ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಸೋಷಿಯಲ್‌ ಮೀಡಿಯಾದಲ್ಲಿ ಕಟ್ಟೆಯೊಡೆದ ಆಕ್ರೋಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಸೋಷಿಯಲ್‌ ಮೀಡಿಯಾದಲ್ಲಿ ಕಟ್ಟೆಯೊಡೆದ ಆಕ್ರೋಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಸೋಷಿಯಲ್‌ ಮೀಡಿಯಾದಲ್ಲಿ ಕಟ್ಟೆಯೊಡೆದ ಆಕ್ರೋಶ

ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ ಕುರಿತು ಜನರ ಆಕ್ರೋಶ ಕಟ್ಟೆಯೊಡೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ನೆಮ್ಮದಿಯಾಗಿ ಮಲಗುವುದು ಹೇಗೆ? ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ? ಎಂದು ಜನರು ಚರ್ಚಿಸುತ್ತಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಸೋಷಿಯಲ್‌ ಮೀಡಿಯಾದಲ್ಲಿ ಕಟ್ಟೆಯೊಡೆದ ಆಕ್ರೋಶ
ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ: ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಸೋಷಿಯಲ್‌ ಮೀಡಿಯಾದಲ್ಲಿ ಕಟ್ಟೆಯೊಡೆದ ಆಕ್ರೋಶ (PTI)

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹಲವು ಜನರು ಮೃತಪಟ್ಟಿದ್ದಾರೆ. ಈ ಸಂಖ್ಯೆ ಏರಿಕೆ ಕಾಣುವ ಆತಂಕವೂ ಇದೆ. ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಪ್ರವಾಸಿಗರ ಮೇಲೆ ನಡೆದ ದಾಳಿಯ ಕುರಿತು ಜನರ ಆಕ್ರೋಶ ಕಟ್ಟೆಯೊಡೆದಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಕುರಿತು ನೆಮ್ಮದಿಯಾಗಿ ಮಲಗುವುದು ಹೇಗೆ? ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಎಂದು ಜನರು ಚರ್ಚಿಸುತ್ತಿದ್ದಾರೆ.

ಅರವಿಂದ ಚೊಕ್ಕಾಡಿ ಅಭಿಮತ

“ಭಯೋತ್ಪಾದಕರ ದಾಳಿಯನ್ನು ಮಾತಿನಲ್ಲಿ ಖಂಡಿಸುವುದಲ್ಲ;ದಂಡನೆಯೇ ಆಗಬೇಕಾದ್ದು. ಮಾತಿನ ಖಂಡನೆಗೆ ಸ್ಪಂದಿಸುವವರು ಭಯೋತ್ಪಾದಕರಾಗುವುದಿಲ್ಲ. ಬಂದೂಕು ಇರುವವರೊಂದಿಗೆ ನಿರಾಯುಧರು ಮಾತಾಡಲು ಆಗುವುದಿಲ್ಲ‌. ಆದರೆ ಎಲ್ಲ ನಿರಾಯುಧರ ಪರವಾಗಿ ಆಯುಧ ಹಿಡಿದಿರುವ ಸರ್ಕಾರ ಮುಲಾಜಿಲ್ಲದೆ ತನ್ನ ಬಳಿ ಇರುವ ಆಯುಧವನ್ನು ಬಳಸಬೇಕು, ಬಳಸುತ್ತದೆ ಎಂಬ ನಿರೀಕ್ಷೆ.” ಎಂದು ಅರವಿಂದ ಚೊಕ್ಕಾಡಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಚೈತನ್ಯ ಮಜಲ್‌ಕೋಡಿ ಬರಹ

ನಮ್ಮಲ್ಲಿ ಈಗ ಮೈ ಮೇಲೆ ಜನಿವಾರ ಇದೆಯಾ, ಕಿವಿಯೋಲೆ ಕೈ ಬಳೆ ಇದೆಯಾ ಅಂತೆಲ್ಲಾ ಗಮನಿಸಿ ಹುಚ್ಚಾಟ ಮೆರೆಯುತ್ತಾ ಇದ್ದಾರೆ. ಇದು ಶ್ರದ್ಧೆಯಿಂದ, ಸ್ವಾಭಿಮಾನದಿಂದ ಬದುಕುವುದನ್ನೇ ದುರ್ಬಲಗೊಳಿಸುವ ಹೀನಾಯ ಬುದ್ಧಿ. ಅವುಗಳೆಲ್ಲ ತಲೆ ಎತ್ತುವುದು ಸ್ಕೂಲು ಕಾಲೇಜುಗಳಲ್ಲಿ ಸೋಕಾಲ್ಡ್ ಪ್ರಗತಿಪರ ಚಿಂತನೆ ಎಂಬ ಹೆಸರಿನಲ್ಲಿ ಬಿತ್ತುವ ಜಾತಿವೈಷಮ್ಯದ ವಿಷಬೀಜದಿಂದ. ಇವುಗಳಲ್ಲೇ ನಾವು ಮಗ್ನರಾಗಿ ಸುಖವಾಗಿ ಹೊಡೆದಾಡಿಕೊಂಡಿದ್ದೇವೆ.

ಇಂದು ಕಾಶ್ಮೀರದಲ್ಲಿ ಪ್ರವಾಸೀ ನಾಗರೀಕರ ಜನನೇಂದ್ರಿಯಗಳನ್ನು ಪರೀಕ್ಷಿಸಿ ಹತ್ಯೆಗೈಯ್ಯುವುದನ್ನು ನೋಡುವಾಗ ಈ ನಮ್ಮೊಳಗಿನ ಹೊಲಸು ಹುಚ್ಚಾಟಗಳು ಎಷ್ಟು ಮೂರ್ಖತನದ್ದು ಅಂತ ಕೆಲವರಿಗಾದರೂ ಅನ್ನಿಸುತ್ತಿರಬಹುದು. ಫೇಸ್ಬುಕ್ಕಿನಲ್ಲಿ ಬೆಳಗಾಗೆದ್ದರೆ ಲಿಂಗಾಯತ/ವೀರಶೈವ ಗದ್ದಲಗಳು, ಮೀಸಲಾತಿ ಒಳ ಮೀಸಲಾತಿ ರಾದ್ಧಾಂತಗಳು, ಪ್ರತಿಯೊಂದಕ್ಕೂ ಇನ್ನೂ ಇನ್ನೂ ಅದೇ ಆರ್ಯ ಮನು ಬ್ರಾಹ್ಮಣ್ಯವೆಂಬ ಹಳಸಲು ಪದಗಳ ಕನವರಿಕೆಯಿಂದ ಪುಟಭರ್ತಿ ಮಾಡುವ ಮಹಾನ್ ಬುದ್ಧಿವಂತ ಪಿಹೆಚ್ಡಿ ಸಂಶೋಧಕ ಪಡೆಗಳಿಗೆ ತನ್ನ ಈ ಒದರಾಟ ಎದುರಿಗೆ ಬಂದು ಗುಂಡು ಹಾರಿಸುವ ಶತಮೂರ್ಖನಿಗೆ ಯಾವ ಬದಲಾವಣೆಯನ್ನೂ ತರಲಾರದು ಎಂದು ಜಾಲತಾಣದಲ್ಲಿ ಬರೆಯಲಾಗದಿದ್ದರೂ ಮನಸ್ಸಿನೊಳಗಾದರೂ ಅನ್ನಿಸಿದ್ದಿರಬಹುದು. ಪುಲ್ವಾಮಾದಂತಹ ನೂರಾರು ಉಗ್ರ ದಾಳಿಗಳು ನಡೆದಾಗಲೂ ಸೈನಿಕರ ಸಾವಿಗೆ ನಾವೇನು ಮಾಡೋಕಾಗತ್ತೆ ಎಂಬ ನರಸತ್ತ ದಿವ್ಯ ನಿರ್ಲಕ್ಷ್ಯದ ಧೋರಣೆಗಳು ಈಗ ಬದಲಾಗ ತೊಡಗಿರಬಹುದು.

