ಪರೀಕ್ಷಾ ಅಕ್ರಮ ವಿವಾದ; ಕರ್ನಾಟಕದ ಐಎಎಸ್‌ ಅಧಿಕಾರಿ ಎನ್‌ಟಿಎಗೆ ಹಂಗಾಮಿ ಮುಖ್ಯಸ್ಥ, ಪ್ರದೀಪ್‌ ಸಿಂಗ್‌ ಖರೋಲಾ ಯಾರು- ಇಲ್ಲಿದೆ ಕಿರು ಪರಿಚಯ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪರೀಕ್ಷಾ ಅಕ್ರಮ ವಿವಾದ; ಕರ್ನಾಟಕದ ಐಎಎಸ್‌ ಅಧಿಕಾರಿ ಎನ್‌ಟಿಎಗೆ ಹಂಗಾಮಿ ಮುಖ್ಯಸ್ಥ, ಪ್ರದೀಪ್‌ ಸಿಂಗ್‌ ಖರೋಲಾ ಯಾರು- ಇಲ್ಲಿದೆ ಕಿರು ಪರಿಚಯ

ಪರೀಕ್ಷಾ ಅಕ್ರಮ ವಿವಾದ; ಕರ್ನಾಟಕದ ಐಎಎಸ್‌ ಅಧಿಕಾರಿ ಎನ್‌ಟಿಎಗೆ ಹಂಗಾಮಿ ಮುಖ್ಯಸ್ಥ, ಪ್ರದೀಪ್‌ ಸಿಂಗ್‌ ಖರೋಲಾ ಯಾರು- ಇಲ್ಲಿದೆ ಕಿರು ಪರಿಚಯ

ಪರೀಕ್ಷಾ ಅಕ್ರಮ ವಿವಾದ ಹೆಚ್ಚು ಸಂಚಲನ ಮೂಡಿಸಿದ್ದು, ಈ ನಡುವೆ, ಕರ್ನಾಟಕದ ಐಎಎಸ್‌ ಅಧಿಕಾರಿ ಎನ್‌ಟಿಎಗೆ ಹಂಗಾಮಿ ಮುಖ್ಯಸ್ಥರಾಗಿದ್ದಾರೆ. ಅಂದ ಹಾಗೆ, ಈ ಪ್ರದೀಪ್‌ ಸಿಂಗ್‌ ಖರೋಲಾ ಯಾರು- ಇಲ್ಲಿದೆ ಕಿರು ಪರಿಚಯ.

ಪರೀಕ್ಷಾ ಅಕ್ರಮ ವಿವಾದ; ಕರ್ನಾಟಕದ ಐಎಎಸ್‌ ಅಧಿಕಾರಿ ಪ್ರದೀಪ್‌ ಸಿಂಗ್‌ ಖರೋಲಾ ಎನ್‌ಟಿಎಗೆ ಹಂಗಾಮಿ ಮುಖ್ಯಸ್ಥ,
ಪರೀಕ್ಷಾ ಅಕ್ರಮ ವಿವಾದ; ಕರ್ನಾಟಕದ ಐಎಎಸ್‌ ಅಧಿಕಾರಿ ಪ್ರದೀಪ್‌ ಸಿಂಗ್‌ ಖರೋಲಾ ಎನ್‌ಟಿಎಗೆ ಹಂಗಾಮಿ ಮುಖ್ಯಸ್ಥ,

ನವದೆಹಲಿ: ಕರ್ನಾಟಕ ಬ್ಯಾಚ್‌ನ ಐಎಎಸ್‌ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ (ಎನ್‌ಟಿಎ) ಮಹಾನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಪರೀಕ್ಷಾ ಅಕ್ರಮಗಳ ವಿವಾದದ ನಡುವೆ, ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ನಿಕಟಪೂರ್ವ ಎನ್‌ಟಿಎ ಡಿಜಿ ಸುಬೋಧ್ ಕುಮಾರ್ ಸಿಂಗ್ ಅವರನ್ನು ಕಡ್ಡಾಯ ಕಾಯುವಿಕೆಯಲ್ಲಿ ಇರಿಸಲಾಗಿದೆ.

ಕರ್ನಾಟಕ ಕೇಡರ್ 1985ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ತಾತ್ಕಾಲಿಕ ಅವಧಿಗೆ ಎನ್‌ಟಿಎಯ ಹೊಸ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಪರೀಕ್ಷಾ ಅಕ್ರಮದ ಕಾರಣಕ್ಕೆ ಎನ್‌ಟಿಎ ಮುಖ್ಯಸ್ಥರ ವಜಾಗೆ ಪ್ರತಿಪಕ್ಷಗಳು ಆಗ್ರಹಿಸುತ್ತಲೇ ಇದ್ದವು. ಈ ಆಗ್ರಹಕ್ಕೆ ಸರ್ಕಾರ ಮಣಿದು, ಈ ಬದಲಾವಣೆ ಮಾಡಿದೆ.

