ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದ ಆಪರೇಷನ್ ಸಿಂದೂರ; ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದ ಆಪರೇಷನ್ ಸಿಂದೂರ; ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ

ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದ ಆಪರೇಷನ್ ಸಿಂದೂರ; ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ

ಆಪರೇಷನ್ ಸಿಂದೂರ್: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಇಂದು (ಮೇ 7) ನಸುಕಿನ ವೇಳೆ ಆಪರೇಷನ್ ಸಿಂದೂರ ಎಂಬ ಚುಟುಕು ಕಾರ್ಯಾಚರಣೆ ಮೂಲಕ ಪಾಕಿಸ್ತಾನದ ಒಳಗಿದ್ದ 9 ಉಗ್ರ ನೆಲೆಗಳನ್ನು ನಾಶ ಮಾಡಿದೆ. ಆಪರೇಷನ್ ಸಿಂದೂರ್ ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿತು. ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ.

ಆಪರೇಷನ್ ಸಿಂದೂರ ಕಾರ್ಯಾಚರಣೆಯು ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ. ಇದೇ ರೀತಿ, ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ. (ಸಾಂಕೇತಿಕ ಚಿತ್ರ)
ಆಪರೇಷನ್ ಸಿಂದೂರ ಕಾರ್ಯಾಚರಣೆಯು ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ. ಇದೇ ರೀತಿ, ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ. (ಸಾಂಕೇತಿಕ ಚಿತ್ರ)

ಆಪರೇಷನ್ ಸಿಂದೂರ್: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರ ದಾಳಿಗೆ 25 ಭಾರತೀಯರು ಹಾಗೂ ಒಬ್ಬ ನೇಪಾಳಿ ಪ್ರಜೆ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಯೋತ್ಪಾದನೆ ವಿರುದ್ಧ ಹೋರಾಟವನ್ನು ತೀವ್ರಗೊಳಿಸಿದ ಭಾರತ, ಬುಧವಾರ (ಮೇ 7) ನಸುಕಿನ ವೇಳೆ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿತು. ಪಾಕಿಸ್ತಾನ ಸರ್ಕಾರ ಹಾಗೂ ಅದರ ಆಶ್ರಯದಲ್ಲಿದ್ದ ಉಗ್ರರು ಬೆಚ್ಚಿ ಬೀಳುವಂತಾಯಿತು. ಎಲ್ಲರ ಗಮನವನ್ನೂ ಇಂದಿನ (ಮೇ 7) ಮಾಕ್‌ ಡ್ರಿಲ್ ಮೇಲೆ ಸೆಳೆದಿದ್ದ ಭಾರತ ಸರ್ಕಾರ, ರಾತ್ರೋರಾತ್ರಿ ಈ ಕಾರ್ಯಾಚರಣೆ ನಡೆಸುವಲ್ಲಿ ಯಶಸ್ವಿಯಾಯಿತು. ಹಾಗೆ, ಆಪರೇಷನ್ ಸಿಂದೂರ್ ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸಿತು. ಅದೇ ರೀತಿ, ಭಾರತದ ದಾಳಿ ಗುರಿಮುಟ್ಟಲು ನೆರವಾದ ಕಾರ್ಯತಂತ್ರದ ಕಡೆಗೂ ಗಮನಸೆಳೆಯಿತು.

ಭಾರತದ ದಾಳಿ ಗುರಿಮುಟ್ಟಲು ಈ ಕಾರ್ಯತಂತ್ರವೂ ಮುಖ್ಯ ಕಾರಣ

ಪಹಲ್ಗಾಮ್‌ ದಾಳಿಯ ಬೆನ್ನಿಗೆ ಭಾರತ ಮರುದಾಳಿ ನಡೆಸಲಿಲ್ಲ. ಸಮಾಧಾನದಿಂದ ಭಯೋತ್ಪಾದನೆ ವಿರುದ್ಧ ಹೋರಾಟದ ನಿರ್ಧಾರವನ್ನು ಬಲವಾಗಿ ಸ್ಪಷ್ಟಪಡಿಸುತ್ತ ಬಂದ ಭಾರತ ಸರ್ಕಾರ, ಉಗ್ರರ ಅಡಗುದಾಣ, ಎಲ್ಲೆಲ್ಲಿ ಏನೇನಿವೆ ಎಂಬೆಲ್ಲ ಗುಪ್ತಚರ ಮಾಹಿತಿಯನ್ನು ಖಚಿತಪಡಿಸಿಕೊಂಡಿತು.

