
Karnataka News Live January 21, 2025 : Mysore News: ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿನಾಯಿಗಳಿಗೆ ಆಹಾರ ನಿಷೇಧ ವಿವಾದ; ಕುಲಸಚಿವೆ ಶೈಲಜಾ ಹಠಾತ್ ವರ್ಗಾವಣೆ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 21 Jan 202504:13 PM IST
- ಮೈಸೂರಿನ ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಬೀದಿ ನಾಯಿಗಳಿಗೆ ಆಹಾರ ಕೊಡುವುದನ್ನು ನಿಷೇಧಿಸಿದ ವಿವಾದದ ಬೆನ್ನಲ್ಲೇ ಮೈಸೂರು ವಿವಿ ಕುಲಸಚಿವರಾಗಿದ್ದ ವಿ.ಆರ್.ಶೈಲಜಾ ಅವರನ್ನು ವರ್ಗ ಮಾಡಲಾಗಿದೆ.
Tue, 21 Jan 202503:52 PM IST
- Indian Railways: ಮೈಸೂರು- ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದ್ದು, ಹಾಸನದ ಬಾಗೇಶಪುರ ಬಳಿ ಕಾಮಗಾರಿ ಇರುವುದರಿಂದ ಸಂಚಾರ ವಿಳಂಬವಾಗಲಿದೆ.
Tue, 21 Jan 202502:34 PM IST
- ಕಾಡಿನ ಕಥೆಗಳು: ಕರ್ನಾಟಕದಲ್ಲಿ ಅಂದಾಜು 2500 ಚಿರತೆಗಳಿರಬಹುದು. ಬೆಂಗಳೂರು, ಮೈಸೂರು, ತುಮಕೂರು ಸಹಿತ ಹಲವು ಕಡೆ ಚಿರತೆ ಭಯವಿದೆ. ಭಯ ಯಾರಿಗೆ ಚಿರತೆಗೋ, ಮನುಷ್ಯನಿಗೋ; ಅವುಗಳ ಪ್ರದೇಶದಲ್ಲೇ ಇರುವ ನಮ್ಮ ನಡವಳಿಕೆ ಹೀಗಿದ್ದರೆ ಚೆನ್ನ ಎನ್ನುವುದು ಈ ವಾರದ ಕಾಡಿನ ಕಥೆಗಳ ಕಥನ.
Tue, 21 Jan 202501:26 PM IST
- ಬೆಂಗಳೂರು ಜಲಮಂಡಳಿಯಿಂದ ಪೈಪ್ಲೈನ್ ದುರಸ್ಥಿ ಕಾರ್ಯ ಇರುವುದರಿಂದ ಗುರುವಾರದಂದು ಬೆಂಗಳೂರಿನ ಹಲವು ಬಡಾವಣೆಗಳ ನೀರು ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ.
Tue, 21 Jan 202512:50 PM IST
- ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ನಡೆದಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Tue, 21 Jan 202512:25 PM IST
- ತುಮಕೂರಿನಲ್ಲಿ ಸಿದ್ದಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿ ಅವರ ಆರನೇ ಪುಣ್ಯಸ್ಮರಣೆ ಕಾರ್ಯಕ್ರಮ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು.
- ವರದಿ: ಈಶ್ವರ್ ತುಮಕೂರು
Tue, 21 Jan 202510:33 AM IST
- ಬೆಳಗಾವಿಯಲ್ಲಿ ಮಂಗಳವಾರ ಗಾಂಧಿ ಸ್ಮರಣೆ. ಶತಮಾನದ ಹಿಂದೆ ಬೆಳಗಾವಿಗೆ ಗಾಂಧೀಜೀ ಬಂದು ಕಾಂಗ್ರೆಸ್ ಸಮಾವೇಶ ನಡೆಸಿದ ನೆನಪಿನ ಕಾರ್ಯಕ್ರಮ, ಅವರ ಪುತ್ಥಳಿ ಅನಾವರಣವೂ ನಡೆಯಿತು.
