3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ಎನ್‌ಐಎ ನೋಟಿಸ್, ವೈರಲ್ ವಿಡಿಯೋ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ಎನ್‌ಐಎ ನೋಟಿಸ್, ವೈರಲ್ ವಿಡಿಯೋ ಇಲ್ಲಿದೆ

3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ಎನ್‌ಐಎ ನೋಟಿಸ್, ವೈರಲ್ ವಿಡಿಯೋ ಇಲ್ಲಿದೆ

ಪಹಲ್ಗಾಮ್ ದಾಳಿ ವಿಡಿಯೋ: ಜಿಪ್‌ಲೈನ್ ಆಪರೇಟರ್ 3 ಸಲ ಅಲ್ಲಾಹ್ ಹು ಅಕ್ಬರ್ ಎನ್ನುತ್ತ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ವಿಡಿಯೋ ವೈರಲ್ ಆಗಿದೆ. ಈಗ ಎನ್‌ಐಎ ಆತನನ್ನು ವಿಚಾರಣೆಗೆ ಒಳಪಡಿಸಲು ಕ್ರಮ ಕೈಗೊಂಡಿದೆ.

3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ಎನ್‌ಐಎ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ವೈರಲ್ ವಿಡಿಯೋದಿಂದ ತೆಗೆದ ಚಿತ್ರಗಳು.
3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ಎನ್‌ಐಎ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ವೈರಲ್ ವಿಡಿಯೋದಿಂದ ತೆಗೆದ ಚಿತ್ರಗಳು.

ಪಹಲ್ಗಾಮ್ ದಾಳಿ ವಿಡಿಯೋ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ ಉಗ್ರ ದಾಳಿ ಬಳಿಕ ಅಲ್ಲಿನ ಘಟನಾವಳಿಯ ಒಂದೊಂದೇ ವಿಡಿಯಗಳು ಬಹಿರಂಗವಾಗುತ್ತಿವೆ. ಇತ್ತೀಚಿನ ವಿಡಿಯೋದಲ್ಲಿ ಜಿಪ್‌ಲೈನ್ ಆಪರೇಟರ್‌ ಒಬ್ಬ 3 ಸಲ ಅಲ್ಲಾಹ್‌ ಹು ಅಕ್ಬರ್ ಹೇಳಿ ಪ್ರವಾಸಿಗನನ್ನು ಅಪಾಯಕ್ಕೆ ದೂಡಿದ ಜಿಪ್‌ಲೈನ್ ಆಪರೇಟರ್‌ಗೆ ವಿಚಾರಣೆಗೆ ಹಾಜರಾಗುವಂತೆ ಎನ್‌ಐಎ- ರಾಷ್ಟ್ರೀಯ ತನಿಖಾ ತಂಡ ನೋಟಿಸ್ ಜಾರಿಗೊಳಿಸಿದೆ.

ಜಿಪ್‌ಲೈನ್‌ನ ರೋಮಾಂಚಕ ಕ್ಷಣ ಸೆರೆಹಿಡಿದ ರಿಷಿ ಭಟ್‌

ಜಿಪ್‌ಲೈನ್‌ ಸಾಹಸದಲ್ಲಿ ಭಾಗಿಯಾದ ಗುಜರಾತ್‌ನ ರಿಷಿ ಭಟ್‌ ಅವರನ್ನು ದೂಡಿ ಬಿಡುವ ಮೊದಲು ಜಿಪ್‌ಲೈನ್ ಆಪರೇಟರ್‌ ಮೂರು ಸಲ ಅಲ್ಲಾಹ್ ಹು ಅಕ್ಬರ್ ಎಂದು ಹೇಳಿದ್ದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ರಿಷಿ ಭಟ್ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ಈ ದೃಶ್ಯಗಳಿವೆ. ರಿ‍ಷಿ ಭಟ್ ಸಂಭ್ರಮಿಸುತ್ತಿದ್ದರೆ ಹಿನ್ನೆಲೆಯಲ್ಲಿ ಉಗ್ರರ ಗುಂಡಿನ ದಾಳಿಯ ದೃಶ್ಯಗಳು ದಾಖಲಾಗಿದೆ. ಜಿಪ್‌ಲೈನ್ ಆಪರೇಟರ್ ಮೂರು ಸಲ ಅಲ್ಲಾಹ್ ಹು ಅಕ್ಬರ್ ಎಂದು ಹೇಳುತ್ತಿದ್ದಂತೆ, ಕೆಳಗೆ ಉಗ್ರರ ದಾಳಿ ಶುರುವಾಗಿದೆ ಎಂಬ ಅಂಶದ ಕಡೆಗೆ ರಿಷಿ ಭಟ್ ಗಮನಸೆಳೆದಿದ್ದಾರೆ. ಇಲ್ಲಿದೆ ಆ ವೈರಲ್ ವಿಡಿಯೋ-

ಪಹಲ್ಗಾಮ್ ದಾಳಿಯ ನೆನಪು ಮಾಡಿಕೊಂಡ ರಿಷಿ ಭಟ್‌

ಆ ಸಂದರ್ಭದಲ್ಲಿ ಮನಸ್ಸು ಪೂರ್ತಿ ಮನರಂಜನೆಯ ಕಡೆಗಿತ್ತು. ಹಾಗಾಗಿ ಹೀಗೊಂದು ದಾಳಿ ನಡೆಯುತ್ತಿದೆ ಎಂಬ ವಿಚಾರವಾಗಲಿ, ಇಂತಹ ಅಪಾಯ ಎದುರಾಗಬಹುದು ಎಂಬ ನಿರೀಕ್ಷೆ ಇರಲಿಲ್ಲ ಎಂದು ರಿಷಿ ಭಟ್ ಹೇಳಿಕೊಂಡಿದ್ದಾರೆ.

ಜಿಪ್‌ಲೈನ್‌ನ ಇನ್ನೊಂದು ತುದಿಗೆ ಹೋಗಿ ಇಳಿದಾಗ ಅಲ್ಲಿ ನನ್ನ ಪತ್ನಿ ಮತ್ತು ಮಗ ಇದ್ದರು. ಅವರು ಕಿರುಚುತ್ತಾ ಓಡೋಡಿ ನನ್ನ ಬಳಿ ಬಂದರು. ಅವರು ಪರಿಸ್ಥಿತಿ ವಿವರಿಸುವಾಗಲೇ ಅಪಾಯದ ಅರಿವಾಗಿದ್ದು, ಕೂಡಲೇ ಎಲ್ಲರೂ ತಗ್ಗು ಪ್ರದೇಶದ ಗುಂಡಿಗೆ ಇಳಿದು ರಕ್ಷಣೆ ಪಡೆದುಕೊಂಡೆವು. 10 ನಿಮಿಷದ ಬಳಿಕ ಗುಂಡಿನ ಸದ್ದು ಕಡಿಮೆಯಾದ ಬಳಿಕ ಅಲ್ಲಿಂದ ಹೊರಬಂದೆವು ಎಂದು ರಿಷಿ ಭಟ್ ವಿವರಿಸಿದ್ದಾರೆ.

ಗುಜರಾತ್ ಮೂಲದ ರಿಷಿ ಭಟ್ ತನ್ನ ಪತ್ನಿ ಮತ್ತು ಮಗನೊಂದಿಗೆ ಪಹಲ್ಗಾಮ್‌ನ ಬೈಸರನ್ ಕಣಿವೆಗೆ ಭೇಟಿ ನೀಡಲು ಹೋಗಿದ್ದರು. ಅವರು ಜಿಪ್ ಲೈನ್‌ನಲ್ಲಿದ್ದಾಗ, ಜನರನ್ನು ಗುಂಡಿಕ್ಕಿ ಕೊಲ್ಲಲಾಗುತ್ತಿತ್ತು. ಅವರ ವೀಡಿಯೊ ವೈರಲ್ ಆದ ನಂತರ, ರಿಷಿ ಎಎನ್ಐ ಜೊತೆಗಿನ ಸಂಭಾಷಣೆಯಲ್ಲಿ ಜಿಪ್ಲೈನ್ ಆಪರೇಟರ್ ಬಗ್ಗೆ ಆತಂಕ ವ್ಯಕ್ತಪಡಿಸಿದರು.