ಕಳೆದ ಅನೇಕ ದಿನಗಳಿಂದ ಕಲೆಹಾಕಿದ ಗುಪ್ತಚರ ಮಾಹಿತಿ ಆಧರಿಸಿ ದಾಳಿಯನ್ನು ಆಯೋಜಿಸುವ ನಿರ್ಧಾರವನ್ನು ಭಾರತ ಸರ್ಕಾರ ತೆಗೆದುಕೊಂಡಿತು. ನಿಖರವಾಗಿ ಉಗ್ರ ಶಿಬಿರ, ಉಗ್ರ ಸಂಘಟನೆಗಳ ಕಚೇರಿಗಳನ್ನು ಟಾರ್ಗೆಟ್ ಮಾಡುವ ಭಾರತೀಯ ಸೇನೆಯ ತಂತ್ರವನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು. ಗಡಿಯಾಚೆಗಿನ ಭಯೋತ್ಪಾದನೆಯನ್ನು ಇನ್ನು ಭಾರತ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಜಗತ್ತಿಗೆ ಸಾರಬೇಕಿತ್ತು. ಅದನ್ನು ಈ ಆಪರೇಷನ್ ಸಿಂದೂರ ಮೂಲಕ ಭಾರತ ಸರ್ಕಾರ ಮಾಡಿದೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆಯು ಉಗ್ರ ನೆಲೆ (ಉಗ್ರ ಶಿಬಿರ)ಗಳ ಮೇಲಿನ ದಾಳಿಯಾಗಿತ್ತು. ಪಾಕ್ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿಲ್ಲ ಎಂಬುದನ್ನು ಭಾರತದ ಸೇನೆ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದ ಆಪರೇಷನ್ ಸಿಂದೂರ್

ಪಾಕಿಸ್ತಾನದ ಬಳಿಕ ಇರುವ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿ ತಡೆ ವ್ಯವಸ್ಥೆಗಳ ಮಾಹಿತಿ ಪಡೆದಿದ್ದ ಭಾರತೀಯ ಸೇನೆ, ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆಯ ಲೋಪವನ್ನು ಚೆನ್ನಾಗಿ ಬಳಸಿಕೊಂಡಿತು.

ಅಂತಾರಾಷ್ಟ್ರೀಯ ಗಡಿಯಿಂದ 100 ಕಿಮೀ ಒಳಗೆ ಇರುವಂತಹ ಬಹವಾಲ್‌ಪುರದ ಜೈಷ್ ಏ ಮೊಹಮ್ಮದ್ (ಜೆಇಎಂ) ಕಾರ್ಯಾಚರಣೆ ಕೇಂದ್ರ, ಅಂತಾರಾಷ್ಟ್ರೀಯ ಗಡಿ ರೇಖೆಯಿಂದ 30 ಕಿಮೀ ಒಳಗೆ ಇರುವಂತಹ ಮುರಿಡ್ಕೆಯಲ್ಲಿರುವ ಲಷ್ಕರ್ ಏ ತೊಯ್ಬಾ (ಎಲ್‌ಇಟಿ) ಕೇಂದ್ರ ಕಚೇರಿಯನ್ನು ಭಾರತೀಯ ಸೇನೆ ನೇರವಾಗಿ ಕ್ಷಿಪಣಿ ದಾಳಿ ನಡೆಸಿ ನಾಶಪಡಿಸಿದೆ.

