
Karnataka News Live January 18, 2025 : ಸೂಜಿ ಚಿಕಿತ್ಸೆ: ಕರ್ನಾಟಕ ಅಕ್ಯುಪಂಕ್ಚರ್ ರತ್ನ ಸ್ವೀಕರಿಸಿದ್ದ ಎಂ ಈಶ್ವರ್ಗೆ ಜೀವಮಾನ ಸಾಧನೆ ಪ್ರಶಸ್ತಿ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sat, 18 Jan 202503:06 PM IST
- ಬೆಂಗಳೂರಿನ ಕೃಷಿ ತಂತ್ರಜ್ಞಾನ ಸಂಸ್ಥೆಯ ಅರಕೇರಿ ಸಭಾಭವನದಲ್ಲಿ ಆಯೋಜಿಸಿದ್ದ ಸೂಜಿ ಚಿಕಿತ್ಸಾ ಸ್ನಾತಕೋತ್ತರ ಹಾಗೂ ಪದಗ್ರಹಣ ಸಮಾರಂಭದಲ್ಲಿ ಅಕ್ಯುಪಂಕ್ಚರ್ (ಸೂಜಿ ಚಿಕಿತ್ಸೆ) ತಜ್ಞ ಡಾ. ಎಂ ಈಶ್ವರ್ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
Sat, 18 Jan 202502:32 PM IST
- Mysore University 105th convocation: ಮೈಸೂರು ವಿಶ್ವವಿದ್ಯಾಲಯ 105ನೇ ಘಟಿಕೋತ್ಸವದಲ್ಲಿ 139 ವಿದ್ಯಾರ್ಥಿನಿಯರಿಗೆ ಚಿನ್ನದ ಪದಕ ಪಡೆದಿದ್ದಾರೆ. ಎಂಎಸ್ಸಿ ವಿದ್ಯಾರ್ಥಿನಿ ಭೂಮಿಕಾ ಅವರು 18 ಗೋಲ್ಡ್ ಮೆಡಲ್ಗೆ ಕೊರೊಳೊಡ್ಡಿದ್ದಾರೆ.
Sat, 18 Jan 202501:42 PM IST
- ಆಶಾ ಕಾರ್ಯಕರ್ತೆಯರಿಗೆ ಏಪ್ರಿಲ್ ತಿಂಗಳಿನಿಂದ 10 ಸಾವಿರ ಮುಂಗಡವಾಗಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ರಾಜ್ಯ ಸರ್ಕಾರದಿಂದ ಆಶಾ ಕಾರ್ಯಕರ್ತೆಯರಿಗೆ ಹೆಚ್ಚಿನ ಸಹಕಾರ ನೀಡಲಾಗಿದೆ. ಆದರೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸಿಲ್ಲ ಎಂದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
Sat, 18 Jan 202501:13 PM IST
- Karnataka CET Exam 2025: ಸಿಇಟಿ ಪಠ್ಯಕ್ರಮ/ಸಿಲೇಬಸ್ ಅನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿರುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತಿಳಿಸಿದೆ. ಎಂಜಿನಿಯರಿಂಗ್, ಪಶುವೈದ್ಯಕೀಯ ಸೇರಿದಂತೆ ಇತರ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕಾಗಿ ಏಪ್ರಿಲ್ 16 ಮತ್ತು 17ರಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದೆ.
Sat, 18 Jan 202511:20 AM IST
Aero India 2025: ಬೆಂಗಳೂರು ಎರಡು ವರ್ಷಕ್ಕೆ ಒಮ್ಮೆ ನಡೆಯುವ ಏರ್ ಶೋಗೆ ಸಜ್ಜಾಗಿದೆ. ಏರೋ ಇಂಡಿಯಾ 2025 ಫೆಬ್ರವರಿಯಲ್ಲಿ ನಡೆಯಲಿರುವ ಕಾರಣ, ಯಲಹಂಕ ಸುತ್ತಮುತ್ತ ಮಾಂಸ ಮಾರುವಂತೆ ಇಲ್ಲ. ನಾನ್ ವೆಜ್ ಆಹಾರ ಮಾರಾಟಕ್ಕೂ ನಿರ್ಬಂಧ ಹೇರಲಾಗಿದೆ. ಈ ಕುರಿತು ಬಿಬಿಎಂಪಿ ಮಹತ್ವದ ಆದೇಶ ಹೊರಡಿಸಿದೆ.
Sat, 18 Jan 202506:53 AM IST
KMF Nandini: ನಂದಿನಿ ಬ್ರಾಂಡ್ನ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ಆದರೆ, ಚಿಕ್ಕಬಳ್ಳಾಪುರದಲ್ಲಿ ಹಾಲಿನ ಡೈರಿಗಳಲ್ಲಿ ಕಲಬೆರಕೆಯಾಗುತ್ತಿರುವ ವಿಚಾರ ಗಮನಸೆಳೆದಿದೆ. ಅಲ್ಲಿನ ಸಿಬ್ಬಂದಿಯೇ ಅದರಲ್ಲಿ ಭಾಗಿಯಾಗುತ್ತಿರುವುದು ಕಳವಳಕಾರಿ. ಹಾಲಿನ ಡೈರಿಯಲ್ಲಿ ಹಾಲಿಗೆ ನೀರು ಸೇರಿಸಿದ ವಿಡಿಯೋ ವೈರಲ್ ಆದ ಕೂಡಲೇ, ಚಿಮುಲ್ ಸಿಬ್ಬಂದಿ ವಜಾಗೊಳಿಸಿದೆ.
