Karnataka News Live January 2, 2025 : ಧಾರವಾಡಕ್ಕೂ ಪ್ರತ್ಯೇಕ ನಗರಪಾಲಿಕೆ, ಮೈಸೂರಲ್ಲಿ ಅತ್ಯಾಧುನಿಕ ಬಸ್ ನಿಲ್ದಾಣ ನಿರ್ಮಾಣ: ಸಚಿವ ಸಂಪುಟ ತೀರ್ಮಾನಗಳೇನು
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Thu, 02 Jan 202502:55 PM IST
- ಇನ್ನು ಮುಂದೆ ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆ ಎನ್ನುವ ಹಾಗಿಲ್ಲ. ಹುಬ್ಬಳ್ಳಿ ಹಾಗೂ ಧಾರವಾಡ ಪ್ರತ್ಯೇಕ ಆಗಲಿದೆ. ಕರ್ನಾಟಕ ಸಚಿವ ಸಂಪುಟ ಇದಕ್ಕೆ ಅನುಮೋದನೆ ನೀಡಿದೆ.
Thu, 02 Jan 202512:48 PM IST
- ಕರ್ನಾಟಕದಲ್ಲಿ ಸಾರಿಗೆ ಸಂಸ್ಥೆಗಳ ಪ್ರಯಾಣ ದರವನ್ನು ಹೆಚ್ಚಳ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯು ಅನುಮತಿ ನೀಡಿದೆ. ಶೇ.15ರಷ್ಟು ಪ್ರಯಾಣ ದರ ಏರಿಕೆಯಾಗಲಿದೆ
Thu, 02 Jan 202509:56 AM IST
- ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನಲ್ಲಿ ನಡೆದ ಈ ಘಟನೆ ಸಿನಮೀಯವಾಗಿಯೇ ಇದೆ. ಪತಿಯನ್ನು ಕೊಂದು ದೇಹ ತುಂಡು ಮಾಡಿ ಎಸೆದ ಮಹಿಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಇದಕ್ಕೆ ಕಾರಣವೂ ಕೂಡ ಆಸಕ್ತಿದಾಯಕವಾಗಿಯೇ ಇದೆ.
Thu, 02 Jan 202509:29 AM IST
- ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ನಗರಗಳಲ್ಲಿ ತೆಂಗಿನಕಾಯಿ ದರ ದುಬಾರಿಯಾಗಿದೆ. ಎಳನೀರು ಮಾರಾಟಕ್ಕೆ ರೈತರು ಆದ್ಯತೆ ನೀಡಿದ್ದು, ಕುಸಿದ ಇಳುವರಿಯಿಂದಾಗಿ ಕಾಯಿ ದರ ದುಬಾರಿಯಾಗಿದೆ. ಹೋಟೆಲ್, ರೆಸ್ಟೂರೆಂಟ್, ಕೆಟರಿಂಗ್ನವರು ಇದರಿಂದ ಹೆಚ್ಚಿನ ತೊಂದರೆ ಅನುಭವಿಸುತ್ತಿದ್ದಾರೆ.
Thu, 02 Jan 202509:09 AM IST
- KSRTC Bus Fare hike:ನಿರಂತರವಾಗಿ ಆಗುತ್ತಿರುವ ನಷ್ಟದ ಹೊರೆ ಸರಿದೂಗಿಸಿಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ರಸ್ತೆ ಸಾರಿಗೆ ನಿಗಮವೂ ಸೇರಿ ಸಾರಿಗೆ ಬಸ್ಗಳ ಪ್ರಯಾಣ ದರ ಏರಿಕೆ ಸಾಧ್ಯತೆ ಹೆಚ್ಚಿದೆ.
Thu, 02 Jan 202508:25 AM IST
ಬಳ್ಳಾರಿ ನಗರ, ಗ್ರಾಮೀಣ ಪ್ರದೇಶದ ಜತೆಗೆ ಕುರಗೋಡು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಶುಕ್ರವಾರ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ತಿಳಿಸಿದೆ.
Thu, 02 Jan 202507:41 AM IST
- Bengaluru Airport News: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಡಿಸೆಂಬರ್ 2ರಂದು ಹಲವು ವಿಮಾನಗಳ ಹಾರಾಟ ವಿಳಂಬವಾಗಿದೆ. ಆಕಾಶದಲ್ಲಿ ದಟ್ಟ ಮಂಜು ಕವಿದು ಗೋಚರತೆ ಕಡಿಮೆಯಾಗಿರುವುದರಿಂದ ಬೆಳಗ್ಗೆ 5.19 ಗಂಟೆಯಿಂದ 7.40 ಗಂಟೆಗಳ ನಡುವ ಸಾಕಷ್ಟು ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ ಎಂದು ಬಿಐಎಎಲ್ ತಿಳಿಸಿದೆ.
