ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಹೇಗೆ; ದಶಕದ ಹಿಂದೆ ಟಾಪರ್‌ ಆಗಿದ್ದ ಐಎಎಸ್‌ ಅಧಿಕಾರಿ ಕೆಆರ್‌ ನಂದಿನಿ ಸಲಹೆ ಏನು
ಕನ್ನಡ ಸುದ್ದಿ  /  ಕರ್ನಾಟಕ  /  ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಹೇಗೆ; ದಶಕದ ಹಿಂದೆ ಟಾಪರ್‌ ಆಗಿದ್ದ ಐಎಎಸ್‌ ಅಧಿಕಾರಿ ಕೆಆರ್‌ ನಂದಿನಿ ಸಲಹೆ ಏನು

ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗೋದು ಹೇಗೆ; ದಶಕದ ಹಿಂದೆ ಟಾಪರ್‌ ಆಗಿದ್ದ ಐಎಎಸ್‌ ಅಧಿಕಾರಿ ಕೆಆರ್‌ ನಂದಿನಿ ಸಲಹೆ ಏನು

ಈಗಷ್ಟೇ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಬಂದಿದೆ.ದಶಕದ ಹಿಂದೆ ಅಖಿಲ ಭಾರತ ಮಟ್ಟದಲ್ಲಿ ಟಾಪರ್‌ ಆಗಿ ಈಗ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಕೆಆರ್‌ನಂದಿನಿ ಅವರು ಪರೀಕ್ಷೆ ಎದುರಿಸುವವರಿಗೆ ಟಿಪ್ಸ್‌ ನೀಡಿದ್ದಾರೆ.

ಯುಪಿಎಸ್ಸಿ ಪರೀಕ್ಷೆಯಲ್ಲಿ ದಶಕದ ಹಿಂದೆ ಟಾಪರ್‌ ಆಗಿ ಈಗ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಕೆಆರ್‌ ನಂದಿನಿ ಅವರ ಟಿಪ್ಸ್‌ ಇಲ್ಲಿದೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ದಶಕದ ಹಿಂದೆ ಟಾಪರ್‌ ಆಗಿ ಈಗ ಕರ್ನಾಟಕ ಕೇಡರ್‌ ಐಎಎಸ್‌ ಅಧಿಕಾರಿಯಾಗಿರುವ ಕೆಆರ್‌ ನಂದಿನಿ ಅವರ ಟಿಪ್ಸ್‌ ಇಲ್ಲಿದೆ.

ಭಾರತೀಯರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ, ಯುವಕ/ ಯುವತಿಯರಲ್ಲಿ ಐಎಎಸ್‌, ಐಪಿಎಸ್‌ ಅಧಿಕಾರಿಯಾಗಬೇಕೆಂಬ ಮಹಾಕನಸು ಇದ್ದೇ ಇರುತ್ತದೆ. ಆದರೆ ಅದರಲ್ಲಿ ಯಶಸ್ವಿಯಾಗುವುದು ಅಷ್ಟು ಸುಲಭವಲ್ಲ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆ ಜಗತ್ತಿನ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದು ಎನ್ನಿಸಿದೆ. ಈ ಬಾರಿಯೂ ಯುಪಿಎಸ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಹಲವಾರು ಸಾಧಕರು ಯಶಸ್ವಿಯೂ ಆಗಿದ್ಧಾರೆ. ದಶಕದ ಹಿಂದೆ ಕರ್ನಾಟಕದ ಕೋಲಾರದವರಾದ ಕೆ.ಆರ್.ನಂದಿನಿ ಅವರು ಸತತ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದರು. ಇದರಿಂದ ಕರ್ನಾಟಕ ಕೇಡರ್‌ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಕೆ.ಆರ್.ನಂದಿನಿ ಪರೀಕ್ಷೆ ಎದುರಿಸುವುದು ಸುಲಭ. ಆದರೆ ತಯಾರಿಯೇ ಬಲು ಕಷ್ಟ. ನಿಮ್ಮ ತಯಾರಿ ಹೇಗೆ ಇರುತ್ತದೆಯೋ ಅದೇ ರೀತಿ ಫಲಿತಾಂಶ ಬರುತ್ತದೆ ಎಂದು ಸಲಹೆ ನೀಡುತ್ತಾರೆ.

ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕಾವೇರಿ ಸಭಾಂಗಣದಲ್ಲಿ ನಡೆಯುತ್ತಿರುವ ಐಎಎಸ್‌ ಹಾಗೂ ಕೆಎಎಸ್ ಪರೀಕ್ಷಾ ತರಬೇತಿಯ ಶಿಬಿರಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಜತೆಗೆ ಸಂವಾದವನ್ನೂ ನಡೆಸಿದರು ಕೆ.ಆರ್.‌ ನಂದಿನಿ.

ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಐಆರ್‌ಎಸ್‌ ಸೇವೆಗೆ ಆಯ್ಕೆಯಾಗಿ ನಂತರ ಪ್ರಯತ್ನ ನಿಲ್ಲಸದೇ ಪರೀಕ್ಷೆ ಎದುರಿಸಿ ನಾಲ್ಕನೇ ಪ್ರಯತ್ನದಲ್ಲಿ ನಂದಿನಿ ಟಾಪರ್‌ ಆಗಿ ಹೊರ ಹೊಮ್ಮಿದರು. ಇದನ್ನಾಧರಿಸಿಯೇ ಪ್ರಮುಖ ಟಿಪ್ಸ್‌ಗಳನ್ನು ಅವರು ನೀಡದರು.

ನಿಗದಿತ ಗುರಿ ಇರಲಿ

ನಕಾರಾತ್ಮಕ ಚಿಂತನೆ ಬಿಡಿ. ಗುರಿಗೆ ಸಮಯ ನಿಗದಿಪಡಿಸಿಕೊಳ್ಳಿ. ಸ್ಮರ್ಧಾತ್ಮಕ ಜಗತ್ತಿಗೆ ದೃಢ ವಿಶ್ವಾಸವೇ ಮುಖ್ಯ. ಗುರಿಗೆ ನಿರ್ಣಯ ಮಾಡುವುದು ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಮಾಡಬೇಕು. ಪರೀಕ್ಷೆ ಎದುರಿಸುವುದಕ್ಕೆ ಧೈರ್ಯ ಮಾಡಿ ಆದರೆ ಪರೀಕ್ಷೆಯೇ ಅಂತಿಮ ಅಲ್ಲ. ಎರಡು ವರ್ಷ ಓದಿ ಪರೀಕ್ಷೆ ಸಫಲವಾಗಲಿಲ್ಲ ಅಂದರೆ ಧೃತಿಗೇಡಬೇಡಿ. ಮುಂದಿನ ದಾರಿ ಹುಡುಕಿ ಎನ್ನುವುದು ಅವರ ನಿಖರ ಸಲಹೆ.

ಗುರಿಗೆ ನಿರ್ಣಯ ಮಾಡುವುದು ಮುಖ್ಯ. ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಮಾಡಬೇಕು. ಪರೀಕ್ಷೆ ಎದುರಿಸುವುದಕ್ಕೆ ಧೈರ್ಯ ಮಾಡಿ ಆದರೆ ಪರೀಕ್ಷೆಯೇ ಅಂತಿಮ ಅಲ್ಲ. ಎರಡು ವರ್ಷ ಓದಿ ಪರೀಕ್ಷೆ ಸಫಲವಾಗಲಿಲ್ಲ ಅಂದರೆ ಧೃತಿಗೇಡಬೇಡಿ. ಮುಂದಿನ ದಾರಿ ಹುಡುಕಿ. ಮುಖ್ಯವಾಗಿ ಎನ್ ಸಿ ಇ ಆರ್ ಟಿ ಪುಸ್ತಕ ಸಹಾಯ ಮಾಡುತ್ತೆ. ಇಂಗ್ಲಿಷ್‌, ಹಿಂದಿ ಹಾಗೂ ಕನ್ನಡ ಎಂಬ ಮಾಧ್ಯಮ ಅಸಹಾಯಕತೆ ಬೇಡ. ಕನ್ನಡದಲ್ಲಿ ನೀವು ಉತ್ತಮವೇ, ಕನ್ನಡದಲ್ಲೇ ಪರೀಕ್ಷೆ ಎದುರಿಸಿ. ನಾನು ಸಹ ಯುಪಿಎಸ್‌ಸಿಯಲ್ಲಿ ಐಚ್ಚಿಕ ವಿಷಯ ಕನ್ನಡವನ್ನೇ ಆಯ್ಕೆ ಮಾಡಿಕೊಂಡಿದ್ದೆ ಎನ್ನುವುದು ಅವರು ನೀಡಿದ ಉದಾಹರಣೆ.

