ಗೋಡೆಗೆ ಸಗಣಿ ಬಳಿದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಗೋಡೆಗೆ ಸಗಣಿ ಬಳಿದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

ಗೋಡೆಗೆ ಸಗಣಿ ಬಳಿದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನಲ್ಲಿ ಮಂಗಳವಾರ (ಡಿಯುಎಸ್‌ಯು) ಅಧ್ಯಕ್ಷ ರೋನಕ್ ಖತ್ರಿ, ಪ್ರಾಂಶುಪಾಲೆ ಪ್ರತ್ಯೂಷ್ ವತ್ಸಲಾ ಅವರ ವಿವಾದಾತ್ಮಕ ಪ್ರಯೋಗವನ್ನು ವಿರೋಧಿಸಿ ಅವರ ಕಚೇರಿ ಗೋಡೆಗಳಿಗೆ ಹಸುವಿನ ಸಗಣಿ ಬಳಿದಿದ್ದಾರೆ.

ಗೋಡೆಗೆ ಸಗಣಿ ಬಳಿದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ
ಗೋಡೆಗೆ ಸಗಣಿ ಬಳಿದು ಪ್ರಾಂಶುಪಾಲೆ ವಿರುದ್ಧ ಆಕ್ರೋಶ (Ronak Khatri/X)

ದೆಹಲಿ: ದೆಹಲಿ ವಿಶ್ವವಿದ್ಯಾಲಯದ ಲಕ್ಷ್ಮಿಬಾಯಿ ಕಾಲೇಜಿನಲ್ಲಿ ಮಂಗಳವಾರ (ಡಿಯುಎಸ್‌ಯು) ಅಧ್ಯಕ್ಷ ರೋನಕ್ ಖತ್ರಿ, ಪ್ರಾಂಶುಪಾಲೆ ಪ್ರತ್ಯೂಷ್ ವತ್ಸಲಾ ಅವರ ವಿವಾದಾತ್ಮಕ ಪ್ರಯೋಗವನ್ನು ವಿರೋಧಿಸಿ ಅವರ ಕಚೇರಿ ಗೋಡೆಗಳಿಗೆ ಹಸುವಿನ ಸಗಣಿ ಬಳಿದಿದ್ದಾರೆ. ಸಗಣಿ ಬಳಿದ ಕಾರಣ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ. ವಿಡಿಯೋದಲ್ಲಿ ಸೆರೆಯಾಗಿರುವ ಈ ಕೃತ್ಯದಲ್ಲಿ ಖತ್ರಿ ಕೈಗವಸು ಧರಿಸಿ ಪ್ರಾಂಶುಪಾಲರ ಕಚೇರಿಗೆ ಹಸುವಿನ ಸಗಣಿ ಲೇಪಿಸುತ್ತಿರುವುದನ್ನು ಗಮನಿಸಬಹುದು.

ಪ್ರಾಂಶುಪಾಲೆ ಯಾರನ್ನೂ ಕೇಳದೆ ಈ ರೀತಿ ಮಾಡಿರುವುದು ತಪ್ಪು ಎಂದು ಹೇಳಲಾಗುತ್ತಿದೆ. ಸಂಶೋಧನಾ ಉಪಕ್ರಮದ ಭಾಗವಾಗಿ ವಿದ್ಯಾರ್ಥಿಗಳನ್ನು ಸಂಪರ್ಕಿಸದೆ ಪ್ರಾಂಶುಪಾಲರು ತರಗತಿಯ ಗೋಡೆಗಳಿಗೆ ಹಸುವಿನ ಸಗಣಿ ಲೇಪಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. "ನೀವು ಸಂಶೋಧನೆ ಮಾಡಲು ಬಯಸಿದರೆ, ಅದನ್ನು ನಿಮ್ಮ ಮನೆಯಲ್ಲಿ ಮಾಡಿ" ಎಂದು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ, ಖತ್ರಿ ಈ ಕ್ರಮವನ್ನು ಸಮರ್ಥಿಸಿಕೊಂದಿದ್ದಾರೆ. ಇದು ಪ್ರಾಂಶುಪಾಲೆ ವತ್ಸಲಾ ಅವರ ಯೋಜನೆಯನ್ನು ಬೇರೊಂದು ರೀತಿಯಲ್ಲಿ ವಿರೋಧಿಸಿದ್ದಾಗಿದ್ದು. ನಾವು ಅವರ ಯೋಜನೆಯನ್ನು ಮುಂದೆ ಕೊಂಡೊಯ್ದಿದ್ದೇವೆ ಎನ್ನುವ ಕೊಂಕು ನುಡಿಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಕೋಣೆಗೆ ಸಗಣಿ ಬಳಿದು ಟ್ವೀಟ್ ಮಾಡಿದ್ಧಾರೆ.

