ಶ್ರೀ ವಿಶ್ವಾವಸು ಸಂವತ್ಸರ: 1905 ಬಂಗಾಳ ವಿಭಜನೆ 1965 ಪಾಕ್ಗೆ ಮುಖಭಂಗ; 2025 ಆಪರೇಷನ್ ಸಿಂದೂರ
ಇದು 2025ರ ಶ್ರೀ ವಿಶ್ವಾವಸು ಸಂವತ್ಸರ. ಆಪರೇಷನ್ ಸಿಂದೂರ ಶುರುವಾಗಿದೆ. ಇದಕ್ಕೂ ಮೊದಲು ಶ್ರೀ ವಿಶ್ವಾವಸು ಸಂವತ್ಸರ 1905ರಲ್ಲಿ ಬಂದಾಗ ಬಂಗಾಳ ವಿಭಜನೆ ಆಗಿತ್ತು. 1965ರಲ್ಲಿ ಬಂದಾಗ ಪಾಕಿಸ್ತಾನ ಯುದ್ಧಕ್ಕೆರಗಿತ್ತಾದರೂ, ಭಾರತದ ಯುದ್ಧ ಟಾಂಕ್ಗಳು ಅದರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿದ್ದವು. ಈ ವಿದ್ಯಮಾನಗಳು ಈಗ 2 ಮುಖ್ಯ ಸಾಧ್ಯತೆಗಳನ್ನು ಎತ್ತಿ ತೋರಿಸಿವೆ.

ಶ್ರೀ ವಿಶ್ವಾವಸು ಸಂವತ್ಸರದ ಫಲಾಫಲಗಳನ್ನು ಗಮನಿಸುವಾಗ ಕಳೆದ ಎರಡು ಶ್ರೀವಿಶ್ವಾವಸು ಸಂವತ್ಸರ ಭಾರತ ಮತ್ತು ಸುತ್ತಮುತ್ತಲಿನ ಭೌಗೋಳಿಕ ಪ್ರದೇಶದ ಮೇಲೆ ಪರಿಣಾಮ ಬೀರುವ ವಿದ್ಯಮಾನಗಳು ಘಟಿಸಿರುವುದು ಗಮನಸೆಳೆಯುತ್ತದೆ. ಪ್ರಸ್ತುತ ನಾವು ಶ್ರೀ ವಿಶ್ವಾವಸು ಸಂವತ್ಸರದ ಕಾಲಘಟ್ಟದಲ್ಲಿದ್ದೇವೆ. ಇದಕ್ಕೂ ಮೊದಲು ಶ್ರೀ ವಿಶ್ವಾವಸು ಸಂವತ್ಸರ 1905ರಲ್ಲಿ ಬಂದಾಗ ಬಂಗಾಳ ವಿಭಜನೆ ಆಗಿತ್ತು. 1965ರಲ್ಲಿ ಬಂದಾಗ ಪಾಕಿಸ್ತಾನ ಯುದ್ಧಕ್ಕೆರಗಿತ್ತಾದರೂ, ಭಾರತದ ಯುದ್ಧ ಟಾಂಕ್ಗಳು ಅದರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿದ್ದವು. ಈಗ 2025ರ ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಮತ್ತೆ ಪಾಕಿಸ್ತಾನ ಕಾಲ್ಕೆರೆದು ಭಯೋತ್ಪಾದನೆ ಮೂಲಕ ಛಾಯಾ ಸಮರಕ್ಕೆ ಬಂದ ಕಾರಣ ಭಾರತದ ಆಪರೇಷನ್ ಸಿಂದೂರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸವನ್ನು ನೆನಪಿಸಿಕೊಂಡು ಸದ್ಯದ ಪರಿಸ್ಥಿತಿ, ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ವಿಚಾರಗಳು ಇಲ್ಲಿವೆ.
