ಸೋಷಿಯಲ್ ಮೀಡಿಯಾ ಪ್ರೊಫೈಲ್ ಫೋಟೊಗೆ ‘ಸಿಂಧೂರ‘: ಸಾಮಾಜಿಕ ಮಾಧ್ಯಮಗಳಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಹೆಮ್ಮೆಯ ಮಾತು, ವಿಡಿಯೊ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೋಷಿಯಲ್ ಮೀಡಿಯಾ ಪ್ರೊಫೈಲ್ ಫೋಟೊಗೆ ‘ಸಿಂಧೂರ‘: ಸಾಮಾಜಿಕ ಮಾಧ್ಯಮಗಳಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಹೆಮ್ಮೆಯ ಮಾತು, ವಿಡಿಯೊ

ಸೋಷಿಯಲ್ ಮೀಡಿಯಾ ಪ್ರೊಫೈಲ್ ಫೋಟೊಗೆ ‘ಸಿಂಧೂರ‘: ಸಾಮಾಜಿಕ ಮಾಧ್ಯಮಗಳಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಹೆಮ್ಮೆಯ ಮಾತು, ವಿಡಿಯೊ

ಆಪರೇಷನ್ ಸಿಂಧೂರ್: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ಅಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಚರಣೆಯ ಬಗ್ಗೆ ಭಾರತೀಯರು ಸಾಮಾಜಿಕ ಜಾಲತಾಣದಲ್ಲಿ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಪ್ರೊಫೈಲ್‌ ಫೋಟೊಗಳಲ್ಲಿ ಸಿಂಧೂರ ರಾಜಾರಾಜಿಸುತ್ತಿದೆ.

ಸೋಷಿಯಲ್ ಮೀಡಿಯಾ ಪ್ರೊಫೈಲ್ ಫೋಟೊಗೆ ‘ಸಿಂಧೂರ‘: ಸಾಮಾಜಿಕ ಮಾಧ್ಯಮಗಳಲ್ಲಿ ಸಿಂಧೂರದ ಬಗ್ಗೆ ಹೆಮ್ಮೆಯ ಮಾತು, ವಿಡಿಯೊ
ಸೋಷಿಯಲ್ ಮೀಡಿಯಾ ಪ್ರೊಫೈಲ್ ಫೋಟೊಗೆ ‘ಸಿಂಧೂರ‘: ಸಾಮಾಜಿಕ ಮಾಧ್ಯಮಗಳಲ್ಲಿ ಸಿಂಧೂರದ ಬಗ್ಗೆ ಹೆಮ್ಮೆಯ ಮಾತು, ವಿಡಿಯೊ

ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ಧರ್ಮದ ಹೆಸರು ಹೇಳಿಕೊಂಡು ಭಾರತೀಯರ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೈನ್ಯ ಅಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಹಲವು ಉಗ್ರರ ನೆಲೆಗಳನ್ನು ನಾಶ ಮಾಡಲಾಗಿದೆ. ಆಪರೇಷನ್ ಸಿಂಧೂರ್ ಬಗ್ಗೆ ಭಾರತೀಯರ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಳ್ಳುತ್ತಿದ್ದಾರೆ.

ಹಲವರು ಪಾಕಿಸ್ತಾನ ದಾಳಿಯ ವಿಡಿಯೊ, ಫೋಟೊಗಳನ್ನು ಹಂಚಿಕೊಂಡು ಭಾರತೀಯ ಸೇನೆಗೆ ಜೈ ಹಿಂದ್ ಹೇಳುತ್ತಿದ್ದರೆ ಇನ್ನೂ ಕೆಲವರು ದ್ವೇಷ ಮರೆತು ಒಂದಾಗಿ ಎಂದು ಪಾಕಿಸ್ತಾನಕ್ಕೆ ಸಲಹೆ ನೀಡುತ್ತಿದ್ದಾರೆ. ಹಲವರು ತಮ್ಮ ಸೋಷಿಯಲ್ ಮಿಡಿಯಾ ಪ್ರೊಫೈಲ್ ಫೋಟೊವನ್ನು ಬದಲಿಸಿ ಆಪರೇಷನ್‌ ಸಿಂಧೂರ್ ಫೋಟೊಗಳನ್ನು ಹಾಕಿಕೊಂಡಿದ್ದಾರೆ. ಸಾಕಷ್ಟು ಜನ ಫೇಸ್‌ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂನಂತಹ ಸೋಷಿಯಲ್ ಮಿಡಿಯಾ ಪುಟಗಳಲ್ಲಿ ಆಪರೇಷನ್ ಸಿಂಧೂರ್‌ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಈ ಐಡಿಯ ಸೂಪರ್ಬ್

ಆಪರೇಷನ್ ಸಿಂಧೂರ್‌ಗಾಗಿ ಅಭಿನಂದನೆಗಳು. ಅದರ ಹಿಂದಿನ ವಿಚಾರಶೀಲತೆ ಸೂಪರ್ಬ್. ಪಾಕಿಸ್ಥಾನದ ನಾಗರಿಕರ ಮೇಲೆ ವಿರೋಧ ಇಲ್ಲ. ಅಧಿಕೃತ ಸೇನಾ ನೆಲೆಯ ಮೇಲೂ ಆಕ್ರಮಣವಿಲ್ಲ. ಉಗ್ರ ನೆಲೆಗಳ ಮೇಲೆ ಮಾತ್ರ. ಉಗ್ರರನ್ನು ಮಟ್ಟ ಹಾಕಿದ್ದನ್ನು ಯಾರೂ ಆಕ್ಷೇಪಿಸಲು ಅವಕಾಶವಿಲ್ಲ. ಈ ಐಡಿಯಾವೇ ಅಭಿನಂದನೆಗೆ ಅರ್ಹ ಎಂದು ಲೇಖಕ ಅರವಿಂದ ಚೊಕ್ಕಾಡಿ ಪೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನಾದರೂ ಒಟ್ಟಾಗಿ

‘ಪಾಕಿಸ್ತಾನ ನಮ್ಮನ್ನು ಶತ್ರು ದೇಶದ ಪ್ರಜೆಗಳು ಅಂತಷ್ಟೇ ನೋಡುತ್ತೆ, ಪರಸ್ಪರ ಧರ್ಮ‍–ಪಕ್ಷ ಅಂತ ಕೆಸರೆರೆಚಾಟ ಬಿಡಿ‘ ಎಂದು ಭಾಗ್ಯೇಶ್ ರೈ ಎನ್ನುವವರು ಪೋಸ್ಟ್ ಹಾಕಿಕೊಂಡಿದ್ದಾರೆ.

ಭಾರತ ಹೊಡೆದಾಗ ಜಗತ್ತು ನೋಡುತ್ತದೆ ಮತ್ತು ನಡುಗುತ್ತದೆ

ಆಪರೇಷನ್ ಸಿಂಧೂರ್ ಕೇವಲ ಒಂದು ದಾಳಿಯಲ್ಲ, ಇದು ಹಣೆಯ ಮೇಲೆ ಹಚ್ಚಿದ ರಾಷ್ಟ್ರೀಯ ಸಿಂಧೂರ. ಭಾರತ ಹೊಡೆದಾಗ ಜಗತ್ತು ನೋಡುತ್ತದೆ... ಮತ್ತು ಸ್ವಲ್ಪ ನಡುಗುತ್ತದೆ. ಆಪರೇಷನ್ ಸಿಂಧೂರ ಕೇವಲ ದಾಳಿಯಲ್ಲ, ಇದು ಭಾರತದ ಸಾರ್ವಭೌಮತ್ವದ ಸಂಕೇತ. ಭಾರತೀಯ ಸೇನೆಯ ಧೈರ್ಯ ಮತ್ತು ಪ್ರಧಾನಿ ಶ್ರೀ Narendra Modi ಜಿ ಅವರ ನಿರ್ಭೀತ ನಾಯಕತ್ವಕ್ಕೆ ನನ್ನ ನಮನಗಳು. ನವಭಾರತವು ಎಚ್ಚರಿಸುವುದಷ್ಟೇ ಅಲ್ಲ, ಅದು ತನ್ನ ಕರ್ತವ್ಯ ನಿರ್ವಹಿಸುತ್ತದೆ ಎಂದು ನಿಖಿಲ್ ಗೌಡ್ ಎನ್ನುವವರು ಬರೆದುಕೊಂಡಿದ್ದಾರೆ.

ಎಂಥ ಹೆಸರು, ಎಂಥ ದಾಳಿ: ಸೇನೆಗೆ ಮೆಚ್ಚುಗೆ

ಮೋದಿಜಿ ಮಾಕ್ ಡ್ರಿಲ್ ಅಂತ ಯಾಮಾರಿಸಿ, ರಿಯಲ್ ಡ್ರಿಲ್ ಮಾಡಿದ್ದನ್ನು ಖಂಡಿಸುತ್ತೇವೆ. ಎಲ್ಲಿ ಯುದ್ಧ. ಎಲ್ಲಿ ಮೋದಿ, ಧರ್ಮ ಕೇಳಿಲ್ಲಾ , ರಕ್ಷಿಸಿದವರೂ ಅವರೇ ಅಂತೆಲ್ಲಾ. ದೇಶದ ಏಕತೆಯ ವಿರುದ್ಧ ನಿಂತ ಎಲ್ಲಾ ಆತ್ಮಗಳಿಗೂ ಹ್ಯಾಪಿ ಆಪರೇಷನ್ ಸಿಂಧೂರ್. ಎಂಥಾ ಹೆಸರು. ಎಂಥಾ ದಾಳಿ, ಭಗವಂತ ಈ ಹೋರಾಟದಲ್ಲಿ ನಿರತರಾದ ಪ್ರತಿಯೊಬ್ಬರಿಗೂ ಶಕ್ತಿ ಸ್ಥೈರ್ಯ ಕೊಟ್ಟು ಕಾಪಾಡು ಅಂತ ಇವತ್ತು ಮತ್ತೇ ತುಪ್ಪದ ದೀಪ ಹಚ್ಚೋದೇ. ಹರ ಹರ ಮಹಾದೇವ್‘ ಎಂದು ಶೋಭಾ ರಾವ್ ಎನ್ನುವವರು ಬರೆದುಕೊಂಡಿದ್ದಾರೆ.

ನಾನು ದೇಶದ ಜೊತೆಗೆ

ಶಾಂತಿ, ಸೌಹಾರ್ದದಿಂದ ಬದುಕಲು ಕೂಡ ಕೆಲವೊಮ್ಮೆ ಸಂಘರ್ಷ ಅಗತ್ಯ. ನಮ್ಮ ಮಕ್ಕಳು ಕೋವಿಡ್ ನೋಡಿದವು.ಈಗ ಯುದ್ಧ ಕೂಡ ನೋಡುವಂತಾಯ್ತು. ಅದೇನೇ ಇರಲಿ ನಾನಂತೂ ದೇಶದ ಜೊತೆ ,ಮೋದಿಜೀ ಜೊತೆ ಅಷ್ಟೇ‘ ಎಂದು ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ.

ತಾಲೀಮಿಗೆ ಮೊದಲೇ ದಾಳಿ

ಆಪರೇಷನ್‌ ಸಿಂಧೂರ್! ಸರ್ಪ್ರೈಸ್‌ ಏನು ಅಂದರೆ ನಾಳೆ ಮಾಕ್ ಟೆಸ್ಟ್‌, ಆದರೆ ಇವತ್ತೇ ಆ್ಯಕ್ಷುವಲ್‌ ಟೆಸ್ಟ್‌ ಎಂದು ಮಧು ಅಯ್ಯಂಗಾರ್ ಎನ್ನುವವರು ಬರೆದುಕೊಂಡಿದ್ದಾರೆ.

ಕುಂಕುಮ ಅಳಿಸಿದ್ದಕ್ಕೆ ಇದು ಪ್ರತೀಕಾರ

ಪಾಕಿಸ್ತಾನ ಕೃಪಾಪೋಷಿತ ಉಗ್ರರು ಹದಿನೈದು ದಿನಗಳ ಹಿಂದೆ ಪಹಲ್ಗಾಮ್ ನಲ್ಲಿ 26 ಭಾರತದ ಹಿಂದೂ ಮಹಿಳೆಯರ ಕುಂಕುಮ ಅಳಿಸಿದ್ದಕ್ಕೆ ಭಾರತವು ಪ್ರತೀಕಾರ ತೀರಿಸಿಕೊಂಡಿದೆ.

‘ಆಪರೇಷನ್ ಸಿಂಧೂರ್ ಎಂದು ಹೆಸರಿಟ್ಟು, ಪಾಕಿಸ್ತಾನದ ಮೇಲೆ 9 ಕಡೆಗಳಲ್ಲಿ ದಾಳಿ ನಡೆಸಿದೆ. ಸಿಂಧೂರಗಳನ್ನು ಅಳಿಸಿದ್ದಕ್ಕೆ ಪ್ರತಿಕಾರವಾಗಿ ಭಾರತದ ಸಶಸ್ತ್ರ ಪಡೆಗಳು ಆಪರೇಷನ್ ಸಿಂಧೂರ್ ಆರಂಭಿಸಿದೆ.

ಜೈ ಹಿಂದ್, ನ್ಯಾಯ ಸಿಕ್ಕಿದೆ‘ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶಿಷ್ಯ ವರ್ಗ ಎನ್ನುವ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಳ್ಳಲಾಗಿದೆ.

ಸಿಂಧೂರಕ್ಕೆ ಜಯವಾಗಲಿ

‘ಆಪರೇಷನ್ ಸಿಂಧೂರ‘ಕ್ಕೆ ಜಯವಾಗಲಿ. ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸಶಸ್ತ್ರ ಪಡೆಗಳು ಕೈಗೊಂಡಿರುವ ‘ಆಪರೇಷನ್ ಸಿಂಧೂರ್‘ ಕಾರ್ಯಾಚರಣೆ ಯಶಸ್ವಿಯಾಗಲಿ.

ಉಗ್ರ ಪೋಷಕ ರಾಷ್ಟ್ರ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಕಾಶ್ಮೀರದಲ್ಲಿನ ಭಯೋತ್ಪಾದಕರ ಅಡಗು ತಾಣ ಮತ್ತು ಶಿಬಿರಗಳ ಮೇಲೆ ಭಾರತೀಯ ಸೇನೆ ನಿಖರ ದಾಳಿ ಮಾಡಿ ಧ್ವಂಸ ಗೊಳಿಸಿದೆ. ಪಾಕಿಸ್ತಾನದ ಉಗ್ರರ ಸಂಹಾರಕ್ಕಾಗಿ ಕೈಗೊಂಡಿರುವ ‘ಆಪರೇಷನ್ ಸಿಂಧೂರ್‌ ಸೇನಾ ಕಾರ್ಯಾಚರಣೆ‌‘ ಯನ್ನು @JanataDal_S ಪಕ್ಷವು ಬೆಂಬಲಿಸುತ್ತದೆ ಮತ್ತು ಸ್ವಾಗತಿಸುತ್ತದೆ. ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಯಶಸ್ವಿಯಾಗಲಿ. ದೇಶದ ಸಮಸ್ತ ನಾಗರಿಕರ ಬೆಂಬಲವೂ ದೊರಕಿದ್ದು, ಇಡೀ ವಿಶ್ವವೇ ಭಾರತದ ಪರವಾಗಿ ಬೆಂಬಲಕ್ಕೆ ನಿಂತಿದೆ‘ ಎಂದು ಜನತಾದಳ ಸೆಕ್ಯೂಲರ್ ಟ್ವಿಟರ್ ಪುಟದಲ್ಲಿ ಬರೆದುಕೊಳ್ಳಲಾಗಿದೆ.

ಸಿಂಧೂರವೇ ಈಗ ಪ್ರೊಫೈಲ್ ಇಮೇಜ್

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.