CJI Lalit’s last working day today: ಸಿಜೆಐ ಲಲಿತ್ ಅವರ ಕೊನೇ ಕೆಲಸದ ದಿನ; ಕಲಾಪದ ನೇರ ಪ್ರಸಾರ
CJI Lalit’s last working day today: ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಔಪಚಾರಿಕ ಪೀಠದ ಕಲಾಪವನ್ನು ಸುಪ್ರೀಂ ಕೋರ್ಟ್ ಸೋಮವಾರ ಲೈವ್ ಸ್ಟ್ರೀಮ್ ಮಾಡಲಿದೆ. ಏಕೆಂದರೆ ಈ ದಿನ ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಕೊನೆಯ ಕೆಲಸದ ದಿನ.
ನಾಳೆ ಗುರುನಾನಕ್ ಜಯಂತಿ (Guru Nanak Jayanti). ಈ ಪ್ರಯುಕ್ತ ಸುಪ್ರೀಂ ಕೋರ್ಟ್ಗೆ ರಜೆ. ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ (CJI Lalit) ಅವರು ನಿವೃತ್ತಿಯಾಗುವುದು ಕೂಡ ಇದೇ ದಿನ. ಆದ್ದರಿಂದ ಒಂದು ದಿನ ಮುಂಚಿತವಾಗಿ, ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನೇತೃತ್ವದ ಔಪಚಾರಿಕ ಪೀಠದ ಕಲಾಪವನ್ನು ಸುಪ್ರೀಂ ಕೋರ್ಟ್ ಸೋಮವಾರ ಲೈವ್ ಸ್ಟ್ರೀಮ್ ಮಾಡಲಿದೆ. ಏಕೆಂದರೆ ಈ ದಿನ ಭಾರತದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ಕೊನೆಯ ಕೆಲಸದ ದಿನ.
ಔಪಚಾರಿಕ ಪೀಠವು ಇಂದು ಅಪರಾಹ್ನ 2 ಗಂಟೆಗೆ ಉನ್ನತ ನ್ಯಾಯಾಲಯದ ಊಟದ ನಂತರದ ಅಧಿವೇಶನದಲ್ಲಿ ಸೇರಲಿದೆ. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಅವರೂ ಪೀಠದಲ್ಲಿ ಇರಲಿದ್ದಾರೆ. ಔಪಚಾರಿಕ ಪೀಠದಲ್ಲಿ ಭಾರತದ ನಿರ್ಗಮನ ಮುಖ್ಯ ನ್ಯಾಯಾಧೀಶರು ತಮ್ಮ ಉತ್ತರಾಧಿಕಾರಿಯೊಂದಿಗೆ ಪೀಠವನ್ನು ಹಂಚಿಕೊಳ್ಳಲಿದ್ದಾರೆ. ಬಾರ್ನ ಸದಸ್ಯರು ಮತ್ತು ಸರ್ಕಾರದ ಹಿರಿಯ ಕಾನೂನು ಅಧಿಕಾರಿಗಳು ಅವರನ್ನು ಬೀಳ್ಕೊಡಲಿದ್ದಾರೆ.
“ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯನ್ನು ಬಿಡುವ ಮುನ್ನಾದಿನ, ಮುಖ್ಯ ನ್ಯಾಯಮೂರ್ತಿಗಳ ನ್ಯಾಯಾಲಯದ ಅಂದರೆ, ನವೆಂಬರ್ 07 ರಂದು ಭಾರತದ ಸರ್ವೋಚ್ಚ ನ್ಯಾಯಾಲಯದ ವೆಬ್ಸೈಟ್ನಲ್ಲಿ ವಿಧ್ಯುಕ್ತ ಪೀಠದ ಪ್ರಕ್ರಿಯೆಗಳನ್ನು ಲೈವ್ ಸ್ಟ್ರೀಮ್ ಮಾಡಲಾಗುತ್ತದೆ" ಎಂದು ಸುಪ್ರೀಂ ಕೋರ್ಟ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಕಳೆದ ಆಗಸ್ಟ್ 26 ರಂದು ಆಗಿನ ಸಿಜೆಐ ಎನ್ ವಿ ರಮಣ ಅವರ ಔಪಚಾರಿಕ ಪೀಠದ ವಿಚಾರಣೆಯನ್ನು ಲೈವ್ ಸ್ಟ್ರೀಮ್ ಮಾಡಿತ್ತು. ಆ ದಿನ ಸರ್ವೋಚ್ಚ ನ್ಯಾಯಾಲಯದಲ್ಲಿ ಅವರ ಕೊನೆಯ ಕೆಲಸದ ದಿನವಾಗಿತ್ತು.
ಸುಪ್ರೀಂ ಕೋರ್ಟ್ ತನ್ನ ವೆಬ್ಕಾಸ್ಟ್ ಚಾನೆಲ್ ಮತ್ತು ಯೂಟ್ಯೂಬ್ ಮೂಲಕ ಸಂವಿಧಾನ ಪೀಠಗಳ ಲೈವ್ ಸ್ಟ್ರೀಮಿಂಗ್ ಪ್ರಕ್ರಿಯೆಗಳನ್ನು ಸೆಪ್ಟೆಂಬರ್ 27 ರಿಂದ ಶುರುಮಾಡಿದೆ. ಇದುವರೆಗೆ ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಕರು ಕಲಾಪವನ್ನು ವೀಕ್ಷಿಸಿದ್ದಾರೆ.
ಇನ್ನು, 2018ರ ಸೆಪ್ಟೆಂಬರ್ 27 ರಂದು, ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಪ್ರಮುಖ ಪ್ರಕ್ರಿಯೆಗಳ ನೇರ ಪ್ರಸಾರ ಅಥವಾ ವೆಬ್ಕಾಸ್ಟ್ನಲ್ಲಿ ಪ್ರಸಾರ ಮಾಡುವ ಕುರಿತು ಮಹತ್ವದ ತೀರ್ಪು ನೀಡಿತ್ತು.
ಪ್ರಾಯೋಗಿಕ ಯೋಜನೆಯಾಗಿ, ಸಾಂವಿಧಾನಿಕ ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಮತ್ತು ಸಾಂವಿಧಾನಿಕ ಪೀಠದ ಮುಂದೆ ವಾದಿಸುತ್ತಿರುವ ನಿರ್ದಿಷ್ಟ ವರ್ಗದ ಪ್ರಕರಣಗಳನ್ನು ಮಾತ್ರ ಲೈವ್-ಸ್ಟ್ರೀಮ್ ಮಾಡಬೇಕು ಎಂದು ಅದು ಹೇಳಿದೆ.
ವೈವಾಹಿಕ ವಿವಾದಗಳು ಅಥವಾ ಲೈಂಗಿಕ ದೌರ್ಜನ್ಯದಂತಹ ಸೂಕ್ಷ್ಮ ಪ್ರಕರಣಗಳನ್ನು ಲೈವ್-ಸ್ಟ್ರೀಮ್ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗಮನಿಸಬಹುದಾದ ವಿಚಾರಗಳು
ವಿಜಯಪುರ-ಶಬರಿಮಲೆ ವಿಶೇಷ ಸಾಪ್ತಾಹಿಕ ರೈಲು; ಯಾವ ದಿನ ಎಷ್ಟು ಗಂಟೆಗೆ? ಎಲ್ಲಿ ನಿಲ್ಲುತ್ತೆ? ವಿವರ ಇಲ್ಲಿದೆ
special train to sabarimala from vijayapura: ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಲಿಸಲು ಹೊಸ ರೈಲು ಸೇವೆ ಸೋಮವಾರದಿಂದ ಅಂದರೆ ಇಂದಿನಿಂದ ಆರಂಭವಾಗಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ವಿಷಯ ತಿಳಿಸಿದ್ದಾರೆ. ವಿವರ ವರದಿಗೆ ಇಲ್ಲಿ ಕ್ಲಿಕ್ಕಿಸಿ