ಇದಲ್ಲದೇ, ಪಾಕಿಸ್ತಾನದೊಳಗಿನ ಗುಲ್‌ಪುರ, ಸವಾಯಿಯಲ್ಲಿರುವ ಉಗ್ರ ಶಿಬಿರಗಳೂ ನಾಶವಾಗಿವೆ. ಪಾಕ್‌ ಆಕ್ರಮಿತ ಜಮ್ಮು ಕಾಶ್ಮೀರದ ಕೋಟ್ಲಿ, ಬರ್‌ನಾಲಾ, ಸರ್ಜಾಲ, ಮೆಹಮೂನಾ ಮತ್ತು ಬಿಲಾಲ್‌ನ ಉಗ್ರ ಶಿಬಿರಗಳ ಮೇಲೂ ಭಾರತ ಕ್ಷಿಪಣಿ ದಾಳಿ ನಡೆಸಿ ನಾಶಮಾಡಿದೆ ಎಂದು ಪಾಕಿಸ್ತಾನವೂ ಖಚಿತಪಡಿಸಿದೆ.

ಕೈಕೊಟ್ಟಿತು ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆ

ಚೀನಾವನ್ನು ನಂಬಿಕೊಂಡಿರುವ ಪಾಕಿಸ್ತಾನ ಅದು ಕೊಟ್ಟ ಹೆಚ್‌ಕ್ಯೂ 9 ಕ್ಷಿಪಣಿ ತಡೆ ವ್ಯವಸ್ಥೆಯನ್ನು ನಿಯೋಜಿಸಿದೆ. ಆದಾಗ್ಯೂ ಈ ವ್ಯವಸ್ಥೆಯು ಭಾರತದ ಒಂದೇ ಒಂದು ಕ್ಷಿಪಣಿಯನ್ನು ತಡೆಯುವಲ್ಲಿ ವಿಫಲವಾಗಿದೆ. ಭಾರತದ ಬಳಿ ಇರುವಂತಹ ರಷ್ಯಾದ ಎಸ್ 300 ಕ್ಷಿಪಣಿ ತಡೆ ವ್ಯವಸ್ಥೆಗೆ ಹೋಲಿಸಿದರೆ ಬಹಳ ಸುಧಾರಿತ ಕ್ಷಿಪಣಿ ತಡೆ ವ್ಯವಸ್ಥೆ ಚೀನಾದ್ದು ಎಂದು ಹೇಳಿಕೊಳ್ಳಲಾಗಿತ್ತು. ನಿರ್ಣಾಯಕ ಘಟ್ಟದಲ್ಲಿ ಹೆಚ್‌ಕ್ಯೂ 9 ಕ್ಷಿಪಣಿ ತಡೆ ವ್ಯವಸ್ಥೆ ಕೈಕೊಟ್ಟಿದೆ. ಈಗ ಭಾರತದ ಆಪರೇಷನ್‌ ಸಿಂಧೂರ್ ಕಾರ್ಯಾಚರಣೆಯು ಪಾಕಿಸ್ತಾನದ ವಾಯುರಕ್ಷಣಾ ವ್ಯವಸ್ಥೆ ಲೋಪಗಳನ್ನು ಎತ್ತಿತೋರಿಸಿದ್ದಲ್ಲದೆ, ಚೀನಾದ ಯುದ್ಧೋಪಕರಣಗಳ ಸಾಮರ್ಥ್ಯದ ಬಗ್ಗೆಯೂ ಸಂದೇಹ ಮೂಡುವಂತೆ ಮಾಡಿದೆ.

ಮುಂದೇನು?: ಭಾರತ ಇಂದು ಮಾಕ್‌ ಡ್ರಿಲ್ ನಡೆಸುತ್ತಿದ್ದು, ಯಾವುದೇ ರೀತಿಯ ದಾಳಿಯನ್ನು ಎದುರಿಸಲು ನಾಗರಿಕರನ್ನೂ ಜಾಗೃತಗೊಳಿಸುತ್ತಿದೆ. ಪಾಕಿಸ್ತಾನವೂ ತನ್ನ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದು, ಭಾರತದ ವಿರುದ್ಧ ಪ್ರತಿದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದೆ. ಹೀಗಾಗಿ, ಭಾರತೀಯ ಸೇನೆಯೂ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದು, ಉಗ್ರರಿಗೆ ಬೆಂಬಲಿಸುವುದನ್ನು ಬಿಡುವಂತೆ ತಾಕೀತು ಮಾಡಿದೆ. ಒಟ್ಟಾರೆ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.