Karnataka News Live January 10, 2025 : ಸರ್ಕಾರಿ ಸೌಲಭ್ಯ ನಿರಾಕರಿಸಿದ್ದಕ್ಕೆ ವೃದ್ಧ ಆತ್ಮಹತ್ಯೆ; ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 10, 2025 : ಸರ್ಕಾರಿ ಸೌಲಭ್ಯ ನಿರಾಕರಿಸಿದ್ದಕ್ಕೆ ವೃದ್ಧ ಆತ್ಮಹತ್ಯೆ; ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಸರ್ಕಾರಿ ಸೌಲಭ್ಯ ನಿರಾಕರಿಸಿದ್ದಕ್ಕೆ ವೃದ್ಧ ಆತ್ಮಹತ್ಯೆ; ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

Karnataka News Live January 10, 2025 : ಸರ್ಕಾರಿ ಸೌಲಭ್ಯ ನಿರಾಕರಿಸಿದ್ದಕ್ಕೆ ವೃದ್ಧ ಆತ್ಮಹತ್ಯೆ; ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

05:15 PM ISTJan 10, 2025 10:45 PM HT Kannada Desk
  • twitter
  • Share on Facebook
05:15 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 10 Jan 202505:15 PM IST

ಕರ್ನಾಟಕ News Live: ಸರ್ಕಾರಿ ಸೌಲಭ್ಯ ನಿರಾಕರಿಸಿದ್ದಕ್ಕೆ ವೃದ್ಧ ಆತ್ಮಹತ್ಯೆ; ಕೇಂದ್ರ ಹಾಗೂ ಕರ್ನಾಟಕ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗ ನೋಟಿಸ್

  • ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ನೀಡಿದೆ.
Read the full story here

Fri, 10 Jan 202504:11 PM IST

ಕರ್ನಾಟಕ News Live: ತುಮಕೂರು: ಮಗಳನ್ನು ರಕ್ಷಿಸಲು ಹೋದ ತಾಯಿ ಕೂಡಾ ನೀರು ಪಾಲು; ಗುಬ್ಬಿಯ ವಿರುಪಾಕ್ಷಿಪುರದಲ್ಲಿ ದಾರುಣ ಘಟನೆ

  • ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ವಿರುಪಾಕ್ಷಿಪುರ ಗ್ರಾಮದಲ್ಲಿ ನಡೆದಿದೆ. (ವರದಿ: ಈಶ್ವರ್‌‌, ತುಮಕೂರು) 
Read the full story here

Fri, 10 Jan 202502:01 PM IST

ಕರ್ನಾಟಕ News Live: ತುಮಕೂರು: ಬಿಜೆಪಿ ಕಾರ್ಯಕರ್ತೆಯ ಮಗ ಆತ್ಮಹತ್ಯೆ; ಶಾಲಾ ಸಮವಸ್ತ್ರದಲ್ಲೇ 13 ವರ್ಷದ ಬಾಲಕನ ಮೃತದೇಹ ಪತ್ತೆ

  • ತುಮಕೂರಿನ ಬಿಜೆಪಿ ಕಾರ್ಯಕರ್ತೆ ಶಂಕುತಲಾ ನಟರಾಜ್ ಅವರ ಪುತ್ರ 13 ವರ್ಷದ ತ್ರಿಶಾಲ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮನೆಯಲ್ಲಿ ತಾಯಿ ಇಲ್ಲದ ಸಮಯದಲ್ಲಿ ಡೇತ್ ನೋಟ್ ಬರೆದಿಟ್ಟು ಈ ಕೃತ್ಯವೆಸಗಿದ್ದಾನೆ ಎಂಬ ಮಾಹಿತಿ ಲಭಿಸಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read the full story here

Fri, 10 Jan 202512:52 PM IST

ಕರ್ನಾಟಕ News Live: ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ; ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ, ನಾಳೆ ಏನೇನಿರುತ್ತೆ ಕಾರ್ಯಕ್ರಮ

  • Army Day 2025: ನಿಮ್ಮ ಸೇನೆ ಬಗ್ಗೆ ತಿಳ್ಕೊಳ್ಳಿ ಎಂಬ ವಿಶೇಷ ಕಾರ್ಯಕ್ರಮವನ್ನು ಭಾರತೀಯ ಸೇನೆ ಆಯೋಜಿಸಿದೆ. ಬೆಂಗಳೂರು ಮಾಣಿಕ್‌ ಷಾ ಪರೇಡ್ ಮೈದಾನದಲ್ಲಿ ಭಾರತೀಯ ಸೇನಾ ಪ್ರದರ್ಶನ ನಾಳೆ ನಡೆಯಲಿದ್ದು, ಏನೇನಿರುತ್ತೆ ಕಾರ್ಯಕ್ರಮ ಎಂಬ ವಿವರ ಇಲ್ಲಿದೆ.

Read the full story here

Fri, 10 Jan 202510:58 AM IST

ಕರ್ನಾಟಕ News Live: SSLC-PUC Exam Time Table: ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ

  • Karnataka SSLC-PUC Exam: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು 2024-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
Read the full story here

Fri, 10 Jan 202508:26 AM IST

ಕರ್ನಾಟಕ News Live: ಕರ್ನಾಟಕ ಯಕ್ಷಗಾನ ಅಕಾಡೆಮಿ 2024ರ ಪ್ರಶಸ್ತಿ ಘೋಷಣೆ, ಮಾಂಬಾಡಿ ಗುರುಗಳಿಗೆ ಪಾರ್ತಿಸುಬ್ಬ ಪ್ರಶಸ್ತಿ, 10 ಕಲಾವಿದರಿಗೆ ಯಕ್ಷಸಿರಿ ಗೌರವ

  • Yakshagana Academy Awards: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ರ ಪ್ರಶಸ್ತಿ ಘೋಷಣೆಯಾಗಿದೆ. ಮಾಂಬಾಡಿ ಗುರುಗಳು ಎಂದು ಪ್ರಸಿದ್ಧರಾಗಿರುವ ತೆಂಕತಿಟ್ಟು ಯಕ್ಷಗಾನ ಕಲಾವಿದ ಬಂಟ್ವಾಳದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿ ಪ್ರಕಟವಾಗಿದೆ. 10 ಕಲಾವಿದರಿಗೆ ಯಕ್ಷಸಿರಿ ಗೌರವ ಘೋಷಣೆಯಾಗಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

Read the full story here

Fri, 10 Jan 202506:58 AM IST

ಕರ್ನಾಟಕ News Live: ರೇಣುಕಾಸ್ವಾಮಿ ಕೊಲೆ ಕೇಸ್‌: ಎಲ್ಲ 17 ಆರೋಪಿಗಳು ಕೋರ್ಟ್‌ಗೆ ಹಾಜರು,ದರ್ಶನ್‌, ಪವಿತ್ರಾ ಗೌಡ ಮುಖಾಮುಖಿ, ಫೆ 25ಕ್ಕೆ ವಿಚಾರಣೆ ಮುಂದೂಡಿಕೆ

  • Renukaswamy Murder Case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ 17 ಆರೋಪಿಗಳು ಇಂದು (ಜನವರಿ 10) ಕೋರ್ಟ್‌ಗೆ ಹಾಜರಾದರು. ಜಾಮೀನು ಪಡೆದು ಹೊರಬಂದ ಬಳಿಕ ಕೋರ್ಟ್‌ ಸಮೀಪ ಆರೋಪಿಗಳಾದ ದರ್ಶನ್, ಪವಿತ್ರ ಗೌಡ ಮುಖಾಮುಖಿಯಾದರು. ಈ ಕೇಸ್‌ ವಿಚಾರಣೆ ಫೆ.25ಕ್ಕೆ ಮುಂದೂಡಿಕೆಯಾಗಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

