ಪಹಲ್ಗಾಮ್ ದಾಳಿಯ ನಂತರ ಶ್ರೀನಗರದಿಂದ ದೆಹಲಿಗೆ ವಿಮಾನ ಪ್ರಯಾಣ ದರ ನಾಲ್ಕೈದು ಪಟ್ಟು ಏರಿಕೆ, ಪ್ರಯಾಣಿಕರಿಗೂ ಶಾಕ್
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಾಳೆ ಶ್ರೀನಗರದಿಂದ ಹೊರಡುವ ಕೆಲವು ವಿಮಾನಗಳ ವಿಮಾನ ಪ್ರಯಾಣ ದರ ಗಗನಕ್ಕೇರಿದೆ. ಸುಮಾರು ನಾಲ್ಕೈದು ಪಟ್ಟು ದರವನ್ನು ಏರಿಸಲಾಗಿದ್ದು, ಪ್ರವಾಸಿಗರು ಹೆಚ್ಚು ಹಣ ತೆರುವ ಸ್ಥಿತಿಯಿದೆ.

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಭಾಗದಲ್ಲಿ ಮಂಗಳವಾರ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ನಂತರ ಅಲ್ಲಿನ ಪ್ರವಾಸೋದ್ಯಮ ಚಿತ್ರಣವೇ ಬದಲಾಗಿದ್ದು. ಕಾಶ್ಮೀರಕ್ಕೆ ಬಂದವರು ತರಾತುರಿಯಲ್ಲಿ ಊರಿಗೆ ಮರಳಲು ಮುಗಿಬಿದ್ದಿದ್ದಾರೆ. ಇದರಿಂದಾಗಿ ವಿಮಾನ ಯಾನದ ದರ ನಾಲ್ಕೈದು ಪಟ್ಟು ಏರಿಕೆ ಕಂಡಿದೆ. ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ ನಂತರ ಕಾಶ್ಮೀರದ ಪ್ರವಾಸಿಗರು ತಮ್ಮ ಊರುಗಳಿಗೆ ಮರಳಲು ಮೊದಲ ವಿಮಾನವನ್ನು ಹಿಡಿಯಲು ಧಾವಿಸುತ್ತಿದ್ದು. ಕಾಶ್ಮೀರಿ ನಗರದಿಂದ ಹೊರಹೋಗುವ ಕೆಲವು ವಿಮಾನಗಳ ಪ್ರಯಾಣ ದರವು ಗಗನಕ್ಕೇರಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮೇಕ್ ಮೈಟ್ರಿಪ್ನಲ್ಲಿ ಏಪ್ರಿಲ್ 24 ರಂದು ಶ್ರೀನಗರದಿಂದ ದೆಹಲಿಗೆ ಒಂದು ಗಂಟೆ 15 ನಿಮಿಷಗಳ ಸ್ಪೈಸ್ ಜೆಟ್ ವಿಮಾನದ ಟಿಕೆಟ್ಗಳು ಪ್ರಸ್ತುತ 28,800 ರೂ.ಗೆ ಮಾರಾಟವಾಗುತ್ತಿವೆ. ಮೇ 5 ರಂದು ಅದೇ ಸ್ಪೈಸ್ ಜೆಟ್ ವಿಮಾನದ ಟಿಕೆಟ್ ದರ ಕೇವಲ 14,600 ರೂ. ಇತ್ತು. ದುರಂತದ ನಂತರ ಕಾಶ್ಮೀರದಿಂದ ಹೊರಹೋಗುವ ಕೆಲವು ವಿಮಾನಗಳ ವಿಮಾನಯಾನವು ಹೇಗೆ ಏರಿಕೆಗೊಂಡಿದೆ ಎಂಬುದನ್ನು ಇದು ತೋರಿಸುತ್ತದೆ. ಒಂದು ಕಡೆ ಭಯೋತ್ಪಾದಕರ ದಾಳಿ ಆತಂಕ, ಮತ್ತೊಂದು ಕಡೆ ವಿಮಾನ ಯಾನ ದುಬಾರಿ ಮಧ್ಯೆ ಪ್ರವಾಸಿಗರು ಆತುರದಿಂದ ನಿರ್ಗಮಿಸುತ್ತಿದ್ಧಾರೆ. ಕೆಲವರು ಅನಿವಾರ್ಯವಾಗಿ ಹೆಚ್ಚು ಹಣ ತೆತ್ತು ನಿರ್ಗಮಿಸುವ ಸ್ಥಿತಿ ನಿರ್ಮಾಣವಾಗಿದೆ.
