ಆಪರೇಷನ್ ಸಿಂದೂರ: ಸೇನೆಯ ವಿಶ್ವಾಸ ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ ಸಲ್ಯೂಟ್- ರಾಜಾರಾಂ ತಲ್ಲೂರು ಬರಹ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್ ಸಿಂದೂರ: ಸೇನೆಯ ವಿಶ್ವಾಸ ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ ಸಲ್ಯೂಟ್- ರಾಜಾರಾಂ ತಲ್ಲೂರು ಬರಹ

ಆಪರೇಷನ್ ಸಿಂದೂರ: ಸೇನೆಯ ವಿಶ್ವಾಸ ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ ಸಲ್ಯೂಟ್- ರಾಜಾರಾಂ ತಲ್ಲೂರು ಬರಹ

ರಾಜರಾಮ್‌ ತಲ್ಲೂರು ಬರಹ: ತನ್ನ ಕಾರ್ಯಾಚರಣೆಯನ್ನು ಇಷ್ಟೊಂದು ಸ್ಪಷ್ಟತೆಯಿಂದ, ಫಲಿತಾಂಶ ಸಹಿತ ಪ್ರಸ್ತುತಪಡಿಸಿದ ಮತ್ತು ಸೇನೆಯ ಕುರಿತು ದೇಶದ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ “ಸಲ್ಯೂಟ್!” ಎಂದು ರಾಜಾರಾಂ ತಲ್ಲೂರು ಬರೆದಿದ್ದಾರೆ.

ಆಪರೇಷನ್‌ ಸಿಂಧೂರ: ಸೇನೆಯ ವಿಶ್ವಾಸ ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ ಸಲ್ಯೂಟ್- ರಾಜಾರಾಂ ತಲ್ಲೂರು ಬರಹ
ಆಪರೇಷನ್‌ ಸಿಂಧೂರ: ಸೇನೆಯ ವಿಶ್ವಾಸ ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ ಸಲ್ಯೂಟ್- ರಾಜಾರಾಂ ತಲ್ಲೂರು ಬರಹ

ಭಾರತೀಯ ಸೇನಾಪಡೆಯ ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ರಾಜರಾಮ್‌ ತಲ್ಲೂರು ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದ ಬರಹ ಗಮನ ಸೆಳೆಯುತ್ತದೆ. ತನ್ನ ಕಾರ್ಯಾಚರಣೆಯನ್ನು ಇಷ್ಟೊಂದು ಸ್ಪಷ್ಟತೆಯಿಂದ, ಫಲಿತಾಂಶ ಸಹಿತ ಪ್ರಸ್ತುತಪಡಿಸಿದ ಮತ್ತು ಸೇನೆಯ ಕುರಿತು ದೇಶದ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ “ಸಲ್ಯೂಟ್!” ಎಂದು ಅವರು ಹೇಳಿದ್ದಾರೆ.

ರಾಜಾರಾಂ ತಲ್ಲೂರು ಬರಹ

ಈ ಡಿಟೇಲಿಂಗ್ – ಇಷ್ಟವಾಯಿತು... ಭಾರತೀಯ ಸೇನೆ ತನ್ನ ಪಾಡಿಗೆ ತನ್ನ ಕೆಲಸವನ್ನು ಬಹಳ ತಂತ್ರಗಾರಿಕೆಯೊಂದಿಗೆ, ನಿಖರವಾಗಿ, ಫಲಿತಾಂಶ ಸಹಿತ ಮಾಡಿ ಮುಗಿಸಿದೆ. ಮಾತ್ರವಲ್ಲ, ತನ್ನ ಈ ಕಾರ್ಯಾಚರಣೆಯ ಬಗ್ಗೆ ದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ, ದೇಶದಿಂದ ಹೊರಗೆ ಜಗತ್ತಿಗೆ ಕಳುಹಿಸಬೇಕಾಗಿರುವ ಸಂದೇಶವನ್ನು ಗೊಂದಲಕ್ಕೆಡೆಯಿಲ್ಲದಂತೆ ಕಳುಹಿಸುವಲ್ಲಿ ವಹಿಸಿದ ಎಚ್ಚರ ಕೂಡ ಶ್ಲಾಘನಾರ್ಹ.

ಇಂತಹ ಸೇನಾ ಕಾರ್ಯಾಚರಣೆಯ ಸುದ್ದಿಗಳನ್ನು ಸಾಂಪ್ರದಾಯಿಕವಾಗಿ ನೀಡುವುದು ಭಾರತ ಸರ್ಕಾರದ ರಕ್ಷಣಾ ಇಲಾಖೆ (MoD) ಮತ್ತು ಸೇನೆಯ ವಕ್ತಾರರು. ನಿನ್ನೆ ತಡರಾತ್ರಿಯ ಕಾರ್ಯಾಚರಣೆಯ ಬಳಿಕ, ಇಂದು ಬೆಳಗ್ಗೆ ಪ್ರೆಸ್ ಬ್ರೀಫಿಂಗ್ ಇದೆ ಎಂದು ಪ್ರಕಟಿಸಿದ್ದು, ಎಂದಿನಂತೆ MoD. ಆದರೆ, ಬ್ರೀಫಿಂಗ್ ವೇಳೆ ಅಚ್ಚರಿ ಕಾದಿತ್ತು.

ಮಾಧ್ಯಮ ಬ್ರೀಫಿಂಗ್ ಹೊಣೆ ಹೊತ್ತದ್ದು MoD ಅಧಿಕಾರಿಗಳಲ್ಲ, ಬದಲಾಗಿ ದೇಶದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ. ಅವರು ಈ ಹಿಂದೆ ಚೀನಾಕ್ಕೆ ಭಾರತದ ರಾಯಭಾರಿ ಆಗಿದ್ದವರು. ಇದು ಬಲುದೊಡ್ಡ ಸಂದೇಶ. ಏಕೆಂದರೆ, ನಡೆದಿರುವುದು ಯುದ್ಧ ಅಲ್ಲ, ಬದಲಾಗಿ ದೇಶದ ಭದ್ರತೆಯನ್ನು ಭೇದಿಸಿ, ದೇಶಕ್ಕೆ ಹಾನಿ ಮಾಡಿದ ಭಯೋತ್ಪಾದಕರ ಮೂಲಸ್ಥಾನಗಳ ಮೇಲೆ, ಅವರನ್ನು ಶಿಕ್ಷಿಸುವುದಕ್ಕಾಗಿ ನಡೆದ ಪ್ರತಿ ದಾಳಿ. ಶತ್ರು ದೇಶದ ಸಿವಿಲಿಯನ್, ಮಿಲಿಟರಿ ನೆಲೆಗಳು ಈ ದಾಳಿಯ ಗುರಿ ಅಲ್ಲ. ಹಾಗಾಗಿ, ಇಲ್ಲಿ ಯುದ್ಧದ ಪ್ರಶ್ನೆ ಏಳುವುದಿಲ್ಲ. ಈ ಕಾರಣಕ್ಕಾಗಿ, ಜಗತ್ತಿಗೆ ಈ ಸಂದೇಶ ಸಾರಲು ವಿದೇಶಾಂಗ ಕಾರ್ಯದರ್ಶಿಗಳು ಸಮರ್ಪಕವಾದ ಆಯ್ಕೆ.

ನಡೆದಿರುವ ಕಾರ್ಯಾಚರಣೆಗಳನ್ನು ವಿವರಿಸಿದ್ದು, ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಎಂಬ ಇಬ್ಬರು ಮಹಿಳಾ ಸೇನಾಧಿಕಾರಿಗಳು. ಸಾಮಾನ್ಯವಾಗಿ ಭೂಸೇನೆಯ ಹಿರಿಯ ಅಧಿಕಾರಿಯೊಬ್ಬರು ಇಂತಹವನ್ನು ನಿಭಾಯಿಸುವುದು ವಾಡಿಕೆ. ಆದರೆ, 2020ರಲ್ಲಿ ಸೇನೆಯ ಮೂರೂ ವಿಭಾಗಗಳನ್ನು ಏಕತ್ರಗೊಳಿಸಿ, “ಚೀಫ್ ಆಫ್ ಡಿಫೆನ್ಸ್ ಸ್ಟಾಫ್” ಎಂಬ ಮೂರೂ ಪಡೆಗಳ ಮುಖ್ಯಸ್ಥರ ಹುದ್ದೆ (ಈಗ ಈ ಹುದ್ದೆಯಲ್ಲಿರುವವರು ಜ| ಅನಿಲ್ ಚೌಹಾಣ್) ನೇಮಕ ಆದ ಬಳಿಕ, ಸೇನಾಪಡೆಗಳ ನಡುವಿನ “ಥಿಯೇಟರೈಸೇಷನ್” ಸಮನ್ವಯ ಮುಪ್ಪುರಿಗೊಳ್ಳತೊಡಗಿದೆ. ಈ ಪ್ರಕ್ರಿಯೆಯ ಫಲಿತಾಂಶವಾಗಿ ಕಾರ್ಪ್ಸ್ ಆಫ್ ಸಿಗ್ನಲ್ಸ್‌ (ಮಿಲಿಟರಿ ಸಂವಹನ) ಪಡೆಯ ಕರ್ನಲ್ ದರ್ಜೆಯ ಅಧಿಕಾರಿ ಮತ್ತು ವಾಯಪಡೆಯ ಹೆಲಿಕಾಪ್ಟರ್ ಪೈಲಟ್ ಆಗಿರುವ ವಿಂಗ್ ಕಮಾಂಡರ್ ಇಬ್ಬರೂ ಒಂದೇ ಸ್ವರದಲ್ಲಿ ತಮ್ಮ ಸೇನಾಪಡೆಗಳ ಕಾರ್ಯಾಚರಣೆಯನ್ನು ಜಗತ್ತಿಗೆ ವಿವರಿಸುವುದು ಸಾಧ್ಯವಾಯಿತು.

ವಿವರಣೆ ನೀಡಿದ ಬಳಿಕ, ವಿದೇಶಾಂಗ ಕಾರ್ಯದರ್ಶಿಗಳು, ಪತ್ರಕರ್ತರ ಪ್ರಶ್ನೆಗಳಿಗೂ ಅವಕಾಶ ನೀಡದೇ, ಈಗಿನ್ನೂ ಪರಿಸ್ಥಿತಿ “ಬೆಳವಣಿಗೆಯ ಹಂತದಲ್ಲಿದೆ” ಎಂದು ಹೇಳಿ ಗೋಷ್ಠಿಯನ್ನು ಮುಗಿಸಿದ್ದು ಕೂಡ – ಇದೆಲ್ಲವೂ ಸುಯೋಜಿತ ಎಂಬುದನ್ನು ಖಚಿತಪಡಿಸುತ್ತದೆ. ತನ್ನ ಕಾರ್ಯಾಚರಣೆಯನ್ನು ಇಷ್ಟೊಂದು ಸ್ಪಷ್ಟತೆಯಿಂದ, ಫಲಿತಾಂಶ ಸಹಿತ ಪ್ರಸ್ತುತಪಡಿಸಿದ ಮತ್ತು ಸೇನೆಯ ಕುರಿತು ದೇಶದ ಜನರ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ ಭಾರತೀಯ ಸೇನಾಪಡೆಗಳಿಗೆ “ಸಲ್ಯೂಟ್!”

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.