Karnataka News Live January 3, 2025 : ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು
ಕನ್ನಡ ಸುದ್ದಿ  /  ಕರ್ನಾಟಕ  /  Karnataka News Live January 3, 2025 : ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು

ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು

Karnataka News Live January 3, 2025 : ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು

01:47 PM ISTJan 03, 2025 07:17 PM HT Kannada Desk
  • twitter
  • Share on Facebook
01:47 PM IST

ಎಚ್‌ಟಿ ಕನ್ನಡ ಲೈವ್ ಅಪ್‌ಡೇಟ್ಸ್‌ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್‌, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.

Fri, 03 Jan 202501:47 PM IST

ಕರ್ನಾಟಕ News Live: ಬೆಂಗಳೂರು: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ, ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಒಲವು

  • Namma Metro Fare Hike: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ಪ್ರಯಾಣ ದರ ಏರಿಕೆ ಭಾನುವಾರ (ಜನವರಿ 5) ದಿಂದಲೇ ಜಾರಿಗೆ ಬರುತ್ತಿದೆ. ಇದರ ಬೆನ್ನಿಗೆ ಬೆಂಗಳೂರಿನ ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಪ್ರಸ್ತಾವನೆ ಗಮನಸೆಳೆದಿದೆ. ಶೇ 15 ರಿಂದ 25ರ ತನಕ ಪ್ರಯಾಣ ದರ ಹೆಚ್ಚಳಕ್ಕೆ ಬಿಎಂಆರ್‌ಸಿಎಲ್ ಒಲವು ತೋರಿಸಿದ್ದಾಗಿ ಮೂಲಗಳು ತಿಳಿಸಿವೆ.

Read the full story here

Fri, 03 Jan 202512:44 PM IST

ಕರ್ನಾಟಕ News Live: ಆನ್‌ಲೈನ್‌ ಮೋಸದ ಹೊಸ ರೂಪಗಳು: ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಹಂಚಿಕೊಂಡ ಅನುಭವ ನಿಮಗೂ ಎಚ್ಚರಿಕೆಯ ಪಾಠ

  • ಆನ್‌ಲೈನ್‌ ವಂಚನೆಯು ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಆನ್‌ಲೈನ್‌ ಬೆದರಿಕೆ, ಹ್ಯಾಕಿಂಗ್‌ ಮಾತ್ರವಲ್ಲದೆ ಪರಿಚಿತರ ಸೋಗಿನಲ್ಲಿ ಅಪರಿಚಿತರು ನಮ್ಮ ಖಾತೆಯಿಂದ ಹಣ ಕದಿಯಲು ಪ್ರಯತ್ನಿಸುತ್ತಾರೆ. ಡಿಎಸ್ ಚೌಗಲೆ, ಪುರುಷೋತ್ತಮ ಬಿಳಿಮಲೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ಆನ್‌ಲೈನ್‌ ಮೋಸದ ವಿವರಗಳನ್ನು ಪರಿಶೀಲಿಸಿ.
Read the full story here

Fri, 03 Jan 202512:36 PM IST

ಕರ್ನಾಟಕ News Live: ನೀರಿನ ದರ ಶೇ 40 ಹೆಚ್ಚಳದ ಸುಳಿವು ನೀಡಿದ ಬೆಂಗಳೂರು ಜಲ ಮಂಡಳಿ ಅಧ್ಯಕ್ಷ, 10 ವರ್ಷಗಳ ಬಳಿಕ ಶುಲ್ಕ ಏರಿಕೆಗೆ ಹೆಚ್ಚಿದ ಒತ್ತಡ

  • BWSSB bill: ಕಳೆದ 10 ವರ್ಷಗಳಲ್ಲಿ ನೀರಿನ ದರ ಪರಿಷ್ಕರಣೆ ಆಗಿಲ್ಲ ಎಂದು ಹೇಳಿರುವ ಬೆಂಗಳೂರು ಜಲ ಮಂಡಳಿ, ಶೀಘ್ರವೇ ನೀರಿನ ದರ ಶೇ 40 ಹೆಚ್ಚಳದ ಸುಳಿವು ನೀಡಿದೆ. ಶುಲ್ಕ ಏರಿಕೆಗೆ ಒತ್ತಡ ಹೆಚ್ಚಾಗಿದ್ದು, ಈ ತಿಂಗಳ ಎರಡನೇ ವಾರ ಪರಿಷ್ಕರಣೆ ಅಂತಿಮವಾಗಲಿದೆ.