ಶ್ರೀ ವಿಶ್ವಾವಸು ಸಂವತ್ಸರ: 2025ರಲ್ಲಿ ಆಪರೇಷನ್ ಸಿಂದೂರ
ಹಿಂದೂ ಕಾಲಗಣನೆ ಪದ್ಧತಿ ಪ್ರಕಾರ ಯಾದಿಯಂತೆ 60 ಸಂವತ್ಸರಗಳ ಪುನರಾವರ್ತನೆಯಾಗುತ್ತದೆ. ಈಗ 60 ಸಂವತ್ಸರದ ಬಳಿಕ ಶ್ರೀ ವಿಶ್ವಾವಸು ಸಂವತ್ಸರ ಬಂದಿದೆ. ಈ ಸಲದ ಯುಗಾದಿ ಹಬ್ಬದೊಂದಿಗೆ 2025ರ ಶ್ರೀ ವಿಶ್ವಾವಸು ಸಂವತ್ಸರ ಶುರುವಾಗಿದೆ. ಅದಾಗಿ ಹೆಚ್ಚು ಕಡಿಮೆ ಒಂದು ತಿಂಗಳು. ಏಪ್ರಿಲ್ 22 ರಂದು ಜಮ್ಮು - ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ 25 ಭಾರತೀಯರು ಹಾಗೂ ಒಬ್ಬ ನೇಪಾಳಿ ಪ್ರಜೆ ಮೃತಪಟ್ಟರು. ಅಮಾಯಕ ಜನರನ್ನು ಕೊಂದ ಉಗ್ರರು, ಮಹಿಳೆಯರ ಸಿಂದೂರ ಅಳಿಸಿ ಮೋದಿಗೆ ಹೋಗಿ ಹೇಳಿ ಎಂದು ಉದ್ಧಟತನ ಪ್ರದರ್ಶಿಸಿ, ಇಡೀ ಭಾರತಕ್ಕೆ, ಭಾರತೀಯರಿಗೆ ಸವಾಲು ಹಾಕಿದರು. ಅದರ ಪರಿಣಾಮ ಭಯೋತ್ಪಾದನೆ ವಿರುದ್ಧದ ಈ ಸಮರ - ಆಪರೇಷನ್ ಸಿಂದೂರ!
ದಾಳಿ ಭೀತಿಯಲ್ಲೇ ಇದ್ದ ಪಾಕಿಸ್ತಾನೀಯರಿಗೆ, ಅಲ್ಲಿ ಆಶ್ರಯದ ಪಡೆದ ಉಗ್ರರಿಗೆ ಮೈ ನಡುಕ ಹುಟ್ಟಿಸುವಂತಹ ದಾಳಿ ಮೇ 7 ರಂದು ನಡೆಯಿತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ 9 ಉಗ್ರನ ನೆಲೆಗಳು ನಾಶವಾದವು. ಇದಾದ ಬೆನ್ನಿಗೆ ಪಾಕಿಸ್ತಾನ ಸೇನೆ ಭಾರತದ ಮೇಲೆ ಗಡಿಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ ಶುರುಮಾಡಿತು. ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಭಾರತದ ಸೇನೆ ಪಾಕಿಸ್ತಾನದ ವೈಮಾನಿಕ ದಾಳಿ ತಡೆ ವ್ಯವಸ್ಥೆಗೆ ಏಟು ನೀಡಿದೆ. ಆಪರೇಷನ್ ಸಿಂದೂರ ಮುಗಿದಿಲ್ಲ ಎಂದು ಭಾರತ ಸರ್ಕಾರ ಹೇಳಿದೆ. ಇದಕ್ಕೂ ಮೊದಲು ಕಳೆದ ವರ್ಷ ಪಾಕ್ ಆಕ್ರಮಿತ ಜಮ್ಮು- ಕಾಶ್ಮೀರವನ್ನು ಭಾರತ ವಶಪಡಿಸಲಿದೆ ಎಂಬ ಮಾತನ್ನು ಸಂಸತ್ನಲ್ಲೇ ಸರ್ಕಾರ ಘೋಷಿಸಿತ್ತು. ಈಗಿನ ವಿದ್ಯಮಾನಗಳನ್ನು ಗಮನಿಸಿದರೆ ಈ ದಿನ ದೂರವಿಲ್ಲ ಎಂದೆನಿಸತೊಡಗಿದೆ.
ಇದೇ ರೀತಿ, ಬಲೂಚಿಸ್ತಾನ ಹೋರಾಟ ಪಾಕಿಸ್ತಾನದಲ್ಲಿ ತೀವ್ರಗೊಂಡಿದೆ. ಇತ್ತೀಚೆಗೆ ಪಾಕಿಸ್ತಾನದ ರೈಲನ್ನೇ ಅಪಹರಿಸಿದ ಬಲೂಚಿಸ್ತಾನ ಹೋರಾಟಗಾರರು, ತಮ್ಮ ಹೋರಾಟದ ವಿಚಾರವಾಗಿ ಜಗತ್ತಿನ ಗಮನಸೆಳೆದಿದ್ದರು. ಪಾಕ್ ಸರ್ಕಾರದ ಆಡಳಿತ ದುರ್ಬಲವಾದ ವೇಳೆ, ಪೂರ್ವ ಪಾಕಿಸ್ತಾನ ಸ್ವತಂತ್ರವಾದಂತೆ ಬಲೂಚಿಸ್ತಾನ ಕೂಡ ಸ್ವತಂತ್ರವಾಗುವ ಸಾಧ್ಯತೆಗಳೂ ಇವೆ.
