ಕಾಶ್ಮೀರದಲ್ಲಿ ಶುರುವಾಗಿದೆ ʻಆಪರೇಷನ್ ಆಲ್ಔಟ್ʼ, ತಮಟೆ ಹೊಡೆದು ಕಾರ್ಯಾಚರಣೆ ವಿವರಿಸುವ ಅಗತ್ಯವಿಲ್ಲ: ರಂಗಸ್ವಾಮಿ ಮೂಕನಹಳ್ಳಿ ಬರಹ
ಸ್ವಲ್ಪ ನಿಧಾನಿಸಿ , ಸರಕಾರವನ್ನು , ಅದು ನಾವೇ ಆರಿಸಿ ಕಳಿಸಿರುವ ನಮ್ಮ ಕೇಂದ್ರ ಸರಕಾರವನ್ನು ಮತ್ತು ಅದರ ನಾಯಕ ಮೋದಿಯವರ ಮೇಲೆ ನಂಬಿಕೆ ಇಡೋಣ. ನೀವು -ನಾವು ಅವರನ್ನೂ ದೂಷಿಸುತ್ತಾ ಕುಳಿತರೆ ಪ್ರಯೋಜನವೇನು?

ಸೋಶಿಯಲ್ ಮೀಡಿಯಾದಲ್ಲಿ ಬರೆದು ಪೋಸ್ಟ್ ಮಾಡಲು ಅಪ್ಪಣೆ ಬೇಕಿಲ್ಲ. ಹೀಗಾಗಿ ಎಲ್ಲರೂ ಅವರವರಿಗೆ ತೋಚಿದ್ದು ಬರೆದು ಹಾಕುತ್ತಿದ್ದಾರೆ. ಇದು ಭಾರತ , ಇದು ಸ್ವಂತಂತ್ರ್ಯ. ಈಗ ವಿಷಯಕ್ಕೆ ಬರೋಣ. ಬರೆಯುವ ಉತ್ಸಾಹದಲ್ಲಿ ಕೆಲವರು ಮೋದಿ ಅವರನ್ನು ಕೈಲಾಗದವರು ಎಂದು ಮತ್ತು ಅಮಿತ್ ಷಾ ಅವರನ್ನು ಕೇವಲ ಉಗ್ರ ಭಾಷಣಕಾರ ಎಂದು ನಿಂದಿಸಿ ಕೂಡ ಬರೆದಿದ್ದಾರೆ. ಗಮನಿಸಿ ನಿನ್ನೆ ಕಾಶ್ಮೀರದಲ್ಲಿ ನಡೆದಿರುವ ಘಟನೆಗೆ ಮೇಲಿನಿಂದ ಅಪ್ಪಣೆ ಬಂದಿರುತ್ತದೆ. ಭಾರತವನ್ನು ಅಂತಂತ್ರ ಗೊಳಿಸಲು ಹುನ್ನಾರಗಳು ನಡೆಯುತ್ತಲೇ ಇವೆ. ಇಂತಹ ಒಂದು ಕಿಡಿಯನ್ನು ಹಚ್ಚಿ ಬಿಟ್ಟರೆ ಸಾಕು ಅದು ಜನಾಕ್ರೋಶಕ್ಕೆ ತಿರುಗುತ್ತದೆ. ನಂತರ ಕೇಂದ್ರ ಸರಕಾರ ತಕ್ಷಣ ಅದಕ್ಕೆ ಪ್ರತ್ಯುತ್ತರ ನೀಡುವ ದರ್ದಿಗೆ ಬೀಳುತ್ತದೆ. ಕೇಂದ್ರ ಸರಕಾರ ತಕ್ಷಣ ಪ್ರತಿಕ್ರಿಯೆ ನೀಡಿದರೆ ಅದನ್ನು ದೊಡ್ಡ ಮಟ್ಟದಲ್ಲಿ ದೇಶಾದ್ಯಂತ ಹಿಂದೂ ಮುಸ್ಲಿಂ ಗಲಾಟೆಯನ್ನಾಗಿ ಪಸರಿಸಬಹುದು. ಕೇಂದ್ರ ಸರಕಾರಕ್ಕೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕೆಲವು ರಾಜಕೀಯ ನಾಯಕರ ಅಪ್ಪಣೆಯಿಂದ ಇದು ನಡೆದಿದೆ ಎನ್ನುವುದು ಗೊತ್ತಿದೆ. ಹೀಗಾಗಿ ಅವರು ತಕ್ಷಣದ ಪ್ರತಿಕ್ರಿಯೆ ನೀಡುವುದಿಲ್ಲ. ನಿಮಗೆ ಗೊತ್ತಲ್ಲ ನಮ್ಮದೇನಿದ್ದರೂ ಆನ್ಲೈನ್ ಪೌರುಷ. ಮೋದಿ , ಷಾ ನಾಲಾಯಕ್ಕು ಎಂದು ಷರಾ ಹೊರಡಿಸಿ ಬಿಡುತ್ತೇವೆ.