Read the full story here

Fri, 10 Jan 202504:40 AM IST

ಕರ್ನಾಟಕ News Live: BPL ration card: ಕೇಂದ್ರದ ಮಾನದಂಡದಂತೆ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ 4 ಅಂಶಗಳ ಸೂಚನೆ

  • BPL ration card: ಕೇಂದ್ರ ಸರ್ಕಾರದ ಮಾನದಂಡ ಪ್ರಕಾರವೇ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸುವ ಕೆಲಸ ಮಾಡಬೇಕು. ಅದನ್ನು ಹಂತ ಹಂತವಾಗಿ ನೆರವೇರಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ 4 ಅಂಶಗಳ ಸೂಚನೆ ನೀಡಿದರು. ಅದರ ವಿವರ ಇಲ್ಲಿದೆ.

Read the full story here

Fri, 10 Jan 202502:05 AM IST

ಕರ್ನಾಟಕ News Live: ವಿಜಯೇಂದ್ರ–ಯತ್ನಾಳ್‌ ಬಣಗಳ ನಡುವೆ ಹೆಚ್ಚಿದ ಭಿನ್ನಮತ; ಸಮಸ್ಯೆ ಬಗೆಹರಿಸಲು ಬಿಜೆಪಿ ತಟಸ್ಥ ಬಣ ಆಗ್ರಹ, ಹೊಸ ಬೆಳವಣಿಗೆಯ ನಿರೀಕ್ಷೆ

  • ಕರ್ನಾಟಕ ಬಿಜೆಪಿಯಲ್ಲಿ ಭಿನ್ನಮತ ಭುಗಿಲೆದ್ದಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ–ಯತ್ನಾಳ್‌ ಬಣಗಳ ನಡುವೆ ಹೆಚ್ಚುತ್ತಿರುವ ಭಿನ್ನಮತವು ಪಕ್ಷದ ತಟಸ್ಥ ಬಣಕ್ಕೆ ಸಮಸ್ಯೆ ತಂದೊಡ್ಡಿದೆ. ಭಿನ್ನಮತ ಬಗೆಹರಿಸುವಂತೆ ತಟಸ್ಥ ಬಣವು ರಾಜ್ಯ ಮತ್ತು ದೆಹಲಿಯ ವರಿಷ್ಠರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. (ವರದಿ: ಎಚ್.ಮಾರುತಿ)
Read the full story here

Fri, 10 Jan 202501:22 AM IST

ಕರ್ನಾಟಕ News Live: Karnataka Weather: ರಾಜ್ಯದಲ್ಲಿ ಹೆಚ್ಚಿದ ಚಳಿ, ಇನ್ನೂ 5 ದಿನ ಶೀತ ವಾತಾವರಣ ಮುಂದುವರಿಕೆ; ಈ ಜಿಲ್ಲೆಗಳಲ್ಲಿ ಬೀಸಲಿದೆ ಶೀತಗಾಳಿ ‌‌‌‌

  • ಕರ್ನಾಟಕದಾದ್ಯಂತ ಮೈ ಕೊರೆವ ಚಳಿಯಿಂದಾಗಿ ಜನರು ತತ್ತರಿಸುತ್ತಿದ್ದಾರೆ. ಬಹುತೇಕ ಜಿಲ್ಲೆಗಳಲ್ಲಿ ಶೀತ ವಾತಾವರಣವಿದೆ. ಮುಂದಿನ 5 ದಿನಗಳ ಕಾಲ ಅಂದರೆ ಜನವರಿ 15ವರೆಗೆ ಥಂಡಿ ವಾತಾವರಣ ಮುಂದುವರಿಯಲಿದೆ. ಇದರೊಂದಿಗೆ ಕೆಲವು ಜಿಲ್ಲೆಗಳಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆಯನ್ನೂ ನೀಡಿದೆ ಹವಾಮಾನ ಇಲಾಖೆ. ಇಂದು (ಜನವರಿ 10) ಯಾವ ಜಿಲ್ಲೆಗಳಲ್ಲಿ ಚಳಿ ಹೆಚ್ಚಿರಲಿದೆ ನೋಡೋಣ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter