ದೇಶ ಅನನ್ಯ ನಿಲುವಿನ ಅರ್ಥಶಾಸ್ತ್ರಜ್ಞನನ್ನು ಕಳೆದುಕೊಂಡಿದೆ; ಮನಮೋಹನ್ ಸಿಂಗ್ ನಿಧನಕ್ಕೆ ಮಲ್ಲಿಕಾರ್ಜುನ್ ಖರ್ಗೆ ಸಂತಾಪ
Manmohan singh Death: ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಗುರುವಾರ ನಿಧನರಾದರು. ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ.
Manmohan singh Death: ಮಾಜಿ ಪ್ರಧಾನಿ, ಕಾಂಗ್ರೆಸ್ ಮುಖಂಡ ಮನಮೋಹನ್ ಸಿಂಗ್ ಗುರುವಾರ ನಿಧನರಾದರು. ಅವರ ನಿಧನಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡ ಖರ್ಗೆ, "ಮಾತು ಕಡಿಮೆಯಾದರೂ ದುಡಿಯುವ ವ್ಯಕ್ತಿ, ರಾಷ್ಟ್ರ ನಿರ್ಮಾಣದಲ್ಲಿ ಅವರ ಅನುಪಮ ಕೊಡುಗೆ ಭಾರತೀಯ ಇತಿಹಾಸದಲ್ಲಿ ಸದಾ ಸ್ಮರಣೀಯ" ಎಂದಿದ್ದಾರೆ.
ನಿಸ್ಸಂದೇಹವಾಗಿ, ಇತಿಹಾಸವು ನಿಮ್ಮನ್ನು ನಮ್ರತೆಯಿಂದ ಮೌಲ್ಯಮಾಪನ ಮಾಡುತ್ತದೆ ಮನಮೋಹನ್ ಸಿಂಗ್ ಜೀ! ಮಾಜಿ ಪ್ರಧಾನಿಯವರ ನಿಧನದಿಂದ ಭಾರತವು ಒಬ್ಬ ದೂರದೃಷ್ಟಿಯ ರಾಜಕಾರಣಿ, ನಿಷ್ಕಳಂಕ ಸಮಗ್ರತೆಯ ನಾಯಕ ಮತ್ತು ಅನನ್ಯ ನಿಲುವಿನ ಅರ್ಥಶಾಸ್ತ್ರಜ್ಞನನ್ನು ಕಳೆದುಕೊಂಡಿದೆ. ಅವರ ಆರ್ಥಿಕ ಉದಾರೀಕರಣದ ನೀತಿ ಮತ್ತು ಹಕ್ಕು-ಆಧಾರಿತ ಕಲ್ಯಾಣ ಮಾದರಿಯು ಲಕ್ಷಾಂತರ ಭಾರತೀಯರ ಜೀವನವನ್ನು ಬದಲಾಯಿಸಿತು. ಭಾರತದಲ್ಲಿ ಮಧ್ಯಮ ವರ್ಗವನ್ನು ಸೃಷ್ಟಿಸಿದ್ದಷ್ಟೇ ಅಲ್ಲದೆ, ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿತು" ಎಂದಿದ್ದಾರೆ.
"ಭಾರತದ ಆಕಾಂಕ್ಷೆಗಳನ್ನು ಸಾಕಾರಗೊಳಿಸಿದ, ಅಚಲವಾದ ಸಮರ್ಪಣಾಭಾವದಿಂದ ಉನ್ನತ ಶ್ರೇಣಿಯಲ್ಲಿ ಬೆಳೆದ ಜೀವಮಾನದ ಹಿರಿಯ ಸಹೋದ್ಯೋಗಿ, ಸೌಮ್ಯ ಬುದ್ಧಿಜೀವಿ ಮತ್ತು ವಿನಮ್ರ ಆತ್ಮವನ್ನು ನಾವು ಕಳೆದುಕೊಂಡಿದ್ದೇನೆ. ನಾನು ಕಾರ್ಮಿಕ ಸಚಿವನಾಗಿ, ರೈಲ್ವೆಯ ಸಚಿವನಾಗಿ, ಮತ್ತು ಸಮಾಜ ಕಲ್ಯಾಣ ಸಚಿವನಾಗಿ ಅವರ ಸಂಪುಟದ ಭಾಗವಾಗಿದ್ದಕ್ಕೆ ನಾನು ಧನ್ಯ, ಪದಗಳಿಗಿಂತ ಕ್ರಿಯಾಶೀಲ ವ್ಯಕ್ತಿ, ರಾಷ್ಟ್ರ ನಿರ್ಮಾಣಕ್ಕೆ ಅವರ ಅಪಾರ ಕೊಡುಗೆ ಯಾವಾಗಲೂ ಭಾರತೀಯ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತದೆ.
'ಅವರ ಪರಂಪರೆ ಎಂದೆಂದಿಗೂ ಗೌರವಿಸಲ್ಪಡುತ್ತದೆ'
ಮಾಜಿ ಪ್ರಧಾನಿಯವರ ನಿಧನಕ್ಕೆ ಸಂತಾಪ ಸೂಚಿಸಿದ ಖರ್ಗೆ, ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಈ ದೊಡ್ಡ ನಷ್ಟವನ್ನು ನೀಗಿಸುವ ಶಕ್ತಿ ಅವರಿಗೆ ಸಿಗಲಿ. ಅಭಿವೃದ್ಧಿ, ಕಲ್ಯಾಣ ಮತ್ತು ಒಳಗೊಳ್ಳುವಿಕೆಯ ಭಾರತದ ನೀತಿಗಳನ್ನು ಮುಂದಕ್ಕೆ ಕೊಂಡೊಯ್ಯುವ ಅವರ ಪರಂಪರೆ ಯಾವಾಗಲೂ ನೆನಪಿನಲ್ಲಿಡುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಏಮ್ಸ್ನಲ್ಲಿ ನಿಧನ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ವಯಸ್ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಗುರುವಾರ (ಡಿ. 26) ರಾತ್ರಿ 9.50ರ ಸುಮಾರಿಗೆ ದೆಹಲಿಯ ಏಮ್ಸ್ನಲ್ಲಿ ನಿಧನರಾಗಿದ್ದಾರೆ. 92 ವರ್ಷ ವಯಸ್ಸಿನ ಮನಮೋಹನ್ ಸಿಂಗ್, ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ.