ಆಪರೇಷನ್ ಸಿಂದೂರ; ಮಹಿಳಾ ಅಧಿಕಾರಿಗಳದ್ದೇ ನೇತೃತ್ವ, ಭಾರತೀಯ ಸೇನಾಪಡೆಯ ಅಧಿಕೃತ ಸುದ್ದಿಗೋಷ್ಠಿ ನೇರ ಪ್ರಸಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್ ಸಿಂದೂರ; ಮಹಿಳಾ ಅಧಿಕಾರಿಗಳದ್ದೇ ನೇತೃತ್ವ, ಭಾರತೀಯ ಸೇನಾಪಡೆಯ ಅಧಿಕೃತ ಸುದ್ದಿಗೋಷ್ಠಿ ನೇರ ಪ್ರಸಾರ

ಆಪರೇಷನ್ ಸಿಂದೂರ; ಮಹಿಳಾ ಅಧಿಕಾರಿಗಳದ್ದೇ ನೇತೃತ್ವ, ಭಾರತೀಯ ಸೇನಾಪಡೆಯ ಅಧಿಕೃತ ಸುದ್ದಿಗೋಷ್ಠಿ ನೇರ ಪ್ರಸಾರ

ಆಪರೇಷನ್ ಸಿಂದೂರ್: ಜಮ್ಮು-ಕಾಶ್ಮೀರದ ಪಹಲ್ಗಾಮ್‌ ದಾಳಿಯ ವೇಳೆ ಭಾರತೀಯ ಮಹಿಳೆಯರ ಸಿಂದೂರ ಅಳಿಸಿ ಹಾಕಿದ ಉಗ್ರರ ಮೇಲೆ ಪ್ರತೀಕಾರಕ್ಕೆ ಸಂಬಂಧಿಸಿದ ಆಪರೇಷನ್ ಸಿಂದೂರ ಬಹಳ ವಿಶೇಷ. ಭಾರತೀಯ ಸೇನಾ ಪಡೆಯ ಅಧಿಕೃತ ಸುದ್ದಿಗೋಷ್ಠಿಯನ್ನು ಮಹಿಳಾ ಅಧಿಕಾರಿಗಳೇ ನಡೆಸುತ್ತಿದ್ದು, ಅದರ ವಿವರ ನೀಡುತ್ತಿದ್ದಾರೆ.ಇದರ ನೇರ ಪ್ರಸಾರ ಇಲ್ಲಿದೆ.

ಆಪರೇಷನ್ ಸಿಂದೂರ; ಮಹಿಳಾ ಅಧಿಕಾರಿಗಳದ್ದೇ ನೇತೃತ್ವ, ಭಾರತೀಯ ಸೇನಾಪಡೆಯ ಅಧಿಕೃತ ಸುದ್ದಿಗೋಷ್ಠಿ ನೇರ ಪ್ರಸಾರ (ವಿಡಿಯೋದಿಂದ ತೆಗೆದ ಚಿತ್ರ)
ಆಪರೇಷನ್ ಸಿಂದೂರ; ಮಹಿಳಾ ಅಧಿಕಾರಿಗಳದ್ದೇ ನೇತೃತ್ವ, ಭಾರತೀಯ ಸೇನಾಪಡೆಯ ಅಧಿಕೃತ ಸುದ್ದಿಗೋಷ್ಠಿ ನೇರ ಪ್ರಸಾರ (ವಿಡಿಯೋದಿಂದ ತೆಗೆದ ಚಿತ್ರ)

ಆಪರೇಷನ್ ಸಿಂದೂರ್: ಪಹಲ್ಗಾಮ್‌ ದಾಳಿಯ ವೇಳೆ ಭಾರತೀಯ ಮಹಿಳೆಯರ ಸಿಂದೂರ ಅಳಿಸಿ ಹಾಕಿದ ಉಗ್ರರ ಮೇಲೆ ಪ್ರತೀಕಾರಕ್ಕೆ ಸಂಬಂಧಿಸಿದ ಆಪರೇಷನ್ ಸಿಂದೂರ ಬಹಳ ವಿಶೇಷ. ಭಾರತೀಯ ಸೇನಾ ಪಡೆಯ ಅಧಿಕೃತ ಸುದ್ದಿಗೋಷ್ಠಿಯನ್ನು ಮಹಿಳಾ ಅಧಿಕಾರಿಗಳೇ ನಡೆಸುತ್ತಿದ್ದು, ಅದರ ವಿವರ ನೀಡುತ್ತಿದ್ದಾರೆ.ಇದರ ನೇರ ಪ್ರಸಾರ ಇಲ್ಲಿದೆ. ಭಾರತೀಯ ಸೇನೆ ಮತ್ತು ವಾಯುಪಡೆಯ ಮಹಿಳಾ ಅಧಿಕಾರಿಗಳು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಆರಂಭದಲ್ಲಿ ಪಹಲ್ಗಾಮ್ ದಾಳಿ ಮತ್ತು ಭಯೋತ್ಪಾದನೆಯ ಹಾನಿಯ ಚಿತ್ರಣ ನೀಡಿ, ಬಳಿಕ ಆಪರೇಷನ್ ಸಿಂಧೂರ ಕುರಿತು ಮಾತನಾಡುವುದಕ್ಕೆ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ ಅವರನ್ನು ಆಹ್ವಾನಿಸಿದರು.

ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಶಿ ಮತ್ತು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್‌ ಅವರು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಜಮ್ಮು - ಕಾಶ್ಮೀರದ ಭಾಗದಲ್ಲಿ ಗುರುತಿಸಲಾಗಿದ್ದ ಉಗ್ರ ನೆಲೆಗಳ ವಿವರ ಹಾಗೂ ಅವುಗಳಿಗೆ ದಾಳಿ ನಡೆಸುವ ಮೊದಲು ಮತ್ತು ದಾಳಿ ನಡೆಸಿದ ನಂತರದ ಉಪಗ್ರಹ ಚಿತ್ರಗಳನ್ನು ತೋರಿಸಿದರು. ಅಷ್ಟೇ ಅಲ್ಲ, ಯಾವ ಉಗ್ರ ನೆಲೆಯಲ್ಲಿ ಏನಿತ್ತು, ಅಲ್ಲಿ ಯಾವೆಲ್ಲ ಉಗ್ರರಿಗೆ ತರಬೇತಿ ನೀಡಲಾಗಿತ್ತು ಎಂಬಿತ್ಯಾದಿ ವಿವರಗಳನ್ನೂ ನೀಡಿದರು.

ಆಪರೇಷನ್ ಸಿಂದೂರ ಕಾರ್ಯಾಚರಣೆ ಬುಧವಾರ (ಮೇ 7) ನಸುಕಿನ ವೇಳೆ ಶುರುಮಾಡಿದ್ದು, ನಿಖರವಾಗಿ ಉಗ್ರ ತಾಣಗಳನ್ನಷ್ಟೇ ಟಾರ್ಗೆಟ್ ಮಾಡಲಾಗಿತ್ತು. ನಾಗರಿಕರನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಿಲ್ಲ. ಪಾಕಿಸ್ತಾನದ ಸೇನಾ ನೆಲೆಗಳ ಮೇಲೂ ದಾಳಿ ನಡೆಸಿಲ್ಲ. ಇದು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಾಚರಣೆಯಾಗಿತ್ತು ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.