ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ; ಬ್ಯಾಂಕಿಂಗ್ ವಹಿವಾಟು ಇಲ್ಲದ ಕಾರಣ ಗ್ರಾಹಕರ ಮೇಲೆ ಪರಿಣಾಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ; ಬ್ಯಾಂಕಿಂಗ್ ವಹಿವಾಟು ಇಲ್ಲದ ಕಾರಣ ಗ್ರಾಹಕರ ಮೇಲೆ ಪರಿಣಾಮ

ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ; ಬ್ಯಾಂಕಿಂಗ್ ವಹಿವಾಟು ಇಲ್ಲದ ಕಾರಣ ಗ್ರಾಹಕರ ಮೇಲೆ ಪರಿಣಾಮ

ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 29 ರಿಂದ ಮೇ 1 ರ ತನಕ ಭಾರತದಲ್ಲಿ ಬ್ಯಾಂಕು ರಜೆ. ವಿವಿಧ ಕಾರಣಗಳಿಗೆ ಬ್ಯಾಂಕ್ ರಜೆ ಇದ್ದು, ಬ್ಯಾಂಕಿಂಗ್ ವಹಿವಾಟು ಇರಲ್ಲ.

ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ. (ಸಾಂಕೇತಿಕ ಚಿತ್ಋ)
ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ. (ಸಾಂಕೇತಿಕ ಚಿತ್ಋ)

ಬ್ಯಾಂಕ್‌ ರಜೆ: ಭಾರತದಲ್ಲಿ ಇಂದಿನಿಂದ (ಏಪ್ರಲ್ 29) ಮೂರು ದಿನ ಬ್ಯಾಂಕ್ ರಜೆ. ಅಂದರೆ ಮೇ 1ರ ತನಕ ಬ್ಯಾಂಕಿಂಗ್ ವಹಿವಾಟು ಇರಲ್ಲ. ಇದರಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಉಂಟಾಗಲಿದೆ. ಪರಶುರಾಮ ಜಯಂತಿ, ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ, ಕಾರ್ಮಿಕ ದಿನಾಚರಣೆ ನಿಮಿತ್ತ ಈ ರಜೆಗಳು ಒಟ್ಟಿಗೆ ಬಂದಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾರಣಗಳಿಗೆ ಈ ಮೂರು ದಿನ ರಜೆ ಇರಲಿದೆ. ಆಯಾ ಬ್ಯಾಂಕುಗಳ ವೆಬ್‌ಸೈಟ್‌ ಗಮನಿಸಿದರೆ ಗ್ರಾಹಕರಿಗೆ ರಜಾದಿನಗಳ ವಿವರಗಳನ್ನು ಪ್ರಕಟಿಸಲಾಗಿದೆ.

ಏಪ್ರಿಲ್ 29ರಂದು ಬ್ಯಾಂಕು ರಜೆ- ಪರಶುರಾಮ ಜಯಂತಿ

ಭಾರತೀಯ ರಿಸರ್ವ್ ಬ್ಯಾಂಕ್ ವೆಬ್‌ಸೈಟ್ ಪ್ರಕಾರ, ಇಂದು (ಏಪ್ರಿಲ್ 29) ಶಿಮ್ಲಾ ಮತ್ತು ಇತರೆಡೆ ಪರಶುರಾಮ ಜಯಂತಿ ಕಾರಣ ಬ್ಯಾಂಕುಗಳಿಗೆ ರಜಾದಿನ. ಮಹಾವಿಷ್ಣು ದೇವರ ಆರನೇ ರೂಪವಾಗಿರುವ ಪರಶುರಾಮ ದೇವರ ಜಯಂತಿಯನ್ನು ಈ ಭಾಗದ ಜನರು ಬಹಳ ಭಕ್ತಿಶ್ರದ್ಧೆಯಿಂದ ಆಚರಿಸುತ್ತಾರೆ.