ANI ಜೊತೆ ಮಾತನಾಡಿದ ಅವರು ವಿದ್ಯಾರ್ಥಿಗಳ ಒಪ್ಪಿಗೆಯಿಲ್ಲದೆ ವತ್ಸಲಾ ಕಾಲೇಜನ್ನು ಪ್ರಯೋಗಾಲಯವಾಗಿ ಪರಿವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು. "ಅವರ ಸ್ವಂತ ಕೊಠಡಿ ಈ ಸ್ಥಿತಿಯಲ್ಲಿಲ್ಲ" ಎಂದು ಅವರು ಹೇಳಿದರು. ಇದನ್ನು ಅನುಮತಿ ಇಲ್ಲದೆ ಮಾಡಿದ್ಧಾರೆ. ಬಿಸಿಲ ತಾಪಮಾನ ಹೆಚ್ಚಾಗುತ್ತಿದೆ ಎಂದಾದರೆ ವಿದ್ಯಾರ್ಥಿಗಳ ಕೋಣೆಗೆ ಆಧುನಿಕ ವ್ಯವಸ್ಥೆಗಳನ್ನು ಮಾಡಬಹುದಿತ್ತು. ಕೂಲರ್, ಫ್ಯಾನ್‌ಗಳನ್ನು ಬಳಸಬಹುದಿತ್ತು. ಸಾಂಪ್ರದಾಯಿಕ ಪದ್ದತಿಯನ್ನು ಕಲಿಕೆಯ ಜಾಗದಲ್ಲಿ ಪ್ರಯೋಗ ಮಾಡುವ ಅವಶ್ಯಕತೆ ಇರಲಿಲ್ಲ ಎಂಬ ರೀತಿ ಮಾತನಾಡಿದ್ದಾರೆ ಖತ್ರಿ.

ಪ್ರಾಂಶುಪಾಲೆ ವತ್ಸಲಾ ಹೇಳಿದ್ದೇನು?
ಏಪ್ರಿಲ್ 13 ರಂದು ಟೀಕೆಗೆ ಪ್ರತಿಕ್ರಿಯಿಸಿದ ಪ್ರಾಂಶುಪಾಲರು ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಭಾರತೀಯ ಜ್ಞಾನವನ್ನು ಬಳಸಿಕೊಂಡು ಶಾಖದ ಒತ್ತಡ ನಿಯಂತ್ರಣದ ಅಧ್ಯಯನ' ಎಂಬ ಸಂಶೋಧನಾ ಯೋಜನೆಯ ಭಾಗವಾಗಿ ಇದನ್ನು ಮಾಡಲಾಗಿದೆ ಹೊರತಾಗಿ ಇನ್ಯಾವುದೇ ಉದ್ದೇಶ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಇದೊಂದು ದೇಸಿ ಪ್ರಯತ್ನ ಎಂದು ಹೇಳಿದ್ದಾರೆ. ಪ್ರತ್ಯೂಷ್ ವತ್ಸಲಾ ಅವರ ಕಚೇರಿಯ ಗೋಡೆಗಳಿಗೆ ಈಗ ಸಗಣಿ ಬಳಿಯಲಾಗಿದೆ.

Suma Gaonkar

eMail

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.