ಆಪರೇಷನ್ ಸಿಂಧೂರ: ಉಗ್ರ ಮಸೂದ್ ಅಜರ್ ಗೆ ಬಿಗ್ ಶಾಕ್; ಪತ್ನಿ, ಮಗ ಸೇರಿ ಇಡೀ ಕುಟುಂಬದ 14 ಮಂದಿ ಭಾರತೀಯ ಸೇನಾ ದಾಳಿಗೆ ಬಲಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್ ಸಿಂಧೂರ: ಉಗ್ರ ಮಸೂದ್ ಅಜರ್ ಗೆ ಬಿಗ್ ಶಾಕ್; ಪತ್ನಿ, ಮಗ ಸೇರಿ ಇಡೀ ಕುಟುಂಬದ 14 ಮಂದಿ ಭಾರತೀಯ ಸೇನಾ ದಾಳಿಗೆ ಬಲಿ

ಆಪರೇಷನ್ ಸಿಂಧೂರ: ಉಗ್ರ ಮಸೂದ್ ಅಜರ್ ಗೆ ಬಿಗ್ ಶಾಕ್; ಪತ್ನಿ, ಮಗ ಸೇರಿ ಇಡೀ ಕುಟುಂಬದ 14 ಮಂದಿ ಭಾರತೀಯ ಸೇನಾ ದಾಳಿಗೆ ಬಲಿ

ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ಭಾರತೀಯ ವಾಯು ಸೇನೆ ದಾಳಿ ನಡೆಸಿದೆ. ಈ ವೇಳೆ ಮರ್ಕಜ್ ಸಂಕೀರ್ಣದಲ್ಲಿದ್ದ ಜೈಷ್ ಉಗ್ರ ಮಸೂದ್ ಅಜರ್ ನ ಪತ್ನಿ, ಪುತ್ರ, ಸಹೋದರ, ಸಹೋದರಿ ಸೇರಿ ಕುಟುಂಬದ 14 ಮಂದಿ ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಜೈಷ್ ಉಗ್ರ ಮಸೂದ್ ಅಜರ್ ನ ಕುಟುಂಬದ 14 ಮಂದಿ ಹತರಾಗಿದ್ದಾರೆ. ಇದರಲ್ಲಿ ಅವನ ಪತ್ನಿ, ಪುತ್ರ, ಸಹೋದರ, ಸಹೋದರಿ ಸೇರಿದ್ದಾರೆ.
ಭಾರತೀಯ ಸೇನೆ ನಡೆಸಿರುವ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಜೈಷ್ ಉಗ್ರ ಮಸೂದ್ ಅಜರ್ ನ ಕುಟುಂಬದ 14 ಮಂದಿ ಹತರಾಗಿದ್ದಾರೆ. ಇದರಲ್ಲಿ ಅವನ ಪತ್ನಿ, ಪುತ್ರ, ಸಹೋದರ, ಸಹೋದರಿ ಸೇರಿದ್ದಾರೆ.

ಜಮ್ಮು-ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ನಡೆಸಿದ್ದ ದಾಳಿಗೆ ಭಾರತ ಇಂದು (ಮೇ 7, ಬುಧವಾರ) ಪ್ರತೀಕಾರ ತೀರಿಸಿಕೊಂಡಿದ್ದು, ಜೈಷ್ ಉಗ್ರ ಸಂಘಟನೆಯ ನಾಯಕ ಮಸೂದ್ ಅಜರ್ ಗೆ ಬಿಗ್ ಶಾಕ್ ನೀಡಿದೆ. ಪಾಕಿಸ್ತಾನದ ಬಹವಾಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಮುಖ್ಯ ನೆಲೆ ಮರ್ಕಜ್ ಸುಭಾನ್ ಅಲ್ಲಾಹ್ ಮೇಲೆ ಭಾರತೀಯ ಸೇನೆ ತಡರಾತ್ರಿ ನಡೆಸಿದ ದಾಳಿಯಲ್ಲಿ ಮಸೂದ್ ಅಜರ್ ನ ಪತ್ನಿ, ಮಗ ಮತ್ತು ಸಹೋದರಿ ಸೇರಿದಂತೆ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ.

ಟಿವಿ ವರದಿಗಳ ಪ್ರಕಾರ, ಮಸೂದ್ ನ ಹಿರಿಯ ಸಹೋದರಿ, ಸೋದರ ಮತ್ತು ನಾಲ್ವರು ಆಪ್ತರು ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಕುಟುಂಬದ 10 ಮಂದಿ ಮತ್ತು ನಾಲ್ವರು ಆಪ್ತರು ಸೇರಿ ಒಟ್ಟು 14 ಮಂದಿ ಭಾರತೀಯ ಸೇನಾ ದಾಳಿಯಲ್ಲಿ ಹತರಾಗಿದ್ದಾರೆ. ಹತ್ಯೆಗೀಡಾದವರಲ್ಲಿ ಮೌಲಾನಾ ಕಾಶಿಫ್, ಇವರ ಕುಟುಂಬದ ಮೌಲಾನಾ ಅಬ್ದುಲ್ ರವೂಫ್ ಅವರ ಹಿರಿಯ ಮಗಳು, ಮೊಮ್ಮಗ ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಈ ದಾಳಿಯಲ್ಲಿ ಕುಟುಂಬವನ್ನು ನಿರ್ಮೂಲನೆ ಮಾಡಿದ ನಂತರ ಮಸೂದ್ ಅಜರ್ ತುಂಬಾ ಅಸಮಾಧಾನಗೊಂಡಿದ್ದಾನೆ ಎನ್ನಲಾಗಿದೆ. ಮಾಧ್ಯಮ ವರದಿಯ ಪ್ರಕಾರ, "ನಾನು ಸಹ ಸತ್ತಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಅಜರ್ ಹೇಳಿರುವುದಾಗಿ ವರದಿಯಾಗಿದೆ.

ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದ ಸಮಯದಲ್ಲಿ ಈ ಎಲ್ಲಾ ಕುಟುಂಬ ಸದಸ್ಯರು ಮರ್ಕಜ್ ಸಂಕೀರ್ಣದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಪುಲ್ವಾಮಾ ಮಾದರಿಯ ದಾಳಿಗಳನ್ನು ಯೋಜಿಸಿರುವ ಜೆಎಂನ ಮುಖ್ಯ ತರಬೇತಿ ಮತ್ತು ಕಾರ್ಯಾಚರಣೆ ಪ್ರಧಾನ ಕಚೇರಿ ಎಂದು ಇದನ್ನು ಪರಿಗಣಿಸಲಾಗಿದೆ.

ಕಳೆದ ಮೂರು ದಶಕಗಳಲ್ಲಿ ಭಾರತದ ನೆಲದ ಮೇಲೆ ಪ್ರಮುಖ ದಾಳಿಗಳಿಗೆ ಕಾರಣವಾದ ಎರಡು ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೈಬಾದ ಜಿಹಾದಿ ರಚನೆಗಳನ್ನು ನಾಶಪಡಿಸುವುದು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿತ್ತು. ಪಾಕಿಸ್ತಾನದ 12 ನೇ ಅತಿದೊಡ್ಡ ನಗರವು ಜೈಶ್-ಎ-ಮೊಹಮ್ಮದ್ (ಜೆಎಂ) ಗೆ ನೆಲೆಯಾಗಿದೆ. ಲಾಹೋರ್ ನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಇದು ಉಸ್ಮಾನ್-ಒ-ಅಲಿ ಕಾಂಪ್ಲೆಕ್ಸ್ ಎಂದೂ ಕರೆಯಲ್ಪಡುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾ ಸಂಕೀರ್ಣದಲ್ಲಿ ಕಾರ್ಯಾಚರಣೆಯ ನೆಲೆಯಾಗಿದೆ.

ಜಾಮಿಯಾ ಮಸೀದಿಯನ್ನು ಭಾರತ ಗುರಿಯಾಗಿಸಿಕೊಂಡಿತ್ತು. ಈ ಕ್ಯಾಂಪಸ್ 18 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಉಗ್ರರ ನೇಮಕಾತಿ ಮತ್ತು ಸೈದ್ಧಾಂತಿಕ ಭಯೋತ್ಪಾದಕರಿಗೆ ಜೈಶ್ ನ ಕೇಂದ್ರವಾಗಿದೆ ಎಂದು ಹೇಳಲಾಗಿತ್ತು. ಜೆಇಎಂ ಸ್ಥಾಪಕ ಮೌಲಾನಾ ಮಸೂದ್ ಅಜರ್ ಬಹವಾಲ್ಪುರದಲ್ಲಿ ಜನಿಸಿದ್ದು, ಅಲ್ಲಿ ಭಾರಿ ಭದ್ರತೆಯಲ್ಲಿ ವಾಸಿಸುತ್ತಿದ್ದಾನೆ. ಜೈಶ್-ಎ-ಮೊಹಮ್ಮದ್ ಅನ್ನು 2002 ರಲ್ಲಿ ಅಧಿಕೃತವಾಗಿ ನಿಷೇಧಿಸಲಾಗಿದೆ. ಆದರೆ ದಂಡನಾತ್ಮಕ ಕ್ರಮವನ್ನು ಕಾಗದದ ಮೇಲೆ ಮಾತ್ರ ಜಾರಿಗೆ ತರಲಾಗಿದೆ. ಇದು ಜೈಶ್-ಎ-ಮೊಹಮ್ಮದ್ ಗೆ ತನ್ನ ಶಿಬಿರಗಳನ್ನು ನಡೆಸಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿತು.

Raghavendra M Y

TwittereMail
ರಾಘವೇಂದ್ರ ಎಂ.ವೈ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್ ಪ್ರೊಡ್ಯೂಸರ್. ರಾಶಿ ಭವಿಷ್ಯ (ಧರ್ಮ) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ, ಉದಯ ನ್ಯೂಸ್, ದಿಗ್ವಿಜಯ ನ್ಯೂಸ್, ಫಸ್ಟ್ ನ್ಯೂಸ್, ಡಿಡಿ ಚಂದನ ನ್ಯೂಸ್, ಈ-ಟಿವಿ ಭಾರತದಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಸೇರಿ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಅನುಭವ. ಪುಸ್ತಕ, ಪತ್ರಿಕೆ ಓದುವುದು ಇಷ್ಟ. ವಾಣಿಜ್ಯ, ಕ್ರಿಕೆಟ್, ಗ್ರಾಮೀಣ ವಿದ್ಯಮಾನಗಳ ಬಗ್ಗೆ ಇಷ್ಟಪಟ್ಟು ಬರೆಯುತ್ತಾರೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿರುಪನಹಳ್ಳಿ ಇವರ ಸ್ವಂತ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.