ಸ್ವಲ್ಪ ನಿಧಾನಿಸಿ , ಸರಕಾರವನ್ನು , ಅದು ನಾವೇ ಆರಿಸಿ ಕಳಿಸಿರುವ ನಮ್ಮ ಕೇಂದ್ರ ಸರಕಾರವನ್ನು ಮತ್ತು ಅದರ ನಾಯಕ ಮೋದಿಯವರ ಮೇಲೆ ನಂಬಿಕೆ ಇಡೋಣ. ನೀವು -ನಾವು ಅವರನ್ನೂ ದೂಷಿಸುತ್ತಾ ಕುಳಿತರೆ ಪ್ರಯೋಜನವೇನು?
ಇಷ್ಟೆಲ್ಲಾ ಏಕೆ ಬರೆದೆ ಎಂದರೆ ಮೋದಿಜೀ ಅವರು ಇಂದಿನಿಂದ ಎರಡು ದಿನ ಸೌದಿ ಪ್ರವಾಸದಲ್ಲಿದ್ದ ಅವರು ಪ್ರವಾಸ ಮೊಟಕು ಗೊಳಿಸಿ ವಾಪಸ್ಸು ಬಂದಿದ್ದಾರೆ. ಇಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವಾಗ ಮೋದಿ ನೋಡಿ ಸೌದಿಗೆ ಹೋಗಿದ್ದರು ಎಂದು ಅವರ ಮೇಲೆ ಕಿಡಿ ಕಾರಬೇಡಿ ಪ್ಲೀಸ್. ಅಂತೆಯೇ ಮೋದಿಜೀ ಇರಾನ್ ಬಳಿ ತೈಲ ಕೊಳ್ಳುವುದು ನಿಲ್ಲಿಸಲು ಕೂಡ ಆಗುವುದಿಲ್ಲ. ನಾವು ಸುಲಭವಾಗಿ ಇಲ್ಲಸಲ್ಲದ ಮಾತಾಡಬಹುದು. 150 ಕೋಟಿ ಜನಸಂಖ್ಯೆಯ ದೇಶವನ್ನು ಸುಸ್ಥಿಯಲ್ಲಿಡಬೇಕಾದ ಜವಾಬ್ದಾರಿ ಅವರ ಮೇಲಿದೆ.
ಆಪರೇಷನ್ ಆಲ್ಔಟ್ ಮಾಡುತ್ತಾರೆ. ವಿಶ್ವಾಸವಿರಲಿ.
ಟೈಮ್ ಹಿಡಿಯಿತು ಎನ್ನುವುದು ನಿಜ , ಆದರೆ ನಿರೀಶ್ವರವಾದ, ಸಂಸ್ಕಾರ ಹಾಳುಗೆಡವುವ ಸಂದೇಶ ನೀಡುತ್ತಿದ್ದ ಬಾಲಿವುಡ್ ಮಕಾಡೆ ಮಲಗಿಸಿದ್ದಾರೆ. ಇದೂ ಆಗುತ್ತೆ. ಕಬ್ಬಿಣ ಕಾದಿದೆ. ಈಗ ಯುನಿಫಾರ್ಮ್ ಸಿವಿಲ್ ಕೋಡ್ ತರುವುದಕ್ಕೆ ಪ್ರಶಸ್ತ ಸಮಯ.
ಅಂದಹಾಗೆ ನಿಮಗೆ ಗೊತ್ತಿರಲಿ . ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಗಳು ಕೇಂದ್ರ ಸರಕಾರಕ್ಕೆ ನಯಾಪೈಸೆ ಕೊಡುತ್ತಿರಲಿಲ್ಲ. ಬದಲಿಗೆ ಕೇಂದ್ರ ಸರಕಾರ ಅವರಿಗೆ ವಿಶೇಷ ಪ್ಯಾಕೇಜ್ ನೀಡುತ್ತಿತ್ತು. ಅಂದರೆ ಪ್ರತಿ ರಾಜ್ಯ ಅವುಗಳ ವ್ಯಾಪಾರ , ವಹಿವಾಟಿಗೆ ಅನುಗುಣವಾಗಿ ಕೇಂದ್ರ ಸರಕಾರಕ್ಕೆ ವಿವಿಧ ಮೂಲಗಳ ಮೂಲಕ ಹಣವನ್ನು ನೀಡುತ್ತದೆ. ಆ ನಂತರ ಕೇಂದ್ರ ಸರಕಾರ ಒಂದಷ್ಟು ಹಣವನ್ನು ರಾಜ್ಯ ಸರಕಾರಗಳಿಗೆ ವಾಪಸ್ಸು ನೀಡುತ್ತದೆ. ಕರ್ನಾಟಕ ರೂಪಾಯಿ ನೀಡುತ್ತದೆ. ಬದಲಿಗೆ ಕೇಂದ್ರ ಸರಕಾರ ಕರ್ನಾಟಕಕ್ಕೆ ವಾಪಸ್ಸು 15 ಪೈಸೆ ನೀಡುತ್ತದೆ. ಅಂದರೆ ಕರ್ನಾಟಕ ೮೫ ಪೈಸೆ ದೇಶದ ಇತರ ರಾಜ್ಯಗಳ ಅಭಿವೃದ್ಧಿಗೆ ದೇಣಿಗೆ ನೀಡಿದಂತೆ ! 2018ರ ವರೆಗೆ ಜಮ್ಮು ಮತ್ತು ಕಾಶ್ಮೀರ ಒಂದು ರೂಪಾಯಿ ಕೇಂದ್ರಕ್ಕೆ ಕೊಡುತ್ತಿರಲಿಲ್ಲ. ಆದರೆ ಸಾವಿರಾರು ಕೋಟಿ ಪ್ಯಾಕೇಜ್ ಪಡೆದುಕೊಂಡು ಕಲ್ಲು ತೂರುತ್ತಿದ್ದರು. ಈಗ ಇದು ಬದಲಾಗಿದೆ. ಮಾತು ಕೇಳದ , ಡ್ರಗ್ ಅಡಿಕ್ಟ್ ಆದ ನಮ್ಮನೆ ಹುಡುಗನನ್ನು ಸರಿದಾರಿಗೆ ತರುವುದು ಎಷ್ಟು ಕಷ್ಟ ಅಲ್ವಾ ? ಇದು ಹಾಗೆ , ಆಪರೇಷನ್ ಆಲ್ ಔಟ್ ಈ ವೇಳೆಗೆ ಶುರು ಆಗಿರುತ್ತೆ. ಅದನ್ನು ತಮಟೆ ಬಾರಿಸಿ ನಮಗೆಲ್ಲಾ ಹೇಳುವ ಅವಶ್ಯಕತೆ ಇಲ್ಲ. ಫಲಿತಾಂಶ ನಮ್ಮ ಮುಂದಿಡುತ್ತಾರೆ. ತಾಳ್ಮೆ , ನಂಬಿಕೆಯಿರಲಿ. ಉದ್ವೇಗದಲ್ಲಿ ಕೆಲಸ ಮಾಡಿದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ .
ಜೈ ಹಿಂದ್ , ಜೈ ಭಾರತ