ನೀಟ್‌-ಯುಜಿಯಲ್ಲೂ ಪೇಪರ್ ಸೋರಿಕೆಯ ಆರೋಪಗಳು ಮತ್ತು ಅದನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಸರ್ಕಾರವು ಯುಜಿಸಿ-ಎನ್‌ಇಟಿಯನ್ನು ರದ್ದುಗೊಳಿಸಿದೆ. ಸಿಎಸ್ಐಆರ್-ಯುಜಿಸಿ ನೆಟ್ ಅನ್ನು ಮುಂದೂಡುವುದಾಗಿ ಸರ್ಕಾರ ಶುಕ್ರವಾರ ಘೋಷಿಸಿತು.

ನೀಟ್‌ ಮತ್ತು ನೆಟ್‌ ಪರೀಕ್ಷೆಗಳಲ್ಲಿ ಆಪಾದಿತ ಅಕ್ರಮಗಳ ಕಾರಣ ಎನ್‌ಟಿಎಯ "ಉನ್ನತ ನಾಯಕತ್ವ"ದ ಮೇಲೆ ಕ್ರಮ ತೆಗೆದುಕೊಳ್ಳುವ ವಿಚಾರ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಹಿಂದೆ ಹೇಳಿದ್ದರು. ಆದಾಗ್ಯೂ, ಅವರು ಸಿಎಸ್‌ಐಆರ್‌-ಯುಜಿಸಿ-ನೆಟ್‌ನಲ್ಲಿ ಯಾವುದೇ ಪೇಪರ್ ಸೋರಿಕೆಯನ್ನು ನಿರಾಕರಿಸಿದರು. ಅದನ್ನು ಮುಂದೂಡಲಾಯಿತು.

ಪ್ರದೀಪ್ ಸಿಂಗ್ ಖರೋಲಾ ಯಾರು

1) ಕರ್ನಾಟಕ ಕೇಡರ್‌ನ 1985 ಬ್ಯಾಚ್‌ನ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರು 2017ರ ನವೆಂಬರ್‌ನಲ್ಲಿ ಏರ್ ಇಂಡಿಯಾದ ಮುಖ್ಯಸ್ಥರಾಗಿ ನೇಮಕಗೊಂಡರು.

2) ಖರೋಲಾ ಅವರ ಅಧಿಕಾರಾವಧಿಯಲ್ಲಿ, ಏರ್ ಇಂಡಿಯಾವನ್ನು ಖಾಸಗೀಕರಣಗೊಳಿಸುವ ತನ್ನ ಮೊದಲ ಪ್ರಯತ್ನದಲ್ಲಿ ಸರ್ಕಾರ ವಿಫಲವಾಗಿತ್ತು ಎಂದು ಮಿಂಟ್ ವರದಿ ಹೇಳಿದೆ.

3) ಖರೋಲಾ ಅವರು 2019ರಲ್ಲಿ ನಾಗರಿಕ ವಿಮಾನಯಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು.

4) ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಶನ್ (ITPO) ಅಧ್ಯಕ್ಷರಾಗಿ 2022 ರಿಂದ ಅವರು ಸೇವೆ ಸಲ್ಲಿಸುತ್ತಿದ್ದಾರೆ.

5) ನಿಯಿತ ಪದಾಧಿಕಾರಿಯನ್ನು ನೇಮಿಸುವವರೆಗೆ ಖರೋಲಾ ಅವರಿಗೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಹೆಚ್ಚುವರಿ ಉಸ್ತುವಾರಿ ವಹಿಸಲಾಗಿದೆ.

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಅಥವಾ ಎನ್‌ಟಿಎ

ಭಾರತೀಯ ಸಮಾಜಗಳ ನೋಂದಣಿ ಕಾಯಿದೆ, 1860 ರ ಪ್ರಕಾರ, 2017ರ ನವೆಂಬರ್‌ನಲ್ಲಿ ಸ್ಥಾಪಿಸಲಾದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA), ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಕ್ಕಾಗಿ ವಿವಿಧ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಒಂದು ಸ್ವಾಯತ್ತ ಸಂಸ್ಥೆಯಾಗಿದೆ. ಎನ್‌ಟಿಎ, ನೀಟ್‌, ಜೆಇಇ, ಸಿಟಿಇಟಿ, ಗೇಟ್, ಜಿಪ್ಯಾಟ್‌, ಜಿಮ್ಯಾಟ್‌, ಸಿಎಟಿ, ಯುಜಿಸಿ-ನೆಟ್‌ ಮತ್ತು ಸಿಎಸ್‌ಐಆರ್‌ ನೆಟ್‌ ನಂತಹ ಪರೀಕ್ಷೆಗಳನ್ನು ನಡೆಸುತ್ತದೆ.

ಶಿಕ್ಷಣ ಸಚಿವಾಲಯದಿಂದ ನೇಮಕಗೊಂಡ ಖ್ಯಾತ ಶಿಕ್ಷಣತಜ್ಞರು ಏಜೆನ್ಸಿಯ ಅಧ್ಯಕ್ಷರಾಗಿದ್ದಾರೆ, ಪ್ರಸ್ತುತ ಯುಪಿಎಸ್‌ಸಿಯ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಜೋಶಿ ಅವರು ಅಧ್ಯಕ್ಷರಾಗಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.