ಕನ್ನಡ ಸುದ್ದಿ  /  Nation And-world  /  Health News Heart Attacks In Youth Cardiac Arrest Covid 19 Delhi Aiims Research Today News Health News In Kannada Uks

Heart Attacks: ಯುವಕರ ಎದೆಬಡಿತ ಇದ್ದಕ್ಕಿದ್ದಂತೆ ನಿಲುತ್ತಿದೆ, ಕೊರೊನಾಗೆ ಸಂಬಂಧ ಇದೆಯಾ; ರಿಸರ್ಚ್‌ ನಡೆಸುತ್ತಿದೆ ದೆಹಲಿ ಏಮ್ಸ್‌

Heart attacks in youth: ರಾಷ್ಟ್ರಮಟ್ಟದ ವಾಲಿಬಾಲ್ ಪಂದ್ಯಾಕೂಟಗಳಲ್ಲಿ ಭಾಗವಹಿಸಿದ್ದ 24 ವರ್ಷದ ಸಾಲಿಯತ್ (saliat) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ರೀತಿ ಯುವಜನರು ಹಠಾತ್‌ ಹೃದಯಾಘಾತಕ್ಕೆ ಒಳಗಾಗುತ್ತಿರುವುದರ ಬಗ್ಗೆ ದೆಹಲಿ ಏಮ್ಸ್‌ ಸಂಶೋಧನೆ ನಡೆಸಿದೆ. ಇದರ ವಿವರ ಇಲ್ಲಿದೆ.

ಯುವಜನರಲ್ಲಿ ಹೃದಯಸ್ತಂಭನದ ಕುರಿತು ಏಮ್ಸ್‌ ದೆಹಲಿಯ ಸಂಶೋಧನಾ ವರದಿ
ಯುವಜನರಲ್ಲಿ ಹೃದಯಸ್ತಂಭನದ ಕುರಿತು ಏಮ್ಸ್‌ ದೆಹಲಿಯ ಸಂಶೋಧನಾ ವರದಿ

ಕೊರೊನಾ ಸಂಕಷ್ಟದ ನಂತರದಲ್ಲಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಹಠಾತ್‌ ಹೃದಯ ಸ್ತಂಭನಕ್ಕೆ ಒಳಗಾಗುತ್ತಿರುವುದು ಕಂಡುಬಂದಿದೆ. ಬೇರೆ ಬೇರೆ ಸಂದರ್ಭಗಳಲ್ಲಿ ಈ ರೀತಿ ಆಗುತ್ತಿರುವುದು ಕೂಡ ಗಮನಾರ್ಹ.

ಕೆಲವರು ನೃತ್ಯ ಮಾಡುವಾಗ, ಇನ್ನು ಕೆಲವರು ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗ, ವಾಕಿಂಗ್‌ ಮಾಡುತ್ತಿರುವಾಗ ಹೀಗೆ ನಾನಾ ಸಂದರ್ಭಗಳಲ್ಲಿ ಹಠಾತ್‌ ಹೃದಯ ಸ್ತಂಭನಕ್ಕೆ ಒಳಗಾಗಿ ಮೃತಪಟ್ಟ ಪ್ರಕರಣಗಳು ಗಮನಸೆಳದಿವೆ. ಆದ್ದರಿಂದ ಈ ಸಾವಿನ ಕಾರಣಗಳನ್ನು ಕಂಡುಹಿಡಿಯಲು ದೆಹಲಿಯ ಏಮ್ಸ್‌ ಸಂಶೋಧನೆ ನಡೆಸಿತು.

ಸೋಷಿಯಲ್‌ ಮೀಡಿಯಾಗಳಲ್ಲಿ ಗಮನಸೆಳೆಯುತ್ತಿವೆ ವಿಡಿಯೋಗಳು

ಕುಣಿದು ಕುಪ್ಪಳಿಸುವಾಗ, ಊಟ ಮಾಡುವಾಗ, ನಿಂತಲ್ಲೇ ಬಿದ್ದು ಪ್ರಾಣ ಕಳೆದುಕೊಂಡ ದೃಶ್ಯಗಳ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ, ಆಗುತ್ತಲೇ ಇವೆ. ಈ ರೀತಿ ಮೃತಪಟ್ಟವರು ಬಹುತೇಕ ಸಣ್ಣ ವಯಸ್ಸಿನವರು.

ಯುವಜನರ ಹಠಾತ್‌ ಸಾವು ಹೆಚ್ಚಾದ ಕಾರಣ, ಈ ಬಗ್ಗೆ ಸಂಶೋಧನೆ ಆಗಬೇಕು ಎಂಬ ವ್ಯಾಪಕವಾದ ಬೇಡಿಕೆ ಗಮನಸೆಳದಿತ್ತು. ಇದು ದೆಹಲಿ ಏಮ್ಸ್‌ನ ಗಮನಕ್ಕೂ ಬಂದಿತ್ತು. ಇದಕ್ಕಾಗಿ ಈ ರೀತಿ ಮೃತಪಟ್ಟ ಯುವಜನರ ಮರಣೋತ್ತರ ಪರೀಕ್ಷೆ ಮತ್ತು ಇತರ ಆಧುನಿಕ ತಂತ್ರ ಬಳಸಿ ಸಂಶೋಧನೆ ನಡೆಸಲಾಯಿತು.

ಕೊರೋನಾ ಸಮಯದಲ್ಲಿ ಸಾವನ್ನಪ್ಪಿದ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಕರೋನಾ ನಂತರ ಸಾವನ್ನಪ್ಪಿದವರ ಬಗ್ಗೆ ತುಲನಾತ್ಮಕ ಸಂಶೋಧನೆ ನಡೆಯಿತು. ಈ ಸಂದರ್ಭದಲ್ಲಿ ಕರೋನಾದಿಂದ ಸಾವನ್ನಪ್ಪಿದ 250 ಜನರ ಶವಪರೀಕ್ಷೆ ವರದಿಗಳನ್ನು ಇದರಲ್ಲಿ ಸೇರಿಸಲಾಗಿದೆ. 200 ಶವಪರೀಕ್ಷೆಯ ವರದಿಯನ್ನು ಗಣನೆಗೆ ತೆಗೆದುಕೊಂಡು ನಂತರ ಸಂಶೋಧನೆ ಮಾಡಲಾಗಿದೆ.

ಏಮ್ಸ್‌ನಲ್ಲಿ ನಡೆದಿತ್ತು 30 ಶವಪರೀಕ್ಷೆ

ವ್ಯಕ್ತಿಯು ಸಾಯುವ ಮೊದಲು ಒಂದು ಅಥವಾ ಎರಡು ಬಾರಿ ಕರೋನಾ ಸೋಂಕನ್ನು ಹೊಂದಿದ್ದಾನೋ ಇಲ್ಲವೋ ಎಂಬುದನ್ನು ಸಹ ಮನಸ್ಸಿನಲ್ಲಿಟ್ಟುಕೊಂಡು ಸಂಶೋಧನೆ ನಡೆಸಲಾಗಿತ್ತು. 45 ವರ್ಷಕ್ಕಿಂತ ಕಡಿಮೆ ವಯಸ್ಸಿನ 30 ಜನರ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗಿದೆ. ಏಮ್ಸ್ ನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ನೇತೃತ್ವದಲ್ಲಿ ಸಂಶೋಧನೆ ನಡೆಯಿತು ಎಂದು ವರದಿ ಹೇಳಿದೆ.

ಮೂರು ವಿಷಯಗಳ ಮೇಲೆ ಕೇಂದ್ರೀಕರಿಸಿ ಸಂಶೋಧನೆ

1. ಮೊದಲನೆಯದಾಗಿ, ಮೆದುಳಿನ ರಕ್ತನಾಳಗಳಲ್ಲಿ ಯಾವುದೇ ಅಡಚಣೆಯಿಲ್ಲ, ಅದು ಮೆದುಳಿನ ರಕ್ತಸ್ರಾವಕ್ಕೆ ಕಾರಣವಾಗಬಹುದು.

2. ಶ್ವಾಸಕೋಶದಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದ ಕಾರಣ ಉಸಿರಾಟದ ತೊಂದರೆ ಉಂಟಾಗುತ್ತದೆ.

3. ಹೃದಯ ಸಂಬಂಧಿ ಸಮಸ್ಯೆಗಳು, ಇದರಿಂದಾಗಿ ಹೃದಯವು ಇದ್ದಕ್ಕಿದ್ದಂತೆ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

ಸಂಶೋಧನೆಯಲ್ಲಿ ಮೃತರ ಮೆದುಳು, ಹೃದಯ, ಶ್ವಾಸಕೋಶಗಳನ್ನು ಪರೀಕ್ಷಿಸಿ, ಸಾವಿಗೆ ಕಾರಣವೇನು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆದಿದೆ.

ಇತ್ತೀಚಿನ ಪ್ರಕರಣಗಳು

● ಇಂದೋರ್‌ನಿಂದ ಪುಣೆಗೆ ಹೋಗುತ್ತಿದ್ದ ಬಸ್‌ನ ಕಂಡಕ್ಟರ್ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ

● ಹಿಮಾಚಲ ಪ್ರದೇಶದ ಸಿರ್ಮೂರ್ ಜಿಲ್ಲೆಯ ಪೌಂಟಾ ಸಾಹಿಬ್ ಉಪವಿಭಾಗದ ಅಂಬೋಯಾದಲ್ಲಿ ಮದುವೆ ಸಮಾರಂಭದಲ್ಲಿ ಯುವಕನೊಬ್ಬ ನೃತ್ಯ ಮಾಡುತ್ತಿದ್ದಾಗ ಹಠಾತ್ ಸಾವನ್ನಪ್ಪಿದ್ದಾನೆ.

● ಛತ್ತೀಸ್‌ಗಢದಲ್ಲಿ, ಒಬ್ಬ ವ್ಯಕ್ತಿ ತನ್ನ ಸೊಸೆಯ ಮದುವೆಯಲ್ಲಿ ನೃತ್ಯ ಮಾಡುವಾಗ ಸಾವನ್ನಪ್ಪಿದ್ದಾನೆ. ನಂತರ ಆಕೆಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

● ಉತ್ತರಾಖಂಡದ ಹಲ್ದ್ವಾನಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಗಬುವಾದಲ್ಲಿ ಶಿಕ್ಷಕಿ ಪಾಠ ಮಾಡುತ್ತಿದ್ದಾಗ ಹಠಾತ್ ಸಾವನ್ನಪ್ಪಿದ್ದಾರೆ.

IPL_Entry_Point