Tue, 21 Jan 202508:28 AM IST
- ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ತಲಪಾಡಿಕೆ.ಸಿ.ರೋಡ್ ಶಾಖೆಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಲಾಗಿದೆ.
Tue, 21 Jan 202507:50 AM IST
Bengaluru Crime: ಬೆಂಗಳೂರು ಬಸವನಗುಡಿಯ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ನಿಂದ ಹಾಲ್ಮಾರ್ಕ್ಗೆ ಕಳುಹಿಸಿದ್ದ ಚಿನ್ನಾಭರಣ ಕಳುವಾಗಿದೆ ಎಂದು ಚಿನ್ನದ ಮಳಿಗೆ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದಾರೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆದಿದೆ.
Tue, 21 Jan 202507:02 AM IST
ಈ ಶಿಲ್ಪ ಕಲಾ ಇತಿಹಾಸಕಾರರಿಗೆ ಒಂದು ಅತ್ತ್ಯುತ್ತಮ ಪಾಠದ
ಉದಾಹರಣೆಯಾಗಿದೆ. ಕೇವಲ ಕಲಾಶೈಲಿಯ ಆಧಾರದ ಮೇಲೆ
ಕಾಲನಿರ್ಣಯ ಮಾಡುವುದು ಉಚಿತವಲ್ಲ ಎಂಬುದಕ್ಕೆ ಈ ಶಿಲ್ಪ ಸಾಕ್ಷಿಯಾಗಿದೆ.ಈ ಶಿಲ್ಪವನ್ನು ಅದರ ಪೀಠದಿಂದ ಬೇರ್ಪಡಿಸಿದರೆ, ಪೀಠದ
ಮೇಲ್ಭಾಗದಲ್ಲಿ ಎರಡು ಸಾಲಿನ ಒಂದು ಚಿಕ್ಕ ಶಾಸನವಿದೆ. (ವರದಿ: ಹರೀಶ್ ಮಾಂಬಾಡಿ)
Tue, 21 Jan 202506:54 AM IST
- ಕೆಲಸ ಮಾಡುವ ವಿಚಾರವಾಗಿ ಮೂವರು ಕಾರ್ಮಿಕರ ಕಾಲುಗಳನ್ನು ಕಟ್ಟಿ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ವಿಜಯಪುರದಲ್ಲಿ ನಡೆದಿದೆ. ಸದ್ಯ ಹಲ್ಲೆಗೊಳಗಾದ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಬ್ಬರು ಹಲ್ಲೆ ಆರೋಪಿಗಳನ್ನು ಬಂಧಿಸಲಾಗಿದೆ.
Tue, 21 Jan 202505:50 AM IST
- JEE Main 2025 Dress Code: ಸರಳ ಮತ್ತು ಕಂಫರ್ಟ್ ಆಗಿರುವ ಉಡುಪು ಧರಿಸಿರಬೇಕು. ಭದ್ರತಾ ತಪಾಸಣೆಗೆ ಅನುಕೂಲವಾಗುವಂತಹ ಉಡುಗೆ ತೊಟ್ಟಿರಬೇಕು. ಅಭ್ಯರ್ಥಿಗಳು ಲೋಹದ ವಸ್ತುಗಳು, ಪರಿಕರಗಳನ್ನು ಧರಿಸರಬಾರದು. ಏಕೆಂದರೆ, ಇವು ಭದ್ರತಾ ತಪಾಸಣೆಗೆ ಅಡ್ಡಿಪಡಿಸುತ್ತದೆ. ಆಯಾ ಋತುವಿಗೆ ಅನುಗುಣವಾದ, ಹಗುರವಾದ ಉಡುಪು ಧರಿಸಲು ವಿದ್ಯಾರ್ಥಿಗಳು ಆದ್ಯತೆ ನೀಡಿರಬೇಕು.
Tue, 21 Jan 202505:30 AM IST
- ಫೆಬ್ರುವರಿ 10ರಿಂದ 14ರವರೆಗೆ ಬೆಂಗಳೂರಿನ ಹೊರವಲಯದ ಯಲಹಂಕದಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯಲಿದೆ. ಹೀಗಾಗಿ ಫೆಬ್ರುವರಿ 5ರಿಂದ 14ರವರೆಗೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದ ವಿಮಾನ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
Tue, 21 Jan 202505:11 AM IST
- ಬಿಎಚ್ಇಎಲ್ ಎಂಜಿನಿಯರ್ ಟ್ರೇನಿ ಮತ್ತು ಸೂಪರ್ವೈಸರ್ ಟ್ರೇನಿ(ಟೆಕ್) ನೇಮಕ: ಫೆಬ್ರವರಿ 1ರಿಂದ ಬಿಎಚ್ಇಎಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 28 ಕೊನೆಯ ದಿನಾಂಕವಾಗಿದೆ. ಒಟ್ಟು 400 ಹುದ್ದೆಗಳಿಗೆ ಎಂಜಿನಿಯರಿಂಗ್ ಪದವಿ ಮತ್ತು ಡಿಪ್ಲೊಮಾ ವಿದ್ಯಾರ್ಹತೆ ಬಯಸಲಾಗಿದೆ.
Tue, 21 Jan 202505:04 AM IST
- ಕರ್ನಾಟಕ ರಾಜಕೀಯದಲ್ಲಿ ಸಕ್ರಿಯವಾಗಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಅಧ್ಯಕ್ಷಗಿರಿಗಾಗಿ ಬೀದಿಜಗಳ ಮಾಡಲು ಆರಂಭಿಸಿವೆ. ಮೂರು ಪಕ್ಷಗಳಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ಆರಂಭವಾಗಿದೆ. ಆರಂಭದಲ್ಲಿ ಗುಟ್ಟಾಗಿ ನಡೆಯುತ್ತಿದ್ದ ಒಳಜಗಳಗಳು ಇದೀಗ ಬೀದಿರಂಪವಾಗಿದೆ. ಈ ಕುರಿತ ಒಂದು ವಿಶ್ಲೇಷಣೆ. (ವರದಿ: ಎಚ್.ಮಾರುತಿ).
Tue, 21 Jan 202503:12 AM IST
- ರಾಮನಗರ ತಾಲೂಕಿನಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯೊಂದರ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ಸಾಲ ಮರು ಪಾವತಿ ಮಾಡುವಂತೆ ಬಂಧಿತ ಆರೋಪಿ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದ ಆರೋಪ ಕೇಳಿ ಬಂದಿತ್ತು. 11 ವರ್ಷದ ಬಾಲಕನಿಗೆ 70 ವರ್ಷದ ವೃದ್ಧನೊರ್ವ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
Tue, 21 Jan 202502:34 AM IST
- ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಜನವರಿ 21ರ ಮಂಗಳವಾರ ವಿದ್ಯುತ್ ವ್ಯತ್ಯಯವಾಗಲಿದೆ. ಯಾವೆಲ್ಲಾ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ, ಸಮಯ ಹಾಗೂ ವಿದ್ಯುತ್ ವ್ಯತ್ಯಯಕ್ಕೆ ಕಾರಣವೇನು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
Tue, 21 Jan 202501:38 AM IST
- ಬೆಂಗಳೂರಿನಲ್ಲಿಂದು ಮುಂಜಾನೆಯಿಂದಲೇ ಮೋಡ ಇಲ್ಲದ ಆಕಾಶವಿದೆ, ಕೆಲವು ಪ್ರದೇಶಗಳಲ್ಲಿ ಮಂಜು ಅಥವಾ ದಟ್ಟ ಮಂಜಿನ ಪರಿಸ್ಥಿತಿ ಇರಲಿದೆ. ರಾಜಧಾನಿ ಸೇರಿದಂತೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಜನವರಿ 21ರ ಮಂಗಳವಾರ ಒಣ ಹವೆ ಇರಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮಾಹಿತಿ ನೀಡಿದೆ.