
Karnataka News Live February 3, 2025 : ವಿಧಾನಸೌಧ ಬಳಿ ನಾಯಿ ಹಾವಳಿ ತಡೆಯಲು ಶೀಘ್ರದಲ್ಲಿ ಅಧಿಕಾರಿಗಳ ಸಭೆ: ಸ್ಪೀಕರ್ ಯು ಟಿ ಖಾದರ್
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Mon, 03 Feb 202505:19 PM IST
- ಬೆಂಗಳೂರಿನ ವಿಧಾನಸೌಧದ ಬಳಿ ನಾಯಿಗಳ ಹಾವಳಿ ತಡೆಗಟ್ಟುವ ವಿಷಯವಾಗಿ ಅಧಿಕಾರಿಗಳು ಶೀಘ್ರದಲ್ಲಿ ಸಭೆ ನಡೆಸಲಿದ್ದಾರೆ. ವಿಧಾನಸಭೆಯ ಚೀಫ್ ಸೆಕ್ರೆಟರಿ, ಪ್ರಾಣಿ ದಯಾ ಸಂಘದ ಸದಸ್ಯರು ಈ ಸಭೆಯಲ್ಲಿ ಇರಲಿದ್ದಾರೆ ಎಂದು ವಿಧಾನಸಭಾ ಸ್ಪೀಕರ್ ಯು. ಟಿ. ಖಾದರ್ ತಿಳಿಸಿದ್ದಾರೆ.
Mon, 03 Feb 202512:10 PM IST
Karnataka Investors summit 2025: ಬೆಂಗಳೂರಿನಲ್ಲಿ ಕರ್ನಾಟಕ ಹೂಡಿಕೆದಾರರ ಸಮಾವೇಶ ಫೆಬ್ರವರಿ 12ರಿಂದ ಮೂರು ದಿನಗಳ ಕಾಲ ನಡೆಯಲಿದೆ.
Mon, 03 Feb 202511:11 AM IST
- ದ್ವಿಚಕ್ರ ವಾಹನವೊಂದಕ್ಕೆ ವರ್ಷದೊಳಗೆ ಫೈನ್ ಮೊತ್ತವು 1,61,000 ರೂ.ಗೆ ಏರಿದೆ. ಆದರೂ ಟ್ರಾಫಿಕ್ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಎಕ್ಸ್ ಬಳಕೆದಾರರೊಬ್ಬರು ಈ ಬಗ್ಗೆ ಗಮನ ಸೆಳೆದಿದ್ದು, ಬೆಂಗಳೂರು ಟ್ರಾಫಿಕ್ ಪೊಲೀಸರು ಪ್ರತಿಕ್ರಿಯೆ ನೀಡಿದ್ದಾರೆ.
Mon, 03 Feb 202510:44 AM IST
- ಕೊಪ್ಪಳದಲ್ಲಿ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ಕಡಿತಗೊಂಡರೂ ಹಣ ವಾಪಾಸ್ ಕೊಡಿಸಲು ಕ್ರಮ ಕೈಗೊಳ್ಳದ ಕೆನರಾ ಬ್ಯಾಂಕ್ಗೆ ಗ್ರಾಹಕರ ಪರಿಹಾರ ಆಯೋಗ ದಂಡ ವಿಧಿಸಿ ಕಡಿತವಾದ ಹಣ ನೀಡುವಂತೆ ಆದೇಶಿಸಿದೆ.
Mon, 03 Feb 202509:46 AM IST
- ಮಂಡ್ಯದ ವಿಸಿ ನಾಲೆಗೆ ಕಾರು ಬಿದ್ದು ಒಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಒಟ್ಟು ನಾಲ್ವರ ಪೈಕಿ ಇನ್ನಿಬ್ಬರು ಪತ್ತೆಯಾಗಿಲ್ಲ. ಕಾರಿನಲ್ಲಿದ್ದ ಒಬ್ಬ ವ್ಯಕ್ತಿ ಸ್ಥಳೀಯರ ನೆರವಿನಿಂದ ಈಜಿ ದಡ ಸೇರಿ ಬದುಕುಳಿದಿದ್ದಾರೆ.
Mon, 03 Feb 202509:18 AM IST
- ಬೆಂಗಳೂರಿನಲ್ಲಿ ಎಚ್ಎಂಟಿ ಕಂಪೆನಿಗೆ ಅರಣ್ಯ ಭೂಮಿ ಹಸ್ತಾಂತರಕ್ಕೆ ಸಂಬಂಧಿಸಿ ಸೂಕ್ತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿಲ್ಲ ಎನ್ನುವುದು ಈಗ ಹೊರ ಬಿದ್ದಿದೆ.