ಏಪ್ರಿಲ್ 30 ಬ್ಯಾಂಕು ರಜೆ-ಬಸವ ಜಯಂತಿ, ಅಕ್ಷಯ ತೃತೀಯ

ಕರ್ನಾಟಕದಲ್ಲಿ ಏಪ್ರಿಲ್ 30 ರಂದು ಬಸವ ಜಯಂತಿ, ಅಕ್ಷಯ ತೃತೀಯದ ಕಾರಣ ಬ್ಯಾಂಕುಗಳಿಗೆ ರಜೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಸವ ಜಯಂತಿ ಆಚರಣೆ ಹೆಚ್ಚು. ಹೀಗಾಗಿ ಈ ಭಾಗದಲ್ಲಿ ಬ್ಯಾಂಕುಗಳಿಗೆ ರಜೆ ಘೋ‍ಷಿಸಲಾಗಿದೆ. 12ನೇ ಶತಮಾನದ ಸಮಾಜ ಸುಧಾರಕ, ತತ್ತ್ವಶಾಸ್ತ್ರಜ್ಞ ಬಸವಣ್ಣನವರನ್ನು ಸ್ಮರಿಸುವ ದಿನ. ಬಸವಣ್ಣನವರ ಜಯಂತಿ ಆಚರಣೆ ವ್ಯಾಪಕವಾಗಿ ಆಚರಿಸಲ್ಪಡುತ್ತದೆ. ಈ ನಡುವೆ, ಅಕ್ಷಯ ತೃತೀಯ ಕೂಡ ಬಂದಿರುವ ಕಾರಣ ಇದು ದೀರ್ಘಕಾಲದ ಹೂಡಿಕೆ, ಬೆಳ್ಳಿ ಬಂಗಾರ ಖರೀದಿಗೆ ಪ್ರಶಸ್ತವೆಂಬ ನಂಬಿಕೆ ಇದೆ. ಹೀಗಾಗಿ ಚಿನ್ನಾಭರಣ ಖರೀದಿ ಭರಾಟೆ ಜೋರಾಗಿರುತ್ತದೆ.

ಮೇ 1 ಬ್ಯಾಂಕು ರಜೆ- ಕಾರ್ಮಿಕರ ದಿನ

ಬೆಂಗಳೂರು, ಕೋಲ್ಕತಾ, ಮುಂಬೈ, ಮತ್ತು ಪಾಟ್ನಾ ಸೇರಿದಂತೆ ಹೆಚ್ಚಿನ ರಾಜ್ಯಗಳ ಬ್ಯಾಂಕುಗಳು ಮೇ 1 ರಂದು ಮುಚ್ಚಲ್ಪಟ್ಟಿರುತ್ತವೆ. ಈ ದಿನ ಮೇ ದಿನವಾಗಿ ಅಂದರೆ ಕಾರ್ಮಿಕ ದಿನವಾಗಿ ಆಚರಿಸಲ್ಪಡುತ್ತದೆ. ಕಾರ್ಮಿಕರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರನ್ನು ಶೋಷಣೆಯಿಂದ ರಕ್ಷಿಸಲು ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೀಗಾಗಿ ಮೇ 1 ರಂದು ಬ್ಯಾಂಕ್ ರಜೆ ಇರುತ್ತದೆ.

ಈ ಪಟ್ಟಿ ಮಾಡಿದ ರಜೆಗಳಲ್ಲದೇ ಭಾರತದಾದ್ಯಂತ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕು ರಜೆ ಇರುತ್ತವೆ. ಆದಾಗ್ಯೂ, ಗ್ರಾಹಕರು ಚಿಂತಿತರಾಗಬೇಕಾಗಿಲ್ಲ. ಎಟಿಎಂ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿದ್ದು, ಹಣಕಾಸು ವಹಿವಾಟು ಆರಾಮವಾಗಿ ಮಾಡಬಹುದಾಗಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.