
Karnataka News Live February 15, 2025 : ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 15 Feb 202503:25 PM IST
ಬೆಂಗಳೂರು: ಗ್ರಾಹಕರಿಗೆ ಒಂದು ಖುಷಿ ಸುದ್ದಿ. ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆಯಾಗಿದ್ದು, ಅನೇಕರ ಜೇಬಿನ ಹೊರೆ ಕಡಿಮೆ ಮಾಡಿದೆ. ಇದರಿಂದಾಗಿ, ಹೋಟೆಲ್, ಆಹಾರೋದ್ಯಮ ಹಾಗೂ ಜನಸಾಮಾನ್ಯರಿಗೆ ಕೊಂಚ ನಿರಾಳ ಭಾವ ಮೂಡುವಂತಾಗಿದೆ.
Sat, 15 Feb 202501:37 PM IST
Karnataka UGCET-25: ಕರ್ನಾಟಕ ಸಿಇಟಿ 2025ಕ್ಕೆ ನೋಂದಣಿ ಹಾಗೂ ಅರ್ಜಿ ಸಲ್ಲಿಸುವುದಕ್ಕೆ ಇದ್ದ ಕೊನೇ ದಿನಾಂಕವನ್ನು ಫೆ 24ರ ತನಕ ವಿಸ್ತರಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಘೋಷಿಸಿದೆ.
Sat, 15 Feb 202510:57 AM IST
ಬೆಳಗಾವಿ: ಆಟೋ ಚಾಲಕನೊಂದಿಗೆ ಸಂಭವಿಸಿದ ಗಲಾಟೆ ವೇಳೆ ಹಲ್ಲೆಗೊಳಗಾದ ಗೋವಾದ ಮಾಜಿ ಶಾಸಕ ಲಾವೋ ಸೂರ್ಯಾಜಿ ಮಾಮಲೇದಾರ್ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Sat, 15 Feb 202510:13 AM IST
KCET 2025: ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ನಡೆಯುವ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಏಪ್ರಿಲ್ನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ಸಿಇಟಿಯ ದಾಖಲೆ ಪರಿಶೀಲನೆ ಪ್ರಕ್ರಿಯೆಗೆ ಮಾರ್ಗಸೂಚಿ ಪ್ರಕಟವಾಗಿದೆ. 5 ಅಂಶಗಳ ವಿವರ ಇಲ್ಲಿದೆ ಗಮನಿಸಿ.
Sat, 15 Feb 202508:01 AM IST
- ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡ ಆರೋಪದ ಮೇಲೆ ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಅವರಿಗೆ ನೋಟಿಸ್ ಜಾರಿಗಳಿಸಲಾಗಿದೆ.
- ವರದಿ:ಎಚ್.ಮಾರುತಿ.ಬೆಂಗಳೂರು
Sat, 15 Feb 202507:24 AM IST
- Infosys Layoff: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಫ್ರೆಷರ್ಸ್ಗಳನ್ನು ತೆಗೆದು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಮಿಕ ಇಲಾಖೆಯು ವಿವರಗಳನ್ನು ಸಂಗ್ರಹಿಸಿ ವರದಿಯನ್ನು ಸಲ್ಲಿಸಲಿದೆ.
Sat, 15 Feb 202506:22 AM IST
- Infosys Layoff: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ತರಬೇತಿ ಹಂತದಲ್ಲಿದ್ದ ಐಟಿ ಉದ್ಯೋಗಿಗಳನ್ನು ನಿರೀಕ್ಷಿತ ಸಾಧನೆ ತೋರದ ಆಧಾರದ ಮೇಲೆ ತೆಗೆದು ಹಾಕಿರುವುದು ಚರ್ಚೆ ಹುಟ್ಟು ಹಾಕಿದೆ.
Sat, 15 Feb 202505:41 AM IST
- Bangalore Cyber Fraud: ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಹೆಚ್ಚಿನ ಮೊತ್ತದ ಆಸೆ ತೋರಿಸಿ ಭಾರೀ ಹಣವನ್ನು ವಂಚಿಸಿರುವ ಸೈಬರ್ ಪ್ರಕರಣ ವರದಿಯಾಗಿದೆ.
- ವರದಿ: ಎಚ್.ಮಾರುತಿ. ಬೆಂಗಳೂರು
Sat, 15 Feb 202503:02 AM IST
- Belagavi News: ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಶ್ರೀ ರೇಣುಕಾ ಯಲ್ಲಮ್ಮ ದೇಗುಲದ ಅಭಿವೃದ್ದಿಗೆ ಚಟುವಟಿಕೆ ಶುರುವಾಗಿದೆ. ತಿರುಪತಿ ಮಾದರಿಯಲ್ಲಿ ಇಲ್ಲಿಯೂ ಸೌಲಭ್ಯ ಕಲ್ಪಿಸುವ ಪ್ರಯತ್ನ ನಡೆದಿವೆ.
Sat, 15 Feb 202501:40 AM IST
- ಕರ್ನಾಟಕದಲ್ಲಿ ಕೊಡಗು, ಹಾಸನ, ಚಾಮರಾಜನಗರ, ಹಾವೇರಿ, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳನ್ನು ಮತ್ತೆ ಹಳೆಯ ವಿಶ್ವವಿದ್ಯಾನಿಲಯದ ಜತೆಗೆ ವಿಲೀನ ಮಾಡುವ ಸಾಧ್ಯತೆ ಇದೆ.
Sat, 15 Feb 202501:18 AM IST
- Karnataka Weather Updates: ಕಲ್ಯಾಣ ಕರ್ನಾಟಕದ ಕಲಬುರಗಿ, ಹಳೆ ಮೈಸೂರು ಭಾಗದ ಮಂಡ್ಯ, ಚಾಮರಾಜನಗರ ಭಾಗದಲ್ಲಿ ಬಿಸಿಲಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ.