ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನ ಬ್ಯಾಂಕುಗಳಿಗೆ ರಜೆ; ಬ್ಯಾಂಕಿಂಗ್ ವಹಿವಾಟು ಇಲ್ಲದ ಕಾರಣ ಗ್ರಾಹಕರ ಮೇಲೆ ಪರಿಣಾಮ
ಬ್ಯಾಂಕ್ ರಜೆ: ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಏಪ್ರಿಲ್ 29 ರಿಂದ ಮೇ 1 ರ ತನಕ ಭಾರತದಲ್ಲಿ ಬ್ಯಾಂಕು ರಜೆ. ವಿವಿಧ ಕಾರಣಗಳಿಗೆ ಬ್ಯಾಂಕ್ ರಜೆ ಇದ್ದು, ಬ್ಯಾಂಕಿಂಗ್ ವಹಿವಾಟು ಇರಲ್ಲ.

ಬ್ಯಾಂಕ್ ರಜೆ: ಭಾರತದಲ್ಲಿ ಇಂದಿನಿಂದ (ಏಪ್ರಲ್ 29) ಮೂರು ದಿನ ಬ್ಯಾಂಕ್ ರಜೆ. ಅಂದರೆ ಮೇ 1ರ ತನಕ ಬ್ಯಾಂಕಿಂಗ್ ವಹಿವಾಟು ಇರಲ್ಲ. ಇದರಿಂದಾಗಿ ಗ್ರಾಹಕರ ಮೇಲೆ ಪರಿಣಾಮ ಉಂಟಾಗಲಿದೆ. ಪರಶುರಾಮ ಜಯಂತಿ, ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ, ಕಾರ್ಮಿಕ ದಿನಾಚರಣೆ ನಿಮಿತ್ತ ಈ ರಜೆಗಳು ಒಟ್ಟಿಗೆ ಬಂದಿವೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಕಾರಣಗಳಿಗೆ ಈ ಮೂರು ದಿನ ರಜೆ ಇರಲಿದೆ. ಆಯಾ ಬ್ಯಾಂಕುಗಳ ವೆಬ್ಸೈಟ್ ಗಮನಿಸಿದರೆ ಗ್ರಾಹಕರಿಗೆ ರಜಾದಿನಗಳ ವಿವರಗಳನ್ನು ಪ್ರಕಟಿಸಲಾಗಿದೆ.
ಏಪ್ರಿಲ್ 29ರಂದು ಬ್ಯಾಂಕು ರಜೆ- ಪರಶುರಾಮ ಜಯಂತಿ
ಭಾರತೀಯ ರಿಸರ್ವ್ ಬ್ಯಾಂಕ್ ವೆಬ್ಸೈಟ್ ಪ್ರಕಾರ, ಇಂದು (ಏಪ್ರಿಲ್ 29) ಶಿಮ್ಲಾ ಮತ್ತು ಇತರೆಡೆ ಪರಶುರಾಮ ಜಯಂತಿ ಕಾರಣ ಬ್ಯಾಂಕುಗಳಿಗೆ ರಜಾದಿನ. ಮಹಾವಿಷ್ಣು ದೇವರ ಆರನೇ ರೂಪವಾಗಿರುವ ಪರಶುರಾಮ ದೇವರ ಜಯಂತಿಯನ್ನು ಈ ಭಾಗದ ಜನರು ಬಹಳ ಭಕ್ತಿಶ್ರದ್ಧೆಯಿಂದ ಆಚರಿಸುತ್ತಾರೆ.
ಏಪ್ರಿಲ್ 30 ಬ್ಯಾಂಕು ರಜೆ-ಬಸವ ಜಯಂತಿ, ಅಕ್ಷಯ ತೃತೀಯ
ಕರ್ನಾಟಕದಲ್ಲಿ ಏಪ್ರಿಲ್ 30 ರಂದು ಬಸವ ಜಯಂತಿ, ಅಕ್ಷಯ ತೃತೀಯದ ಕಾರಣ ಬ್ಯಾಂಕುಗಳಿಗೆ ರಜೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಬಸವ ಜಯಂತಿ ಆಚರಣೆ ಹೆಚ್ಚು. ಹೀಗಾಗಿ ಈ ಭಾಗದಲ್ಲಿ ಬ್ಯಾಂಕುಗಳಿಗೆ ರಜೆ ಘೋಷಿಸಲಾಗಿದೆ. 12ನೇ ಶತಮಾನದ ಸಮಾಜ ಸುಧಾರಕ, ತತ್ತ್ವಶಾಸ್ತ್ರಜ್ಞ ಬಸವಣ್ಣನವರನ್ನು ಸ್ಮರಿಸುವ ದಿನ. ಬಸವಣ್ಣನವರ ಜಯಂತಿ ಆಚರಣೆ ವ್ಯಾಪಕವಾಗಿ ಆಚರಿಸಲ್ಪಡುತ್ತದೆ. ಈ ನಡುವೆ, ಅಕ್ಷಯ ತೃತೀಯ ಕೂಡ ಬಂದಿರುವ ಕಾರಣ ಇದು ದೀರ್ಘಕಾಲದ ಹೂಡಿಕೆ, ಬೆಳ್ಳಿ ಬಂಗಾರ ಖರೀದಿಗೆ ಪ್ರಶಸ್ತವೆಂಬ ನಂಬಿಕೆ ಇದೆ. ಹೀಗಾಗಿ ಚಿನ್ನಾಭರಣ ಖರೀದಿ ಭರಾಟೆ ಜೋರಾಗಿರುತ್ತದೆ.
ಮೇ 1 ಬ್ಯಾಂಕು ರಜೆ- ಕಾರ್ಮಿಕರ ದಿನ
ಬೆಂಗಳೂರು, ಕೋಲ್ಕತಾ, ಮುಂಬೈ, ಮತ್ತು ಪಾಟ್ನಾ ಸೇರಿದಂತೆ ಹೆಚ್ಚಿನ ರಾಜ್ಯಗಳ ಬ್ಯಾಂಕುಗಳು ಮೇ 1 ರಂದು ಮುಚ್ಚಲ್ಪಟ್ಟಿರುತ್ತವೆ. ಈ ದಿನ ಮೇ ದಿನವಾಗಿ ಅಂದರೆ ಕಾರ್ಮಿಕ ದಿನವಾಗಿ ಆಚರಿಸಲ್ಪಡುತ್ತದೆ. ಕಾರ್ಮಿಕರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರನ್ನು ಶೋಷಣೆಯಿಂದ ರಕ್ಷಿಸಲು ಅಂತಾರಾಷ್ಟ್ರೀಯ ಕಾರ್ಮಿಕ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಹೀಗಾಗಿ ಮೇ 1 ರಂದು ಬ್ಯಾಂಕ್ ರಜೆ ಇರುತ್ತದೆ.
ಈ ಪಟ್ಟಿ ಮಾಡಿದ ರಜೆಗಳಲ್ಲದೇ ಭಾರತದಾದ್ಯಂತ ಎರಡನೇ ಮತ್ತು ನಾಲ್ಕನೇ ಶನಿವಾರ ಬ್ಯಾಂಕು ರಜೆ ಇರುತ್ತವೆ. ಆದಾಗ್ಯೂ, ಗ್ರಾಹಕರು ಚಿಂತಿತರಾಗಬೇಕಾಗಿಲ್ಲ. ಎಟಿಎಂ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿದ್ದು, ಹಣಕಾಸು ವಹಿವಾಟು ಆರಾಮವಾಗಿ ಮಾಡಬಹುದಾಗಿದೆ.
ವಿಭಾಗ