Read the full story here

Fri, 03 Jan 202511:11 AM IST

ಕರ್ನಾಟಕ News Live: ಕೆಎಸ್‌ಆರ್‌ಟಿಸಿ ಹೊಸ ಟಿಕೆಟ್‌ ದರ ಭಾನುವಾರದಿಂದ ಜಾರಿ; ಬೆಂಗಳೂರಿನಿಂದ ವಿವಿಧ ನಗರಗಳಿಗೆ ಬಸ್‌ ಪ್ರಯಾಣ ಎಷ್ಟು ದುಬಾರಿಯಾಗಬಹುದು ನೋಡಿ

  • KSRTC Fare Hike: ನಾಲ್ಕು ವರ್ಷಗಳ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಟಿಕೆಟ್‌ ದರ ಏರಿಕೆಯಾಗುತ್ತಿದೆ. ಶೇಕಡ 15ರಷ್ಟು ಬಸ್ ಪ್ರಯಾಣ ದರ ಏರಿಕೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಕೆಎಸ್‌ಆರ್‌ಟಿಸಿ ಹೊಸ ದರ ಭಾನುವಾರದಿಂದ ಜಾರಿಯಾಗುತ್ತಿದ್ದು, ಬೆಂಗಳೂರಿನಿಂದ ವಿವಿಧೆಡೆಗೆ ಪರಿಷ್ಕೃತ ದರ ಎಷ್ಟಿರಬಹುದು ಎಂಬ ವಿವರ ಇಲ್ಲಿದೆ.

Read the full story here

Fri, 03 Jan 202510:21 AM IST

ಕರ್ನಾಟಕ News Live: ಜನವರಿ 5 ರಿಂದ ಕೆಎಸ್‌ಆರ್‌ಟಿಸಿ ಬಸ್‌ ದರ ಏರಿಕೆ; ಖರ್ಚು ವೆಚ್ಚ, ನೆರೆ ರಾಜ್ಯಗಳ ದರ ವಿವರ ನೀಡಿದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು

  • KSRTC Bus Fare: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಪರಿಷ್ಕೃತ ಹೊಸ ಬಸ್ ಪ್ರಯಾಣ ದರ ಜನವರಿ 5 ರಿಂದ ಜಾರಿಗೆ ಬರಲಿದೆ. ಈ ಬಸ್ ಪ್ರಯಾಣ ದರ ಏರಿಕೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸಮರ್ಥಸಿಕೊಂಡಿವೆ. ಖರ್ಚು ವೆಚ್ಚಗಳ ವಿವರ ಮತ್ತು ನೆರೆ ರಾಜ್ಯಗಳ ಸಾರಿಗೆ ದರವನ್ನೂ ನೀಡಿವೆ. ಆ ವಿವರ ಇಲ್ಲಿದೆ.

Read the full story here

Fri, 03 Jan 202510:19 AM IST

ಕರ್ನಾಟಕ News Live: ಮಧುಗಿರಿ ಉಪವಿಭಾಗದ ಡಿವೈಎಸ್‌ಪಿ ಕಚೇರಿಯಲ್ಲಿ ರಾಸಲೀಲೆ; ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ DYSP ರಾಮಚಂದ್ರಪ್ಪ

  • ಮಧುಗಿರಿ ಡಿವೈಎಸ್‌ಪಿ ರಾಮಚಂದ್ರಪ್ಪ ಕಚೇರಿಯಲ್ಲೇ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದಾರೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಸಿಕ್ಕಿದೆ. ರಾಜ್ಯದ ಗೃಹ ಸಚಿವ ಡಾ. ಪರಮೇಶ್ವರ್ ತವರು ಜಿಲ್ಲೆ ತುಮಕೂರಿನಲ್ಲಿ ಈ ಘಟನೆ ಜರುಗಿದೆ. 

