ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನ, ಚೋಳರ ಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ
ಕನ್ನಡ ಸುದ್ದಿ  /  ಕರ್ನಾಟಕ  /  ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನ, ಚೋಳರ ಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ

ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನ, ಚೋಳರ ಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ

ತುಮಕೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಗುರುವಾರ (ಏಪ್ರಿಲ್ 17) ಸಂಪನ್ನವಾಯಿತು. ಚೋಳರ ಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ ಮನಸೆಳೆಯಿತು. (ವರದಿ- ಈಶ್ವರ್, ತುಮಕೂರು)

ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನವಾಯಿತು
ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನವಾಯಿತು

ತುಮಕೂರು: ಇತಿಹಾಸ ಪ್ರಸಿದ್ದ ಹರಳೂರು ಶ್ರೀವೀರಭದ್ರ ಸ್ವಾಮಿ ರಥೋತ್ಸವ ಗುರುವಾರ ನೆರೆದಿದ್ದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು. ಚೋಳಕಾಲದ ದೇವಾಲಯದಲ್ಲಿ ಸಂಭ್ರಮ, ಸಡಗರ, ಭಕ್ತಿಭಾವ ತುಂಬಿ ತುಳುಕುತ್ತಿತ್ತು. ಪ್ರತಿವರ್ಷ ಯುಗಾದಿ ಹಬ್ಬದ ನಂತರದ 15 ದಿನಗಳ ಬಳಿಕ ಈ ಜಾತ್ರೋತ್ಸವ ನಡೆಯುವುದು ವಾಡಿಕೆ.

ಇತಿಹಾಸ ಪ್ರಸಿದ್ದ ಹರಳೂರು ಶ್ರೀ ವೀರಭದ್ರ ಸ್ವಾಮಿ ರಥೋತ್ಸವ ಸಂಪನ್ನ

ಚೋಳರ ಕಾಲದ ದೇವಾಲಯ ಇದಾಗಿದ್ದು, ಐದು ನೂರು ವರ್ಷಗಳ ಇತಿಹಾಸವಿದೆ, ಪ್ರತಿವರ್ಷ ಯುಗಾದಿ ಹಬ್ಬದ ನಂತರದ 15 ದಿನಗಳಿಗೆ ಆರಂಭವಾಗುವ ಶ್ರೀ ವೀರಭದ್ರ ಸ್ವಾಮಿ ಜಾತ್ರಾ ಮಹೋತ್ಸವ ಸುಮಾರು ಒಂದು ವಾರಗಳ ಕಾಲ ನಡೆಯುವುದು ವಾಡಿಕೆ, ರಥೋತ್ಸವದ ಅಂಗವಾಗಿ ಗುರುವಾರ ಬೆಳಗ್ಗೆಯಿಂದಲೇ ರಥ ಹೋಮ, ರಥ ಪ್ರತಿಷ್ಠಾಪನೆ ನಡೆದು ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ಹರಳೂರು ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಮಹಾ ರಥೋತ್ಸವ ನಡೆಯಿತು, ಸರ್ವಾಲಂಕೃತ ಶ್ರೀವೀರಭದ್ರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳರಿಸಿ ರಥೋತ್ಸವ ನಡೆಯಿತು.

ರಾತ್ರಿ ಸಿಂಹ ವಾಹನೋತ್ಸವ

ಜಾತ್ರಾ ಮಹೋತ್ಸವದ ಅಂಗವಾಗಿ ರಾತ್ರಿ 7.30ಕ್ಕೆ ಗ್ರಾಮದ ಶ್ರೀ ವೀರಭದ್ರ ಸ್ವಾಮಿ ಕಲಾವೃಂದದ ಕಲಾವಿದರಿಂದ ಶನಿ ಪ್ರಭಾವ ಅಥವಾ ನಲ್ಲತಂಗಾದೇವಿ ಎಂಬ ಪೌರಾಣಿಕ ನಾಟಕದ ಪ್ರದರ್ಶನ ನಡೆಯಿತು, ರಥೋತ್ಸವದ ನಂತರ ಶ್ರೀ ವೀರಭದ್ರ ಸ್ವಾಮಿಗೆ ಧೂಳೋತ್ಸವ, ಪುಷ್ಪಾಲಂಕಾರ, ಪಾನಕ ಸೇವೆ ನಡೆಯಿತು, ರಾತ್ರಿ 8.30ಕ್ಕೆ ಸಿಂಹ ವಾಹನೋತ್ಸವ, ನವಿಲು ವಾಹನ, ಬೆಳ್ಳಿ ಪಲ್ಲಕ್ಕಿ ಉತ್ಸವ, ನಂದಿವಾಹನ ಸೇವೆಗಳು ನೆರವೇರಿಸುವ ಮೂಲಕ ರಥೋತ್ಸವದ ಕಾರ್ಯಕ್ರಮ ಮುಕ್ತಾಯಗೊಂಡವು.

ಯುಗಾದಿ ಹಬ್ಬ ಮುಗಿದು 15 ದಿನಕ್ಕೆ ನಡೆಯುವ ಜಾತ್ರೋತ್ಸವದ ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಸೇವಾರ್ಥಿಗಳು ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿ ಹರಕೆ ತೀರಿಸಿದರು. ರಥೋತ್ಸವದಲ್ಲಿ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಶಂಕರಯ್ಯ,ಕಾರ್ಯದರ್ಶಿ ಹೆಚ್.ಎಸ್.ಉಮಾಶಂಖರ್ ದಾಸೋಹ ಟ್ರಸ್ಟ್‌ ಅಧ್ಯಕ್ಷ ಹೆಚ್.ಕೆ.ಕುಮಾರಯ್ಯ, ಕಾರ್ಯದರ್ಶಿ ಹೆಚ್.ಬಿ.ರುದ್ರೇಶ್, ಸೇವಾ ಸಮಿತಿ ಮತ್ತು ದಾಸೋಹ ಸಮಿತಿಯ ಪದಾಧಿಕಾರಿಗಳು, ನಿರ್ದೇಶಕರು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

(ವರದಿ- ಈಶ್ವರ್, ತುಮಕೂರು)

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.