ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ: ವೈಶಿಷ್ಟ್ಯ, ಅರ್ಹತೆ, ಅರ್ಜಿ ಪ್ರಕ್ರಿಯೆ ವಿವರ ಇಂತಿದೆ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ: ವೈಶಿಷ್ಟ್ಯ, ಅರ್ಹತೆ, ಅರ್ಜಿ ಪ್ರಕ್ರಿಯೆ ವಿವರ ಇಂತಿದೆ!

ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ: ವೈಶಿಷ್ಟ್ಯ, ಅರ್ಹತೆ, ಅರ್ಜಿ ಪ್ರಕ್ರಿಯೆ ವಿವರ ಇಂತಿದೆ!

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಭಾರತ ಸರ್ಕಾರ ಹೆಜ್ಜೆ ಇಟ್ಟಿದೆ. ಹಣಕಾಸಿನ ಕೊರತೆಯಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಈ ನಿರ್ಧಾರ ಕೈಗೊಂಡಿದೆ.

ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ: ವೈಶಿಷ್ಟ್ಯ, ಅರ್ಹತೆ, ಅರ್ಜಿ ಪ್ರಕ್ರಿಯೆ ವಿವರ ಇಂತಿದೆ!
ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ: ವೈಶಿಷ್ಟ್ಯ, ಅರ್ಹತೆ, ಅರ್ಜಿ ಪ್ರಕ್ರಿಯೆ ವಿವರ ಇಂತಿದೆ!

ಉನ್ನತ ಶಿಕ್ಷಣ ಪಡೆಯಬೇಕು ಎನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಉತ್ತಮ ಶಿಕ್ಷಣ ಸಂಸ್ಥೆಗೆ ಪ್ರವೇಶ ಪಡೆಯಲು ಉತ್ತಮ ಅಂಕವನ್ನೂ ಗಳಿಸಬೇಕು. ಆದರೆ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಅವರು ಉನ್ನತ ಶಿಕ್ಷಣ ಪಡೆಯುವುದೇ ದೊಡ್ಡ ಸವಾಲು. ಹಣಕಾಸಿನ ಸಮಸ್ಯೆಯು ಅವರ ಕನಸುಗಳಿಗೆ ಅಡ್ಡಿಯಾಗುತ್ತಿದೆ. ಅಂತಹ ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ ಭಾರತ ಸರ್ಕಾರ ಹೆಜ್ಜೆ ಇಟ್ಟಿದ್ದು, ಪಿಎಂ ವಿದ್ಯಾಲಕ್ಷ್ಮಿ ಶಿಕ್ಷಣ ಸಾಲ ಯೋಜನೆ ಜಾರಿಗೆ ತಂದಿದೆ.

2024ರ ನವೆಂಬರ್​​ನಲ್ಲಿ ಕೇಂದ್ರ ಸಚಿವ ಸಂಪುಟವು ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ (ಪಿಎಂ ವಿದ್ಯಾಲಕ್ಷ್ಮಿ) ಯೋಜನೆಗೆ ಅನುಮೋದನೆ ನೀಡಿತು. ಗುಣಮಟ್ಟದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಾಲದ ನೆರವು ಒದಗಿಸುವುದೇ ಇದರ ಉದ್ದೇಶ. ಈ ಯೋಜನೆಯ ಮೂಲಕ ಅಗ್ರ 860 ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಯೋಜಿಸಿದೆ. ಇದು ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ವೈಶಿಷ್ಟ್ಯಗಳು

  • ಈ ಯೋಜನೆಯು ಮೇಲಾಧಾರ ರಹಿತ, ಖಾತರಿ ರಹಿತ ಶಿಕ್ಷಣ ಸಾಲ ಒದಗಿಸುತ್ತದೆ.
  • ವಿದ್ಯಾರ್ಥಿಗಳು ಈ ಸಾಲಕ್ಕಾಗಿ ಆನ್ ಲೈನ್​​ನಲ್ಲಿ ಅರ್ಜಿ ಸಲ್ಲಿಸಬಹುದು.
  • 7.5 ಲಕ್ಷ ರೂ.ಗಳವರೆಗೆ ಶಿಕ್ಷಣ ಸಾಲ ಒದಗಿಸಲಾಗುವುದು.
  • ಸರ್ಕಾರವು ಬ್ಯಾಂಕ್​​ಗಳನ್ನು ಬೆಂಬಲಿಸಲು ಶೇ 75ರಷ್ಟು ಕ್ರೆಡಿಟ್ ಗ್ಯಾರಂಟಿ ಒದಗಿಸುತ್ತದೆ.
  • ಈ ಯೋಜನೆಯು ವಾರ್ಷಿಕ 8 ಲಕ್ಷ ರೂಪಾಯಿ ಆದಾಯ ಹೊಂದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ 3ರಷ್ಟು ಬಡ್ಡಿ ಸಹಾಯಧನ ಒದಗಿಸುತ್ತದೆ.
  • ಕುಟುಂಬದ ವಾರ್ಷಿಕ ಆದಾಯ 4.5 ಲಕ್ಷ ರೂ.ಗಳವರೆಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಬಡ್ಡಿ ಸಹಾಯಧನವನ್ನು ನೀಡಲಾಗಿದೆ.
  • ಎಲ್ಲಾ ಶೆಡ್ಯೂಲ್ಡ್ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳಿಂದ ಸಾಲವನ್ನು ಪಡೆಯಬಹುದು.

ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಹತೆ

  • ಮೆರಿಟ್ ಆಧಾರದ ಮೇಲೆ ಭಾರತದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ (QHEIs) ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರು.
  • ಕುಟುಂಬದ ಎಲ್ಲಾ ಆದಾಯದ ಗುಂಪುಗಳ ವಿದ್ಯಾರ್ಥಿಗಳು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
  • ಸಾಲದ ಮೊತ್ತವು ಕೋರ್ಸ್ ಶುಲ್ಕ ಮತ್ತು ಸಂಬಂಧಿತ ಶುಲ್ಕಗಳನ್ನು ಅವಲಂಬಿಸಿರುತ್ತದೆ. ಈ ರೀತಿಯ ಸಾಲಕ್ಕೆ ಸರ್ಕಾರ ಯಾವುದೇ ಕಟ್ ಆಫ್ ಮೊತ್ತವನ್ನು ನಿಗದಿಪಡಿಸಿಲ್ಲ.
  • ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಮೆರಿಟ್ ಆಧಾರಿತ ಪ್ರವೇಶಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
  • ಆದಾಗ್ಯೂ, ಮ್ಯಾನೇಜ್ಮೆಂಟ್ ಕೋಟಾ ಸೇರಿದಂತೆ ಕೋಟಾ ಮೂಲಕ ಪ್ರವೇಶ ಪಡೆದ ವಿದ್ಯಾರ್ಥಿಗಳು ಈ ಸಾಲಕ್ಕೆ ಅರ್ಹರಾಗಿರುವುದಿಲ್ಲ.

ಪಿಎಂ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಶಿಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ವೇದಿಕೆಯಾದ ಅಧಿಕೃತ ಪಿಎಂ ವಿದ್ಯಾಲಕ್ಷ್ಮಿ ಪೋರ್ಟಲ್​​ಗೆ ಭೇಟಿ ನೀಡಿ.
  • ಖಾತೆ ರಚಿಸುವ ಮೂಲಕ ಪೋರ್ಟಲ್​​ನಲ್ಲಿ ನೋಂದಾಯಿಸಿ ಮತ್ತು 'ಹೊಸ ಬಳಕೆದಾರ' ಕ್ಲಿಕ್ ಮಾಡಿ.
  • ನಿಮ್ಮ ಹೆಸರು, ಇಮೇಲ್, ವಿಳಾಸ, ಮೊಬೈಲ್ ಸಂಖ್ಯೆ, ಆಧಾರ್ ಸಂಖ್ಯೆ ಮತ್ತು ಇತರ ಅಗತ್ಯ ಮಾಹಿತಿ ಭರ್ತಿ ಮಾಡಬೇಕು.
  • ನೋಂದಣಿಯ ನಂತರ, ವಿದ್ಯಾಲಕ್ಷ್ಮಿ ಪೋರ್ಟಲ್​ಗೆ ಲಾಗಿನ್ ಮಾಡಿ.
  • 'ಲೋನ್ ಅಪ್ಲಿಕೇಶನ್ ವಿಭಾಗಕ್ಕೆ' ಹೋಗಿ ಮತ್ತು ಸಾಲದ ಪ್ರಕಾರ ಆರಿಸಿ.
  • ಕೋರ್ಸ್ ಹೆಸರು, ಸಂಸ್ಥೆ ಮತ್ತು ಇತರ ವೈಯಕ್ತಿಕ ವಿವರಗಳಂತಹ ಅಗತ್ಯ ವಿವರಗಳನ್ನು ಒದಗಿಸಿ.
  • ಲೋನ್ ಪಡೆಯಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿ.
  • ನಿಮ್ಮ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಸಲ್ಲಿಸು ಕ್ಲಿಕ್ ಮಾಡಿ.
  • ನಿಮ್ಮ ಅರ್ಜಿಯನ್ನು ಸಲ್ಲಿಸಿದ ನಂತರ, ವಿದ್ಯಾಲಕ್ಷ್ಮಿ ಪೋರ್ಟಲ್​​ನಲ್ಲಿ ಅದರ ಸ್ಟೇಟಸ್​ ಟ್ರ್ಯಾಕ್ ಮಾಡಿ.
  • ಸಾಲದ ಅನುಮೋದನೆಯ ಬಗ್ಗೆ ಪೋರ್ಟಲ್ ತಿಳಿಸುತ್ತದೆ.

ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಬಡ್ಡಿದರ

ಪಿಎಂ ವಿದ್ಯಾಲಕ್ಷ್ಮಿ ಅಡಿಯಲ್ಲಿ ಸಾಲಗಳ ಬಡ್ಡಿದರವು ಪಿಎಂ-ವಿದ್ಯಾಲಕ್ಷ್ಮಿ ವ್ಯಾಪ್ತಿಗೆ ಒಳಪಡದ ಶಿಕ್ಷಣ ಸಾಲಗಳ ಮೇಲೆ ಬ್ಯಾಂಕ್ ವಿಧಿಸುವ ಬಡ್ಡಿ ದರಕ್ಕಿಂತ ಕಡಿಮೆ ಇರುತ್ತದೆ.

ಪಿಎಂ ವಿದ್ಯಾಲಕ್ಷ್ಮಿ ಯೋಜನೆಯ ಮರುಪಾವತಿ ಅವಧಿ

ಶಿಕ್ಷಣ ಸಾಲದ ಮರುಪಾವತಿ ಅವಧಿ 15 ವರ್ಷಗಳವರೆಗೆ ಇರುತ್ತದೆ. ಸಾಲದ ಮೊತ್ತವು ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿದ್ದರೆ, ವೈಯಕ್ತಿಕ ಬ್ಯಾಂಕುಗಳು ವಿದ್ಯಾರ್ಥಿ ಸಾಲಗಾರನ ಜೀವ ವಿಮಾ ರಕ್ಷಣೆ ತೆಗೆದುಕೊಳ್ಳಬಹುದು. ಸಾಲಗಾರನ ವಿನಂತಿ ಅವಲಂಬಿಸಿ ವಿಮಾ ಪ್ರೀಮಿಯಂ ಅನ್ನು ಶಿಕ್ಷಣ ಸಾಲದ ಮೊತ್ತದಲ್ಲಿ ಸೇರಿಸಬಹುದು. ಕೊನೆಯಲ್ಲಿ ಪಿಎಂ ವಿದ್ಯಾಲಕ್ಷ್ಮಿ ಯೋಜನೆಯು ಮಹತ್ವಾಕಾಂಕ್ಷೆಯ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಸಕಾಲದಲ್ಲಿ ಸಾಲ ಪಡೆಯಲು ವಿದ್ಯಾರ್ಥಿಗಳು ಯೋಜನೆಯ ಪ್ರಕ್ರಿಯೆ, ಅವಶ್ಯಕತೆಗಳು ಮತ್ತು ಇತರ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಅತ್ಯಗತ್ಯ.

(ಸೂಚನೆ: ಸಾಲ ಪಡೆಯುವ ಮೊದಲ ಸೂಕ್ತ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.