ಹ್ಯಾಪಿ ದೀಪಾವಳಿ ಪಾಕಿಸ್ತಾನ, ಇಂಡಿಯನ್ ಆರ್ಮಿ ಜೈ ಹಿಂದ್‌; ಆಪರೇಷನ್‌ ಸಿಂಧೂರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಹರ್ಷ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹ್ಯಾಪಿ ದೀಪಾವಳಿ ಪಾಕಿಸ್ತಾನ, ಇಂಡಿಯನ್ ಆರ್ಮಿ ಜೈ ಹಿಂದ್‌; ಆಪರೇಷನ್‌ ಸಿಂಧೂರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಹರ್ಷ

ಹ್ಯಾಪಿ ದೀಪಾವಳಿ ಪಾಕಿಸ್ತಾನ, ಇಂಡಿಯನ್ ಆರ್ಮಿ ಜೈ ಹಿಂದ್‌; ಆಪರೇಷನ್‌ ಸಿಂಧೂರ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಹರ್ಷ

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಅಪರೇಷನ್ ಸಿಂಧೂರ್ ಹೆಸರಿನಲ್ಲಿ ದಾಳಿ ನಡೆಸಿದೆ. ಈ ಪತ್ರಿಕಾರದ ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಜನರ ಪ್ರತಿಕ್ರಿಯೆ ಹೀಗಿದೆ.

ಆಪರೇಷನ್‌ ಸಿಂಧೂರ್‌ಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಹರ್ಷ
ಆಪರೇಷನ್‌ ಸಿಂಧೂರ್‌ಗೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರ ಹರ್ಷ

ಜಮ್ಮು–ಕಾಶ್ಮೀರದ ಪ್ರಸಿದ್ಧ ಪ್ರವಾಸಿ ತಾಣ ಪಹಲ್ಗಾಮ್‌ನಲ್ಲಿ ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ಬುಧವಾರ (ಮೇ 7) ತಡರಾತ್ರಿ ‘ಆಪರೇಷನ್ ಸಿಂಧೂರ್‌‘ ಕಾರ್ಯಾಚರಣೆ ನಡೆಸಿದೆ. ಪಾಕಿಸ್ತಾನ ಹಾಗೂ ಪಿಒಕೆಯಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಉಗ್ರರ 9 ಅಡಗುತಾಣಗಳನ್ನು ನಾಶ ಮಾಡಿದ್ದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ, ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಉಗ್ರರ ಸಂಘಟನೆಗಳ ಪ್ರಮುಖ ನೆಲೆಗಳು ನಾಶವಾಗಿವೆ. ಕೋಟ್ಲಿ, ಮುರಿಡ್ಕೆ ಹಾಗೂ ಬಹವಾಲ್ಪುರ ಮುಂತಾದ ಕಡೆಗಳಲ್ಲಿ ದಾಳಿ ನಡೆದಿದೆ.

ತಡರಾತ್ರಿ ಇದ್ದಕ್ಕಿದ್ದ ಹಾಗೆ ಭಾರತೀಯ ಸೇನೆಯು ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರತೀಯರು ವಿಡಿಯೊ, ಫೋಟೊಗಳನ್ನು ಪೋಸ್ಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸುತ್ತಿದ್ದಾರೆ. #IndiaPakistanWar, #Karachi, #WeAreNotInDanger ಮುಂತಾದ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆಗುತ್ತಿವೆ. ಪಾಕಿಸ್ತಾನದಲ್ಲಿ ಭಾರತೀಯ ಸೇನೆಯ ನಡೆಸಿದ ಏರ್‌ಸ್ಟೈಕ್‌ನ ವಿಡಿಯೊಗಳು ವೈರಲ್ ಆಗುತ್ತಿವೆ.

‘ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಿ ಭಯೋತ್ಪಾದಕ ಸಂಘಟನೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದೆ. ಪರಾರಿಯಾಗಿರುವ ಪಾಕಿಸ್ತಾನಿ ಭಯೋತ್ಪಾದಕರು‘ತೆಲಂಗಾಣ ಅವಾಜ್ ಎನ್ನುವ ಸೋಷಿಯಲ್ ಮಿಡಿಯಾ ಪುಟದಲ್ಲಿ ವಿಡಿಯೊ ಹಂಚಿಕೊಂಡು ಬರೆದುಕೊಳ್ಳಲಾಗಿದೆ.

‘ಹ್ಯಾಪಿ ದೀಪಾವಳಿ ಪಾಕಿಸ್ತಾನ್, ಇಂಡಿಯನ್‌ ಆರ್ಮಿ ಜೈ ಹಿಂದ್‘ ಎಂದು ಬರೆದುಕೊಂಡು ವಾಯ್ಸ್ ಆಫ್ ಭಾರತ್‌ವರ್ಷ ಎನ್ನುವ ಸೋಷಿಯಲ್ ಮಿಡಿಯಾ ಪುಟದಲ್ಲಿ ಆಪರೇಷನ್ ಸಿಂಧೂರ್ ದಾಳಿಯ ವಿಡಿಯೊಗಳನ್ನು ಹಂಚಿಕೊಳ್ಳಲಾಗಿದೆ.

ಮೊಸಾದ್ ಕಾಮೆಂಟರಿ ಎನ್ನುವ ಎಕ್ಸ್ ಪುಟದಲ್ಲಿ ಪ‍ಪಾಕಿಸ್ತಾನ್ ಎಂದು ಬರೆದುಕೊಂಡು ದಾಳಿ ಭೀಕರ ಕ್ಷಣಗಳ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.

ಪಾಕಿಸ್ತಾನದ ವ್ಯಕ್ತಿಯೊಬ್ಬ ದಾಳಿಯ ಬಗ್ಗೆ ವಿಡಿಯೊದಲ್ಲಿ ಹೇಳಿಕೊಂಡಿರುವುದು ಈಗ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಹಲವರು ಈ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ನಾವು ಅಪಾಯದಲ್ಲಿಲ್ಲ, ನಾವೇ ಅಪಾಯ, ಜೈ ಹಿಂದ್, ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯ ಭಾರತ್ ಮಾತಾ ಕೀ ಜೈ ಎಂದು ಯಧುಷ್ಠಿರ ಚಂದ್ರ ಎನ್ನುವವರು ಬರೆದುಕೊಂಡು ಫೋಟೊ, ವಿಡಿಯೊ ಹಂಚಿಕೊಂಡಿದ್ದಾರೆ

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.