"ನನಗಿಂತ ಮೊದಲು ಒಂಬತ್ತು ಜನ ಜಿಪ್‌ಲೈನ್‌ನಲ್ಲಿ ಜಾರಿದ್ದರು. ಆದರೆ ಆಪರೇಟರ್ ಏನನ್ನೂ ಹೇಳಲಿಲ್ಲ. ನಾನು ಜಾರುತ್ತಿರುವಾಗ ಆತ ಅಲ್ಲಾಹ್ ಹು ಅಕ್ಬರ್ ಎಂದು ಮೂರು ಸಲ ಹೇಳಿ, ನನ್ನನ್ನು ದೂಡಿ ಬಿಟ್ಟಿದ್ದ. ಅದೇ ವೇಳೆ ಕೆಳಗೆ ಗುಂಡಿನ ದಾಳಿ ಶುರುವಾಗಿತ್ತು. ಅದಕ್ಕಾಗಿಯೇ ನಾನು ಆ ವ್ಯಕ್ತಿಯನ್ನು ಅನುಮಾನಿಸುತ್ತೇನೆ. ಈ ವಿಡಿಯೋ ವೈರಲ್ ಆದ ನಂತರದಲ್ಲ ಈ ಜಿಪ್‌ಲೈನ್‌ ಆಪರೇಟರ್‌ಗೆ ನೋಟಿಸ್ ರವಾನಿಸಿದ್ದು, ವಿಚಾರಣೆಗೆ ಹಾಜರಾಗಲು ಸೂಚಿಸಿದೆ.

ಗುಂಡಿನ ದಾಳಿ ನಿಂತ ಬಳಿಕ ಜನ ಓಡತೊಡಗಿದರು, ಆಗ ಮತ್ತೆ 6-7 ಜನರ ಹತ್ಯೆ

ಗುಂಡಿನ ಸದ್ದು ನಿಂತು ಹೋದ ಬಳಿಕ ಅಲ್ಲಿದ್ದ ಹೆಚ್ಚಿನ ಜನರು ರಕ್ಷಣೆಗಾಗಿ ಓಡತೊಡಗಿದರು. ಆಗ ಮತ್ತೊಂದು ಆವೃತ್ತಿ ಗುಂಡಿನ ದಾಳಿ ನಡೆಯಿತು. ಆಗ 6-7 ಜನ ಮೃತಪಟ್ಟರು. 16-17 ಜನರನ್ನು ಹತ್ಯೆ ಮಾಡುವಾಗ ನಾವು ಅಲ್ಲಿಯೆ ಇದ್ದೆವು. ಎಲ್ಲವೂ ಮುಗಿಯಿತೆಂದು ಗೇಟ್‌ನ ಬಳಿಕ ಬಂದರೆ ಅಲ್ಲಿ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದರು. ಎಲ್ಲರೂ ಸಿಕ್ಕ ಸಿಕ್ಕ ಕಡೆಗೆ ಓಡತೊಡಗಿದ್ದರು. ನಾವು 500 ಮೀಟರ್ ಕೆಳಕ್ಕೆ ಇಳಿದಾಗ ಭಾರತೀಯ ಸೇನಾ ಸಿಬ್ಬಂದಿಯನ್ನು ಕಂಡೆವು. ಅವರು ರಕ್ಷಣೆ ನೀಡಿದರು ಎಂದು ರಿಷಿ ಭಟ್ ವಿವರಿಸಿದ್ದಾರೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.