
Karnataka News Live February 14, 2025 : Bangalore Power cut: ಬೆಂಗಳೂರಿನಲ್ಲಿ ಫೆಬ್ರವರಿ 15ರಿಂದ ಎರಡು ದಿನ ವಿದ್ಯುತ್ ವ್ಯತ್ಯಯ, ಈ ಪ್ರದೇಶಗಳಲ್ಲಿ ಕರೆಂಟ್ ಇರೋಲ್ಲ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Fri, 14 Feb 202504:11 PM IST
- Bangalore Power cut: ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಫೆಬ್ರವರಿ 15ರ ಶನಿವಾರ ಹಾಗೂ ಫೆಬ್ರವರಿ 16ರ ಭಾನುವಾರ ವಿದ್ಯುತ್ ನಿಲುಗಡೆಯಾಗಲಿದೆ.
- ವರದಿ: ಎಚ್.ಮಾರುತಿ.ಬೆಂಗಳೂರು
Fri, 14 Feb 202501:09 PM IST
- KAS Posting: ಕರ್ನಾಟಕ ಸರ್ಕಾರವು ವಿವಿಧ ಹುದ್ದೆಗಳಲ್ಲಿದ್ದ ಹಾಗೂ ಹುದ್ದೆ ನಿರೀಕ್ಷೆಯಲ್ಲಿದ್ದ ಕೆಎಎಸ್ ಅಧಿಕಾರಿಗಳನ್ನು ವರ್ಗ ಮಾಡಿ ಆದೇಶ ಹೊರಡಿಸಿದೆ.
Fri, 14 Feb 202512:37 PM IST
- Mysore News: ಮೈಸೂರಿನ ಉದಯಗಿರಿ ಠಾಣೆಯ ಮೇಲೆ ಕಲ್ಲು ತೂರಾಟ ಪ್ರಕರಣದ ಹಿನ್ನೆಲೆಯಲ್ಲಿ ಗೃಹ ಸಚಿವ ಡಾ.ಪರಮೇಶ್ವರ್ ಮೈಸೂರಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.
Fri, 14 Feb 202512:17 PM IST
- ತಾರಕಕಕ್ಕೇರಿದ ಸಿಎಂ, ಡಿಸಿಎಂ ಜಟಾಪಟಿ; ಸಿದ್ದರಾಮಯ್ಯ ಬೆಂಬಲಿಗ ಸಚಿವರನ್ನು ಕೈ ಬಿಡುವ ಹೊಸ ಬೇಡಿಕೆ ಮುಂದಿಟ್ಟ ಶಿವಕುಮಾರ್, ಇಷ್ಟಕ್ಕೂ ಆ ಪಟ್ಟಿಯಲ್ಲಿ ಯಾರೆಲ್ಲಾ ಸಚಿವರಿದ್ದಾರೆ ? ಇಲ್ಲಿದೆ ಮಾಹಿತಿ.
- ವರದಿ: ಎಚ್.ಮಾರುತಿ. ಬೆಂಗಳೂರು
Fri, 14 Feb 202511:44 AM IST
ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕದ ಹಲವು ನಗರಗಳಲ್ಲಿ ಹೂಡಿಕೆ ಆಗುವ ಒಪ್ಪಂದಗಳು ಆಗಿವೆ. ಯಾವ ನಗರ, ಎಲ್ಲೆಲ್ಲಿ ಎಷ್ಟು ಹೂಡಿಕೆ ಎನ್ನುವ ಮಾಹಿತಿ ಇಲ್ಲಿದೆ.
Fri, 14 Feb 202510:58 AM IST
ಕರ್ನಾಟಕದಲ್ಲಿ ಮುಂದಿನ ಐದು ವರ್ಷದಲ್ಲಿ ಸಾಂಪ್ರದಾಯಿಕ ವಾಹನಗಳು ವಿದ್ಯುತ್ ವಾಹನಗಳಾಗಿ ಬದಲಾಗಲಿವೆ. ಬೆಂಗಳೂರಿನಲ್ಲಿ ನಡೆದಿರುವ ಹೂಡಿಕೆದಾರರ ಸಮಾವೇಶದಲ್ಲಿ ಸಾರಿಗೆ ನೀತಿ ಬಿಡುಗಡೆ ಮಾಡಲಾಗಿದೆ.
Fri, 14 Feb 202510:42 AM IST
- Valentines Day 2025: ಪ್ರೇಮಿಗಳ ದಿನದಂದು ಬೆಂಗಳೂರು ಕೆಲವು ಕಡೆಗಳಲ್ಲಿ ಬಾಯ್ಫ್ರೆಂಡ್ ಬಾಡಿಗೆಗೆ ಪಡೆದುಕೊಳ್ಳಿ ಎನ್ನುವ ಪೋಸ್ಟರ್ಗಳು ಸದ್ದು ಮಾಡುತ್ತಿವೆ.
Fri, 14 Feb 202508:54 AM IST
25 ವರ್ಷಗಳ ಹಿಂದೆಯೇ ಕರ್ನಾಟಕದಲ್ಲಿ ಹೂಡಿಕೆ ಮಾಡಿರುವ ವೋಲ್ವೋ ಕಂಪನಿ, ಈ ಬಾರಿ ಮತ್ತೆ 1400 ಕೋಟಿ ರೂ. ಹೂಡಿಕೆಗೆ ಮುಂದಾಗಿದೆ. ಇದರಿಂದ 2000ಕ್ಕೂ ಹೆಚ್ಚು ನೇರ ಉದ್ಯೋಗಗಳ ಸೃಷ್ಟಿಯಾಗುವ ನಿರೀಕ್ಷೆ ಇದೆ.
Fri, 14 Feb 202508:42 AM IST
Koppal News: ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕಿನ ಬಂಕಾಪುರ ತೋಳಧಾಮದಲ್ಲಿ ಸಂತಾನ ಸಂಭ್ರಮ. ಕಳೆದ ತಿಂಗಳು ತೋಳವೊಂದು ಎಂಟು ಮರಿಗೆ ಜನ್ಮ ನೀಡಿತ್ತು.ಈಗ ಇನ್ನೊಂದು ತೋಳ ಐದು ಮರಿಗೆ ಜನ್ಮ ನೀಡಿದೆ.
Fri, 14 Feb 202508:14 AM IST
- ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ಮತ್ತೆ ಸಂಕಷ್ಟ ಎದುರಾದಂತಿದೆ. ಮತ್ತೊಂದು ಭೂ ಹಗರಣ ಆರೋಪ ಕೇಳಿಬಂದಿದ್ದು, ಮೈಸೂರಿನಲ್ಲಿ ಲೋಕಾಯುಕ್ತ ಪೊಲೀಸರಿಗೆ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.
Fri, 14 Feb 202507:16 AM IST
- ಮೈಸೂರಿನಲ್ಲಿ ತಾಯಿ ಚಿರತೆಯಿಂದ ದೂರವಾಗಿದ್ದ ಮರಿ ಚಿರತೆಗಳು ಈಗ ಒಂದಾಗಿವೆ. ಅರಣ್ಯ ಇಲಾಖೆಯ ಸಿಬ್ಬಂದಿ ತಾಯಿಯ ಮಡಿಲಿಗೆ ಮರಿಗಳನ್ನು ಸೇರಿಸಿದ್ದಾರೆ.
Fri, 14 Feb 202502:27 AM IST
- ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರು ತುಸು ನಿಟ್ಟುಸಿರು ಬಿಟ್ಟಿದ್ದಾರೆ. ಟಿಕೆಟ್ ದರವನ್ನು ಗರಿಷ್ಠ10 ರೂ. ಇಳಿಸಲಾಗಿದೆ. ಕೆಲವು ಸ್ಟೇಷನ್ಗಳವರೆಗಿನ ಪ್ರಯಾಣ ದರ ಮಾತ್ರ ಇಳಿಕೆ ಮಾಡಲಾಗಿದೆ.
Fri, 14 Feb 202501:43 AM IST
- ಆಗಸದಲ್ಲಿ ಮೈನವಿರೇಳಿಸುವ ವೈಮಾನಿಕ ಪ್ರದರ್ಶನ ವೀಕ್ಷಿಸಲು ಇಂದು ಕೊನೆಯ ದಿನವಾಗಿದೆ. ಇಂದು ಕೂಡಾ ಎರಡು ಹಂತಗಳಲ್ಲಿ ವೈಮಾನಿಕ ಪ್ರದರ್ಶನಗಳು ನಡೆಯುತ್ತವೆ. ಕೊನೆಯ ದಿನ ಲಕ್ಷಾಂತರ ಜನರು ಬರುವ ನಿರೀಕ್ಷೆ ಇದೆ.