Karnataka News Live February 18, 2025 : ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live February 18, 2025 : ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ

ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ

Karnataka News Live February 18, 2025 : ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ

Updated Feb 18, 2025 11:58 PM ISTUpdated Feb 18, 2025 11:58 PM ISTHT Kannada Desk
  • twitter
  • Share on Facebook
Updated Feb 18, 2025 11:58 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Tue, 18 Feb 202506:28 PM IST

ಕರ್ನಾಟಕ News Live: ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ, ಮಾರ್ಚ್ 7 ರಂದು ಬಜೆಟ್ ಮಂಡನೆ, ತಾತ್ಕಾಲಿಕ ಕಾರ್ಯಕ್ರಮ ಪಟ್ಟಿ ಬಿಡುಗಡೆ

  • Budget Session 2025: ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 3 ರಿಂದ 21ರ ತನಕ ನಡೆಯಲಿದೆ. ಈ ಕುರಿತು ತಾತ್ಕಾಲಿಕ ಕಾರ್ಯಕ್ರಮ ಪಟ್ಟಿಯನ್ನು ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿದೆ. ಮಾರ್ಚ್ 7 ರಂದು ಬಜೆಟ್ ಮಂಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ.

Read the full story here

Tue, 18 Feb 202506:03 PM IST

ಕರ್ನಾಟಕ News Live: ಪಂಚಾಯಿತಿ ಚುನಾವಣೆಗೆ ನಾವು ರೆಡಿ; ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರದ ಅಫಿಡವಿಟ್‌, ಮೇನಲ್ಲಿ ಮೀಸಲು, ಜೂನ್ - ಜುಲೈನಲ್ಲಿ ಎಲೆಕ್ಷನ್- 5 ಅಂಶಗಳು

  • Karnataka Panchayat Polls: ಪಂಚಾಯಿತಿ ಚುನಾವಣೆ ಸಂಬಂಧಿಸಿ ಕಾನೂನು ಹೋರಾಟ 2020ರಿಂದಲೂ ನಿರಂತರ ಮುಂದುವರಿದಿದೆ. ಇದೀಗ ಸೋಮವಾರ (ಫೆ17) ಪಂಚಾಯಿತಿ ಚುನಾವಣೆಗೆ ನಾವು ರೆಡಿ ಎಂದು ಕರ್ನಾಟಕ ಹೈಕೋರ್ಟ್‌ಗೆ ಸರ್ಕಾರ ಅಫಿಡವಿಟ್‌ ಸಲ್ಲಿಸಿದೆ. ಈ ಸಂಬಂಧ 5 ಮುಖ್ಯ ಅಂಶಗಳ ವಿವರ ಇಲ್ಲಿದೆ

Read the full story here

Tue, 18 Feb 202505:10 PM IST

ಕರ್ನಾಟಕ News Live: ಬೆಂಗಳೂರಲ್ಲಿ ಬೈಟು ಕಾಫಿ ಕೂಡ ದುಬಾರಿಯಾಗಲಿದೆ, ಮಾರ್ಚ್‌ನಲ್ಲಿ ಕಾಫಿ ದರ 3 - 5 ರೂಪಾಯಿ ಏರಿಸ್ತಾರಂತೆ ಹೋಟೆಲ್‌ನವರು

  • Coffee Price Hike: ಹಾಲಿನ ದರ ಏರಿಕೆ ಸಾಧ್ಯತೆ ಹಾಗೂ ಕಾಫಿ ಪುಡಿ ದರ ಏರಿಕೆಯಾಗಿರುವ ಕಾರಣ ಮಾರ್ಚ್ ತಿಂಗಳಲ್ಲಿ ಮತ್ತೊಂದು ಬೆಲೆ ಏರಿಕೆಗೆ ಬೆಂಗಳೂರಿಗರು ತಲೆಯೊಡ್ಡಬೇಕಾಗಿದೆ. ಬೆಂಗಳೂರಲ್ಲಿ ಬೈಟು ಕಾಫಿ ಕೂಡ ದುಬಾರಿಯಾಗಲಿದೆ. ಹೌದು, ಹೋಟೆಲ್‌ನವರು ಮಾರ್ಚ್‌ನಲ್ಲಿ ಕಾಫಿ ದರವನ್ನು 3 - 5 ರೂಪಾಯಿ ಏರಿಸುವುದಾಗಿ ಘೋ‍ಷಿಸಿದ್ದಾರೆ. 