ಶ್ರೀ ವಿಶ್ವಾವಸು ಸಂವತ್ಸರ- 1905ರಲ್ಲಿ ಬಂಗಾಳ ವಿಭಜನೆ
ಭಾರತದ ಇತಿಹಾಸದ ಕಡೆಗೆ ಗಮನಹರಿಸೋಣ.120 ವರ್ಷಗಳ ಹಿಂದೆ 1905ರಲ್ಲಿ ವಿಶ್ವಾವಸು ಸಂವತ್ಸರ ಬಂದ ಸಂದರ್ಭ ಅದು. ಭಾರತದ ಮಟ್ಟಿಗೆ ಬಹಳ ಮಹತ್ವದ ವರ್ಷ. ಭಾರತದಲ್ಲಿ ಬ್ರಿಟಿಷ್ ಆಡಳಿತವಿತ್ತು. ಲಾರ್ಡ್ ಕರ್ಜನ್ ಭಾರತದ ವೈಸರಾಯ್ ಆಗಿದ್ದ. 1905ರ ಜುಲೈ 20ರಂದು ಬಂಗಾಳ ವಿಭಜನೆಯ ಘೋಷಣೆ ಮಾಡಿದ. ಕರ್ಜನ್ ಆಡಳಿತದ ಆಂತರಿಕ ನೀತಿಯ ಭಾಗವಾಗಿ ಬಂಗಾಳವನ್ನು 1905ರ ಅಕ್ಟೋಬರ್ 16 ರಂದು ಪೂರ್ವ ಬಂಗಾಳ ಮತ್ತು ಪಶ್ಚಿಮ ಬಂಗಾಳ ಎಂದು ವಿಭಜಿಸಲಾಯಿತು. ಪೂರ್ತಿ ವಿವರ ಓದಿಗೆ ಕ್ಲಿಕ್ ಮಾಡಿ - ವಿಶ್ವಾವಸು ಸಂವತ್ಸರ 1905; ಬಂಗಾಳ ವಿಭಜನೆ, ಸ್ವದೇಶಿ ಆಂದೋಲನಕ್ಕೆ ಬಲ, ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಮಹತ್ವದ ಮೈಲಿಗಲ್ಲು
ಶ್ರೀ ವಿಶ್ವಾವಸು ಸಂವತ್ಸರ- 1965ರಲ್ಲಿ ಪಾಕ್ಗೆ ಮುಖಭಂಗ
1965ರಲ್ಲಿ ವಿಶ್ವಾವಸು ಸಂವತ್ಸರ ಬಂದಿತ್ತು. ಅಂದು ಪಾಕಿಸ್ತಾನದ ಅತಿಕ್ರಮಣ, ಯುದ್ಧವನ್ನು ಎದುರಿಸಬೇಕಾಗಿ ಬಂದಿತ್ತು. 1947-48ರ ಭಾರತ- ಪಾಕ್ ಯುದ್ಧದ ಬಳಿಕ ಎರಡನೇ ಭಾರಿ ಭಾರತ - ಪಾಕ್ ಯುದ್ಧ 1965ರಲ್ಲಿ ನಡೆಯಿತು.ಭಾರತದ ಮಟ್ಟಿಗೆ 1965ರ ಶ್ರೀ ವಿಶ್ವಾವಸು ಸಂವತ್ಸರ ಹೇಗಿತ್ತು ಎಂದರೆ, 1962ರ ಚೀನಾ ಭಾರತ ಯುದ್ಧದ ನಾಶ ನಷ್ಟಗಳಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಆ ಸಂದರ್ಭದ ಲಾಭ ಪಡೆದುಕೊಂಡು ಜಮ್ಮು ಮತ್ತು ಕಾಶ್ಮೀರವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ಬಯಸಿತ್ತು. ಈ ಅವಧಿಯಲ್ಲಿ ಪಾಕಿಸ್ಥಾನ ಮತ್ತು ಚೀನಾ ಗೆಳೆತನ ಹೆಚ್ಚಾಗಿತ್ತು. 1962ರ ಯುದ್ಧದಲ್ಲಿ ಭಾರತ ಸೋಲು ಅನುಭವಿಸಿದ್ದು ಕಂಡ ಪಾಕಿಸ್ತಾನ, ಅಳೆದೂ ತೂಗಿ ಲೆಕ್ಕಾಚಾರ ಹಾಕಿ 1965ರಲ್ಲಿ ಮತ್ತೊಮ್ಮೆ ದಾಳಿ ನಡೆಸಿತು. ಭಾರತದ ಇತಿಹಾಸ ಪುಟಗಳನ್ನು ಗಮನಿಸಿದರೆ ಆ ವಿಶ್ವಾವಸು ಸಂವತ್ಸರ ಬಲಶಾಲಿ ಭಾರತವನ್ನು ಜಗತ್ತಿನೆದುರು ಅನಾವರಣಗೊಳಿಸಿತ್ತು. ಪೂರ್ತಿ ವಿವರ ಓದಿಗೆ ಕ್ಲಿಕ್ ಮಾಡಿ | ಶ್ರೀ ವಿಶ್ವಾವಸು ಸಂವತ್ಸರ 1965; ಭಾರತ- ಪಾಕ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮುಖಭಂಗ; ಭಾರತದ ಬಲವೃದ್ಧಿ, ಹೀಗಿತ್ತು ಆ ವರ್ಷ