Kanyakumari Express: ರೈಲು ಹಳಿಯಲ್ಲಿ ಟ್ರಕ್ ಟೈರ್ಗಳು; ಡಿಕ್ಕಿ ಹೊಡೆದ ಕನ್ಯಾಕುಮಾರಿ ಎಕ್ಸ್ಪ್ರೆಸ್, ತಪ್ಪಿದ ಸಂಭಾವ್ಯ ದುರಂತ
Indian Railways: ರೈಲು ಹಳಿಗಳ ಮೇಲಿದ್ದ ಟೈರ್ಗಳಿಗೆ ಕನ್ಯಾಕುಮಾರಿ ಎಕ್ಸ್ಪ್ರೆಸ್ ಡಿಕ್ಕಿ ಹೊಡೆದಿದೆ. ಆದರೂ ಲೋಕೋಪೈಲಟ್ಗಳ ಮುಂಜಾಗ್ರತೆಯ ಕಾರಣ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದೆ. ರೈಲು ಅಪಘಾತ ನಡೆಸುವ ಸಂಚು ಇದಾಗಿರಬಹುದು ಎಂದು ಶಂಕಿಸಲಾಗಿದೆ.
ಚೆನ್ನೈ: ಎರಡು ಟ್ರಕ್ ಟೈರ್ಗಳನ್ನು ಹಳಿಯ ಮಧ್ಯೆ ಇಟ್ಟು ರೈಲು ಹಳಿ ತಪ್ಪಿಸಿ ಅಪಘಾತ (Train Mishap) ಉಂಟುಮಾಡುವ ಪ್ರಯತ್ನ ತಮಿಳುನಾಡಿನಲ್ಲಿ ಶನಿವಾರ ನಸುಕಿನಲ್ಲಿ ನಡೆದಿತ್ತು ಎಂಬುದು ಬೆಳಕಿಗೆ ಬಂದಿದೆ.
ಎರಡು ಟ್ರಕ್ಗಳ ಟೈರ್ಗಳನ್ನು ರೈಲ್ವೇ ಟ್ರ್ಯಾಕ್ನಲ್ಲಿ ಇರಿಸಿರುವುದನ್ನು ಗಮನಿಸಿದ ಕನ್ಯಾಕುಮಾರಿ-ಚೆನ್ನೈ ಎಗ್ಮೋರ್ ಎಕ್ಸ್ಪ್ರೆಸ್ (Kanyakumari- Chennai Egmore Express) ನ ಲೋಕೋ ಪೈಲಟ್ಗಳು ರೈಲನ್ನು ಕ್ರಮೇಣ ನಿಧಾನಗೊಳಿಸಿದ ಕಾರಣ ಸಂಭಾವ್ಯ ದೊಡ್ಡ ಅನಾಹುತ ತಪ್ಪಿದೆ. ಶನಿವಾರ ನಸುಕಿನಲ್ಲಿ ಈ ಘಟನೆ ನಡೆದಿದೆ.
ರೈಲು ಅಪಘಾತಕ್ಕೆ ಸಂಚು
ತಮಿಳುನಾಡಿನ ತಿರುಚ್ಚಿ ಬಳಿ ಹಳಿಗಳ ಮೇಲೆ ಟೈರ್ ಇಟ್ಟು ರೈಲನ್ನು ಉರುಳಿಸುವ ಸಂಚು ನಡೆದಿರುವುದು ಬಯಲಾಗಿದೆ. ಚೆನ್ನೈಗೆ ತೆರಳಬೇಕಿದ್ದ ರೈಲುಗಳು ತಡವಾಗಿ ಹೊರಟಿದ್ದರಿಂದ ಲೊಕೊ ಪೈಲಟ್ ದೊಡ್ಡ ಅಪಘಾತವನ್ನು ತಡೆಯುವಲ್ಲಿ ಯಶಸ್ವಿಯಾದರು.