Read the full story here

Fri, 03 Jan 202509:49 AM IST

ಕರ್ನಾಟಕ News Live: ತುಮಕೂರು: ನೆರವಿಗೆ ಬಾರದ ಬಂಧುಗಳು; ತಂದೆಯ ಅಂತ್ಯ ಸಂಸ್ಕಾರ ನೆರೆವೇರಿಸಿದ 6ನೇ ತರಗತಿಯ ಬಾಲಕಿ, ಮನಕಲಕಿದ ಘಟನೆ

  • ತುಮಕೂರು ತಾಲೂಕು ಪೆಮ್ಮನಹಳ್ಳಿ ಗ್ರಾಮದಲ್ಲಿ ಬಂಧುಗಳು ನೆರವಿಗೆ ಬಾರದ ಕಾರಣ 6ನೇ ತರಗತಿಯ ಬಾಲಕಿ ತನ್ನ ತಂದೆಯ ಅಂತ್ಯಸಂಸ್ಕಾರವನ್ನು ತಾನೇ ನಿರ್ವಹಿಸಿದ ಮನಕಲಕುವ ಘಟನೆ ಗಮನಸೆಳೆದಿದೆ. (ವರದಿ- ಈಶ್ವರ್, ತುಮಕೂರು)

Read the full story here

Fri, 03 Jan 202507:46 AM IST

ಕರ್ನಾಟಕ News Live: ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಕ್ಕೆ ಬೆಸ್ಕಾಂ ಕಾರ್ಯಾಚರಣೆ ಶುರು, 3 ವರ್ಷದಲ್ಲಿ ಹೆಚ್ಚಿದ ಕರೆಂಟ್ ಕಳವು ಪ್ರಕರಣ

  • ಬೆಂಗಳೂರಿನ ಬಾಬುಸಾಬ್ ಪಾಳ್ಯದಲ್ಲಿ ಅಕ್ರಮ ಕಟ್ಟಡ ಕುಸಿದು ಬಿದ್ದು 9 ಕಾರ್ಮಿಕರು ಮೃತಪಟ್ಟ ಪ್ರಕರಣದಲ್ಲಿ ಲೋಕಾಯುಕ್ತರ ನಿರ್ದೇಶನ ಉಲ್ಲೇಖಿಸಿದ ಬೆಸ್ಕಾಂ ಸುತ್ತೋಲೆ, ಅಕ್ರಮ ಕಟ್ಟಡಗಳ ವಿದ್ಯುತ್ ಸಂಪರ್ಕ ಕಡಿತಗೊಳಿಸುವ ಸೂಚನೆ ನೀಡಿದೆ. ಇನ್ನೊಂದೆಡೆ, 3 ವರ್ಷದ ಅವಧಿಯಲ್ಲಿ ಕರೆಂಟ್ ಕಳವು ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಲ್ಲಿದೆ ವಿವರ.

Read the full story here

Fri, 03 Jan 202502:30 AM IST

ಕರ್ನಾಟಕ News Live: ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ರಾತ್ರಿ ವೇಳೆ ಹೊಸ ಬಸ್‌ ಸೇವೆ ಇಲ್ಲ, ಖಾಸಗಿ ವಾಹನಕ್ಕೂ ಅವಕಾಶವಿಲ್ಲ, ಈಗಿರುವ ಸೌಲಭ್ಯ ಮಾತ್ರ ಮುಂದುವರಿಕೆ

  • ಬಂಡೀಪುರ ಮಾರ್ಗವಾಗಿ ಕೇರಳಕ್ಕೆ ಸಂಚರಿಸುವ ವಾಹನ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆಯಿಲ್ಲ. ಹೆಚ್ಚುವರಿ ಬಸ್‌ ಸೇವೆಯೂ ಇರುವುದಿಲ್ಲ ಎನ್ನುವುದು ಸಚಿವ ಈಶ್ವರ ಖಂಡ್ರೆ ನೀಡಿರುವ ವಿವರಣೆ.

Read the full story here

Fri, 03 Jan 202501:30 AM IST

ಕರ್ನಾಟಕ News Live: ಕರ್ನಾಟಕ ಹವಾಮಾನ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ದಟ್ಟ ಮಂಜು ಮುಸುಕಿದ ವಾತಾವರಣ, ತೀವ್ರ ಚಳಿಗೆ ಜನ ತತ್ತರ

  • ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಡಿಸೆಂಬರ್ 3ರ ಶುಕ್ರವಾರ ಮುಂಜಾನೆ ದಟ್ಟ ಮಂಜು ಆವರಿಸಿದ್ದು, ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ. ತೀವ್ರ ಚಳಿಯಿಂದಾಗಿ ಜನರು ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಹವಾಮಾನದ ವರದಿ ಇಲ್ಲಿದೆ.
Read the full story here

ಹಂಚಿಕೊಳ್ಳಲು ಲೇಖನಗಳು

  • twitter