Mon, 03 Feb 202508:41 AM IST
ಹಿರಿಯ ನಾಗರಿಕರ ಕಾಯಿದೆ ಅಡಿ ಆಸ್ತಿ ವರ್ಗಾವಣೆ ರದ್ದು ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದೆ. ಅದರ ವಿವರ ಇಲ್ಲಿದೆ.
Mon, 03 Feb 202504:41 AM IST
Aero India 2025: ಬೆಂಗಳೂರಿನಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನ ದಿ ರನ್ವೇ ಟು ಎ ಬಿಲಿಯನ್ ಆಪರ್ಚುನಿಟೀಸ್ ಎನ್ನುವ ಪರಿಕಲ್ಪನೆ ಮೇಲೆ ನಡೆಯಲಿದೆ. ಜನರಿಗೆ ರಕ್ಷಣಾ ವಲಯದ ವಿಮಾನ ಹಾಗೂ ಇತರೆ ಉತ್ಪನ್ನಗಳ ವೀಕ್ಷಣೆಗೆ ಅವಕಾಶ, ರಕ್ಷಣಾ ಇಲಾಖೆಗೆ ವಹಿವಾಟು ಹಾಗೂ ಶಕ್ತಿ ಪ್ರದರ್ಶನಕ್ಕೆ ಇದು ವೇದಿಕೆಯಾಗಲಿದೆ.
Mon, 03 Feb 202502:53 AM IST
ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ಗಳ ಸಾಲ ವಸೂಲಿ ಕಿರುಕುಳ ಅಧಿಕವಾದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಇಂತಹ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರಲು ಸುಗ್ರೀವಾಜ್ಞೆಗೆ ಬೇಕಾದ ಕರಡನ್ನು ಅಂತಿಮಗೊಳಿಸಿದೆ. ಇದರಲ್ಲಿ ಹಲವಾರು ಕಠಿಣ ಕ್ರಮಗಳನ್ನು ಪ್ರಸ್ತಾಪಿಸಲಾಗಿದೆ.
Mon, 03 Feb 202501:30 AM IST
- ಸಾಲ ವಸೂಲಿ ನೆಪದಲ್ಲಿ ಜನರ ರಕ್ತ ಹೀರುತ್ತಿರುವ ಪುಂಡರ ಬಗ್ಗೆ ಇದೀಗ ಕೆಲವರು ನಿದ್ದೆಯಿಂದ ಎಚ್ಚೆತ್ತಂತೆ ಕನವರಿಸುತ್ತಿದ್ದಾರೆ. ಆದರೆ ಸಾಲ ಕೊಡುವವರ ಜವಾಬ್ದಾರಿಗಳನ್ನು ಬಿಗಿಗೊಳಿಸುವ ಬಗ್ಗೆ ಈವರೆಗೆ ಕರ್ನಾಟಕ ಸರ್ಕಾರದ ಯಾವೊಬ್ಬ ಸಚಿವರೂ ಗಂಭೀರವಾಗಿ ಮಾತನಾಡಿಯೇ ಇಲ್ಲ.
Mon, 03 Feb 202501:17 AM IST
- Karnataka Weather: ಕರ್ನಾಟಕದಲ್ಲಿ ಫೆಬ್ರವರಿಯಲ್ಲಿ ಬಿಸಿಲ ಪ್ರಮಾಣ ಏರುತ್ತಿದೆ. ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಉಷ್ಣಾಂಶ ಮತ್ತಷ್ಟು ಏರಿಕೆಯ ಮುನ್ಸೂಚನೆಯಂತೂ ಕಾಣುತ್ತಿದೆ.
Mon, 03 Feb 202512:30 AM IST
- ಕನ್ನಡ ಪುಸ್ತಕ ಬಿಡುಗಡೆ: ಮನಃಶಾಸ್ತ್ರಜ್ಞೆ, ಬರಹಗಾರ್ತಿ ಡಾ. ರೂಪಾ ರಾವ್ ಬರೆದ ಸೈಕೋ ಹಾರರ್ ಕಥೆಗಳು, ಮನಸ್ಸಿಗೊಂದು ಕೈಗನ್ನಡಿ, ಎಸ್ಎಸ್ ಸಿಂಹ ಬರೆದ ಕನ್ನಡಿ ಸುಳ್ಳು ಹೇಳುವುದಿಲ್ಲ ಮತ್ತು ಇತರೆ ಕಥೆಗಳು, ರಮ್ಯ ಎಸ್ ಬರೆದ ವರ್ಣತಂತು, ಪ್ರಶಾಂತ್ ಶ್ರೀಕಂಠಯ್ಯ ಅವರ "ದುಶ್ಯಾಸನ ಬೇಕಾಗಿದ್ದಾನೆ ಮತ್ತು ಇತರೆ ಕಥೆಗಳು" ಬಿಡುಗಡೆಯಾಗಿವೆ.