Thu, 02 Jan 202504:38 AM IST
Ration Card Corrections: ಕರ್ನಾಟಕದಲ್ಲಿ ಪಡಿತರ ಚೀಟಿದಾರರಿಗೆ ಆಹಾರ ಇಲಾಖೆ ರೇಷನ್ ಕಾರ್ಡ್ ಕರೆಕ್ಷನ್ಗೆ ಅವಕಾಶ ನೀಡಿದೆ. ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಜನವರಿ 31ರ ತನಕ ಕಾಲಾವಕಾಶ ನೀಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
Thu, 02 Jan 202503:00 AM IST
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಬೆಂಗಳೂರಿನ ಶಾಂತಿನಗರದಲ್ಲಿ ಉದ್ಯೋಗ ಮೇಳವನ್ನು 2025ರ ಜನವರಿ 7 ಹಾಗೂ 8 ರಂದು ಹಮ್ಮಿಕೊಂಡಿದೆ. ಇದರ ವಿವರ ಇಲ್ಲಿದೆ.
Thu, 02 Jan 202502:55 AM IST
ಕರ್ನಾಟಕದಲ್ಲಿ ಬಸ್ ನಿಲ್ದಾಣ ಮತ್ತು ಬಸ್ಗಳಲ್ಲಿ ದೃಷ್ಟಿದೋಷ ಹೊಂದಿರುವ ಪ್ರಯಾಣಿಕರಿಗೆ ಆಡಿಯೋ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ತಾಕೀತು ಮಾಡಿದೆ. (ವರದಿ-ಎಚ್. ಮಾರುತಿ, ಬೆಂಗಳೂರು)
Thu, 02 Jan 202502:00 AM IST
ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿದರೆ ಹೊಸ ಪ್ರಯೋಗ ಮಾಡಬಹುದು ಎನ್ನುವುದಕ್ಕೆ ದಕ್ಷಿಣ ಕನ್ನಡದ ಹೈಸ್ಕೂಲ್ ವಿದ್ಯಾರ್ಥಿಯ ಈ ಯಶಸ್ವಿ ಪ್ರಯೋಗವೇ ಉದಾಹರಣೆ.
ವರದಿ: ಹರೀಶ ಮಾಂಬಾಡಿ,ಮಂಗಳೂರು
Thu, 02 Jan 202501:30 AM IST
- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025ನೇ ಸಾಲಿನ ಆಯವ್ಯಯ ಮಂಡನೆಗೆ ಸಿದ್ದತೆಯನ್ನು ಆರಂಭಿಸಿದ್ದಾರೆ. ಸದ್ಯದಲ್ಲೇ ಇಲಾಖಾವಾರು ಬೇಡಿಕೆಗಳ ಸಭೆ ನಡೆಸಿ ಬಜೆಟ್ ದಿನಾಂಕ ಹಾಗೂ ಮೊತ್ತವನ್ನು ಅಂತಿಮಗೊಳಿಸುವರು
- ವರದಿ: ಎಚ್.ಮಾರುತಿ, ಬೆಂಗಳೂರು
Thu, 02 Jan 202501:05 AM IST
ಬೆಂಗಳೂರಲ್ಲಿ ಹೊಸ ವರ್ಷಾಚರಣೆ ಬಳಿಕ ವಿಶೇಷವಾಗಿ ಎಂಜಿ ರಸ್ತೆ ಸುತ್ತಮುತ್ತ 15 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ ಎಂದು ಸ್ಥಳೀಯಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ನಮ್ಮ ಮೆಟ್ರೋಗೆ 2 ಕೋಟಿ 7 ಲಕ್ಷ ರೂ ಆದಾಯ ಬಂದಿದೆ. ಇನ್ನೊಂದೆಡೆ, ಮದ್ಯಪಾನ ಮಾಡಿ ವಾಹನ ಚಾಲನೆ, 513 ಪ್ರಕರಣ ದಾಖಲಾಗಿದೆ. (ವರದಿ- ಎಚ್. ಮಾರುತಿ, ಬೆಂಗಳೂರು)
Thu, 02 Jan 202512:36 AM IST
Weather Update: ಕರ್ನಾಟಕದಲ್ಲಿ ಇಂದು (ಜನವರಿ 2) ಚಳಿಗಾಲದ ಸಹಜ ಚಳಿ ಮತ್ತು ಒಣ ಹವೆ ಇರಲಿದೆ. ಭಾರತೀಯ ಹವಾಮಾನ ಇಲಾಖೆ ವರದಿ ಪ್ರಕಾರ, ಬಾಗಲಕೋಟೆ, ಹಾವೇರಿ, ಹಿರಿಯೂರು ಸುತ್ತಮುತ್ತ ಕನಿಷ್ಠ ತಾಪಮಾನ ದಾಖಲಾಗಿದ್ದು, ವಿವಿಧೆಡೆ ಚಳಿಗೆ ಜನ ನಡುಕ ಅನುಭವಿಸಿದ್ದಾರೆ. ಬೆಂಗಳೂರಲ್ಲಿ ಸಹಜ ಚಳಿ, ಮುಂಜಾನೆ ಮಂಜು ನಿರೀಕ್ಷಿಸಬಹುದು.