Karnataka News Live January 5, 2025 : Na. D'Souza Passes Away: ಹಿರಿಯ ಸಾಹಿತಿ ನಾ ಡಿಸೋಜಾ ನಿಧನ; ಖಚಿತಪಡಿಸಿದ ಪುತ್ರ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Sun, 05 Jan 202504:19 PM IST
- ವಯೋಸಹಜ ಕಾಯಿಲೆಯಿಂದ ಕರ್ನಾಟಕದ ಹಿರಿಯ ಸಾಹಿತಿ ನಾ ಡಿಸೋಜಾ ಅವರು ಕೊನೆಯುಸಿರೆಳೆದಿದ್ದಾರೆ. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
Sun, 05 Jan 202512:40 PM IST
- ಬೆಂಗಳೂರು ಉಪನಗರ ರೈಲ್ವೆ ಯೋಜನೆ ಕಾಮಗಾರಿ ತ್ವರಿತಗೊಂಡಿದ್ದು ಎರಡನೇ ಹಂತದ ಗುತ್ತಿಗೆಯನ್ನು ಹಂಚಿಕೆ ಮಾಡಲಾಗಿದ್ದು, ಎಂಟು ನಿಲ್ದಾಣ ನಿರ್ಮಿಸಲಾಗುತ್ತದೆ.
Sun, 05 Jan 202510:30 AM IST
- ಕರ್ನಾಟಕ ಸರ್ಕಾರವು ಸಾರಿಗೆ ದರವನ್ನು ಏರಿಕೆ ಮಾಡಿದ್ದು ಭಾನುವಾರದಿಂದಲೇ ಇದು ಜಾರಿಗೆ ಬಂದಿದೆ. ಹುಬ್ಬಳ್ಳಿಯಿಂದ ಪ್ರಮುಖ ನಗರಗಳ ಪ್ರಯಾಣ ದರದ ವಿವರ ಇಲ್ಲಿದೆ.
Sun, 05 Jan 202507:57 AM IST
ಯುವ ಲೇಖಕಿ ರಮ್ಯಾ ನಿತ್ಯಾನಂದ ಶೆಟ್ಟಿ ಬರೆದಿರುವ ಕಂಬಳಲೋಕ ಎನ್ನುವ ಕುರಿತು ತುಳುನಾಡಿನ ಸಂಸ್ಕೃತಿ ಹಾಗೂ ಸಾಧಕರ ಸಾಧನೆಯನ್ನು ಅನಾವರಣಗೊಳಿಸಿದೆ.
ಹರೀಶ ಮಾಂಬಾಡಿ, ಮಂಗಳೂರು
Sun, 05 Jan 202505:46 AM IST
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಳೆದ ವರ್ಷ ನಡೆಸಿದ್ದ ಸಹಾಯಕ ಪ್ರಾಧ್ಯಾಪಕರ ಕೆಸೆಟ್ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಪ್ರಕಟಿಸಿದೆ. ವೆಬ್ಸೈಟ್ನಲ್ಲಿ ಫಲಿತಾಂಶ ವೀಕ್ಷಿಸಬಹುದು.
Sun, 05 Jan 202504:36 AM IST
- ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ವಾಹನಗಳಿಗೆ ಎಚ್ಎಸ್ಆರ್ಪಿ ಸಂಖ್ಯೆ ಅಳವಡಿಸಲು ಇದ್ದ ಗಡುವಿನ ದಿನಾಂಕವನ್ನು 2025ರ ಜನವರಿ 31 ರವರೆಗೆ ವಿಸ್ತರಣೆ ಮಾಡಿದೆ.
- ವರದಿ: ಎಚ್.ಮಾರುತಿ, ಬೆಂಗಳೂರು
Sun, 05 Jan 202503:48 AM IST
- ಬೆಂಗಳೂರಿನಲ್ಲಿ ಮೂರು ತಿಂಗಳಿನಿಂದ ಚಳಿ ಹಾಗೂ ಗಾಳಿಯ ಪರಿಣಾಮ ಗರ್ಭಿಣಿಯರ ಮೇಲೂ ಆಗಿದೆ. ಶೀತ ಜ್ವರದಿಂದ ಬಳಲುತ್ತಿರುವ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗೆ ಆಗಮಿಸುತ್ತಿರುವುದು ಕಂಡು ಬಂದಿದೆ.
Sun, 05 Jan 202502:50 AM IST
- ಬಿಎಂಟಿಸಿ ಬಸ್ ಪ್ರಯಾಣ ದರಗಳನ್ನು ಪರಿಷ್ಕರಣೆ ಮಾಡಿದ್ದು, ಹೊಸ ದರಗಳು ಜನವರಿ 5ರ ಭಾನುವಾರದಿಂದಲೇ ಜಾರಿಗೆ ಬಂದಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಯಾವ ಪ್ರದೇಶಕ್ಕೆ ಎಷ್ಟು ಟಿಕೆಟ್ ದರ ಹೆಚ್ಚಾಗಿದೆ ಎಂಬುದರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಸಾಮಾನ್ಯ ಬಸ್ ದರಗಳ ಜೊತೆಗೆ ಬಿಎಂಟಿಎಸಿ ವಜ್ರ ಬಸ್ ದರಗಳ ವಿವರಗಳು ಇಲ್ಲಿವೆ.
Sun, 05 Jan 202501:44 AM IST
- Karnataka Weather January 05: ಕರ್ನಾಟಕದಲ್ಲಿ ಚಳಿ ಹೆಚ್ಚಳವಾಗಿದ್ದು, ಹಲವು ಜಿಲ್ಲೆಗಳಲ್ಲಿ ಶೀತಗಾಳಿಯ ಮುನ್ಸೂಚನೆ ಇದೆ. ಕಲ್ಯಾಣ ಕರ್ನಾಟಕದಲ್ಲಿ ಚಳಿ ಹೆಚ್ಚಳವಾಗಿದ್ದು, ರಾಜಧಾನಿ ಬೆಂಗಳೂರು ನಗರದಲ್ಲಿ ತಾಪಮಾನ ಭಾರಿ ಕುಸಿತ ಕಂಡಿದೆ. ರಾಜ್ಯದ ಹವಾಮಾನ ವರದಿ ಇಲ್ಲಿದೆ.
Sun, 05 Jan 202512:45 AM IST
ವಿಟ್ಲದ ಸಿಂಗಾರಿ ಬೀಡಿ ಕಂಪನಿ ಮಾಲೀಕನ ಮನೆಯಿಂದ 30 ಲಕ್ಷ ರೂಪಾಯಿಯನ್ನು ಪಕ್ಕಾ ಸಿನಿಮಾ ಸ್ಟೈಲ್ನಲ್ಲೇ ದೋಚಿದ ಘಟನೆ ಸ್ಪೆಷಲ್ 26 ಸಿನಿಮಾವನ್ನು ನೆನಪಿಸಿದೆ. 1987ರ ಒಪೇರಾ ಹೌಸ್ ದರೋಡೆ ಪ್ರಕರಣವನ್ನೂ ನೆನಪಿ ಬರುವಂತೆ ಮಾಡಿದೆ. ಫಿಲ್ಮಿ ಸ್ಟೈಲ್ ದರೋಡೆಯ ಪೂರ್ತಿ ಕಥೆ ಹೀಗಿದೆ ನೋಡಿ. (ವರದಿ-ಹರೀಶ್ ಮಾಂಬಾಡಿ, ಮಂಗಳೂರು)