೆ.
Sat, 01 Feb 202510:55 AM IST
- Union Budget 2025: ಕೇಂದ್ರ ಸರ್ಕಾರದ ಬಜೆಟ್ಗೆ ಕರ್ನಾಟಕದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಬಿಹಾರಕ್ಕೆ ಕೊಟ್ಟ ಪ್ರಾತಿನಿಧ್ಯದಲ್ಲಿ ಕರ್ನಾಟಕಕ್ಕೆ ಒಂದು ಭಾಗವನ್ನೂ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
Sat, 01 Feb 202510:31 AM IST
Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಬಜೆಟ್ ಹೇಗಿದೆ ಎನ್ನುವ ಕುರಿತು ಕರ್ನಾಟಕದ ವಿವಿಧ ಕ್ಷೇತ್ರದವರ ನೋಟ ಇಲ್ಲಿದೆ.
Sat, 01 Feb 202509:33 AM IST
- ಬೆಂಗಳೂರಿನಲ್ಲಿ ರ್ಯಾಪಿಡೋ ರೈಡ್ ಮಾಡಿದ ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಎಂಜಿನಿಯರಿಂಗ್ ಓದಿರುವ ಚಾಲಕ ರ್ಯಾಪಿಡೋ ವಾಹನ ಓಡಿಸುತ್ತಿದ್ದ ಎಂದು ಅವರು ಬರೆದಿದ್ದಾರೆ. ಇದು ಉದ್ಯೋಗ ಭದ್ರತೆ, ಗಿಗ್ ಉದ್ಯೋಗ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದೆ.
Sat, 01 Feb 202504:28 AM IST
- ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರು ಕಳೆದ ನಾಲ್ಕು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ, ತೆರವು ಮಾಡುವಂತೆ ಸೂಚಿಸಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)
Sat, 01 Feb 202504:06 AM IST
- ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಕಾಲಭೈರವ ದೇವಾಲಯದಲ್ಲಿ ಅಷ್ಟಬಂಧ ಪ್ರತಿಷ್ಠೆಯ ಸುವರ್ಣ ಮಹೋತ್ಸವವನ್ನು ಫೆಬ್ರವರಿ 5 ರಿಂದ 7 ರವರೆಗೆ ವಿಜೃಂಭಣೆಯಿಂದ ನಡೆಸಲಾಗುತ್ತಿದೆ. 3 ದಿನಗಳ ಕಾಲ ನಡೆಯುವ ಸುವರ್ಣ ಮಹೋತ್ಸದಲ್ಲಿನ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Sat, 01 Feb 202503:54 AM IST
- Naxal Free Karnataka:ಕರ್ನಾಟಕದಲ್ಲಿ ಮೂರು ದಶಕಗಳಿಂದಲೂ ಸಕ್ರಿಯರಾಗಿದ್ದ ನಕ್ಸಲರ ಯುಗ ಮುಗಿದಿದೆ. ಏಕೆಂದರೆ ಅರಣ್ಯದಲ್ಲಿದ್ದ ರವಿ ಎಂಬ ನಕ್ಸಲ್ ಪೊಲೀಸರ ಎದುರು ಶರಣಾಗಿದ್ದು, ಈ ಮೂಲಕ ಕರ್ನಾಟಕದಲ್ಲಿದ್ದ ಎಲ್ಲಾ ನಕ್ಸಲರು ಶರಣಾದಂತಾಗಿದೆ. ಕರ್ನಾಟಕ ನಕ್ಸಲ್ ಮುಕ್ತ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರ ಕಚೇರಿ ಪ್ರಕಟಿಸಿದೆ.
Sat, 01 Feb 202503:42 AM IST
2025-26ನೇ ಶೈಕ್ಷಣಿಕ ಸಾಲಿಗೆ ಅಲ್ಪಸಂಖ್ಯಾತರ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದ್ದು, ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದು ಉಚಿತ ಸೇವೆಯಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ.
Sat, 01 Feb 202503:33 AM IST
Budget 2025: ಕೇಂದ್ರ ಸರ್ಕಾರವು ಮಂಡಿಸಲಿರುವ ಬಜೆಟ್ಗೆ ಪೂರಕವಾಗಿ ಕರ್ನಾಟಕವೂ ಪ್ರಮುಖ 25 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದೆ.ಅದರ ಪ್ರಮುಖ ಅಂಶಗಳು ಇಲ್ಲಿವೆ.
Sat, 01 Feb 202503:05 AM IST
- ಕೊಲೆ ಪ್ರಕರಣದಲ್ಲಿ ಆರು ತಿಂಗಳು ಜೈಲಿನಲ್ಲಿದ್ದ ದರ್ಶನ್, ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದರು. ಬಿಡುಗಡೆಯಾದ ಮೇಲೆ ಮೈಸೂರಿಗೆ ತೆರಳುವುದಕ್ಕೆ ಅನುಮತಿ ಕೋರಿದ್ದರು. ಆಗ ನ್ಯಾಯಾಲಯ ಅನುಮತಿ ನೀಡಿತ್ತು. ಅವಧಿ ಮುಕ್ತಾಯವಾದ ನಂತರ ಅವಧಿ ವಿಸ್ತರಿಸಲಾಗಿದೆ. (ವರದಿ: ಎಚ್.ಮಾರುತಿ, ಬೆಂಗಳೂರು)
Sat, 01 Feb 202502:00 AM IST
Kodagu Tourism website: ಕೊಡಗಿನ ಪ್ರವಾಸೋದ್ಯಮದ ಕುರಿತಾಗಿ ನಿಖರ ಮಾಹಿತಿ ನೀಡುವ ಎಕ್ಸ್ಪ್ಲೋರ್ ಕೊಡಗು ವೆಬ್ಸೈಟ್ ಅನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಿ ಲೋಕಾರ್ಪಣೆಗೊಳಿಸಿದೆ.
Sat, 01 Feb 202501:30 AM IST
ಕರಾವಳಿ ಭಾಗದಲ್ಲಿ ಹೆಸರೇ ಇಲ್ಲದೇ ಆಯುರ್ವೇದದ ರೂಪದಲ್ಲಿ ಗುಳಿಗೆಗಳ ಮಾರಾಟ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಇಸ್ಮತ್ ಪಜೀರ್ ಹಾಕಿರುವ ಪೋಸ್ಟ್ ವೈರಲ್ ಆಗಿದೆ.