
Karnataka News Live January 16, 2025 : ಹಣಕ್ಕಾಗಿ ಚಿಕ್ಕಪ್ಪನಿಂದಲೇ ಅಶ್ಲೀಲ ವೀಡಿಯೋ, ಫೋಟೋ ಬಹಿರಂಗ ಮಾಡುವ ಬೆದರಿಕೆ; ಬೆಂಗಳೂರು ಟೆಕ್ಕಿ ಆತ್ಮಹತ್ಯೆ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 16 Jan 202505:35 PM IST
- ಅಶ್ಲೀಲ ಫೋಟೋ ಹಾಗೂ ವೀಡಿಯೋಗಳನ್ನು ಬಹಿರಂಗಗೊಳಿಸುವಾಗಿ ಬೆದರಿಕೆ ಹಾಕುತ್ತಿದ್ದ ಚಿಕ್ಕಪ್ಪನ ಕಾಟ ತಾಳಲಾರದೇ ಟೆಕ್ಕಿಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Thu, 16 Jan 202504:34 PM IST
- ಬೀದರ್ನಲ್ಲಿ ಶೂಟೌಟ್ ನಡೆಸಿ 93 ಲಕ್ಷ ರೂಪಾಯಿ ದರೋಡೆ ಮಾಡಿದ್ದ ದರೋಡೆಕೋರರು ಹೈದರಾಬಾದ್ನಲ್ಲಿ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರ ನಡುವೆಯೂ ಒಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
Thu, 16 Jan 202502:25 PM IST
Indian Railways: ರೈಲ್ವೆ ನಿರ್ವಹಣೆ ಕಾರ್ಯ ಇರುವುದರಿಂದ ಬೆಂಗಳೂರು, ಮೈಸೂರು, ಶಿವಮೊಗ್ಗ ಸಹಿತ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
Thu, 16 Jan 202501:57 PM IST
- Bangalore Power Cut: ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ವಾರಾಂತ್ಯದಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
Thu, 16 Jan 202512:56 PM IST
- ಬೆಂಗಳೂರಿನ ಉತ್ತರಹಳ್ಳಿ ಕ್ಷೇತ್ರದಿಂದ ಈ ಹಿಂದೆ ನಾಲ್ಕು ಬಾರಿ ಶಾಸಕರಾಗಿದ್ದ ಹಿರಿಯ ಬಿಜೆಪಿ ನಾಯಕ ಎಂ.ಶ್ರೀನಿವಾಸ್ ಗುರುವಾರ ನಿಧನರಾದರು.
Thu, 16 Jan 202512:44 PM IST
- Karnataka CET: ಏಪ್ರಿಲ್ 16 ಮತ್ತು 17ರಂದು ಕರ್ನಾಟಕ ಸಿಇಟಿ ಪರೀಕ್ಷೆ ನಡೆಯಲಿದೆ. ಜನವರಿ 23ರಿಂದ ಫೆಬ್ರುವರಿ 21ರವರೆಗೆ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಸಿಇಟಿ ಅರ್ಜಿಯನ್ನು ಭರ್ತಿ ಮಾಡುವ ಮತ್ತು ದಾಖಲೆಗಳ ಪರಿಶೀಲನೆ ವಿಷಯದಲ್ಲಿ ಈ ಬಾರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
Thu, 16 Jan 202512:21 PM IST
- ಬೀದರ್ನಲ್ಲಿ ಹಾಡಹಗಲೇ ಎಸ್ಬಿಐ ಎಟಿಎಂ ಹಣ ಹಾಕುವ ವೇಳೆ ನಡೆದ ದರೋಡೆ ಪ್ರಕರಣದಲ್ಲಿ ಮಹಾರಾಷ್ಟ್ರದವರ ಕೈವಾಡ ಇರಬೇಕು ಎಂದು ಪೊಲೀಸರು ತನಿಖೆ ಚುರುಕುಗೊಳಿಸಿದಾರೆ.
Thu, 16 Jan 202512:03 PM IST
- Cet exam date 2025 Karnataka: ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ನಡೆಸಲಿದೆ. ಸಿಇಟಿ, ಪಿಜಿಸಿಇಟಿ, ಎಂ.ಫಾರ್ಮಾ ಪ್ರವೇಶ ಪರೀಕ್ಷೆ ದಿನಾಂಕವನ್ನೂ ಪ್ರಕಟಿಸಲಾಗಿದೆ.