ಶ್ರೀನಗರ ಮಾರ್ಗಗಳಲ್ಲಿ ನಿಯಮಿತ ವಿಮಾನ ಯಾನ ಶುಲ್ಕದ ಮಟ್ಟವನ್ನು ಕಾಯ್ದುಕೊಳ್ಳುವಂತೆ ನಾಗರಿಕ ವಿಮಾನಯಾನ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಸೂಚನೆ ನೀಡಿದ ಹೊರತಾಗಿಯೂ ವಿಮಾನ ದರದಲ್ಲಿ ಹೆಚ್ಚಳವಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ನಗರದಿಂದ ಹೊರಹೋಗಲು ಪೂರಕ ವಿಮಾನಗಳನ್ನು ವ್ಯವಸ್ಥೆ ಮಾಡುವಂತೆ ಸಚಿವಾಲಯವು ವಿಮಾನಯಾನ ಸಂಸ್ಥೆಗಳನ್ನು ಕೇಳಿದೆ ಮತ್ತು ಏರ್ ಇಂಡಿಯಾ ಮತ್ತು ಇಂಡಿಗೊದಂತಹ ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರವಾಸಿಗರ ನಿರ್ಗಮನದ ಬೇಡಿಕೆಯನ್ನು ಈಡೇರಿಸಲು ಶ್ರೀನಗರದಿಂದ ಹೆಚ್ಚುವರಿ ವಿಮಾನಗಳನ್ನು ಘೋಷಿಸಿವೆ.
ಆದಾಗ್ಯೂ, ಈ ವಿಮಾನಯಾನ ಸಂಸ್ಥೆಗಳು ಟಿಕೆಟ್ ಬೆಲೆಗಳನ್ನು ಹೆಚ್ಚಿಸಿದ್ದಕ್ಕಾಗಿ ಟೀಕೆಗಳು ವ್ಯಕ್ತವಾಗುತ್ತಿವೆ. ಕಾರ್ಪೊರೇಟ್ ಲಾಭಕ್ಕಾಗಿ ದುರಂತವನ್ನು ಬಳಸಿಕೊಳ್ಳುತ್ತಿವೆ ಎಂದು ಕೆಲವರು ಆರೋಪಿಸಿದ್ದಾರೆ.
ಶ್ರೀನಗರದಿಂದ ದೆಹಲಿಗೆ ನಾಳೆಗೆ ಇಂಡಿಗೊ ವಿಮಾನದ ಬೆಲೆ ಸುಮಾರು 15,000 ರೂ. ಪ್ರತಿಕ್ರಿಯೆಗಾಗಿ ಎಚ್ಟಿಯು ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸಿದಾಗ, ಇಂಡಿಗೊ ದರಗಳನ್ನುಏರಿಕೆ ಮಾಡದಂತೆ ಕ್ರಮಗಳನ್ನು ಕೈಗೊಂಡಿದೆ. ಶ್ರೀನಗರಕ್ಕೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳ ರದ್ದತಿ ಶುಲ್ಕ ಅಥವಾ ಮರುಹೊಂದಿಕೆ ಶುಲ್ಕವನ್ನು ಮನ್ನಾ ಮಾಡಿದೆ ಎಂದು ಹೇಳಿದೆ.
"ಪಹಲ್ಗಾಮ್ನಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ ನಮ್ಮ ಗ್ರಾಹಕರು ಎದುರಿಸುತ್ತಿರುವ ಕಾಳಜಿ ಮತ್ತು ತೊಂದರೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ಸವಾಲಿನ ಸಮಯದಲ್ಲಿ ತಕ್ಷಣದ ಗಮನ ಅಗತ್ಯವಿರುವವರಿಗೆ ಸಹಾನುಭೂತಿ ಬೆಂಬಲವನ್ನು ನೀಡುವತ್ತ ನಮ್ಮ ಗಮನವಿದೆ. ಶ್ರೀನಗರಕ್ಕೆ / ಅಲ್ಲಿಂದ ಪ್ರಯಾಣಿಸುವವರನ್ನು ಬೆಂಬಲಿಸಲು, ಇಂಡಿಗೊ ರದ್ದತಿ ಶುಲ್ಕ ಅಥವಾ ಮರುಹೊಂದಿಕೆ ಶುಲ್ಕಗಳಿಗೆ ಮನ್ನಾ ನೀಡುತ್ತಿದೆ. ಇಂಡಿಗೊ ದೆಹಲಿ ಮತ್ತು ಮುಂಬೈನಿಂದ ಶ್ರೀನಗರಕ್ಕೆ ವಿಶೇಷ ವಿಮಾನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆರಂಭಿಸಿದೆ. ಭಾರತದ ವಿವಿಧ ಭಾಗಗಳಿಂದ ಶ್ರೀನಗರದಿಂದ ಶ್ರೀನಗರಕ್ಕೆ ವಾರಕ್ಕೆ 160 ವಿಮಾನಗಳ ನಿಯಮಿತ ವೇಳಾಪಟ್ಟಿಗಿಂತ ಹೆಚ್ಚಿನದನ್ನು ನಿರ್ವಹಿಸಲಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
"ನಾವು ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ನಮ್ಮ ಗ್ರಾಹಕರಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿದ್ದೇವೆ. ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ದರಗಳನ್ನು ಮಿತವಾಗಿಡಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ. ನಮ್ಮ ಗ್ರಾಹಕರ ಸುರಕ್ಷತೆ ಮತ್ತು ದಕ್ಷ ಸೇವೆಗಳನ್ನು ಒದಗಿಸುವುದು ನಮ್ಮ ಆದ್ಯತೆಯಾಗಿದೆ" ಎಂದು ವಿಮಾನ ಯಾನ ಸಂಸ್ಥೆ ಇಂಡಿಗೊ ಸ್ಪಷ್ಟಪಡಿಸಿದೆ.