
Karnataka News Live January 14, 2025 : ಅಜಿತ್, ಅಲೀಂ, ರಮೇಶ ದೊಡ್ಡಪುರ, ಎನ್ಡಿ ತಿಪ್ಪೇಸ್ವಾಮಿ, ರವಿರಾಜ ಗಲಗಲಿ, ರಾಜಲಕ್ಷ್ಮಿ ಸಹಿತ 65 ಪತ್ರಕರ್ತರಿಗೆ ಕೆಯುಡಬ್ಲುಜೆ ಪ್ರಶಸ್ತಿ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 14 Jan 202504:19 PM IST
- Kuwj Awards 2025: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 2025ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಪತ್ರಕರ್ತರನ್ನು ಆಯ್ಕೆ ಮಾಡಿದೆ. ಪಟ್ಟಿ ಹೀಗಿದೆ.
Tue, 14 Jan 202503:42 PM IST
- VV Sagar Resevoir: ಮಧ್ಯ ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿ ಹಳೆಯದಾದ ವಾಣಿ ವಿಲಾಸ ಸಾಗರ ಜಲಾಶಯ ಇತಿಹಾಸದಲ್ಲೇ ಮೂರನೇ ಬಾರಿ ಭರ್ತಿಯಾಗಿದೆ.
Tue, 14 Jan 202511:43 AM IST
- Dakshina Kannada News: ದಕ್ಷಿಣ ಕನ್ನಡದ ಮೂಡಂಬೈಲು ಎನ್ನುವ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಭತ್ತ ಬೆಳೆಯುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.
- ವರದಿ: ಹರೀಶ ಮಾಂಬಾಡಿ, ಮಂಗಳೂರು
Tue, 14 Jan 202510:19 AM IST
- Lakshmi Hebbalkar: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಶೀಘ್ರ ಗುಣಮುಖರಾಗುವಂತೆ ಮಾಜಿ ಸಚಿವ ಹಾಗೂ ಎಂಎಲ್ಸಿ ಸಿ.ಟಿ.ರವಿ ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
Tue, 14 Jan 202506:14 AM IST
- ಬೆಂಗಳೂರಿನಲ್ಲಿ ಓಲಾ, ಉಬರ್, ನಮ್ಮ ಯಾತ್ರಿ ರಿಕ್ಷಾ, ಕಾರುಗಳ ಚಾಲಕರು ಪ್ರತಿದಿನ 1ರಿಂದ 3 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಾರೆ. ಕಷ್ಟಪಟ್ಟು ದುಡಿದರೆ ತಿಂಗಳಿಗೆ 50 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು.
Tue, 14 Jan 202505:39 AM IST
Maha Kumbh Mela: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭ ಮೇಳ ಶುರುವಾಗಿದೆ. ಫೆ.26ರ ತನಕ ನಡೆಯುವ ಈ ಮಹಾ ಕುಂಭ ಮೇಳದಲ್ಲಿ ಗಿನ್ನೆಸ್ ದಾಖಲೆಗೆ ಪ್ರಯತ್ನ ನಡೆಸಿರುವ ಕೆಎಂಎಫ್ ನಂದಿನಿ- ಚಾಯ್ ಪಾಯಿಂಟ್ ಪಾಲುದಾರಿಕೆಯಲ್ಲಿ 1 ಕೋಟಿ ಕಪ್ ಚಹಾ ಮಾರಾಟದ ಗುರಿ ಇಟ್ಟುಕೊಂಡಿವೆ.
Tue, 14 Jan 202504:40 AM IST
Laxmi Hebbalkar Car Accident: ಕಿತ್ತೂರು ಸಮೀಪ ಇಂದು (ಜನವರಿ 14) ಮುಂಜಾನೆ 5 ಗಂಟೆ ಸುಮಾರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಗಾಯಗೊಂಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
Tue, 14 Jan 202512:20 AM IST
Karnataka Weather Today: ಮಕರ ಸಂಕ್ರಾಂತಿಯ ದಿನವಾದ ಇಂದು (ಜನವರಿ 14) ದಕ್ಷಿಣ ಕನ್ನಡ, ಉಡುಪಿ ಸೇರಿ 6 ಜಿಲ್ಲೆಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಬಹುದು ಎಂದು ಕರ್ನಾಟಕ ಹವಾಮಾನ ಮುನ್ಸೂಚನೆ ವರದಿಯಲ್ಲಿ ಭಾರತೀಯ ಹವಾಮಾನ ಇಲಾಖೆ ಸುಳಿವು ನೀಡಿದೆ.