Thu, 16 Jan 202511:32 AM IST
- How to apply for ration card in karnataka: ಕರ್ನಾಟಕದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವುದು ಹೇಗೆ, ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕೆ? ಅರ್ಜಿ ಸಲ್ಲಿಸುವ ಸಮಯದಲ್ಲಿ ಯಾವೆಲ್ಲ ದಾಖಲೆಗಳು ಬೇಕು? ಇತ್ಯಾದಿ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿ ನೀಡಲಾಗಿದೆ.
Thu, 16 Jan 202511:21 AM IST
- ಮೈಸೂರು ಜಿಲ್ಲೆ ನಂಜನಗೂಡು ಪಟ್ಟಣದಲ್ಲಿ ದೇವಸ್ಥಾನಕ್ಕೆ ಬಿಟ್ಟಿದ್ದ ಕರುವಿನ ಬಾಲವನ್ನು ಕತ್ತರಿಸಿ ಹಾಕಿರುವ ಅಮಾನವೀಯ ಘಟನೆ ವರದಿಯಾಗಿದೆ.
Thu, 16 Jan 202508:51 AM IST
- ಬೀದರ್ನಲ್ಲಿ ಸಿನಮೀಯ ಶೈಲಿಯಲ್ಲಿ ಡಕಾಯಿತಿ ನಡೆದಿದ್ದು, ಭದ್ರತಾ ಸಿಬ್ಬಂದಿ ಸಹಿತ ಇಬ್ಬರನ್ನು ಗುಂಡಿಕ್ಕಿ ಕೊಂದು ಹಣ ದೋಚಲಾಗಿದೆ.
Thu, 16 Jan 202508:38 AM IST
- ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಹಲವು ಕಡೆಗಳಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಸಾಲದ ವಸೂಲಾತಿ ಕಿರುಕುಳಕ್ಕೆ ಊರು ಬಿಡುತ್ತಿರುವ ಕುರಿತು ದೂರುಗಳು ವ್ಯಾಪಕವಾಗಿವೆ.
Thu, 16 Jan 202507:17 AM IST
Maha Kumbh Mela 2025: ಮಹಾ ಕುಂಭಮೇಳಕ್ಕೆ ಕರ್ನಾಟಕದಿಂದ ಹೊರಟಿವೆ ವಿಶೇಷ ರೈಲುಗಳು. ಫೆ.26 ರ ತನಕ ಉತ್ತರ ಪ್ರದೇಶದ ಪ್ರಯಾಗರಾಜ್ನಲ್ಲಿ ಮಹಾ ಕುಂಭಮೇಳ ನಡೆಯಲಿದ್ದು, ವಿಶೇಷ ರೈಲು ಸಂಚಾರದ ವಿವರ ಹೀಗಿದೆ.
Thu, 16 Jan 202506:33 AM IST
- ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾರ್ಚ್ 24 ರಂದು ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಚಿಸಲಾಗಿದ್ದು, ಇದಕ್ಕಾಗಿ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ, ನಿಯಮಗಳು ಹಾಗೂ ಇತರೆ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Thu, 16 Jan 202506:05 AM IST
Kacharakanahalli Hanuman Statue: ಶ್ರೀ ರಾಮ ಲಕ್ಷ್ಮಣರ ಸಹಿತ ಬೃಹದ್ರೂಪಿ ಹನುಮ ಮೂರ್ತಿ ಸ್ಥಾಪನೆ ಕಾರ್ಯ ಕಾಚರಕನಹಳ್ಳಿ ಶ್ರೀ ಕೋದಂಡರಾಮ ದೇವಸ್ಥಾನದ ಆವರಣದಲ್ಲಿ ಸಂಪನ್ನವಾಗಿದೆ. ಪ್ರತಿಷ್ಠಾಪನಾ ಕಾರ್ಯ ಪ್ರಗತಿಯಲ್ಲಿದ್ದು, ಎರಡು ತಿಂಗಳು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಬೃಹದ್ರೂಪಿ ಹನುಮಾನ್ ಚಾರಿಟಬಲ್ ಟ್ರಸ್ಟ್ ತಿಳಿಸಿದೆ.
Thu, 16 Jan 202505:06 AM IST
- ಸುಪ್ರೀಂ ಕೋರ್ಟ್ನಲ್ಲಿ (Supreme Court of India) ಗುತ್ತಿಗೆ ಆಧಾರದಲ್ಲಿ ಲಾ ಕ್ಲರ್ಕ್ ಕಂ ರಿಸರ್ಚ್ ಅಸೋಸಿಯೇಟ್ (Law Clerk cum-Research Associates) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ವಿವರ, ವಿದ್ಯಾರ್ಹತೆ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಹೆಚ್ಚಿನ ವಿವರ ಇಲ್ಲಿ ನೀಡಲಾಗಿದೆ.