Read the full story here

Tue, 18 Feb 202504:33 PM IST

ಕರ್ನಾಟಕ News Live: ಕರ್ನಾಟಕ ಬಜೆಟ್ 2025 ಮಂಡನೆಯಾದ ಬೆನ್ನಿಗೆ ನಂದಿನಿ ಹಾಲಿನ ದರ 5 ರೂಪಾಯಿ ಹೆಚ್ಚಳ ಸಾಧ್ಯತೆ, 16 ಹಾಲು ಒಕ್ಕೂಟಗಳಿಂದ ಬೆಲೆ ಏರಿಕೆಗೆ ಒತ್ತಡ

  • Nandini milk prices: ಕರ್ನಾಟಕ ಬಜೆಟ್ ಮಂಡನೆ ಬೆನ್ನಿಗೆ ಕೆಎಂಎಫ್ ನಂದಿನಿ ಹಾಲಿನ ದರ ಏರಿಕೆ ಸಾಧ್ಯತೆ ಇದೆ. ಕೆಎಂಎಫ್ ಮೂಲಗಳು ಹಾಗೂ ಸರ್ಕಾರದ ಮೂಲಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಂಡ ಬಳಿಕ ಲೀಟರಿಗೆ 5 ರೂಪಾಯಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿವೆ.

Read the full story here

Tue, 18 Feb 202501:02 PM IST

ಕರ್ನಾಟಕ News Live: ಸಿವಿ ರಾಮನ್ ನಗರ ಸೇರಿ ವಿವಿಧೆಡೆ ಫೆ 20ರಂದು ಕಾವೇರಿ ನೀರು ಪೂರೈಕೆ ಇರಲ್ಲ; ಬೆಂಗಳೂರು ಜಲ ಮಂಡಳಿಯಿಂದ ನೀರಿನ ಅದಾಲತ್ ವಿವರ ಹೀಗಿದೆ

  • BWSSB Updates: ಬೆಂಗಳೂರಿನ ಸಿವಿ ರಾಮನ್‌ನಗರ, ಇಂದಿರಾ ನಗರ ಸೇರಿ ವಿವಿಧ ಪ್ರದೇಶಗಳಲ್ಲಿ ಫೆ 20ರಂದು ಕಾವೇರಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ತಿಳಿಸಿದೆ. ಇದೇ ದಿನ ವಿವಿಧ ಉಪವಿಭಾಗಗಳಲ್ಲಿ ನೀರಿನ ಅದಾಲತ್ ಕೂಡ ಆಯೋಜಿಸಿರುವುದಾಗಿ ಅದು ಹೇಳಿದೆ.

Read the full story here

Tue, 18 Feb 202512:39 PM IST

ಕರ್ನಾಟಕ News Live: ಮಂಗಳೂರು ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ 119 ಕೆಜಿ ಗಾಂಜಾ ವಶ ನಾಲ್ಕು ಆರೋಪಿಗಳ ಸೆರೆ

  • Mangaluru Crime: ಮಂಗಳೂರು ಸಿಸಿಬಿ ಪೊಲೀಸರ ಬೃಹತ್ ಕಾರ್ಯಾಚರಣೆಯಲ್ಲಿ 119 ಕೆಜಿ ಗಾಂಜಾ ವಶಪಡಿಸಲಾಗಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್‌ವಾಲ್ ತಿಳಿಸಿದರು. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Tue, 18 Feb 202512:11 PM IST

ಕರ್ನಾಟಕ News Live: ಹುಬ್ಬಳ್ಳಿ: ಹಿರಿಯ ಸ್ವಯಂಸೇವಕ, ಮಾಜಿ ಮಹಾನಗರ ಸಂಘಚಾಲಕ, ವಿಶ್ವ ಹಿಂದೂ ಪರಿಷತ್ ನಾಯಕ ಡಾ ಗೋವಿಂದ ನರೇಗಲ್ ನಿಧನ

  • Dr Govinda Naregal Death: ಹುಬ್ಬಳ್ಳಿಯ ಹಿರಿಯ ಸ್ವಯಂಸೇವಕ, ಮಾಜಿ ಮಹಾನಗರ ಸಂಘಚಾಲಕ, ವಿಶ್ವ ಹಿಂದೂ ಪರಿಷತ್ ನಾಯಕ ಡಾ ಗೋವಿಂದ ನರೇಗಲ್ ನಿಧನರಾದರು. ಅವರು ಇಂದು (ಫೆ 18) ಬೆಳಿಗ್ಗೆ ನಿಧನರಾಗಿದ್ದು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

Read the full story here

Tue, 18 Feb 202511:31 AM IST

ಕರ್ನಾಟಕ News Live: ಬೆಂಗಳೂರು ನಗರ, ಗ್ರಾಮಾಂತರಗಳಲ್ಲಿ ಫೆ 22ರ ತನಕವೂ ಬಿಸಿಲಾಘಾತ, ಕೆಲವೆಡೆ ತೇವಾಂಶ ಕುಸಿತ ಸಾಧ್ಯತೆ

  • Bangalore Weather: ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರಗಳಲ್ಲಿ ಫೆ 22ರ ತನಕವೂ ಬಿಸಿಲಾಘಾತ ಮುಂದುವರಿಯಲಿದೆ. ಗರಿಷ್ಠ ತಾಪಮಾನ 33-34 ಡಿಗ್ರಿ ಸೆಲ್ಶಿಯಸ್ ತನಕ ಹೋಗಬಹುದು. ತೇವಾಂಶವೂ ಕುಸಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

Read the full story here

Tue, 18 Feb 202509:40 AM IST

ಕರ್ನಾಟಕ News Live: ಧಾರವಾಡ: ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಕೇಸ್‌; 18 ಅಂಗನವಾಡಿ ಕಾರ್ಯಕರ್ತೆಯರು ಸೇರಿ 26 ಜನರ ಬಂಧನ

  • Anganwadi Food Scam: ಧಾರವಾಡದಲ್ಲಿ ಅಂಗನವಾಡಿ ಆಹಾರ ಅಕ್ರಮ ದಾಸ್ತಾನು ಮಾಡಿದ ಪ್ರಕರಣದಲ್ಲಿ 18 ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸೇರಿ 26 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 329 ಚೀಲ ಆಹಾರ ವಸ್ತು ವಶಪಡಿಸಿಕೊಂಡಿದ್ದಾರೆ.

Read the full story here

Tue, 18 Feb 202508:44 AM IST

ಕರ್ನಾಟಕ News Live: Metro vs BMTC: ನಮ್ಮ ಮೆಟ್ರೋ ಪಾಸ್‌ಗೆ ವರ್ಷಕ್ಕೆ 41,600 ರೂ; ಮಬಿಎಂಟಿಸಿ ಎಸಿ ಪಾಸ್‌ 24,000; ದುಪ್ಪಟ್ಟು ದರ, ಪ್ರಯಾಣಿಕರು ಶಿಫ್ಟ್

  • ನಮ್ಮ ಮೆಟ್ರೋ ಪ್ರಯಾಣಿಕರು ಬೆಂಗಳೂರು ನಗರದ ಬಿಎಂಟಿಸಿ ಎಸಿ ಬಸ್ ಪ್ರಯಾಣಿಕರು ವಾರ್ಷಿಕವಾಗಿ ಮಾಡುವ ವೆಚ್ಚಕ್ಕಿಂತ ಎರಡು ಪಟ್ಟು ಹೆಚ್ಚು ಹಣವನ್ನು ಮೆಟ್ರೋ ಪ್ರಯಾಣಕ್ಕಾಗಿ ವ್ಯಯಿಸುತ್ತಿದ್ದಾರೆ. ಮೆಟ್ರೋಗಿಂತ ಬಸ್‌ ಪ್ರಯಾಣವು ಅಗ್ಗವಾಗಿದ್ದು, ಜನರು ಅದರತ್ತ ಒಲವು ತೋರಿಸುತ್ತಿದ್ದಾರೆ.
Read the full story here

Tue, 18 Feb 202506:46 AM IST

ಕರ್ನಾಟಕ News Live: Digital Arrest: ಡಿಜಿಟಲ್‌ ಬಂಧನಕ್ಕೆ ಸಿಲುಕಿ 10 ಲಕ್ಷ ರೂ ಕಳೆದುಕೊಂಡ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ನಿವೃತ್ತ ಮಹಿಳಾ ಅಧಿಕಾರಿ

  • Digital arrest cyber crime: ಯಾದಗಿರಿ ಜಿಲ್ಲೆಯ ನಿವೃತ್ತ ಕೃಷ್ಣ ಭಾಗ್ಯ ಜಲ ನಿಗಮ ನಿಯಮಿತದ ಮಹಿಳಾ ಅಧಿಕಾರಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ಸೈಬರ್‌ ಕ್ರೈಮ್‌ಗೆ ಒಳಗಾಗಿ ಹತ್ತು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಈ ಘಟನೆ ಕುರಿತು ಹೆಚ್ಚಿನ ವಿವರ ಇಲ್ಲಿದೆ. 
Read the full story here