ಇಂಜಿನ್ ಟೈರ್ಗೆ ಡಿಕ್ಕಿ ಹೊಡೆದಿದ್ದರೂ, ಅದು ನಿಧಾನ ವೇಗದಲ್ಲಿತ್ತು ಮತ್ತು ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ. ಪೋತಿಗೈ ಎಕ್ಸ್ ಪ್ರೆಸ್ ರೈಲು ಮಧ್ಯರಾತ್ರಿ 12.37ಕ್ಕೆ ಹಾಗೂ ಕನ್ಯಾಕುಮಾರಿ ಎಕ್ಸ್ ಪ್ರೆಸ್ ರೈಲು ಮಧ್ಯರಾತ್ರಿ 1.05ಕ್ಕೆ ಬರುವಾಗ ಟಯರ್ ಹಾಕಿರುವುದು ಪ್ರಾಥಮಿಕ ಹಂತದ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಅಪರಿಚಿತ ವ್ಯಕ್ತಿಗಳು ಕನ್ಯಾಕುಮಾರಿ ಎಕ್ಸ್ಪ್ರೆಸ್ ರೈಲನ್ನು ಪಲ್ಟಿ ಮಾಡಲು ಹಳಿಗಳ ಮೇಲೆ ಲಾರಿ ಟೈರ್ಗಳನ್ನು ಹಾಕಿ ಧ್ವಂಸಗೊಳಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಅಪಾಯ ತಪ್ಪಿದ್ದು ಹೇಗೆ?
ಕನ್ಯಾಕುಮಾರಿ ಎಕ್ಸ್ಪ್ರೆಸ್ ರೈಲು ಮಧ್ಯರಾತ್ರಿ 12.30ಕ್ಕೆ ತಿರುಚ್ಚಿ ರೈಲು ನಿಲ್ದಾಣಕ್ಕೆ ಬಂದು 12.45ಕ್ಕೆ ವೃದ್ಧಾಚಲಂಗೆ ಹೊರಟಿತ್ತು. ನಸುಕಿನ 1.05 ರ ಸುಮಾರಿಗೆ ಕನ್ಯಾಕುಮಾರಿ ಎಕ್ಸ್ಪ್ರೆಸ್ ರೈಲು ತಿರುಚ್ಚಿಯಿಂದ ಸುಮಾರು 21 ಕಿ.ಮೀ ದೂರದಲ್ಲಿರುವ ಸಮಯಪುರಂ ಬಳಿ ವಾಲಾಡಿ ರೈಲು ನಿಲ್ದಾಣವನ್ನು ಹಾದುಹೋಗುವ ಮೆಳವಲಾಡಿ ಕಡೆಗೆ ಸಂಚರಿಸುತ್ತಿತ್ತು. ಆಗ ರೈಲಿನ ಇಂಜಿನ್ ನ ಲೋಕೋ ಪೈಲಟ್ ಹಳಿಯ ಮಧ್ಯದಲ್ಲಿ ಕಪ್ಪು ಬ್ಲಾಕ್ ನಂತಹ ವಸ್ತು ಇರುವುದನ್ನು ಗಮನಿಸಿದರು. ಇದರಿಂದ ಗಾಬರಿಗೊಂಡ ಅವರು ರೈಲನ್ನು ನಿಲ್ಲಿಸಲು ಯತ್ನಿಸಿದರು. ರೈಲು ಇನ್ನಷ್ಟು ಸಮೀಪ ಹೋದಾಗ ಒಂದು ಟೈರಿನ ಮೇಲೆ ಇನ್ನೊಂದು ಟೈರ್ ಇಟ್ಟಿರುವುದು ಅವರಿಗೆ ಕಂಡುಬಂತು ಎಂದು HT ಕನ್ನಡದ ಸೋದರ ತಾಣ HT ತಮಿಳ್ ವರದಿ ಮಾಡಿದೆ.