ಬಗೆಬಗೆಯ ಪ್ರಶ್ನೆ

ಸ್ಮರ್ಧಾತ್ಮಕ ಪರೀಕ್ಷೆ ಕುರಿತು ಗೊಂದಲ ನಿವಾರಿಸಿದ ಅವರು, ಸಿದ್ದತೆ ಹೇಗಿದ್ದರೆ ಉತ್ತಮ, ಓದುವುದು ಹೇಗೆ, ಓದಿದ್ದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ, ಪ್ರಶ್ನೆಗೆ ಉತ್ತರಿಸುವ ಕ್ರಮ, ಎಷ್ಟು ಅಂಕದ ಪ್ರಶ್ನೆಗಳಿಗೆ ಓದಲು ಆದ್ಯತೆ ನೀಡಬೇಕು, ವಿಷಯವಾರು ಅಧ್ಯಯನ ಮಾಡುವ ವಿಧಾನ, ಓದಿದನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಅವರು ಅನುಸರಿಸಿದ ತಂತ್ರ, ಪ್ರತಿನಿತ್ಯ ಎಷ್ಟು ವಿಷಯ ಓದಬಹುದು, ಕಂಠಪಾಠ ಅಥವಾ ಅರ್ಥ ಮಾಡಿಕೊಂಡು ಓದುವುದರಲ್ಲಿ ಯಾವ ವಿಧಾನ ಉತ್ತಮ, ಮನನ ಕ್ರಮ ಹೇಗೆ, ಓದಿದ್ದನ್ನು ಬರೆದು ಅಭ್ಯಾಸ ಮಾಡಿದರೆ ನೆನಪಿನಲ್ಲಿ ಉಳಿಯುತ್ತಾ ಎನ್ನುವುದು ಸೇರಿ ಹತ್ತು ಹಲವು ಪ್ರಶ್ನೆಗಳಿಗೆ ಶಿಬಿರಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಂದಿನಿ ಪರಿಚಯ

ಕರ್ನಾಟಕದ ಕೋಲಾರ ಜಿಲ್ಲೆಯ ಕೆಂಬೋಡಿ ಗ್ರಾಮದ ಶಿಕ್ಷಕ ದಂಪತಿಯ ಪುತ್ರಿಯಾದ ನಂದಿನಿ ಅವರು ಮೂಡಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪೂರೈಸಿ ಬಳಿಕ ಬೆಂಗಳೂರಿನ ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಟೆಕ್ನಾಲಜಿಯಲ್ಲಿ ಸಿವಿಲ್ ಎಂಜಿನಿಯರಿಂಗ್ ಪೂರೈಸಿದ್ದಾರೆ. ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ಪಡೆದವರು. ಆನಂತರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಮೊದಲ ಸೇವೆಯಲ್ಲೇ ಸುಂಕ ಮತ್ತು ತೆರಿಗೆ ಇಲಾಖೆಗೆ ಆಯ್ಕೆಯಾಗಿ ಉತ್ತರ ಭಾರತದಲ್ಲಿ ಕೆಲಸ ಮಾಡಿದರು. ಆದರೆ ಐಎಎಸ್‌ ಆಗಬೇಕು ಎನ್ನುವ ಗುರಿಯೊಂದಿಗೆ ಇನ್ನೆರಡು ಬಾರಿ ಪ್ರಯತ್ನಿಸಿದರೂ ಆಗಲಿಲ್ಲ. ಕೊನೆಗೆ ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರು. ಆದೂ 2016 ರ ಸಿವಿಲ್ ಸರ್ವೀಸ್ ಪರೀಕ್ಷೆಗಳಲ್ಲಿ ಮೊದಲ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದರು. ಕರ್ನಾಟಕದವರೊಬ್ಬರು ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದವರು ಈವರೆಗೂ ಇವರೊಬ್ಬರೇ. ಕರ್ನಾಟಕದ ಸೇವೆಗೆ ನಿಯೋಜನೆಗೊಂಡಿದ್ದ ಅವರು ಬಳ್ಳಾರಿ, ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸಿದ್ದರು. ಎರಡು ವರ್ಷದಿಂದ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿದ್ದರು. ಸದ್ಯ ಮೂರು ತಿಂಗಳಿನಿಂದ ಮಂಡ್ಯ ಜಿಲ್ಲಾಪಂಚಾಯಿತಿ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Umesha Bhatta P H

TwittereMail
ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.