Thu, 16 Jan 202502:34 AM IST
Bengaluru Crime: ಬೆಂಗಳೂರು ನಗರದಲ್ಲಿ ನಗದು ಕಳವು ಮಾಡುತ್ತಿದ್ದ ಓಜಿಕುಪ್ಪಂ ಗ್ಯಾಂಗ್ನ ಮೂವರು ಸದಸ್ಯರ ಬಂಧನವಾಗಿದೆ. ಇನ್ನೊಂದು ಪ್ರಕರಣದಲ್ಲಿ 31 ಮನೆಗಳಲ್ಲಿ ಕಳ್ಳತನ ಮಾಡಿದ್ದ ಮಹಿಳೆ ಅರೆಸ್ಟ್ ಆಗಿರುವುದಾಗಿ ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Thu, 16 Jan 202502:30 AM IST
Namma Metro: ಬೆಂಗಳೂರು ಮೆಟ್ರೋ ಎಐ ತಂತ್ರಜ್ಞಾನವನ್ನು ಸುರಕ್ಷತೆಗೆ ಬಳಸಿಕೊಳ್ಳಲು ಒತ್ತು ನೀಡುತ್ತಿದೆ. ಮಾರ್ಗದುದ್ದಕ್ಕೂ ಇರುವ ವಯಾಡಕ್ಟ್ನಲ್ಲಿನ ಬಿರುಕು ಮಾಹಿತಿ ಪಡೆಯಲು ತಂತ್ರಜ್ಞಾನ ಬಳಕೆಯಾಗಲಿದೆ.
Thu, 16 Jan 202502:03 AM IST
Bengaluru Crime: ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 18 ಆರೋಪಿಗಳ ಬಂಧಿಸಿ ಅವರಿಂದ1 ಕೋಟಿ ರೂ. ಮೌಲ್ಯದ ವಾಹನಗಳ ವಶ ಪಡಿಸಲಾಗಿದೆ. ಇನ್ನೊಂದೆಡೆ, ಡಿಸೆಂಬರ್ ಕಾರ್ಯಾಚರಣೆಯಲ್ಲಿ 85 ಡ್ರಗ್ಸ್ ಪೆಡ್ಲರ್ಗಳ ಬಂಧಿಸಿ ಅವರಿಂದ ಡ್ರಗ್ಸ್ ಜಪ್ತಿ ಮಾಡಲಾಗಿದೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. (ವರದಿ- ಎಚ್. ಮಾರುತಿ, ಬೆಂಗಳೂರು)
Thu, 16 Jan 202501:45 AM IST
- ಬೆಂಗಳೂರಿನ ಲಾಲ್ಬಾಗ್ನಲ್ಲಿ 2025 ರ ಗಣರಾಜ್ಯೋತ್ಸವ ಫಲಪ್ರದರ್ಶನ ಗುರುವಾರ ಆರಂಭವಾಗಲಿದ್ದು, ಹನ್ನೆರಡು ದಿನ ಇರಲಿದೆ. ಈ ಬಾರಿ ಮಹರ್ಷಿ ವಾಲ್ಮೀಕಿ ಅವರು ಪುಷ್ಪಗಳಲ್ಲಿ ಅರಳಿದ್ದಾರೆ.
Thu, 16 Jan 202501:30 AM IST
Karnataka Weather: ಕರ್ನಾಟಕದಲ್ಲಿ ಮತ್ತೆ ಚಳಿಯ ಮುನ್ಸೂಚನೆ ಲಭಿಸಿದೆ. ಕನಿಷ್ಠ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಇಳಿಕೆ ಸಾಧ್ಯತೆ ಇದ್ದು, ರಾಜ್ಯದಲ್ಲಿ ಒಣಹವೆ ಕಾಡಲಿದೆ. ಬೆಂಗಳೂರಲ್ಲಿ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಕರ್ನಾಟಕ ಹವಾಮಾನ ಜನವರಿ 16ರಂದು ಹೀಗಿರಲಿದೆ ಎಂದು ಹವಾಮಾನ ಇಲಾಖೆಯ ಹವಾಮಾನ ಮುನ್ಸೂಚನೆ ತಿಳಿಸಿದೆ.