Tue, 18 Feb 202506:22 AM IST

ಕರ್ನಾಟಕ News Live: ಮೈಸೂರು: ಆನ್‌ಲೈನ್ ಬೆಟ್ಟಿಂಗ್‌ಗೆ ಒಂದೇ ಕುಟುಂಬದ ಮೂವರು ಬಲಿ; ಸಾಲದ ಮೇಲೆ ಸಾಲ ಮಾಡಿ ಆತ್ಮಹತ್ಯೆಗೆ ಶರಣು

  • ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ದುಡ್ಡು ಮಾಡಲು ಹೋಗಿ ಸಾಲದ ಮೇಲೆ ಸಾಲ ಮಾಡಿಕೊಂಡು ನಷ್ಟ ಅನುಭವಿಸಿದ ಒಂದೇ ಕುಟುಂಬದ ಮೂವರು ಆತ್ಮಗತ್ಯೆಗೆ ಶರಣಾಗಿದ್ದಾರೆ. 
Read the full story here

Tue, 18 Feb 202505:38 AM IST

ಕರ್ನಾಟಕ News Live: ಕಾರವಾರ ನೌಕಾನೆಲೆಗೆ ಸಂಬಂಧಿಸಿದ ಮಾಹಿತಿ ಸೋರಿಕೆ ಆರೋಪ; ಇಬ್ಬರನ್ನು ವಶಕ್ಕೆ ಪಡೆದ ಎನ್ಐಎ

  • ಕಾರವಾರ ನೌಕಾನೆಲೆಯ ಚಿತ್ರಗಳನ್ನು ವಿದೇಶಿ ಬೇಹುಗಾರರಿಗೆ ಕಳುಹಿಸಿದ ಆರೋಪದ ಮೇಲೆ ಉತ್ತರ ಕನ್ನಡ ಜಿಲ್ಲೆಯ ಮೂವರನ್ನು ರಾಷ್ಟ್ರೀಯ ತನಿಖಾ ದಳದ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Read the full story here

Tue, 18 Feb 202504:59 AM IST

ಕರ್ನಾಟಕ News Live: ಮೈಸೂರು: ವಿದ್ಯುತ್ ಕಂಬಕ್ಕೆ ಬೈಕ್‌ ಡಿಕ್ಕಿಯಾಗಿ ಸವಾರ ಸಾವು; ನೇಣು ಬಿಗಿದ‌ ಸ್ಥಿತಿಯಲ್ಲಿ ಪುರುಷ ಹಾಗೂ ಮಹಿಳೆ ಶವ ಪತ್ತೆ

  • ಮೈಸೂರು ಜಿಲ್ಲೆಯ ತಿ ನರಸೀಪುರದಲ್ಲಿ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಅತ್ತ ಮೈಸೂರು ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಇಬ್ಬರ ಶವ ಪತ್ತೆಯಾಗಿದೆ.
Read the full story here

Tue, 18 Feb 202503:04 AM IST

ಕರ್ನಾಟಕ News Live: ಮುಡಾ ಪ್ರಕರಣ; ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ, ಎಡಿಜಿಪಿಯಿಂದ ಅಧ್ಯಯನ

  • ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮುಡಾ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಸಮಯಾವಕಾಶ ಕೋರಿದ್ದಾರೆ. ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)
Read the full story here

Tue, 18 Feb 202502:10 AM IST

ಕರ್ನಾಟಕ News Live: ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು; ಫಲಾನುಭವಿಗಳ ಸಂಖ್ಯೆ 1.28 ಕೋಟಿ, ಮನೆಯೊಡತಿ ಖಾತೆಗೆ ವರ್ಗಾವಣೆಯಾದ ಮೊತ್ತ ಇಷ್ಟು ಕೋಟಿ

  • ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ಯೋಜನೆಗೆ 19 ತಿಂಗಳು ಪೂರ್ಣಗೊಂಡಿವೆ. ಕೆಲವು ತಿಂಗಳುಗಳಿಂದ  ಖಾತೆಗೆ ಹಣ ಜಮೆ ಆಗಿಲ್ಲ ಎಂಬ ಆರೋಪ ಮಹಿಳೆಯರದ್ದು. ಈ ನಡುವೆಯೂ ಸರ್ಕಾರದ ಬೊಕ್ಕಸದಿಂದ ಕೋಟಿ ಕೋಟಿ ಹಣ ಯೋಜನೆಗಾಗಿ ವ್ಯಯಿಸಲಾಗಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)
Read the full story here

ಹಂಚಿಕೊಳ್ಳಲು ಲೇಖನಗಳು

  • twitter