ಸಮಾಜದಲ್ಲಿ ಬಹುಸಂಖ್ಯಾತರಾಗಿದ್ದರೂ ಓಣಿ ಬಡಾವಣೆಗಳಲ್ಲಿ ಅಲ್ಪರಾದ ಭಯ‌ ಆತಂಕದಿಂದ ಕೇಳಿದಷ್ಟು ಹಣಕ್ಕೆ ಮನೆ ಮಾರು ಸೂರುಗಳನ್ನು ಮಾರಿಕೊಂಡು ದೌಡು ಹೊರಟ ಕುಟುಂಬಗಳ ನೋವು ಈಗ ಸಮಾನತೆಯ ತಮಟೆ ಬಾರಿಸುವವರ ತಲೆ ಹೊಕ್ಕಿರಬಹುದು. ಎಷ್ಟು ಬೇಗ ಈ ಅಂತರ್ ವಿಭಜನೆಯ ಮನಸ್ಥಿತಿಗೆ ಚಿಕಿತ್ಸೆ ಕೊಡುತ್ತೇವೋ ಅಷ್ಟು ಬೇಗ ನಾವು ಜಾಗೃತರಾಗಿ ಬದುಕಲು ಸಾಧ್ಯ.

ನೆಮ್ಮದಿಯಾಗಿ ಮಲಗುವುದು ಹೇಗೆ? ರಂಗಸ್ವಾಮಿ ಮೂಕನಹಳ್ಳಿ

"ನೆಮ್ಮದಿಯಾಗಿ ಮಲಗುವುದು ಹೇಗೆ? ಈ ಸಮಸ್ಯೆಗೆ ಶಾಶ್ವತ ಪರಿಹಾರವಿಲ್ಲವೇ ? ಅದ್ಯಾರೋ ಎಲ್ಲೋ ಕುಳಿತು ಹುಟ್ಟುಹಾಕುವ ದ್ವೇಷದ ದಳ್ಳುರಿಗೆ ಯಾವಾಗಲೂ ಬಲಿಯಾಗುವುದು ಮಾತ್ರ ಅಮಾಯಕ ಜನ ಸಾಮಾನ್ಯ. ಛೇ, ನಾವು ಸಮಾಜವಾಗಿ ಉದ್ದಾರವಾಗುತ್ತೇವೆ ಎನ್ನುವ ನಂಬಿಕೆಯೇ ಇಲ್ಲವಾಗುತ್ತಿದೆ . ಮೃತರ ಆತ್ಮಕ್ಕೆ ಸದ್ಗತಿ ಸಿಗಲಿ . ಆದರೆ ಇಂತಹ ಘಟನೆ ಯಾವ ಕುಟುಂಬಕ್ಕೂ ಆಗದಿರಲಿ." ಎಂದು ರಂಗಸ್ವಾಮಿ ಮೂಕನಹಳ್ಳಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ.

ಇದೊಂದು ಹೇಯ ಕೃತ್ಯ ಕಾಶ್ಮೀರ ದಲ್ಲಿ ಮತಾಂಧ ಭಯೋತ್ಪಾದಕರ ದಾಳಿಗೆ ಬಲಿಯಾದ ಶಿವಮೊಗ್ಗದ ಮಂಜುನಾಥ್ ಅವರ ಮೃತ ದೇಹದ ಮುಂದೆ ಅವರ ಪತ್ನಿಯ ದುಃಖ ಪಡುತ್ತಿರುವ ದೃಶ್ಯ ಯಾವ ಶತ್ರುಗೂ ಬೇಡ.. ಎಂದು ಮನೋಹರ ಸಿ ಎಲ್ ಚೆಬ್ಬೆನಾಡು ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ನಮ್ಮಗಳ ಹೇಡಿತನಕ್ಕೆ ಮದ್ದಿಲ್ಲ

"ಉಗ್ರರ ಧಾಳಿಯ ಸುದ್ದಿ ನೋಡುತ್ತಿದ್ದ ಹಾಗೆ ಮೊದಲು ನೆನಪಾಗಿದ್ದೇ ಮೊನ್ನೆಯಷ್ಟೆ ಮಂಜು ಕಾಶ್ಮೀರ ಹೋಗ್ತಾ ಇದೀನಿ ಅಂತ ಪೋಸ್ಟ್ ಹಾಕಿದ್ದು. ಗಾಬರಿಯಿಂದ ಸ್ಕ್ರೋಲ್ ಮಾಡಿದರೆ ಅವನದೇ ಫೋಟೋ. ನಂಬಲು ಸಾದ್ಯವೇ ಇಲ್ಲದೆ ಸ್ಕ್ರೋಲ್ ಮಾಡುತ್ತಾ ಹೋದರೆ ಎಲ್ಲಾ ಸುದ್ದಿಗಳು ಅದೇ ನಿಜ ಎಂದು ಹೇಳುತ್ತಿದೆ.

ಪ್ರವಾಸಿಗರನ್ನು ಕೊಂಚವೂ ಮನುಷ್ಯತ್ವ ಇಲ್ಲದೆ ನೀನು ಹಿಂದೂವಾ ಎಂದು ಕೇಳಿ ಕನ್ಫರ್ಮ್ ಮಾಡಿಕೊಂಡು ಅದರಲ್ಲೂ ಹೆಂಡತಿ ಮಗನ ಎದುರಿಗೆ ಷೂಟ್ ಮಾಡಿ ಕೊಲ್ಲಬೇಕಾದರೆ ಹೋಗಿ ನಿನ್ನ ಮೋದಿಗೆ ಹೇಳು ಎಂದು ಹೇಳಬೇಕಾದರೆ ಅದೆಂತ ಕ್ರೌರ್ಯ ತುಂಬಿಕೊಂಡಿರಬಹುದು. ಅವರ ಧಾರ್ಮಿಕ ಅಮಲು, ರಾಜಕೀಯ ಹಿನ್ನಲೆ, ದಾಯಾದಿ ದ್ವೇಷ ಏನೇ ಇರಲಿ ಮಂಜು ಹೆಂಡತಿ ಹಾಗೂ ಮಗನ ಮನಸ್ಥಿತಿ ಇಡೀ ಬದುಕು ಅವರ ಕಾಡುವ ಈ ಘಟನೆ, ಅವರು ಅನುಭವಿಸುವ ನರಕ ಊಹಿಸಿಕೊಂಡು ಸಂಕಟ ಸಿಂಬಿ ಸುತ್ತುತ್ತಿದೆ. ಉಫ್ ಇದು ಕಾಡುತ್ತಲೇ ಉಳಿಯುವ ಘಟನೆ.

ಅಮಾಯಕರ ಪ್ರಾಣ ಎಷ್ಟು ಅಗ್ಗ ಈ ಜಗತ್ತಿನಲ್ಲಿ.

ಅಂದ ಹಾಗೆ ಭಯೋತ್ಪಾದಕರಿಗೆ ಧರ್ಮವಿಲ್ಲ.

ನಮ್ಮಗಳ ಹೇಡಿತನಕ್ಕೆ ಮದ್ದಿಲ್ಲ." ಎಂದು ಶೋಭಾ ರಾವ್‌ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಕಾಶ್ಮೀರ ಮತ್ತೆ ಗಾಯಗೊಂಡಿದೆ. ಇಪ್ಪತ್ತೈದಕ್ಕೂ ಹೆಚ್ಚಿನ ಪ್ರವಾಸಿಗರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. So sad.. ಎಂಥಾ ನೀಚ ಕೃತ್ಯ . ತನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ಈ ಚಿತ್ರದಲ್ಲಿನ ಮಹಿಳೆಗೆ ಮತ್ತು ಅಂಥವರಿಗೆ ಹೇಗೆ ಸಮಾಧಾನ ಹೇಳುವುದು? ಎಂದು ದೀಪಾ ಹೀರೆಗುತ್ತಿ ಬೇಸರ ವ್ಯಕ್ತಪಡಿಸಿದ್ದಾರೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.