Karnataka News Live January 7, 2025 : ಪೊಂಗಲ್-ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲು; ಬೆಂಗಳೂರಿನಿಂದ ಎಕ್ಸ್ಪ್ರೆಸ್ ರೈಲುಗಳ ಓಡಾಟ
ಎಚ್ಟಿ ಕನ್ನಡ ಲೈವ್ ಅಪ್ಡೇಟ್ಸ್ಗೆ ಸ್ವಾಗತ. ಕರ್ನಾಟಕಕ್ಕೆ ಸಂಬಂಧಿಸಿದ ಬ್ರೇಕಿಂಗ್ ನ್ಯೂಸ್, ವಿದ್ಯಮಾನ, ವಿಶ್ಲೇಷಣೆಗಳ ಇಣುಕುನೋಟ ಇಲ್ಲಿ ಲಭ್ಯ. ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರಮುಖ ವಿದ್ಯಮಾನಗಳೂ ಇಲ್ಲಿದೆ.
Tue, 07 Jan 202503:31 PM IST
- ಪೊಂಗಲ್ ಹಾಗೂ ಸಂಕ್ರಾಂತಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ಎಕ್ಸ್ಪ್ರಸ್ ರೈಲುಗಳು ಓಡಲಿವೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಚೆನ್ನೈ ಹಾಗೂ ಟುಟಿಕೋರಿನ್ಗೆ ರೈಲುಗಳು ಸಂಚರಿಸಲಿವೆ. ಸಮಯ ಹಾಗೂ ಇತರ ವಿವರ ಇಲ್ಲಿದೆ.
Tue, 07 Jan 202501:59 PM IST
- ಬೆಂಗಳೂರು ಅಪರಾಧ ಸುದ್ದಿ: ಸಹಾಯ ನೀಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ಬಿಜೆಪಿ ಮುಖಂಡನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ ಡಿಕೆ ಸುರೇಶ್ ನಕಲಿ ಸಹೋದರಿ ಎಂದು ಬಿಂಬಿಸಿ ವೈದ್ಯೆಯೊಬ್ಬರಿಗೆ 2.52 ಕೋಟಿ ರೂಪಾಯಿ ವಂಚಿಸಿದ್ದ ಐಶ್ವರ್ಯಾಗೌಡ ವಿರುದ್ಧ 3ನೇ ಎಫ್ಐಆರ್ ದಾಖಲಾಗಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)
Tue, 07 Jan 202512:17 PM IST
ಕೋಟಿ ಕೋಟಿ ರೂಪಾಯಿ ಅಕ್ರಮ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಹಾಗೂ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ 'ಇಡಿ' ದಾಳಿ ನಡೆದಿದೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ. (ವರದಿ: ಎಚ್.ಮಾರುತಿ, ಬೆಂಗಳೂರು)
Tue, 07 Jan 202511:29 AM IST
- Yuva Nidhi Enrollment: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆ ನೋಂದಣಿ ಪ್ರಕ್ರಿಯೆ ಶುರುವಾಗಿದೆ. ಜನವರಿ 20ರವರಗೆ ನೋಂದಣಿಗೆ ಅವಕಾಶವಿದೆ.
Tue, 07 Jan 202511:11 AM IST
- Karnataka School Guide 2025: ಸಿಬಿಎಸ್ಇ ಶಿಕ್ಷಣ ಪಠ್ಯ ಹಾಗೂ ಕ್ರಮದಡಿ ಮಕ್ಕಳನ್ನು ಶಾಲೆಗೆ ಸೇರಿಸಬೇಕು ಎನ್ನುವ ಯೋಚನೆಯಲ್ಲಿದ್ದವರಿಗೆ ಇಲ್ಲಿದೆ ಮಾಹಿತಿ.
Tue, 07 Jan 202510:46 AM IST
ಮಂಗಳೂರಿನಲ್ಲಿ ಅಪರೂಪದ ಘಟನೆ ನಡೆದಿದೆ. ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೆಲಂಗಾಣ ಮೂಲದ ಮಹಿಳೆಯೊಬ್ಬರು ಒಟ್ಟು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ-ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
Tue, 07 Jan 202509:17 AM IST
- ಬೆಂಗಳೂರು ಮಹಾನಗರದಲ್ಲಿ ರೂಪಿಸುತ್ತಿರುವ ಸುರಂಗ ಮಾರ್ಗ ಮಹಾರಾಷ್ಟ್ರದ ನಗರಗಳಿಗೂ ಸಂಪರ್ಕ ಕಲ್ಪಿಸಲಿದೆಯಾ ಎನ್ನುವ ಅನುಮಾನವನ್ನು ವಿಸ್ತೃತಾ ಯೋಜನಾ ವರದಿ ಹುಟ್ಟು ಹಾಕಿದೆ.
Tue, 07 Jan 202506:05 AM IST
ಧರ್ಮಸ್ಥಳದಲ್ಲಿ (ಜ.7) ಹೊಸದಾಗಿ ನಿರ್ಮಾಣವಾಗಿರುವ ಶ್ರೀ ಸಾನಿಧ್ಯ ಕ್ಯೂ ಕಾಂಪ್ಲೆಕ್ಸನ್ನು ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಅವರು ಇಂದು ಉದ್ಘಾಟಿಸುತ್ತಿದ್ದು ಭದ್ರತಾ ವ್ಯವಸ್ಥೆ ದೃಷ್ಟಿಯಿಂದ ಭಕ್ತರ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸವಾಗಲಿದೆ ಎಂದು ಧರ್ಮಸ್ಥಳ ಆಡಳಿತ ಮಂಡಳಿ ಪ್ರಕಟಣೆ ಹೊಡಿಸಿದೆ.
Tue, 07 Jan 202503:10 AM IST
ಬೆಂಗಳೂರಿನ ಯುವತಿ ರಚನಾ ಮಹಡಿಮನೆ ಅವರು ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಅದು ಪ್ರೀಮಿಯರ್ ಪದ್ಮಿನಿ ಕಾರನ್ನು ಖರೀದಿಸುವ ಮೂಲಕ. ಆ ಕ್ಷಣದ ಖುಷಿ ಹೀಗಿತ್ತು.
Tue, 07 Jan 202502:12 AM IST
ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಬಿಬಿಎಂಪಿ ವ್ಯಾಪ್ತಿಯ ಸುಮಾರು 15 ಲಕ್ಷಗಳಿಗೆ ಸೂಕ್ತ ಖಾತೆಯೇ ಇಲ್ಲ. ಅದನ್ನು ತ್ವರಿತವಾಗಿ ನೋಂದಣಿ ಮಾಡಿಸಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ.
Tue, 07 Jan 202501:12 AM IST
- Karnataka Weather: ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಉಷ್ಣಾಂಶದಲ್ಲಿ ಭಾರೀ ಕುಸಿತ ಕಂಡು ದಟ್ಟ ಚಳಿ ಮುಂದುವರಿದಿದೆ. ಬೆಂಗಳೂರಲ್ಲೂ ಚಳಿ ಇದೆ.