
Karnataka News Live January 15, 2025 : Indian Railways: ಕುಪ್ಪಂ ಯಾರ್ಡ್ನಲ್ಲಿ ಕಾಮಗಾರಿ; ಜನವರಿ ಮೂರನೇ ವಾರದಿಂದ ಕರ್ನಾಟಕದ ಪ್ರಮುಖ ರೈಲುಗಳ ಸಂಚಾರದಲ್ಲಿ ಭಾರೀ ವ್ಯತ್ಯಯ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Wed, 15 Jan 202503:34 PM IST
- Indian Railways: ಕುಪ್ಪಂ ರೈಲ್ವೆ ಯಾರ್ಡ್ನ ಕೆಲಸದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಕುಪ್ಪಂ ಮಾರ್ಗವಾಗಿ ಹೋಗುವ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆಯಾಗಲಿದೆ.
Wed, 15 Jan 202501:03 PM IST
- Leopard at Infosys: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಕಾಣಿಸಿಕೊಂಡು ಭಯ ಹುಟ್ಟಿಸಿದ ನಂತರ ಆರಂಭಗೊಂಡಿದ್ದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಚಿರತೆ ಪತ್ತೆಯಾಗದ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ.
Wed, 15 Jan 202512:46 PM IST
- Koppal Jatre 2025: ಕೊಪ್ಪಳದಲ್ಲಿ ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಹಾರಥೋತ್ಸವವು ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ನೆರವೇರಿತು.
Wed, 15 Jan 202510:28 AM IST
- ಹುಬ್ಬಳ್ಳಿ ಧಾರವಾಡದಲ್ಲಿ ಆರೋಪ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ನಿಗಾ ಇರಿಸುವ ಕ್ರಮವಾಗಿ 45 ಮಂದಿಯನ್ನು ಗಡಿಪಾರು ಮಾಡಿ ಆದೇಶಿಸಿ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಆದೇಶಿಸಿದ್ದಾರೆ.
Wed, 15 Jan 202509:19 AM IST
- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ದ ದಾಖಲಾಗಿರುವ ಪೋಕ್ಸೋ ಪ್ರಕರಣದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ನಡೆದು ಶುಕ್ರವಾರಕ್ಕೆ ಮುಂದೂಡಿಕೆಯಾಯಿತು.
- ವರದಿ: ಎಚ್.ಮಾರುತಿ. ಬೆಂಗಳೂರು
Wed, 15 Jan 202507:16 AM IST
Bengaluru Power Cut: ಬೆಂಗಳೂರಿನ ವಿವಿಧೆಡೆ ನಾಳೆ (ಜನವರಿ 16) ವಿದ್ಯುತ್ ಪೂರೈಕೆ ಇರಲ್ಲ. ಪಾಟರಿ ರಸ್ತೆಯ 66/11ಕೆವಿ ಸ್ಟೇಷನ್ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವ ಕಾರಣ ಪವರ್ ಕಟ್ ಇರಲಿದೆ. ವಿದ್ಯುತ್ ಕಡಿತ ಯಾವೆಲ್ಲ ಪ್ರದೇಶದಲ್ಲಿ ಎಂಬ ವಿವರ ಇಲ್ಲಿದೆ.
Wed, 15 Jan 202505:54 AM IST
MUDA Scam: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜಕೀಯ ಸಂಕಷ್ಟವನ್ನು ತಂದೊಡ್ಡಿರುವ ಮುಡಾ ಸೈಟು ಹಂಚಿಕೆ ಅಕ್ರಮ ಕೇಸ್ನಲ್ಲಿ ಇಂದು ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮುಡಾ ಕೇಸ್ ತನಿಖೆ ಸಿಬಿಐಗೆ ನೀಡಬೇಕೆಂಬ ದಾವೆಯ ವಿಚಾರಣೆಯನ್ನು ಹೈಕೋರ್ಟ್ ಜನವರಿ 27ಕ್ಕೆ ಮುಂದೂಡಿದೆ.
Wed, 15 Jan 202504:50 AM IST
- Cyber Crime Awareness: ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಿಗಳು ಬೇರೆ-ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ. ಹಣಕ್ಕಾಗಿ ವಂಚಕರು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಎಸ್ಎಂಎಸ್ ಸಂದೇಶವೂ ಒಂದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Wed, 15 Jan 202501:57 AM IST
Karnataka weather: ಬೆಂಗಳೂರು ಸುತ್ತಮುತ್ತ ಇಂದು (ಜನವರಿ 15) ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕರ್ನಾಟಕದ ಉಳಿದೆಡೆ ಒಣಹವೆ ಇರಲಿದ್ದು, ಒಳನಾಡು ಪ್ರದೇಶಗಳಲ್ಲಿ ಚಳಿ ಕಾಡಬಹುದು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕ ಹವಾಮಾನದ ವಿವರ ಇಲ್ಲಿದೆ.