
Karnataka News Live February 4, 2025 : ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 04 Feb 202505:45 PM IST
- ಬೆಂಗಳೂರಿನಲ್ಲಿ ಲಘು ಅಪಘಾತದ ಬಳಿಕ ರಾಹುಲ್ ದ್ರಾವಿಡ್ ತಮ್ಮ ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸಿದ್ದಾರೆ. ಈ ನಡುವೆ ದ್ರಾವಿಡ್ ಮತ್ತು ಆಟೊ ಚಾಲಕನ ನಡುವೆ ಸಣ್ಣ ವಾಗ್ವಾದವೂ ನಡೆದಿದೆ. ಇಬ್ಬರೂ ಕನ್ನಡ ಭಾಷೆಯಲ್ಲೇ ಮಾತನಾಡಿದ್ದಾರೆ.
Tue, 04 Feb 202503:20 PM IST
- ಪಿಸ್ತೂಲು ಮಿಸ್ ಫೈರ್ ಆಗಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ಮಂಗಳೂರು ಹೊರವಲಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Tue, 04 Feb 202502:48 PM IST
- ವಿಧಾನಸೌಧದ ಆವರಣದಲ್ಲಿ ನಾಯಿಗಳಿಗಾಗಿ ಒಂದು ಪ್ರತ್ಯೇಕ ಸ್ಥಳವನ್ನು ನಿಗದಿ ಮಾಲಾಗುತ್ತದೆ. ಅವುಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಎನ್ಜಿಒಗಳಿಗೆ ವಹಿಸಲಾಗುತ್ತದೆ ಎಂದು ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಹೇಳಿದ್ದಾರೆ.
Tue, 04 Feb 202501:29 PM IST
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಪಕ್ಷದೊಳಗೆ ಬಣ ರೂಪುಗೊಂಡಿದೆ. ಯಾವುದೇ ಕಾರಣಕ್ಕೂ ಬಿಎಸ್ವೈ ಪುತ್ರ ಮುಂದಿನ ರಾಜ್ಯಾಧ್ಯಕ್ಷರಾಗಬಾರದು ಎಂದು ಪಣ ತೊಟ್ಟಿದೆ. ಅತ್ತ ವಿಜಯೇಂದ್ರ ಪರವೂ ಬಣವೊಂದು ತೊಡೆ ತಟ್ಟಿ ನಿಂತಿದ್ದು, ದೆಹಲಿ ಹೈಕಮಾಂಡ್ಗೆ ಹೊಸ ಸವಾಲು ಸೃಷ್ಟಿಯಾಗಿದೆ.
Tue, 04 Feb 202511:13 AM IST
- ಕರ್ನಾಟಕ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಪ್ರಯಾಣಿಕರು ಮಹಾ ಕುಂಭಮೇಳಕ್ಕೆ ತೆರಳಲು ಟಿಕೆಟ್ ಕಾಯ್ದಿರಿಸಿದ್ದರು. ಅವರಲ್ಲಿ ಶೇ.25ರಷ್ಟು ಮಂದಿ ಟಿಕೆಟ್ ರದ್ದು ಅಥವಾ ಪ್ರಯಾಣ ಮುಂದೂಡಿಕೆಗೆ ಕೇಳುತ್ತಿದ್ದಾರೆ.
Tue, 04 Feb 202509:50 AM IST
- ರಾಜ್ಯದಲ್ಲಿ ಮೈಕ್ರೊಫೈನಾನ್ಸ್ಗಳಿಗೆ ಮೂಗುದಾರ ಹಿಡಿಯಲು ರಾಜ್ಯಸರ್ಕಾರವು ಸುಗ್ರೀವಾಜ್ಞೆ ಮೂಲಕ ಹೊಸ ಕಾನೂನು ತರಲು ಅಂತಿಮ ಹಂತದ ಸಿದ್ಧತೆಯಲ್ಲಿದೆ. ಈ ನಡುವೆ ಮೈಕ್ರೊಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತು ಪ್ರಾಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
Tue, 04 Feb 202507:50 AM IST
Hubballi Shootout: ಹುಬ್ಬಳ್ಳಿ ಹೊರವಲಯದ ಗಬ್ಬೂರ ಬಳಿ ಮಂದಿರದಲ್ಲಿ ಕಳ್ಳತನ, ಮನೆಗಳ್ಳತನ ಹಾಗೂ ಬೈಕ್ ಸವಾರರನ್ನು ತಡೆದು ಸುಲಿಗೆ ಮಾಡುತ್ತಿದ್ದ ಗುಜರಾತ್ ಮೂಲದ ಇಬ್ಬರು ದರೋಡೆಕೋರರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ಶೂಟ್ಔಟ್ ನಡೆದಿದ್ದು, ಅದರಲ್ಲಿ ಈ ಇಬ್ಬರು ಪೊಲೀಸ್ ಬಲೆಗೆ ಬಿದ್ದರು.
Tue, 04 Feb 202506:56 AM IST
Bengaluru Crime: ಜನಪ್ರಿಯ ನಟಿಗೆ ಐಷಾರಾಮಿ ಬಂಗಲೆ ಗಿಫ್ಟ್ ಕೊಟ್ಟ ಖತರ್ನಾಕ್ ಕಳ್ಳ ಬೆಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ. ಬಂಧಿತನನ್ನು ಪಂಚಾಕ್ಷರಿ ಸ್ವಾಮಿ ಎಂದು ಗುರುತಿಸಲಾಗಿದೆ. ಸಿನಿಮೀಯ ಬದುಕಿನ ಶೋಕಿಗೆ ಬಿದ್ದ ಖದೀಮನನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ.
Tue, 04 Feb 202505:54 AM IST
Aero India 2025: ಬೆಂಗಳೂರು ಏರ್ ಶೋ ಕಾರ್ಯಕ್ರಮಕ್ಕೆ ದಿನಗಣನೆ ಶುರುವಾಗಿದೆ. ಈ ನಡುವೆ, ಏರ್ ಶೋ ಕಾರಣ ವಿಮಾನ ಯಾನದಲ್ಲಿ ವ್ಯತ್ಯಯವಾಗಿದ್ದು, ಫೆ 5 ರಿಂದ 14 ರ ತನಕದ ವೇಳಾಪಟ್ಟಿ ಪರಿಷ್ಕರಣೆಯಾಗಿದೆ. ಇದಕ್ಕೆ ಸಂಬಂಧಿಸಿ ಬೆಂಗಳೂರು ವಿಮಾನ ನಿಲ್ದಾಣ ಎಕ್ಸ್ ಖಾತೆಯಲ್ಲಿ ಅಪ್ಡೇಟ್ಸ್ ನೀಡಿದೆ. ಅದರ ವಿವರ ಇಲ್ಲಿದೆ
Tue, 04 Feb 202505:11 AM IST
Karnataka Microfinance Law: ಕರ್ನಾಟಕದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯ ಕರಡು ಅಂತಿಮಗೊಳಿಸಿ ರಾಜ್ಯಪಾಲ ಥಾವರ್ಚಂದ ಗೆಹ್ಲೋಟ್ ಅವರ ಅನುಮೋದನೆಗೆ ಕಳುಹಿಸಿದೆ. ಇಂದು ಅಥವಾ ನಾಳೆ (ಫೆ 5) ಈ ಸುಗ್ರೀವಾಜ್ಞೆ ಆದೇಶಕ್ಕೆ ರಾಜ್ಯಪಾಲರು ಸಹಿ ಹಾಕುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. 10 ಮುಖ್ಯ ಅಂಶಗಳ ವಿವರ ಇಲ್ಲಿದೆ.
Tue, 04 Feb 202504:14 AM IST
Bengaluru Ratha Saptami: ರಥ ಸಪ್ತಮಿ ಜಾತ್ರಾ ಮಹೋತ್ಸವದ ಕಾರಣ, ಬೆಂಗಳೂರು ಆಡುಗೋಡಿ ಸಮೀಪ ಸಂಚಾರ ವ್ಯವಸ್ಥೆ ಬದಲಾವಣೆ ಮಾಡಲಾಗಿದೆ. ಸಂಚಾರ ಪೊಲೀಸರು ನೀಡಿರುವ ಸಂಚಾರ ಸಲಹೆಯ ಪೂರ್ಣ ವಿವರ ಇಲ್ಲಿದೆ.
Tue, 04 Feb 202503:37 AM IST
Ratha Saptami Weather: ಶಿವರಾತ್ರಿಗೆ ಇನ್ನು ಮೂರು ವಾರ ಇದೆ. ಅಂದರೆ, ಚಳಿಗಾಲ ಇನ್ನು ಮುಗಿಯಲು ಮೂರು ವಾರಗಳು ಇದೆ. ಆಗಲೇ ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿಯ ಅನುಭವವಾಗತೊಡಗಿದೆ. ರಥ ಸಪ್ತಮಿ ದಿನ ಕರ್ನಾಟಕದ ಹವಾಮಾನ ಹೀಗಿದೆ ನೋಡಿ.
Tue, 04 Feb 202502:35 AM IST
Bengaluru Traffic Police: ಬೆಂಗಳೂರಲ್ಲಿ ಸಂಚಾರ ದಟ್ಟಣೆ ಎದುರಾದ ವೇಳೆ ಅನೇಕರು ಪಾದಚಾರಿ ಮಾರ್ಗದಲ್ಲಿ ವಾಹನ ಚಲಾಯಿಸುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದಕ್ಕೆ ತಕ್ಕ ಪಾಠ ಕಲಿಸಲು ಸಂಚಾರ ಪೊಲೀಸರು ಮುಂದಾಗಿದ್ದಾರೆ. ಇದರ ಭಾಗವಾಗಿ ಈಗ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
Tue, 04 Feb 202501:42 AM IST
Gold Theft on KSRTC Bus: ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಕರೊಬ್ಬರಿಗೆ ಸೇರಿದ 10 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು 3,000 ರೂಪಾಯಿ ನಗದು ಕಳುವಾಗಿದೆ. ಕುಣಿಗಲ್ ಸಮೀಪ ಈ ಕಳವು ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
Tue, 04 Feb 202512:06 AM IST
SSLC Grace Marks: ಪರೀಕ್ಷಾ ಅಕ್ರಮ ತಡೆಗಾಗಿ ವೆಬ್ಕಾಸ್ಟಿಂಗ್ ಜಾರಿ ಮಾಡಿದ ಕಾರಣ ಫಲಿತಾಂಶ ಕುಸಿದಿತ್ತು. ಹೀಗಾಗಿ ಕಳೆದ ಬಾರಿ ಹೆಚ್ಚುವರಿಯಾಗಿ ಶೇಕಡ 10 ಗ್ರೇಸ್ ಅಂಕ ನೀಡಲಾಗಿತ್ತು. ಈ ಬಾರಿ ಈ ಹೆಚ್ಚುವರಿ ಶೇಕಡ 10 ಗ್ರೇಸ್ ಅಂಕ ಇರಲ್ಲ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.