Sat, 18 Jan 202505:44 AM IST
- ಬೀದರ್ ಜಿಲ್ಲೆಯ ಜಲಸಂಗಿ ಗ್ರಾಮದಲ್ಲಿ ಸ್ಯಾಟಲೈಟ್ ಪೇಲೋಡ್ ಬಿದ್ದಿದೆ. ಇದರಿಂದ ಜನರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಪೊಲೀಸರು ಬಂದ ಬಳಿಕ, ಯಾವುದೇ ಅಪಾಯ ಇಲ್ಲ ಎಂದು ಗ್ರಾಮದ ಜನರು ನಿರಾಳರಾಗಿದ್ದಾರೆ.
Sat, 18 Jan 202505:18 AM IST
Sulya Crime: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಕೋಡಿಮಜಲು ಎಂಬಲ್ಲಿ ಪತ್ನಿಗೆ ಗುಂಡಿಟ್ಟು ಹತ್ಯೆ ಮಾಡಿದ ಬಳಿಕ ಪತಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.
Sat, 18 Jan 202504:36 AM IST
Hunsur ATM Fraud: ಬೀದರ್ ಎಟಿಎಂ ವಾಹನದಿಂದ ಹಣ ದೋಚಿದ ಪ್ರಕರಣದ ಕಾವು ಆರುವ ಮೊದಲೇ ಬ್ಯಾಂಕ್ ದರೋಡೆ ಗಮನಸೆಳೆದಿದೆ. ಇನ್ನೊಂದೆಡೆ, ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಗೆರೆಯಲ್ಲಿ ಎಟಿಎಂಗೆ ಹಣ ತುಂಬಿಸದೇ ವಂಚನೆ ಎಸಗಿದ್ದಾರೆ. ಈ ಸಂಬಂಧ ಇಬ್ಬರ ವಿರುದ್ಧ ಕೇಸ್ ದಾಖಲಾಗಿದೆ.
Sat, 18 Jan 202504:26 AM IST
- ಬೀದರ್ನಲ್ಲಿ ಎಟಿಎಂಗೆ ಹಣ ತುಂಬಿಸುವ ವಾಹನದಿಂದ ಹಣ ದರೋಡೆ ನಡೆದ ಪ್ರಕರಣ ಸಂಬಂಧ, ಈಗಾಗಲೇ ಆರೋಪಿಗಳ ಗುರುತು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಅತ್ತ, ದರೋಡೆಕಾರರ ಗುಂಡಿನ ದಾಳಿಗೆ ಬಲಿಯಾದ ಸಿಬ್ಬಂದಿ ಗಿರಿ ವೆಂಕಟೇಶ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಘೋಷಣೆ ಮಾಡಲಾಗಿದೆ.
Sat, 18 Jan 202503:50 AM IST
Namma Metro timings: ನಮ್ಮ ಮೆಟ್ರೋ ಪ್ರಯಾಣಿಕರ ಗಮನಕ್ಕೆ. ನಾಳೆ (ಜನವರಿ 19) ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೆಜೆಸ್ಟಿಕ್- ಇಂದಿರಾನಗರ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ. ಈ ಕುರಿತ ವಿವರ ಇಲ್ಲಿದೆ.
Sat, 18 Jan 202502:30 AM IST
Melkote Dasoha: ಪ್ರಮುಖ ಧಾರ್ಮಿಕ ಪ್ರವಾಸಿ ತಾಣ ಮಂಡ್ಯದ ಮೇಲುಕೋಟೆಯಲ್ಲಿ ವಾರಾಂತ್ಯ ಮತ್ತು ರಜೆ ದಿನಗಳಂದು ನೀಡುವ ದಾಸೋಹ ಸೇವೆಗೆ ಚಾಲನೆ ಸಿಕ್ಕಿದೆ.
Sat, 18 Jan 202502:21 AM IST
- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ ಸಿನಿಮಾ ಶೈಲಿಯಲ್ಲಿ 2 ದೊಡ್ಡ ದರೋಡೆ ಪ್ರಕರಣಗಳು ಬೆಳಕಿಗೆ ಬಂದಿವೆ. ಜನವರಿ 3ರಂದು ಬಂಟ್ವಾಳ ತಾಲೂಕಿನ ಬೀಡಿ ಉದ್ಯಮಿಯೊಬ್ಬರ ಮನೆಗೆ ಇಡಿ ಹೆಸರಿನಲ್ಲಿ ನಕಲಿ ರೇಡ್ ನಡೆದಿದ್ದರೆ, ಜನವರಿ 17ರಂದು ಉಳ್ಳಾಲದದ ಕೋಟೆಕಾರ್ ಬ್ಯಾಂಕ್ನಲ್ಲಿ ಮತ್ತೊಂದು ದರೋಡೆ ನಡೆದಿದೆ.
Sat, 18 Jan 202501:30 AM IST
- ಕರ್ನಾಟಕದಲ್ಲಿ ಪ್ರಮುಖ ನಾಲ್ಕು ವನ್ಯಜೀವಿಧಾಮಗಳ ಪ್ರದೇಶಗಳು ಇನ್ನು ಮುಂದೆ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ ಬರಲಿವೆ. ಯಾವೆಲ್ಲಾ ಪ್ರದೇಶ ಇದೆ ಇಲ್ಲಿದೆ ವಿವರ.
Sat, 18 Jan 202501:23 AM IST
- ಜನವರಿ 19ರ ಭಾನುವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು, ಚಾಮರಾಜನಗರ ಸೇರಿದಂತೆ 11 ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದಿನ ಹವಾಮಾನ ವರದಿ ಇಲ್ಲಿದೆ.