ಅಷ್ಟರಲ್ಲಿ ಲೋಕೋ ಪೈಲಟ್ ಬ್ರೇಕ್ ಹಾಕಿದರೂ ರೈಲು ಇಂಜಿನ್ ಆ ಟೈರಿಗೆ ಡಿಕ್ಕಿ ಹೊಡೆದು ಸ್ವಲ್ಪ ದೂರದಲ್ಲಿ ನಿಂತಿತು. ರೈಲಿನ ಡಿಕ್ಕಿಯ ವೇಗಕ್ಕೆ ಒಂದು ಟೈರ್ ಇಂಜಿನ್ನಲ್ಲಿ ಸಿಲುಕಿಕೊಂಡಿತು. ಅಲ್ಲದೆ, ಎಂಜಿನ್ ಮತ್ತು ಇತರ ಬಾಕ್ಸ್ಗಳನ್ನು ಸಂಪರ್ಕಿಸುವ ಕಪ್ಲಿಂಗ್ ಪ್ರದೇಶದಲ್ಲಿ, ಬಾಕ್ಸ್ಗಳಿಗೆ ಹೋಗುವ ಕಪ್ಪು ವೇಗದ ಟ್ಯೂಬ್ ಕ್ಲಿಪ್ ಮತ್ತು ಪೀಡ್ ಟ್ಯೂಬ್ ಕ್ಲಿಪ್ ಬಿದ್ದು ಹೋಗಿದೆ. ಪರಿಣಾಮ ರೈಲಿನೊಳಗಿನದ ವಿದ್ಯುತ್ ಸಂಪರ್ಕ ಕಡಿತವಾಗಿದೆ. ರೈಲು ದಿಢೀರ್ ನಿಂತ ಕಾರಣ ಎಲ್ಲರೂ ಎಚ್ಚರಾದರು.
ಲೋಕೋಪೈಲಟ್ ಮತ್ತು ಸಹಾಯಕರು ಕೂಡಲೇ ಇಳಿದು ಹಳಿಯನ್ನು ಪರಿಶೀಲಿಸಿದಾಗ ಒಂದು ಟೈರ್ ಇಂಜಿನ್ ಅಡಿಯಲ್ಲಿ ಸಿಲುಕಿಕೊಂಡಿತ್ತು. ಈ ಬಗ್ಗೆ ಲೊಕೊ ಪೈಲಟ್ ವಾಲಾಡಿ ರೈಲು ನಿಲ್ದಾಣದ ಅಧಿಕಾರಿ ಹಾಗೂ ರೈಲು ನಿರ್ವಾಹಕರಿಗೆ ಮಾಹಿತಿ ನೀಡಿದರು ಎಂದು ವರದಿ ಹೇಳಿದೆ.
ಅರ್ಧ ಗಂಟೆ ತಡವಾಗಿ ಮುಂದೆ ಸಂಚರಿಸಿದ ರೈಲು
ಟ್ರ್ಯಾಕ್ ಮೇಲೆ ಹಾಕಲಾಗಿದ್ದ ಟೈರ್ ಇಂಜಿನ್ ಗೆ ಸಿಲುಕಿ ಸುಮಾರು 600 ಮೀಟರ್ ದೂರದವರೆಗೆ ಎಳೆದಾಗ ವೇಗದ ಟ್ಯೂಬ್ ಕ್ಲಿಪ್ ಹಾಗೂ ಪೀಡು ಟ್ಯೂಬ್ ಕ್ಲಿಪ್ ಕಳಚಿ ರೈಲು ನಿಂತಿತ್ತು. ಇಂಜಿನ್ ಅಡಿಗೆ ಸಿಲುಕಿದ್ದ ಟೈರ್ ಅನ್ನು ಹೊರ ತೆಗೆದು, ರೈಲಿನೊಳಗಿನ ವಿದ್ಯುತ್ ಸಂಪರ್ಕ ಸಾಧಿಸಲು ಲೋಕೋಪೈಲಟ್ ಮತ್ತು ತಂಡಕ್ಕೆ ಅರ್ಧ ಗಂಟೆ ಬೇಕಾಯಿತು.
ಘಟನೆ ಕುರಿತು ಶ್ರೀರಂಗಂ ರೈಲ್ವೆ ಜೂನಿಯರ್ ಇಂಜಿನಿಯರ್ ಮುತ್ತುಕುಮಾರನ್ ವೃದ್ಧಾಚಲಂ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹಳಿಗಳ ಮೇಲೆ ಟೈರ್ ಇಟ್ಟುಕೊಂಡು ರೈಲನ್ನು ಉರುಳಿಸಲು ಸಂಚು ರೂಪಿಸಿದ್ದ ನಿಗೂಢ ವ್ಯಕ್ತಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.