IRCTC Package: ಕಾಶಿ ಯಾತ್ರೆಗೆ ಕರ್ನಾಟಕ ಸರ್ಕಾರದಿಂದಲೂ ಹಣ ಸಹಾಯ, 9 ದಿನಗಳ ತೀರ್ಥಯಾತ್ರೆಯಲ್ಲಿ ಅಯೋಧ್ಯೆಯನ್ನೂ ನೋಡಿ ಬನ್ನಿ
ಕನ್ನಡ ಸುದ್ದಿ  /  ಜೀವನಶೈಲಿ  /  Irctc Package: ಕಾಶಿ ಯಾತ್ರೆಗೆ ಕರ್ನಾಟಕ ಸರ್ಕಾರದಿಂದಲೂ ಹಣ ಸಹಾಯ, 9 ದಿನಗಳ ತೀರ್ಥಯಾತ್ರೆಯಲ್ಲಿ ಅಯೋಧ್ಯೆಯನ್ನೂ ನೋಡಿ ಬನ್ನಿ

IRCTC Package: ಕಾಶಿ ಯಾತ್ರೆಗೆ ಕರ್ನಾಟಕ ಸರ್ಕಾರದಿಂದಲೂ ಹಣ ಸಹಾಯ, 9 ದಿನಗಳ ತೀರ್ಥಯಾತ್ರೆಯಲ್ಲಿ ಅಯೋಧ್ಯೆಯನ್ನೂ ನೋಡಿ ಬನ್ನಿ

IRCTC Package: ಕಾಶಿಯಾತ್ರೆಗೆ ತೆರಳಬೇಕು ಎಂಬ ಮಹದಾಸೆ ಬಹುತೇಕ ಹಿಂದೂಗಳಲ್ಲಿ ಇರುತ್ತದೆ. ಅದರ ಜೊತೆ ಅಯೋಧ್ಯೆಯನ್ನೂ ನೋಡಿ ಬರಬಹುದು. ಇದಕ್ಕೆ ಸರ್ಕಾರದ ಧನ ಸಹಾಯವೂ ಸಿಗುತ್ತೆ. ಐಆರ್‌ಸಿಟಿಸಿ ಕಾಶಿ ಟೂರ್ ಪ್ಯಾಕೇಜ್ ವಿವರ ಇಲ್ಲಿದೆ.

ಕಾಶಿ ಅಯೋಧ್ಯ ಟೂರ್ ಪ್ಯಾಕೇಜ್‌
ಕಾಶಿ ಅಯೋಧ್ಯ ಟೂರ್ ಪ್ಯಾಕೇಜ್‌

IRCTC Kashi Tour Package: ಭಾರತವು ದೇವಾಲಯಗಳ ನಾಡು. ನಮ್ಮ ದೇಶದಲ್ಲಿ ಸಾಕಷ್ಟು ಪ್ರಸಿದ್ಧ ದೇಗುಲಗಳಿವೆ. ಆದರೆ ಹಿಂದೂಗಳು ಜೀವನದಲ್ಲಿ ಒಮ್ಮೆಯಾದ್ರೂ ಕಾಶಿಗೆ ಹೋಗಬೇಕು, ಕಾಶಿಯಾತ್ರೆ ಮಾಡಬೇಕು ಎಂದು ಬಯಸುತ್ತಾರೆ. ಅದಕ್ಕೆ ಕಾರಣ ಕಾಶಿ ವಿಶ್ವನಾಥ ಸನ್ನಿಧಾನಕ್ಕೆ ತೆರಳಿದರೆ ಈ ಜನ್ಮಕ್ಕೆ ಮೋಕ್ಷ ಸಿಗುತ್ತದೆ ಎನ್ನುವ ನಂಬಿಕೆ. ಕರ್ನಾಟಕದಿಂದ ಕಾಶಿ ಬಹಳ ದೂರ ಇರುವ ಇಲ್ಲಿಗೆ ಹೋಗಿ ಬರುವುದು ಎಲ್ಲರಿಗೂ ಸುಲಭ ಏನಲ್ಲ. ಹಾಗಂತ ಚಿಂತಿಸುವ ಅಗತ್ಯವಿಲ್ಲ.

ಕಾಶಿಗೆ ಹೋಗಬೇಕು ಎನ್ನುವ ಆಸೆ ಇರುವವರಿಗೆ ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಘೋಷಿಸಿದೆ. ಮಾತ್ರವಲ್ಲ ಕಾಶಿ ಯಾತ್ರೆಗೆ ಹೋದವರಿಗೆ ಕರ್ನಾಟಕ ಸರ್ಕಾರವು ಹಣ ಸಹಾಯವನ್ನೂ ನೀಡಲಿದೆ. ಈ ಟೂರ್‌ ಪ್ಯಾಕೇಜ್‌ನಲ್ಲಿ ನೀವು ಕಾಶಿ ಮಾತ್ರವಲ್ಲ ರಾಮನ ಜನ್ಮಸ್ಥಳ ಅಯೋಧ್ಯೆಗೆ ತೆರಳಿ ರಾಮಮಂದಿರವನ್ನೂ ನೋಡಿ ಬರಬಹುದು. ಈ ಪ್ಯಾಕೇಜ್ ಕುರಿತ ಇನ್ನಷ್ಟು ವಿವರ ಇಲ್ಲಿದೆ.

ಕಾಶಿ ಟೂರ್ ಪ್ಯಾಕೇಜ್ ವಿವರ

ಐಆರ್‌ಸಿಟಿಸಿ ಟೂರ್ ಪ್ಯಾಕೇಜ್ ಒಟ್ಟು 8 ರಾತ್ರಿ, 9 ದಿನಗಗಳ ಪ್ಯಾಕೇಜ್ ಆಗಿದೆ. ವಾರಣಸಿ, ಅಯೋಧ್ಯ, ಗಯಾ ಹಾಗೂ ಪ‍್ರಯಾಗ್‌ರಾಜ್ ಈ 4 ಸ್ಥಳಗಳನ್ನು ನೀವು ನೋಡಿಬರಬಹುದು. ಕರ್ನಾಟಕ ಭಾರತ ಗೌರವ ಕಾಶಿ ದರ್ಶನ (Karnataka Bharat Gaurav Kashi Darshana) ಎನ್ನುವ ಪರಿಕಲ್ಪನೆಯಲ್ಲಿ ಈ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಲಾಗಿದೆ.

ಕಾಶಿ ಟೂರ್ ಪ್ಯಾಕೇಜ್ ವಿವರ ಹೀಗಿದೆ

ಮೊದಲ ದಿನ: ಬೆಂಗಳೂರಿನಿಂದ ಹೊರಡುವುದು ಸಂಪೂರ್ಣ ರಾತ್ರಿ ಟ್ರೈನ್‌ನಲ್ಲಿ ಪಯಣ

ಎರಡನೇ ದಿನ: ಈ ದಿನವೂ ಪ್ರಯಾಣವೇ ಆಗಿರುತ್ತದೆ. ಮೂರನೇ ದಿನ: ಬೆಳಿಗ್ಗೆ ಟ್ರೈನ್‌ನಲ್ಲಿ ಪ್ರಯಾಣ ಮಾಡಿ ಸಂಜೆ ವಾರಣಸಿ ತಲುಪಿ, ಅಲ್ಲಿಂದ ಹೋಟೆಲ್‌ಗೆ ತೆರಳಿ, ಹೋಟೆಲ್‌ನಲ್ಲಿ ಉಳಿಯುವುದು.

ದಿನ 4: ಬೆಳಗಿನ ಉಪಾಹಾರ ಮುಗಿಸಿ ತುಳಸಿ ಮಂದಿರ, ಸಂಕರ ಮೋಚನ ಹನುಮಾನ್‌ ಮಂದಿರಕ್ಕೆ ಭೇಟಿ ನೀಡುವುದು. ಊಟದ ನಂತರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು.

ದಿನ 5: ವಾರಣಸಿಯಿಂದ ಹೊರಟು ಮಧ್ಯಾಹ್ನ ಅಯೋಧ್ಯೆ ತಲುಪುವುದು. ರಾಮಜನ್ಮ ಭೂಮಿ, ಹನುಮಾನ್ ಗರ್ಹಿ ನೋಡಿಕೊಂಡು ರಾತ್ರಿ ಅಯೋಧ್ಯದಿಂದ ಹೊರಡುವುದು.

ದಿನ 6: ಬೆಳಿಗ್ಗೆ ಗಯಾ ತಲುಪುವುದು. ಅಲ್ಲಿ ಹೋಟೆಲ್‌ನಲ್ಲಿ ಸ್ನಾನ ಇತ್ಯಾದಿ ಮುಗಿಸಿ ಗಯಾದಲ್ಲಿರುವ ವಿಷ್ಣುಪಾದ ದೇವಾಲಯಕ್ಕೆ ಭೇಟಿ ನೀಡುವುದು. ಅಲ್ಲಿಂದ ಬೋದ್ ಗಯಾದಲ್ಲಿರುವ ಮಹಾ ಬೋಧಿ ದೇವಾಲಯಕ್ಕೆ ಭೇಟಿ. ರಾತ್ರಿ ಗಯಾದಿಂದ ಹೊರಡುವುದು.

ದಿನ 7: ಬೆಳಿಗ್ಗೆ ಪ್ರಯಾಗ್‌ರಾಜ್ ತಲುಪುವುದು. ಹನುಮಾನ್ ದೇವಸ್ಥಾನಕ್ಕೆ ಭೇಟಿ ಮತ್ತು ಗಂಗಾ ನದಿಯಲ್ಲಿ ಪವಿತ್ರ ಸ್ನಾನ. ಮಧ್ಯಾಹ್ನ ಪ್ರಯಾಗ್‌ರಾಜ್‌ನಿಂದ ಹೊರಡುವುದು.

ದಿನ 8: ಬೆಂಗಳೂರಿಗೆ ಮರಳಲು ರೈಲು ಪ್ರಯಾಣ ಆರಂಭ

ದಿನ 9: ಬೆಂಗಳೂರಿಗೆ ತಲುಪುವುದು

ಈ ಟೂರ್ ಪ್ಯಾಕೇಜ್ ಏಪ್ರಿಲ್ 14 ರಂದು ಆರಂಭವಾಗುತ್ತದೆ. ಬೆಂಗಳೂರು, ತುಮಕೂರು, ಬೀರೂರು, ದಾವಣಗೆರೆ, ಹಾವೇರಿ ಹುಬ್ಬಳ್ಳಿ ಹಾಗೂ ಬೆಳಗಾಂನಲ್ಲಿ ರೈಲು ಬೋರ್ಡಿಂಗ್ ಪಾಯಿಂಟ್‌ಗಳಿವೆ.

ಟೂರ್ ಪ್ಯಾಕೇಜ್ ದರ ವಿವರ

ಕರ್ನಾಟಕ ಭಾರತ ಗೌರವ ಕಾಶಿ ದರ್ಶನ ಟೂರ್ ಪ್ಯಾಕೇಜ್ ರೈಲು ಪ್ರಯಾಣವನ್ನು ಹೊಂದಿರುತ್ತದೆ. ಇದು ಒಬ್ಬರಿಗೆ 22,500 ರೂ, ವಿಶೇಷ ಆಫರ್‌, ಸರ್ಕಾರದ ಸಬ್ಸಿಡಿ ಇರುವವರಿಗೆ 7,500 ರೂ ಆಗಿರುತ್ತದೆ.

ಟೂರ್ ಪ್ಯಾಕೇಜ್ ಕುರಿತ ವಿವರಕ್ಕೆ

ಈ ಟೂರ್ ಪ್ಯಾಕೇಜ್ ಕುರಿತ ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9003140710,8595931290, ಇಮೇಲ್ tourismsbc[at]irctc[dot]com ಹಾಗೂ www.irctctourism.com ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner