ಯೋಗ ಮಾಡುತ್ತಲೇ ಬರೋಬ್ಬರಿ 129 ವರ್ಷ ಬದುಕಿದ, ಭಾರತದ ಅತ್ಯಂತ ಹಿರಿಯರಾದ ಪದ್ಮಶ್ರೀ ಸ್ವಾಮಿ ಶಿವಾನಂದ ನಿಧನ
ತಮ್ಮ ವಿಶಿಷ್ಟ ದಿನಚರಿ, ಯೋಗ ಚಟುವಟಿಕೆಗಳ ಮೂಲಕವೇ ಗಮನ ಸೆಳೆದಿದ್ದ ಪದ್ಮಶ್ರೀ ಪುರಸ್ಕೃತರೂ ಆಗಿದ್ದ ಸ್ವಾಮಿ ಶಿವಾನಂದ ಅವರು ವಾರಣಾಸಿಯಲ್ಲಿ ನಿಧನರಾಗಿದ್ದಾರೆ.

ವಾರಾಣಸಿ: ನಿರಂತರ ಯೋಗ ಮಾಡುತ್ತಲೇ ಆರೋಗ್ಯವನ್ನು ಜತನದಿಂದ ಕಾಪಾಡಿಕೊಂಡು ಬಂದ ಭಾರತದ ಅತ್ಯಂತ ಹಿರಿಯ ಜೀವಿ ಎನ್ನಿಸಿದ್ದ ಸ್ವಾಮಿ ಶಿವಾನಂದ ಅವರು ನಿಧನರಾಗಿದ್ದಾರೆ. ಅವರಿಗೆ 129 ವರ್ಷ ಎನ್ನುವುದೇ ವಿಶೇಷ. ಮೂರು ವರ್ಷದ ಹಿಂದೆ ಅವರಿಗೆ ಭಾರತ ಸರ್ಕಾರವು ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು.ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗೆಂದು ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಬಿಎಚ್ಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲ ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಶಿವಾನಂದ ಅವರು ಶನಿವಾರ ರಾತ್ರಿ ಅವರು ಮೃತರಾಗಿದ್ದಾರೆ, ಬಾಬಾ ಶಿವಾನಂದ್ ಅವರಿಗೆ 129 ವರ್ಷ ವಯಸ್ಸಾಗಿತ್ತು ಮತ್ತು ವಾರಣಾಸಿಯ ಕಬೀರ್ ನಗರದ ನಿವಾಸಿಯಾಗಿದ್ದರು ಎಂದು ಅವರ ಆಪ್ತರು ತಿಳಿಸಿದ್ದಾರೆ. ಅವರು ತಮ್ಮ ಯೋಗ ಮತ್ತು ದಿನಚರಿಯ ಮೂಲಕ ದೀರ್ಘಾಯುಷ್ಯಕ್ಕಾಗಿ ದೇಶಾದ್ಯಂತ ಶಿವಾನಂದ ಹೆಸರುವಾಸಿಯಾಗಿದ್ದರು. ಭಾರತದ ಅತ್ಯಂತ ಹಿರಿಯ ಎಂದು ಅವರನ್ನು ಗುರುತಿಸಲಾಗುತ್ತಿತ್ತು.
ಯೋಗ ಗುರು ಸ್ವಾಮಿ ಶಿವಾನಂದ ಬಾಬಾ ಅವರು ಕಳೆದ 100 ವರ್ಷಗಳಲ್ಲಿ ಜರುಗಿರುವ ಎಲ್ಲಾ ಕುಂಭಮೇಳಗಳಲ್ಲೂ ಭಾಗಿಯಾಗಿದ್ದರು. ಈ ಕುಂಭ ಮೇಳದಲ್ಲೂ ಅವರು ಪಾಲ್ಗೊಂಡಿದ್ದರು.
ಶಿವಾನಂದ ಅವರಿಗೆ 2022ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪದ್ಮಶ್ರೀ ಪ್ರದಾನ ಮಾಡಿ ಗೌರವಿಸಿದ್ದರು. ಯೋಗ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಅವರು ಪದ್ಮಶ್ರೀ ಪ್ರಶಸ್ತಿಯನ್ನು ತಮ್ಮ 125 ವರ್ಷ ವಯಸ್ಸಿನಲ್ಲಿ ಯೋಗ ಗುರು ಸ್ವಾಮಿ ಶಿವಾನಂದ ಸ್ವೀಕರಿಸಿದ್ದರು. ಪದ್ಮ ಪುರಸ್ಕಾರ ಪಡೆದ ಪಡೆದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸ್ವಾಮಿ ಶಿವಾನಂದ ಅವರಿಗೆ 2019 ರಲ್ಲಿ ಬೆಂಗಳೂರಿನಲ್ಲಿ ಯೋಗ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪಟ್ಟಮಡೈನಲ್ಲಿ ಜನಿಸಿದ ಸ್ವಾಮಿ ಶಿವಾನಂದರು ಯೋಗ, ವೇದಾಂತ ಮತ್ತು ವಿವಿಧ ವಿಷಯಗಳ ಕುರಿತು 296 ಪುಸ್ತಕಗಳನ್ನು ಬರೆದಿದ್ದಾರೆ. ಅವರ ಪುಸ್ತಕಗಳು ಸೈದ್ಧಾಂತಿಕ ಜ್ಞಾನಕ್ಕಿಂತ ಯೋಗ ತತ್ವಶಾಸ್ತ್ರದ ಪ್ರಾಯೋಗಿಕ ಅನ್ವಯಕ್ಕೆ ಒತ್ತು ನೀಡಿವೆ.
ತಮಿಳು ನಾಡಿನಲ್ಲಿ ಜನನ
ಆಗಸ್ಟ್ 1896 ರಲ್ಲಿ ಜನಿಸಿದ 125 ವರ್ಷ ವಯಸ್ಸಿನ ಯೋಗ ದಂತಕಥೆ ಎಂದೇ ಕರೆಯಲಾಗುತ್ತದೆ.ಹೊರತಾಗಿಯೂ, ಅವರು ಇನ್ನೂ ಗಂಟೆಗಟ್ಟಲೆ ಯೋಗವನ್ನು ಪ್ರದರ್ಶಿಸುವಷ್ಟು ಬಲಶಾಲಿಯಾಗಿದ್ದಾರೆ ಎಂದು ಪದ್ಮ ಪ್ರಶಸ್ತಿ ಪುರಸ್ಕೃತರ ಕುರಿತು ರಾಷ್ಟ್ರಪತಿ ಭವನದ ಬರಹದಲ್ಲಿ ತಿಳಿಸಲಾಗಿತ್ತು .
ಸ್ವಾಮಿ ಶಿವಾನಂದರು 6 ವರ್ಷ ವಯಸ್ಸಾಗುವ ಮೊದಲೇ ತಮ್ಮ ಹೆತ್ತವರು ಮತ್ತು ಸಹೋದರಿಯನ್ನು ಕಳೆದುಕೊಂಡರು. ಆ ಸಮಯದಲ್ಲಿ, ಅವರು ತಮ್ಮ ಕುಟುಂಬದ ಅಂತ್ಯಕ್ರಿಯೆಯನ್ನು ನಿರಾಕರಿಸಿ ಬ್ರಹ್ಮಚರ್ಯದ ಮಾರ್ಗವನ್ನು ಆರಿಸಿಕೊಂಡರು. ಅವರ ಸಂಬಂಧಿಕರು ಅವರನ್ನು ಆಧ್ಯಾತ್ಮಿಕ ಗುರುಗಳಿಗೆ ಒಪ್ಪಿಸಿದರು. ಅವರನ್ನು ಪಶ್ಚಿಮ ಬಂಗಾಳದ ನಬದ್ವೀಪದಲ್ಲಿರುವ ಅವರ ಗುರುಜಿಯ ಆಶ್ರಮಕ್ಕೆ ಕರೆತರಲಾಯಿತು. ಗುರು ಓಂಕಾರಾನಂದ ಗೋಸ್ವಾಮಿ ಅವರನ್ನು ಬೆಳೆಸಿದರು, ಶಾಲಾ ಶಿಕ್ಷಣವಿಲ್ಲದೆ ಯೋಗ ಸೇರಿದಂತೆ ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು, ಅವರೊಂದಿಗೆ ಲಂಡನ್ನಿಂದ ಪ್ರಾರಂಭಿಸಿ, ಸ್ವಾಮಿ ಯುರೋಪ್, ರಷ್ಯಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ 34 ದೇಶಗಳಲ್ಲಿ ಪ್ರಯಾಣಿಸಿದರು.ಸ್ವಾಮಿಗಳು ತಮ್ಮ ಜೀವನವನ್ನು ಸಮಾಜದ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟರು ಮತ್ತು ತಮ್ಮ ವಯಸ್ಸನ್ನು ಯೋಗ, ಶಿಸ್ತು ಮತ್ತು ಬ್ರಹ್ಮಚರ್ಯಕ್ಕೆ ಋಣಿಯಾಗಿದ್ದರು.
ಸ್ವಾಮಿ ಶಿವಾನಂದರ ದಿನಚರಿ , ಆಹಾರ ಪದ್ಧತಿ
ಸ್ವಾಮಿ ಬೆಳಗಿನ ಜಾವ 3 ಗಂಟೆಗೆ ಬೇಗನೆ ಎದ್ದು ನಿತ್ಯದ ದಿನಚರಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು. 1.58 ಮೀಟರ್ ಎತ್ತರವಿರುವ ಶಿವಾನಂದ ನೆಲದ ಮೇಲೆ ಚಾಪೆಯ ಮೇಲೆ ಮಲಗುತ್ತಿದ್ದರು. ಮರದ ಚಪ್ಪಡಿಯನ್ನು ದಿಂಬಿನಂತೆ ಬಳಸುತ್ತಿದ್ದರು.ಅವರು ಸರಳ ಜೀವನ ನಡೆಸುತ್ತಿದ್ದರು. ಸರಳ ಆಹಾರವನ್ನು ಸೇವಿಸುತ್ತಿದ್ದರು. ತು ತಮ್ಮ ನಿಸ್ವಾರ್ಥ ಸೇವೆಯಿಂದ ಇತರರಿಗೆ ಮಾದರಿಯಾಗಿದ್ದರು. ಸರಳ ಜೀವನ, ಉದಾತ್ತ ಚಿಂತನೆ ಅವರ ಬದುಕಿನ ಭಾಗವಾಗಿದ್ದರಿಂದಲೇ ಇಷ್ಟು ವರ್ಷ ಬದುಕಲು ಸಾಧ್ಯವಾಯಿತು ಎಂದು ಅವರ ಆಪ್ತೇಷ್ಟರು ತಿಳಿಸಿದ್ದಾರೆ.
ಸೇವೆಯೇ ಬದುಕು
ಜಗತ್ತೇ ನನ್ನ ಮನೆ, ಅದರ ಜನರು ನನ್ನ ತಂದೆ ಮತ್ತು ತಾಯಂದಿರು, ಅವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ನನ್ನ ಧರ್ಮ" ಎಂದು ಅವರು ನಂಬುತ್ತಿದ್ದರು. ಅವರು ಕಾಶಿ ಘಾಟ್ಗಳಲ್ಲಿ ಯೋಗಾಭ್ಯಾಸ ಮತ್ತು ಬೋಧನೆ ಮಾಡುತ್ತಲೇ ಜೀವನ ಸಾಗಿಸುತ್ತಿದ್ದರು ಮಾನವ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು 50 ವರ್ಷಗಳಿಂದ ಪುರಿಯಲ್ಲಿ ಕುಷ್ಠರೋಗ ಪೀಡಿತ ಜನರಿಗೆ ಸೇವೆ ಸಲ್ಲಿಸುತ್ತಿದ್ದರು. ಅವರ ಆರೋಗ್ಯಕರ ಮತ್ತು ದೀರ್ಘಾಯುಷ್ಯವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆದಿ